AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನುಷ್ಯನಾಗಿ ಹುಟ್ಟಿದ ಮೇಲೆ ಈ ನಾಲ್ಕು ಋಣಗಳನ್ನು ತೀರಿಸಲೇಬೇಕು!

ಹಿಂದೂ ಧರ್ಮದಲ್ಲಿ ಇರುವ ಎಷ್ಟೋ ಆಚಾರ-ವಿಚಾರ, ಪದ್ಧತಿಗಳು ಬಹಳಷ್ಟು ಜನರಿಗೆ ತಿಳಿದಿಲ್ಲ. ನಾವು ಪಾಲಿಸುವ ಪ್ರತಿ ಆಚರಣೆಯ ಹಿಂದೆಯೂ ಒಂದು ನಿಗೂಢ ಸತ್ಯ ಅಡಗಿರುತ್ತೆ. ಆ ಆಚರಣೆ ಬಗ್ಗೆ ಸಂಪೂರ್ಣವಾಗಿ ತಿಳಿದು ಆಚರಿಸಿದಾಗ ಮಾತ್ರ ಅದರ ಸಂಪೂರ್ಣ ಫಲ ಸಿಗುತ್ತೆ ಅಂತಾ ನಮ್ಮ ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಅಂತಹ ಆಚರಣೆಗಳಲ್ಲಿ ಒಂದು ಋಣಗಳು. ಮನುಷ್ಯನಾಗಿ ಹುಟ್ಟಿದ ಮೇಲೆ ಅದಕ್ಕೆ ಪ್ರತಿಫಲವಾಗಿ ಕೆಲವು ಋಣಗಳನ್ನು ಸಂದಾಯ ಮಾಡಬೇಕು. ಮಹಾಭಾರತದಲ್ಲಿ ಮನುಷ್ಯ ಕಡ್ಡಾಯವಾಗಿ ತೀರಿಸಬೇಕಾದ ಋಣಗಳ ಬಗ್ಗೆ ವಿವರವಾಗಿ ತಿಳಿಸಲಾಗಿದೆ. ಅದರಂತೆ […]

ಮನುಷ್ಯನಾಗಿ ಹುಟ್ಟಿದ ಮೇಲೆ ಈ ನಾಲ್ಕು ಋಣಗಳನ್ನು ತೀರಿಸಲೇಬೇಕು!
ಸಾಧು ಶ್ರೀನಾಥ್​
|

Updated on:Oct 27, 2019 | 7:04 AM

Share

ಹಿಂದೂ ಧರ್ಮದಲ್ಲಿ ಇರುವ ಎಷ್ಟೋ ಆಚಾರ-ವಿಚಾರ, ಪದ್ಧತಿಗಳು ಬಹಳಷ್ಟು ಜನರಿಗೆ ತಿಳಿದಿಲ್ಲ. ನಾವು ಪಾಲಿಸುವ ಪ್ರತಿ ಆಚರಣೆಯ ಹಿಂದೆಯೂ ಒಂದು ನಿಗೂಢ ಸತ್ಯ ಅಡಗಿರುತ್ತೆ. ಆ ಆಚರಣೆ ಬಗ್ಗೆ ಸಂಪೂರ್ಣವಾಗಿ ತಿಳಿದು ಆಚರಿಸಿದಾಗ ಮಾತ್ರ ಅದರ ಸಂಪೂರ್ಣ ಫಲ ಸಿಗುತ್ತೆ ಅಂತಾ ನಮ್ಮ ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಅಂತಹ ಆಚರಣೆಗಳಲ್ಲಿ ಒಂದು ಋಣಗಳು. ಮನುಷ್ಯನಾಗಿ ಹುಟ್ಟಿದ ಮೇಲೆ ಅದಕ್ಕೆ ಪ್ರತಿಫಲವಾಗಿ ಕೆಲವು ಋಣಗಳನ್ನು ಸಂದಾಯ ಮಾಡಬೇಕು. ಮಹಾಭಾರತದಲ್ಲಿ ಮನುಷ್ಯ ಕಡ್ಡಾಯವಾಗಿ ತೀರಿಸಬೇಕಾದ ಋಣಗಳ ಬಗ್ಗೆ ವಿವರವಾಗಿ ತಿಳಿಸಲಾಗಿದೆ. ಅದರಂತೆ ನಾಲ್ಕು ಅತಿ ಮುಖ್ಯ. ಆ ಋಣಗಳನ್ನು ಮನುಷ್ಯ ತೀರಿಸಲೇಬೇಕು.

