AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಿನ್ನೋ ಆಹಾರ ವಿಷವಾಯಿತೇ? ತಕ್ಷಣ ಹೀಗೆ ಮಾಡಿ

ನೀವು ಸೇವಿಸುವ ಆಹಾರ ವಿಷವಾಗಿದ್ದರೆ, ಆಗ ನೀವು ಹೆಚ್ಚು ನೀರಿನಾಂಶ ಸೇವಿಸಬೇಕು. ಹಣ್ಣಿನ ಜ್ಯೂಸ್ ಮತ್ತು ಎಳನೀರು ಕಾರ್ಬೋಹೈಡ್ರೇಟ್ಸ್ ನ್ನು ಮರು ಸ್ಥಾಪಿಸುವುದು ಮತ್ತು ನಿಶ್ಯಕ್ತಿ ದೂರ ಮಾಡುವುದು. ಈ ಸಂದರ್ಭದಲ್ಲಿ ಕೆಫಿನ್ ಸೇವನೆ ಮಾಡಬೇಡಿ, ಇದು ಜೀರ್ಣಕ್ರಿಯೆ ವ್ಯವಸ್ಥೆಗೆ ಕಿರಿಕಿರಿ ಉಂಟು ಮಾಡುವುದು. ಕ್ಯಾಮೊಮೈಲ್, ಪುದೀನಾ ಮತ್ತು ದಂಡೇಲಿಯನ್ ಇಂತಹ ಕೆಫಿನ್ ಮುಕ್ತ ಗಿಡಮೂಲಿಕೆ ಚಾ ಸೇವಿಸಬಹುದು. ಇದು ಹೊಟ್ಟೆಗೆ ಶಮನ ನೀಡುವುದು. ಆದರೆ ನೀವು ವೈದ್ಯರ ಸಲಹೆ ಪಡೆಯುವುದ ಸೂಕ್ತ. ಆಹಾರ ವಿಷವಾದ ಸಮಯದಲ್ಲಿ […]

ತಿನ್ನೋ ಆಹಾರ ವಿಷವಾಯಿತೇ? ತಕ್ಷಣ ಹೀಗೆ ಮಾಡಿ
ಸಾಧು ಶ್ರೀನಾಥ್​
|

Updated on:Oct 18, 2019 | 1:38 PM

Share

ನೀವು ಸೇವಿಸುವ ಆಹಾರ ವಿಷವಾಗಿದ್ದರೆ, ಆಗ ನೀವು ಹೆಚ್ಚು ನೀರಿನಾಂಶ ಸೇವಿಸಬೇಕು. ಹಣ್ಣಿನ ಜ್ಯೂಸ್ ಮತ್ತು ಎಳನೀರು ಕಾರ್ಬೋಹೈಡ್ರೇಟ್ಸ್ ನ್ನು ಮರು ಸ್ಥಾಪಿಸುವುದು ಮತ್ತು ನಿಶ್ಯಕ್ತಿ ದೂರ ಮಾಡುವುದು. ಈ ಸಂದರ್ಭದಲ್ಲಿ ಕೆಫಿನ್ ಸೇವನೆ ಮಾಡಬೇಡಿ, ಇದು ಜೀರ್ಣಕ್ರಿಯೆ ವ್ಯವಸ್ಥೆಗೆ ಕಿರಿಕಿರಿ ಉಂಟು ಮಾಡುವುದು. ಕ್ಯಾಮೊಮೈಲ್, ಪುದೀನಾ ಮತ್ತು ದಂಡೇಲಿಯನ್ ಇಂತಹ ಕೆಫಿನ್ ಮುಕ್ತ ಗಿಡಮೂಲಿಕೆ ಚಾ ಸೇವಿಸಬಹುದು. ಇದು ಹೊಟ್ಟೆಗೆ ಶಮನ ನೀಡುವುದು. ಆದರೆ ನೀವು ವೈದ್ಯರ ಸಲಹೆ ಪಡೆಯುವುದ ಸೂಕ್ತ. ಆಹಾರ ವಿಷವಾದ ಸಮಯದಲ್ಲಿ ಹೆಚ್ಚಿನ ವಿಶ್ರಾಂತಿ ಪಡೆಯುವುದು ಅತೀ ಅಗತ್ಯವಾಗಿರುವುದು. ಆಹಾರ ವಿಷವಾಗುವ ಸಮಸ್ಯೆಯು ತೀವ್ರವಾಗಿದ್ದರೆ ಆಸ್ಪತ್ರೆಯಲ್ಲಿ ದಾಖಲಾಗಬೇಕಾಗಬಹುದು.

