AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏನಿದು ಮಲೆನಾಡಿನಲ್ಲಿ ಅಂಟಿಗೆ-ಪಂಟಿಗೆ ತಂಡದ ಕಲರವ, ಇಲ್ಲಿದೆ ಒಂದು ಝಲಕ್!

ಪ್ರಕಾಶಮಾನವಾಗಿ ಕಂಗೊಳಿಸುತ್ತಿರುವ ದೀಪ.. ತಲೆಗೊಂದು ಕೆಂಪು ಮುಂಡಾಸು, ಬಿಳಿ ಬಟ್ಟೆಯಲ್ಲಿ ಆ ದೀಪವನ್ನ ಹಿಡಿದು ಸಾಗುತ್ತಿರುವ ತಂಡ.. ಮಣ್ಣಿನ ಹಣತೆಯ ದೀಪದೊಂದಿಗೆ ಮನೆ ಮನೆಗೆ ಹೋಗಿ ಜಾನಪದ ಹಾಡು ಹೇಳುತ್ತಿರುವ ಅಂಟಿಗೆ-ಪಂಟಿಗೆ ತಂಡ ಇಲ್ಲಿದೆ ನೋಡಿ.

ಏನಿದು ಮಲೆನಾಡಿನಲ್ಲಿ ಅಂಟಿಗೆ-ಪಂಟಿಗೆ ತಂಡದ ಕಲರವ, ಇಲ್ಲಿದೆ ಒಂದು ಝಲಕ್!
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​| Edited By: |

Updated on:Nov 29, 2022 | 9:27 AM

Share

ಮಲೆನಾಡು, ಬಗೆ ಬಗೆಯ ಹಬ್ಬ ಹರಿದಿನಗಳ ಆಚರಣೆ ಆಗರ. ಪ್ರತಿ ಹಬ್ಬವೂ ಇಲ್ಲಿ ಸಂತಸ ಸಂಭ್ರಮದಿಂದ ಆಚರಿಸಲ್ಪಡುತ್ತವೆ. ಅದರಲ್ಲೂ ಈ ದೀಪಾವಳಿ ಸಂಭ್ರಮದಲ್ಲಿ ಮಲೆನಾಡಿಗರ ಮನೆ ಮೆನೆಯಲ್ಲೂ ದೀಪ ಬೆಳಗಿಸುವ ಅಂಟಿಗೆ-ಪಂಟಿಗೆ ಮನೆ ಮಾತಾಗಿದೆ. ಅಂಟಿಗೆ-ಪಂಟಿಗೆಯ ಒಂದು ಝಲಕ್ ಇಲ್ಲಿದೆ.

ಪ್ರಕಾಶಮಾನವಾಗಿ ಕಂಗೊಳಿಸುತ್ತಿರುವ ದೀಪ.. ತಲೆಗೊಂದು ಕೆಂಪು ಮುಂಡಾಸು, ಬಿಳಿ ಬಟ್ಟೆಯಲ್ಲಿ ಆ ದೀಪವನ್ನ ಹಿಡಿದು ಸಾಗುತ್ತಿರುವ ತಂಡ.. ಮಣ್ಣಿನ ಹಣತೆಯ ದೀಪದೊಂದಿಗೆ ಮನೆ ಮನೆಗೆ ಹೋಗಿ ಜಾನಪದ ಹಾಡು ಹೇಳುತ್ತಿರುವ ಅಂಟಿಗೆ-ಪಂಟಿಗೆ ತಂಡ ಇಲ್ಲಿದೆ ನೋಡಿ.

ಇದು ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಕಂಡು ಬಂದ ದೃಶ್ಯ. ಈ ಅಂಟಿಗೆ-ಪಂಟಿಗೆ ಮಲೆನಾಡಿನ ಒಂದು ವಿಶಿಷ್ಟ ಕಲೆ. ಅದರಲ್ಲೂ ಜಿಲ್ಲೆಯ ತೀರ್ಥಹಳ್ಳಿ, ಸಾಗರ ಭಾಗದಲ್ಲಿ ಈ ಕಲಾವಿದರು ಹೆಚ್ಚು. ದೀಪಾವಳಿ ಹಬ್ಬದ ಟೈಂನಲ್ಲಿ ಅಂಟಿಗೆ-ಪಂಟಿಗೆ ತಂಡ ಮೆಲೆನಾಡಿಗರ ಮನೆ ಮನೆಯಲ್ಲೂ ನಂದಾದೀಪ ಬೆಳಗಿಸುತ್ತವೆ.