ಮನುಷ್ಯರು ತೀರಿಸಲೇಬೇಕಾದ ಋಣಗಳು 1) ದೇವತಾ ಋಣ: ಮಾನವ ಜನ್ಮ ಪಡೆದು ಸನಾತನ ಧರ್ಮದ ವ್ಯಾಪ್ತಿಗೆ ಬಂದ ನಂತರ ನಮ್ಮ ಕುಲದೇವರು, ಮನೆದೇವರು, ಇಷ್ಟದೇವರ ಸೇವೆ ಸಲ್ಲಿಸಿ ಋಣಮುಕ್ತರಾಗಬೇಕು. ಅದು ಹೇಗೆ ಅಂದ್ರೆ ಪುಣ್ಯಕ್ಷೇತ್ರಗಳಿಗೆ ತೀರ್ಥಯಾತ್ರೆಗಳನ್ನು ಕೈಗೊಳ್ಳೋದು. ಹೇಗೆ ನಾವು ದಿನದಲ್ಲಿ ಮೂರು ಬಾರಿ ಊಟ ಉಪಹಾರಗಳನ್ನು ತಪ್ಪದೇ ಮಾಡುತ್ತೇವೋ, ಅದೇ ರೀತಿ ಪ್ರತಿವರ್ಷ ತಪ್ಪದೇ ನಮ್ಮ ಕುಲದೇವರು, ಮನೆದೇವರು ಹಾಗೂ ಇಷ್ಟದೇವರ ಆರಾಧನೆ ಮಾಡಬೇಕು. ಇದನ್ನು ಒಂದು ಸಾಧನೆಯ ರೀತಿಯಲ್ಲಿ ಮಾಡಿಕೊಂಡು ನಡೆಸುತ್ತಾ ಬರಬೇಕು. ಕುಲದೇವರ ಆರಾಧನೆ ನಮ್ಮಲ್ಲಿನ ತರ್ಕ ಬುದ್ಧಿಯಿಂದ ಬಿಡುಗಡೆ ಹೊಂದಲು ಸಹಕರಿಸುತ್ತೆ. ಇನ್ನು ನಮ್ಮ ಗ್ರಹಣಶಕ್ತಿಯನ್ನು ಲೌಕಿಕ, ಭೌತಿಕಗಳಿಂದ ಆಧ್ಯಾತ್ಮದ ಕಡೆ ಹರಿಸಬೇಕಾದರೆ ನಾವು ಕುಲದೇವರನ್ನು ಆರಾಧಿಸಲೇಬೇಕು ಎನ್ನಲಾಗುತ್ತೆ.

2)ಪಿತೃ ಋಣ: ಆತ್ಮವು ಬರುವುದು ಪರಮಾತ್ಮನಿಂದ. ಹಾಗೆಯೇ ಆ ಆತ್ಮವನ್ನು ಹೊಂದುವ ದೇಹ ಕೊಟ್ಟ ತಂದೆ-ತಾಯಿಯರಿಗೆ ನಾವು ಋಣಿಗಳಾಗಿರಬೇಕು. ಆದ್ದರಿಂದ ಜನ್ಮದಾತರಿಗೆ ನಾವು ಗೌರವ ಸಲ್ಲಿಸಬೇಕು. ನಮ್ಮ ಕುಟುಂಬದಲ್ಲಿ ಮರಣ ಹೊಂದಿದ್ದ ಪಿತೃದೇವತೆಗಳಿಗೆ ಪ್ರತಿವರ್ಷ ತರ್ಪಣ ಕೊಟ್ಟು ಋಣ ತೀರಿಸಬೇಕು ಅಂತಾ ನಮ್ಮ ಶಾಸ್ತ್ರಗಳು ಹೇಳುತ್ತವೆ.

3)ದಾನ ಋಣ: ಮನುಷ್ಯ ತಾನು ಎಷ್ಟು ದಿನ ಬದುಕಿರುತ್ತಾನೋ ಅಷ್ಟು ದಿನ ದಾನ ಧರ್ಮಗಳನ್ನು ಮಾಡಿ ದೇವರ ಋಣ ತೀರಿಸಬೇಕು. ಈ ರೀತಿಯ ಕಾರ್ಯಗಳನ್ನು ಮನುಷ್ಯ ಮಾಡದೇ ಸಾವನ್ನಪ್ಪಿದ್ರೆ ಅವರ ಕುಟುಂಬದವರು ಶ್ರಾದ್ಧ ಕ್ರಿಯೆ ಮಾಡುವುದರಿಂದ ದೇವರ ಋಣ ತೀರಿ ಅವರಿಗೆ ಒಳ್ಳೆಯ ಲೋಕ ಪ್ರಾಪ್ತಿಯಾಗುತ್ತೆ ಎನ್ನಲಾಗುತ್ತೆ.

