AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Adani Shares: ತಿರುಗಿ ನಿಂತ ಅದಾನಿ ಷೇರುಗಳು; ಮಾರದೇ ಬಿಟ್ಟವರಿಗೆ ಹೊಡೆಯುತ್ತಾ ಜಾಕ್​ಪಾಟ್?

Stock Market and Adani Companies: ಅದಾನಿ ಎಂಟರ್ಪ್ರೈಸಸ್, ಅದಾನಿ ಟ್ರಾನ್ಸ್​ಮಿಶನ್, ಅದಾನಿ ಗ್ರೀನ್ ಎನರ್ಜಿ, ಅದಾನಿ ವಿಲ್ಮರ್, ಅದಾನಿ ಪವರ್, ಅದಾನಿ ಟೋಟಲ್ ಗ್ಯಾಸ್, ಅದಾನಿ ಪೋರ್ಟ್ಸ್, ಎನ್​ಡಿಟಿವಿ, ಅಂಬುಜಾ ಸಿಮೆಂಟ್ಸ್, ಎಸಿಸಿ ಸಿಮೆಂಟ್ಸ್ ಈ ಕಂಪನಿಗಳು ಷೇರು ಮಾರುಕಟ್ಟೆಯಲ್ಲಿ ವೃದ್ಧಿಕಂಡಿವೆ.

Adani Shares: ತಿರುಗಿ ನಿಂತ ಅದಾನಿ ಷೇರುಗಳು; ಮಾರದೇ ಬಿಟ್ಟವರಿಗೆ ಹೊಡೆಯುತ್ತಾ ಜಾಕ್​ಪಾಟ್?
ಗೌತಮ್ ಅದಾನಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 02, 2023 | 10:31 AM

ನವದೆಹಲಿ: ಹಿಂಡನ್ಬರ್ಗ್ ವಿವಾದಕ್ಕೆ (Hindenburg Research Report) ಸಿಲುಕಿ ಷೇರುಪೇಟೆಯಲ್ಲಿ ಲಕ್ಷಾಂತರ ಕೋಟಿ ರೂ ನಷ್ಟ ಮಾಡಿಕೊಂಡಿರುವ ಅದಾನಿ ಗ್ರೂಪ್ ಕಂಪನಿಗಳ ಷೇರುಗಳು (Adani Group Company Shares) ನಿನ್ನೆ ಬುಧವಾರ ತುಸು ಏರಿಕೆ ಕಾಣುವಲ್ಲಿ ಸಫಲವಾಗಿವೆ. ಷೇರುಪೇಟೆಯಲ್ಲಿ ಲಿಸ್ಟ್ ಆಗಿರುವ ಎಲ್ಲಾ ಅದಾನಿ ಕಂಪನಿಗಳ ಷೇರುಬೆಲೆ ಹೆಚ್ದಿವೆ. ಹಿಂದಿನ ಎರಡು ದಿನಗಳಿಂದಲೂ ಅದಾನಿ ಮಾಲಿಕತ್ವದ ಕಂಪನಿಗಳಿಗೆ ಕಳೆಗಟ್ಟಿದಂತಿದೆ. ಅದಾನಿ ಎಂಟರ್ಪ್ರೈಸಸ್, ಅದಾನಿ ಟ್ರಾನ್ಸ್​ಮಿಶನ್, ಅದಾನಿ ಗ್ರೀನ್ ಎನರ್ಜಿ, ಅದಾನಿ ವಿಲ್ಮರ್, ಅದಾನಿ ಪವರ್, ಅದಾನಿ ಟೋಟಲ್ ಗ್ಯಾಸ್, ಅದಾನಿ ಪೋರ್ಟ್ಸ್, ಎನ್​ಡಿಟಿವಿ, ಅಂಬುಜಾ ಸಿಮೆಂಟ್ಸ್, ಎಸಿಸಿ ಸಿಮೆಂಟ್ಸ್ ಈ ಕಂಪನಿಗಳು ಷೇರು ಮಾರುಕಟ್ಟೆಯಲ್ಲಿ ವೃದ್ಧಿಕಂಡಿವೆ.