ಹಾಗೇ ತೀರ್ಥಹಳ್ಳಿ ತಾಲೂಕಿನ ಹುಲಿಸರ ಗ್ರಾಮದ ದುರ್ಗಾಪರಮೇಶ್ವೇರಿ ಅಂಟಿಗೆ-ಪಂಟಿಗೆ ತಂಡವು ಶಿವಮೊಗ್ಗ ನಗರದ ವಿವಿಧ ಬಡಾವಣೆಯಲ್ಲಿ ಸಂಚರಿಸುವ ಮೂಲಕ ದೀಪಾವಳಿ ಹಬ್ಬದ ಜಾನಪದ ಸೊಗಡನ್ನು ಈ ಬಾರಿಯು ಹೊರಹಾಕಿದರು. ಮಣ್ಣಿನ ದೀಪ ಹಿಡಿದು ಮೆನೆ ಮೆನೆಗೆ ಸಂಚರಿಸಿ, ನಿಮ್ಮ ಮನೆ ಸದಾ ದೀಪದ ಬೆಳಕಿನಂತೆ ಬೆಳಗಲಿ ಅಂತ ಹಾಡಿನ ಮೂಲಕವೇ ಹಾರೈಸುತ್ತಾರೆ.

ಸಾಮಾನ್ಯವಾಗಿ ರಾತ್ರಿ ಹಬ್ಬದ ಊಟ ಮಾಡಿ ಬಾಗಿಲು ಹಾಕಿದ ಮನೆಗಳಿಗೆ ಭೇಟಿ ನೀಡುವ ಅಂಟಿಗೆ-ಪಂಟಿಗೆ ಸದಸ್ಯರು ಹಾಡಿನ ಮೂಲಕವೇ ಮನೆಯ ಬಾಗಿಲನ್ನ ತೆಗೆಸುತ್ತಾರೆ. ಅದರಲ್ಲೂ ಗಣಪತಿ ಪದ, ಬಸವನ ಹಾಡು, ರಾಮಲಕ್ಷ್ಮಣರ ಹಾಡು, ತುಳಸಿ ಹಾಡು, ಕುಮಾರ ರಾಮನ ಹಾಡು, ಹೆಬ್ಬಾಗಿಲ ಹಾಡುಗಳು ಕೇಳುಗರಿಗೆ ಕತ್ತಲಲ್ಲೂ ಬೆಳಕು ಮೂಡಿಸುತ್ತಿವೆ. ಹೀಗೆ ತಂಡದ ಒಂದಿಷ್ಟು ಜನ ಹಾಡುತ್ತಿದ್ದರೆ ಮತ್ತೆ ಕೆಲವರು ಆ ಪದಕ್ಕೆ ಧ್ವನಿ ನೀಡುತ್ತಾರೆ. ಮನೆ ಮನೆಗಳಿಗೆ ಹೋಗುವ ಇವರು ತಾವು ತಂದ ದೀಪವನ್ನು ಮನೆಯ ಪೂಜಾ ಸ್ಥಳದ ಮೇಲೆ ಇರಿಸುತ್ತಾರೆ. ನಂತ್ರ ಮನೆಯವರು ಜ್ಯೋತಿಗೆ ಪೂಜೆಸಿ, ಅಂಟಿಗೆ-ಪಂಟಿಗೆ ತಂಡಕ್ಕೆ ಕಾಣಿಕೆ, ದವಸ ಧಾನ್ಯ ಇತ್ಯಾದಿಗಳನ್ನು ನೀಡಿ ಗೌರವಿಸುತ್ತಾರೆ ಎನ್ನುತ್ತಾರೆ ಅಂಟಿಗೆ-ಪಂಟಿಗೆ ತಂಡದ ಪ್ರಮುಖರಾದ ಸಂದೇಶ್.

ಒಟ್ನಲ್ಲಿ ಆಧುನಿಕತೆಯ ಭರಾಟೆಯಲ್ಲಿ ಇಂತಹ ಆನೇಕ ಆಚರಣೆಗಳು ಮರೆಯಾಗುತ್ತಿವೆ. ಆದ್ರೆ ಈ ಅಂಟಿಗೆ-ಪಂಟಿಗೆ ಆಧುನಿಕತೆಯ ಬಿರುಗಾಳಿ ನಡುವೆ ಮಲೆನಾಡಿನಲ್ಲಿ ತನ್ನ ಜೀವಂತಿಕೆ ಉಳಿಸಿಕೊಂಡಿದೆ. ಇದು ಇದೇ ರೀತಿ ಮುಂದುವರಿದು ಮಲೆನಾಡಿನ ಗ್ರಾಮೀಣ ಜಾನಪದ ಸೊಗಡು ಉಳಿಯಲಿ ಅನ್ನೋ ಆಶಯ ವ್ಯಕ್ತಪಡಿಸುತ್ತಾರೆ ಭಕ್ತರಾದ ವೀಣಾ ಅವರು.

Published On - 12:57 pm, Tue, 29 October 19

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!