ವಾಂತಿ ಹಾಗೂ ಬೇಧಿ ಕಡಿಮೆ ಆಗುವ ತನಕ ಯಾವುದೇ ಘನ ಆಹಾರ ಸೇವನೆ ಮಾಡದೆ ಇದ್ದರೆ ತುಂಬಾ ಒಳ್ಳೆಯದು. ಇದು ಕಡಿಮೆ ಆದ ಬಳಿಕ ನೀವು ಸಾಮಾನ್ಯವಾಗಿ ಸೇವಿಸುವ, ಆದರೆ ಸುಲಭವಾಗಿ ಕರಗುವ ಆಹಾರ ಸೇವಿಸಿ. ನೀವು ಈ ರೀತಿಯ ಆಹಾರ ಸೇವಿಸಬಹುದು. ಬಾಳೆಹಣ್ಣು, ಅನ್ನ, ಓಟ್ ಮೀಲ್, ಬಟಾಟೆ, ಬೇಯಿಸಿದ ತರಕಾರಿ, ಬ್ರೆಡ್ ಟೋಸ್ಟ್, ಕೆಫಿನ್ ಇಲ್ಲದೆ ಇರುವ ಸೋಡಾ, ಹಣ್ಣಿನ ಜ್ಯೂಸ್, ಕ್ರೀಡಾ ಪಾನೀಯಗಳು ಸೂಕ್ತ.

ಹೊಟ್ಟೆಯು ಇನ್ನಷ್ಟು ಸಮಸ್ಯೆಗೆ ಒಳಗಾಗುವುದನ್ನು ತಪ್ಪಿಸಲು ಈ ರೀತಿಯ ಘನ ಆಹಾರ ಸೇವಿಸುವುದನ್ನು ನೀವು ಕಡೆಗಣಿಸಬೇಕು. ಇದರಲ್ಲಿ ಮುಖ್ಯವಾಗಿ, ಹಾಲಿನ ಉತ್ಪನ್ನಗಳು, ವಿಶೇಷವಾಗಿ ಹಾಲು ಮತ್ತು ಚೀಸ್, ಕೊಬ್ಬಿನ ಆಹಾರಗಳು, ಹೆಚ್ಚು ಸಕ್ಕರೆ ಇರುವ ಆಹಾರ, ಖಾರದ ಆಹಾರ, ಕರಿದ ಆಹಾರಗಳನ್ನು ತಿನ್ನಬಾರದು. ಕೆಫಿನ್, ಆಲ್ಕೋಹಾಲ್, ನಿಕೋಟಿನ್ ಇವುಗಳನ್ನು ಸೇವಿಸದೇ ಇದ್ರೆ ಉತ್ತಮ.

ಇದನ್ನೂ ಓದಿ: ಸ್ವಲ್ಪ ಯಾಮಾರಿದ್ರೆ ಹೊಟ್ಟೆಗೆ ಬೀಳುತ್ತೆ ಮಾರಣಾಂತಿಕ ವಿಷ!

ಆಹಾರವನ್ನು ತುಂಬಾ ಸುರಕ್ಷಿತವಾಗಿ ನೀವು ಇಟ್ಟುಕೊಳ್ಳಬೇಕು ಮತ್ತು ಅಸುರಕ್ಷಿತ ವಾತಾವರಣದಲ್ಲಿ ಆಹಾರವನ್ನು ತೆರೆದಿಡಬಾರದು. ಕೆಲವೊಂದು ಆಹಾರಗಳು ಉತ್ಪನ್ನವಾಗುವ ಕ್ರಮದಿಂದಾಗಿ ಬೇಗನೆ ವಿಷವಾಗುವುದು. ಉದಾಹರಣೆಗೆ ಮಾಂಸ, ಕೋಳಿಮಾಂಸ, ಮೊಟ್ಟೆ ಮತ್ತು ಚಿಪ್ಪುಮೀನು ಬೇಗನೆ ಕೆಡುವುದು. ಆದರೆ ಇದೆಲ್ಲವನ್ನು ಬಿಸಿ ಮಾಡುವ ವೇಳೆ ಸೋಂಕು ನಿವಾರಣೆ ಆಗುವುದು. ಇಂತಹ ಆಹಾರಗಳನ್ನು ನೀವು ಹಸಿಯಾಗಿ ತಿಂದರೆ ಅಥವಾ ಸರಿಯಾಗಿ ಬೇಯಿಸದೆ ತಿಂದರೆ ಆಗ ಆಹಾರವು ಬೇಗನೆ ವಿಷವಾಗುವುದು.

ಅಡುಗೆ ಮಾಡುವ ಮೊದಲು ಅಥವಾ ಊಟ ಮಾಡುವ ಮೊದಲು ಸರಿಯಾಗಿ ಕೈಗಳನ್ನು ತೊಳೆಯಿರಿ. ಆಹಾರವು ಸರಿಯಾಗಿ ಸೀಲ್ ಆಗಿದೆಯಾ ಅಥವಾ ಶೇಖರಣೆ ಮಾಡಲಾಗಿದೆಯಾ ಎಂದು ನೋಡಿ. ಮಾಂಸ ಮತ್ತು ಮೊಟ್ಟೆಯನ್ನು ಸರಿಯಾಗಿ ಬೇಯಿಸಿ. ಯಾವುದೇ ತಾಜಾ ಆಹಾರವನ್ನು ಬಳಸುವ ಮೊದಲು ಅದನ್ನು ಸರಿಯಾಗಿ ತೊಳೆಯಿರಿ. ಹಣ್ಣುಗಳು ಹಾಗೂ ತರಕಾರಿಗಳನ್ನು ಸರಿಯಾಗಿ ತೊಳೆದ ಬಳಿಕ ಬಳಸಿಕೊಂಡರೆ ಆಹಾರ ವಿಷವಾಗುವುದನ್ನು ತಪ್ಪಿಸಬಹುದು.

Published On - 12:10 pm, Fri, 18 October 19

ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