ಅದಾನಿ ಎಂಟರ್ಪ್ರೈಸಸ್ ಕಂಪನಿಯಂತೂ ನಿನ್ನೆ ವಹಿವಾಟಿನಲ್ಲಿ ಒಂದು ಹಂತದಲ್ಲಿ ಶೇ. 15.83ರಷ್ಟು ಮೌಲ್ಯ ಹೆಚ್ಚಿಸಿಕೊಂಡಿತ್ತು. ಅದರ ಷೇರು ಬೆಲೆ 1,564.55 ರೂ ಮಟ್ಟಕ್ಕೆ ಹೋಗಿತ್ತು. ಎರಡು ದಿನದಲ್ಲಿ ಅದಾನಿ ಎಂಟರ್​ಪ್ರೈಸಸ್​ನ ವ್ಯಾಲುಯೇಶನ್ ಬರೋಬ್ಬರಿ 42 ಸಾವಿರ ಕೋಟಿ ರೂಗಿಂತ ಹೆಚ್ಚಾಗಿ ಹೋಗಿತ್ತು. ಅದಾನಿ ಗ್ರೂಪ್​ನ ಎಲ್ಲಾ ಲಿಸ್ಟೆಡ್ 10 ಕಂಪನಿಗಳ ಒಟ್ಟಾರೆ ಮಾರ್ಕೆಟ್ ವ್ಯಾಲ್ಯುಯೇಶನ್ 7.56 ಲಕ್ಷ ಕೋಟಿಯಷ್ಟಾಗಿತ್ತು.

ಅದಾನಿ ಟ್ರಾನ್ಸ್​ಮಿಶನ್, ಅದಾನಿ ಗ್ರೀನ್ ಎನರ್ಜಿ, ಅದಾನಿ ವಿಲ್ಮರ್, ಅದಾನಿ ಪವರ್, ಅದಾನಿ ಟೋಟಲ್ ಗ್ಯಾಸ್ ಮತ್ತು ಎನ್​ಡಿಟಿವಿಯ ಷೇರುಗಳು ನಿನ್ನೆ ಸುಮಾರು ಶೇ. 5ರಷ್ಟು ಬೆಲೆ ಹೆಚ್ಚಿಸಿಕೊಂಡಿದ್ದವು. ಇಂದು ಗುರುವಾರ ಕೂಡ ಅದಾನಿ ಕಂಪನಿಗಳ ಷೇರುಗಳಿಗೆ ಬೇಡಿಕೆ ಮುಂದುವರಿಯುವ ಸಾಧ್ಯತೆ ಇದೆ.

ಇದನ್ನೂ ಓದಿ: 5 Day Work: ಬ್ಯಾಂಕ್ ನೌಕರರಿಗೆ ವಾರದಲ್ಲಿ 2 ದಿನ ರಜಾ ಭಾಗ್ಯ? ದಿನಕ್ಕೆ ಹೆಚ್ಚು ಹೊತ್ತು ಕೆಲಸ ಮಾಡುವ ಟೆನ್ಷನ್

