AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weird News: ಈ ಹಳ್ಳಿಯಲ್ಲಿನ ರೈತರು ಕೃಷಿಗೆ ಬಳಸ್ತಾರೆ ಬುಲೆಟ್​ಪ್ರೂಫ್ ಟ್ರ್ಯಾಕ್ಟರ್

ಬುಲೆಟ್​​ಪ್ರೂಫ್ ಕಾರಿನ ಬಗ್ಗೆ ನೀವು ಕೇಳಿರಬಹುದು. ಆದರೆ ಹರ್ಯಾಣ- ಉತ್ತರಪ್ರದೇಶ ಗಡಿಯಲ್ಲಿ ಇರುವ ಈ ಹಳ್ಳಿಯಲ್ಲಿ ರೈತರು ಬುಲೆಟ್​ಪ್ರೂಫ್ ಟ್ರ್ಯಾಕ್ಟರ್ ಬಳಸ್ತಾರೆ. ಪವರ್ ಸ್ಟೇರಿಂಗ್, ಕ್ಯಾಮೆರಾ ಅಳವಡಿಕೆ ಮಾಡಿಕೊಂಡಿರ್ತಾರೆ, ಇದ್ಯಾಕೆ ಹೀಗೆ ಗೊತ್ತಾ?

Weird News: ಈ ಹಳ್ಳಿಯಲ್ಲಿನ ರೈತರು ಕೃಷಿಗೆ ಬಳಸ್ತಾರೆ ಬುಲೆಟ್​ಪ್ರೂಫ್ ಟ್ರ್ಯಾಕ್ಟರ್
ಬುಲೆಟ್​ಪ್ರೂಫ್ ಟ್ರ್ಯಾಕ್ಟರ್
Srinivas Mata
|

Updated on: Mar 20, 2021 | 12:25 PM

Share

ಈ ಹಳ್ಳಿಯ ಬಗ್ಗೆ ನಿಮಗೆ ಹೇಳಿದರೆ ಬಹಳ ಆಶ್ಚರ್ಯ ಪಡ್ತೀರಿ. ಅದರಲ್ಲೂ ಈ ಹಳ್ಳಿ ಭಾರತದಲ್ಲೇ ಇದೆ ಅಂದರಂತೂ ಕೇಳಬೇಕಾ? ಈ ಹಳ್ಳಿಯಲ್ಲಿ ರೈತರು ಕೃಷಿಗಾಗಿ ಬಳಸುವ ಟ್ರ್ಯಾಕ್ಟರ್​​ಗಳು ಬುಲೆಟ್​​ಪ್ರೂಫ್. ಹರ್ಯಾಣ ಮತ್ತು ಉತ್ತರಪ್ರದೇಶದ ಗಡಿ ಭಾಗದಲ್ಲಿ ಈ ಹಳ್ಳಿ ಇದೆ. ತಮ್ಮ ಸುರಕ್ಷತೆಗಾಗಿ ರೈತರು ಈ ಟ್ರ್ಯಾಕ್ಟರ್​ಗಳನ್ನು ಬಳಸ್ತಾರೆ. ಜತೆಗೆ ಇವುಗಳಿಗೆ ಕ್ಯಾಮೆರಾ ಅಳವಡಿಸಲಾಗಿರುತ್ತೆ. ಹಾಗಂತ ಈ ಟ್ರ್ಯಾಕ್ಟರ್​ಗಳು ಮತ್ತೇನೋ ವಿಶಿಷ್ಟ ಅಂತೇನಲ್ಲ. ಫೋರ್ ಸ್ಟ್ರೋಕ್, ಡೈರೆಕ್ಟ್ ಇಂಜೆಕ್ಷನ್, ಡೀಸೆಲ್ ಎಂಜಿನ್. ಆದರೆ ಇವುಗಳ ವೇಗ ಮಾತ್ರ ಮಾಮೂಲಿ ಟ್ರ್ಯಾಕ್ಟರ್​ಗಳಿಗಿಂತ ಎರಡು ಪಟ್ಟು ಹೆಚ್ಚು. ಪವರ್ ಸ್ಟೇರಿಂಗ್, ಡಿಸ್ಕ್ ಬ್ರೇಕ್, ದೂರದಿಂದ ಬರುವವರು ಸಹ ಕಾಣಬೇಕು ಎಂದು ಟೆಲಿಸ್ಕೋಪಿಕ್ ಲೆನ್ಸ್ ಅಳವಡಿಸಲಾಗಿರುತ್ತದೆ.