ಅದಾನಿ ಗ್ರೂಪ್ ಜೊತೆಗೆ ಷೇರುಪೇಟೆಯೂ ಕಳೆ ಪಡೆದಿದೆ. ಸತತವಾಗಿ ಇಳಿಕೆ ಕಂಡು ಜರ್ಝರಿತವಾಗಿದ್ದ ಷೇರುಮಾರುಕಟ್ಟೆ ನಿನ್ನೆ ಬುಧವಾರ ಉತ್ತಮ ರೀತಿಯಲ್ಲಿ ಚೇತರಿಕೆ ಕಂಡಿದೆ. ಬಿಎಸ್​ಇ ಸೆನ್ಸೆಕ್ಸ್ ಸೂಚ್ಯಂಕವು 448.96 ಅಂಕಗಳಷ್ಟು ಏರಿಕೆ ಪಡೆಯಿತು. ಇಂದು ಗುರುವಾರದ ಬೆಳಗಿನ ವಹಿವಾಟಿನಲ್ಲಿ ಮಾರುಕಟ್ಟೆ ಕೆಳಗಿಳಿದಿದೆಯಾದರೂ ದಿನಾಂತ್ಯದ ವೇಳೆಗೆ ಮತ್ತೆ ಗರಿಗೆದರುವ ಸಾಧ್ಯತೆ ಇದೆ. ಆದರೆ ಗುರುವಾರ ಷೇರುಪೇಟೆಯಲ್ಲಿ ಅದಾನಿ ಗ್ರೂಪ್​ನ 10 ಕಂಪನಿಗಳ ಪೈಕಿ ಅದಾನಿ ಎಂಟರ್ಪ್ರೈಸಸ್ ಮತ್ತು ಎಸಿಸಿ ಲಿ ಸಂಸ್ಥೆಗಳು ಮಾತ್ರ ಇಳಿಕೆ ಕಂಡಿವೆ. ಉಳಿದ ಎಂಟು ಕಂಪನಿಗಳು ಏರಿಕೆಯ ಹಾದಿಯಲ್ಲಿವೆ.

12 ಲಕ್ಷ ಕೋಟಿ ರೂ ನಷ್ಟ ಅದಾನಿ ಎಂಟರ್​ಪ್ರೈಸಸ್ ಸಂಸ್ಥೆ ಷೇರುಪೇಟೆಯಲ್ಲಿ ಕೃತಕ ಉಬ್ಬರ ಸೃಷ್ಟಿಸಿ ಹೂಡಿಕೆದಾರರಿಗೆ ವಂಚನೆ ಎಸಗಿದೆ ಎಂಬಿತ್ಯಾದಿ ಕೆಲ ಗುರುತರ ಆರೋಪಗಳನ್ನು ಹಿಂಡನ್ಬರ್ಗ್ ರಿಸರ್ಚ್ ಕಂಪನಿ ಮಾಡಿತ್ತು. ಅದಾದ ಬೆನ್ನಲ್ಲೇ ಅದಾನಿ ಗ್ರೂಪ್​ನ ವಿವಿಧ ಕಂಪನಿಗಳ ಷೇರುಗಳು ಭಾರೀ ಕುಸಿತ ಕಾಣತೊಡಗಿದವು. ಈ ಕಂಪನಿಗಳಲ್ಲಿ ಹಣ ಹಾಕಿದ್ದ ಜನರು ಗೊಂದಲಕ್ಕೊಳಗಾಗಿ ಸಿಕ್ಕಷ್ಟು ಬೆಲೆಗೆ ಮಾರತೊಡಗಿದರು. ಪರಿಣಾಮವಾಗಿ ಷೇರುಗಳ ಬೆಲೆ ಅರ್ಧಕ್ಕಿಂತ ಕೆಳಗೆ ಕುಸಿದಿವೆ. ಒಂದು ಅಂದಾಜು ಪ್ರಕಾರ ಅದಾನಿ ಗ್ರೂಪ್​ನ ಕಂಪನಿಗಳಿಗೆ ಆಗಿರುವ ಒಟ್ಟಾರೆ ನಷ್ಟ 12 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಎನ್ನಲಾಗಿದೆ.

ಇದನ್ನೂ ಓದಿ: India’s 1st e-Tipper: ಒಲೆಕ್ಟ್ರಾ ಗರಿಮೆ; ಭಾರತದ ಮೊದಲ ಎಲೆಕ್ಟ್ರಿಕ್ ಟಿಪ್ಪರ್ ಲಾರಿಗೆ ಪ್ರಾಧಿಕಾರಗಳ ಅನುಮೋದನೆ

ಪರಿಣಾಮವಾಗಿ, ವಿಶ್ವ ಶ್ರೀಮಂತರ ಟಾಪ್-3ಯಲ್ಲಿ ಇದ್ದ ಗೌತಮ್ ಅದಾನಿ ಇದೀಗ 30ನೇ ಸ್ಥಾನಕ್ಕೆ ಕುಸಿದಿದ್ದಾರೆ. ಭಾರತದ ಟಾಪ್-3ಯಲ್ಲೂ ಅವರಿಲ್ಲ.