ಹರ್ಯಾಣ ಮತ್ತು ಉತ್ತರಪ್ರದೇಶ ಗಡಿಯಲ್ಲಿ ಈ ಹಳ್ಳಿ ಇರುವುದರಿಂದ ಕೃಷಿ ಭೂಮಿ ಮೇಲೆ ಎರಡೂ ರಾಜ್ಯದವರು ತಮ್ಮ ಹಕ್ಕಿದೆ ಎಂದು ಸಾಧಿಸುತ್ತಾರೆ. ಈ ಕಾರಣಕ್ಕೆ ರೈತರ ಮಧ್ಯೆ ತಿಕ್ಕಾಟ ಏರ್ಪಡುತ್ತದೆ. ಭತ್ತ ಬೆಳೆಯುವ ಹಾಗೂ ಕೊಯ್ಲಾಗುವ ಸಂದರ್ಭದಲ್ಲಿ ಈ ತಿಕ್ಕಾಟವು ಹಿಂಸಾಚಾರಕ್ಕೆ ತಿರುಗುತ್ತದೆ. ರೈತರು ಪರಸ್ಪರರ ಮೇಲೆ ಕತ್ತಿ, ಲಾಠಿ, ಚಾಕು ಮತ್ತು ಎಷ್ಟೋ ಸಲ ಬಂದೂಕಿನಿಂದ ದಾಳಿ ಮಾಡಿಕೊಳ್ಳುತ್ತಾರೆ. ತಮ್ಮನ್ನು ರಕ್ಷಿಸಿಕೊಳ್ಳುವುದಕ್ಕೋಸ್ಕರ ಬುಲೆಟ್​ಪ್ರೂಫ್ ಟ್ರ್ಯಾಕ್ಟರ್​ಗಳನ್ನು ಬಳಸ್ತಾರೆ.

ವರದಿಗಳು ಹೇಳುವಂತೆ, ಗಡಿ ಭಾಗದಲ್ಲಿ ನಾಲ್ಕು ಹಳ್ಳಿಗಳಿದ್ದು, 450 ಎಕರೆ ಕೃಷಿಭೂಮಿ ಇದೆ. ಕೇಂದ್ರ ಸರ್ಕಾರವು 1974ರಲ್ಲಿ ಈ ವ್ಯಾಜ್ಯವನ್ನು ಬಗೆಹರಿಸುವುದಕ್ಕೆ ಪ್ರಯತ್ನಿಸಿದೆ. ಆದರೆ ಏನೂ ಪ್ರಯೋಜನ ಆಗಿಲ್ಲ. ಕೃಷಿ ಭೂಮಿಯ ಮೇಲಿನ ಹಿಡಿತಕ್ಕಾಗಿ ಇವತ್ತಿಗೂ ಇಲ್ಲಿನ ರೈತರು ಹಾವು- ಮುಂಗುಸಿ ರೀತಿಯಲ್ಲಿ ಜಗಳ ಆಡುತ್ತಾರೆ. ಕಳೆದ ಐವತ್ತು ವರ್ಷಗಳಿಂದ ಈ ಕಚ್ಚಾಟ ನಡೆಯುತ್ತಲೇ ಇದೆ. ಇನ್ನೆಷ್ಟು ಸಮಯ ಇದು ಮುಂದುವರಿಯುತ್ತದೋ? ಅಂದ ಹಾಗೆ ಬುಲೆಟ್​ಪ್ರೂಫ್ ಟ್ರ್ಯಾಕ್ಟರ್​ ಬೆಲೆ ಎಷ್ಟು ಗೊತ್ತಾ? 5 ಲಕ್ಷ ರೂಪಾಯಿ ಆಗುತ್ತದಂತೆ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