ಆದರೆ, ಈಗ ಅದಾನಿ ಗ್ರೂಪ್​ನ ಷೇರುಗಳು ಮತ್ತೆ ಬೇಡಿಕೆ ಪಡೆಯುತ್ತಿವೆ. ಉಜ್ವಲ ಭವಿಷ್ಯ ಇರುವ ಕೆಲ ಕ್ಷೇತ್ರಗಳಲ್ಲಿ ಅದಾನಿಯ ಕಂಪನಿಗಳಿವೆ. ಹೀಗಾಗಿ, ಇವುಗಳಿಗೆ ಮುಂದೆ ಬೇಡಿಕೆ ಕುಸಿಯದು. ಮೇಲಾಗಿ ಹಿಂಡನ್ಬರ್ಗ್ ರಿಸರ್ಚ್​ನ ವರದಿ ಸದ್ಯಕ್ಕೆ ಇನ್ನಷ್ಟು ವ್ಯಾಪಕ ಪರಿಣಾಮ ಸೃಷ್ಟಿಸುವುದು ಅನುಮಾನ. ಹೀಗಾಗಿ ಕೆಲ ತಜ್ಞರು ಅದಾನಿ ಕಂಪನಿಗಳ ಷೇರುಗಳು ಮತ್ತೆ ಏರುಗತಿಗೆ ಬರುತ್ತವೆ ಎಂದು ಹಿಂದೆಯೇ ಅಂದಾಜು ಮಾಡಿದ್ದರು.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:31 am, Thu, 2 March 23

ಹುಟ್ಟುಹಬ್ಬದ ದಿನವೇ ಕಣ್ಣೀರು ಹಾಕಿದ ನಟಿ ರಾಗಿಣಿ: ಕಾರಣ?
ಹುಟ್ಟುಹಬ್ಬದ ದಿನವೇ ಕಣ್ಣೀರು ಹಾಕಿದ ನಟಿ ರಾಗಿಣಿ: ಕಾರಣ?
ತಮನ್ನಾ ವಿವಾದದಲ್ಲಿ ಯಶ್ ಹೆಸರು ಹೇಳಿದ ನಟಿ ಕಾರುಣ್ಯ ರಾಮ್
ತಮನ್ನಾ ವಿವಾದದಲ್ಲಿ ಯಶ್ ಹೆಸರು ಹೇಳಿದ ನಟಿ ಕಾರುಣ್ಯ ರಾಮ್
ಇ-ಖಾತಾ ಬಗ್ಗೆ ಮಹತ್ವದ ಮಾಹಿತಿ ನೀಡಿದ ಡಿಕೆ ಶಿವಕುಮಾರ್
ಇ-ಖಾತಾ ಬಗ್ಗೆ ಮಹತ್ವದ ಮಾಹಿತಿ ನೀಡಿದ ಡಿಕೆ ಶಿವಕುಮಾರ್
ಬೆಂಗಳೂರಿನಲ್ಲಿ ಫುಟ್ ಪಾತ್ ಅಂಗಡಿ ತೆರವುಗೊಳಿಸಲು ನಿರ್ಧಾರ: ಡಿಕೆಶಿ
ಬೆಂಗಳೂರಿನಲ್ಲಿ ಫುಟ್ ಪಾತ್ ಅಂಗಡಿ ತೆರವುಗೊಳಿಸಲು ನಿರ್ಧಾರ: ಡಿಕೆಶಿ
​ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚನೆ
​ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚನೆ
ಝಾನ್ಸಿಯಲ್ಲಿ ಬಿರುಗಾಳಿಯ ಹೊಡೆತಕ್ಕೆ 70ಕ್ಕೂ ಹೆಚ್ಚು ಗಿಳಿಗಳು ಬಲಿ
ಝಾನ್ಸಿಯಲ್ಲಿ ಬಿರುಗಾಳಿಯ ಹೊಡೆತಕ್ಕೆ 70ಕ್ಕೂ ಹೆಚ್ಚು ಗಿಳಿಗಳು ಬಲಿ
ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