4)ಋಷಿ ಋಣ: ಮನುಷ್ಯ ಬುದ್ಧಿಜೀವಿ. ತನ್ನ ಜ್ಞಾನವನ್ನು ಬಚ್ಚಿಡದೇ ಪ್ರತಿಯೊಬ್ಬರಿಗೂ ಹಂಚುವ ಗುಣವಿರಬೇಕು. ಮೇಲೆ ತಿಳಿಸಿದ ದೇವ ಋಣ ಹಾಗೂ ಋಷಿ ಋಣವನ್ನು ಮನುಷ್ಯ ಬದುಕಿದ್ದಾಗ ಭೂಮಿಯ ಮೇಲೆ ತಾನಾಗಿಯೇ ಮಾಡಿದರೆ ಆತ ಸಾವನ್ನಪ್ಪಿದ ಮೇಲೆ ನೇರವಾಗಿ ಸ್ವರ್ಗಕ್ಕೆ ಹೋಗುತ್ತಾನೆ ಎಂದು ಗರುಡ ಪುರಾಣದಲ್ಲಿ ಉಲ್ಲೇಖವಿದೆ.

ಹೀಗೆ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬ ಮನುಷ್ಯನು ತನ್ನ ಜನ್ಮ ಸಾರ್ಥಕವಾಗಲು ಮೇಲೆ ತಿಳಿಸಿದ ಅಷ್ಟೂ ಋಣಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ನಮ್ಮ ಕೈಲಾದ ಮಟ್ಟಿಗೆ ಧರ್ಮ, ಕರ್ಮಾನುಸಾರವಾಗಿ ಈ ಋಣಗಳನ್ನ ತೀರಿಸಬೇಕು. ಇವುಗಳನ್ನು ಸಲ್ಲಿಸಿದಾಗ ಮಾತ್ರ ಮನುಷ್ಯನ ಜನ್ಮ ಸಾರ್ಥಕವಾಗುತ್ತೆ ಎನ್ನುತ್ತೆ ನಮ್ಮ ಧರ್ಮಶಾಸ್ತ್ರ.

Published On - 10:45 pm, Sat, 26 October 19

Follow Us
ಒಳಮೀಸಲಾತಿ ಹುದ್ದೆಗಳ ರೋಸ್ಟರ್ ಬಿಂದು ಸಮಸ್ಯೆ: ಮುನಿಯಪ್ಪ ಹೇಳಿದ್ದಿಷ್ಟು
ಒಳಮೀಸಲಾತಿ ಹುದ್ದೆಗಳ ರೋಸ್ಟರ್ ಬಿಂದು ಸಮಸ್ಯೆ: ಮುನಿಯಪ್ಪ ಹೇಳಿದ್ದಿಷ್ಟು
Live: ಚಿತ್ರದುರ್ಗದಲ್ಲಿ ಬಿಎಸ್​ವೈ ಅಭಿಮಾನೋತ್ಸವ ನೇರ ಪ್ರಸಾರ
Live: ಚಿತ್ರದುರ್ಗದಲ್ಲಿ ಬಿಎಸ್​ವೈ ಅಭಿಮಾನೋತ್ಸವ ನೇರ ಪ್ರಸಾರ
ಬಿಎಸ್​​ವೈ ಅಭಿಮಾನೋತ್ಸವ: ಕಾರ್ಯಕರ್ತರು, ಅಭಿಮಾನಿಗಳಿಗೆ ಭರ್ಜರಿ ಭೋಜನ
ಬಿಎಸ್​​ವೈ ಅಭಿಮಾನೋತ್ಸವ: ಕಾರ್ಯಕರ್ತರು, ಅಭಿಮಾನಿಗಳಿಗೆ ಭರ್ಜರಿ ಭೋಜನ
ಕೆರೆ ಏರಿಯ ಮೇಲೆ ಮದುವೆ ದಿಬ್ಬಣದ ಬಸ್​​ ಪಲ್ಟಿ: ತಪ್ಪಿದ ಭಾರಿ ಅನಾಹುತ
ಕೆರೆ ಏರಿಯ ಮೇಲೆ ಮದುವೆ ದಿಬ್ಬಣದ ಬಸ್​​ ಪಲ್ಟಿ: ತಪ್ಪಿದ ಭಾರಿ ಅನಾಹುತ
ಬಿಜೆಪಿಯನ್ನು ಗೆಲ್ಲಿಸಿದ ಬಂಗಾಳದ ಜನತೆಗೆ ಪ್ರಧಾನಿ ಮೋದಿ ಶಿರ ಬಾಗಿ ನಮಸ್ಕಾರ
ಬಿಜೆಪಿಯನ್ನು ಗೆಲ್ಲಿಸಿದ ಬಂಗಾಳದ ಜನತೆಗೆ ಪ್ರಧಾನಿ ಮೋದಿ ಶಿರ ಬಾಗಿ ನಮಸ್ಕಾರ
ಇಂದು ಪ್ರಮಾಣವಚನ ಸ್ವೀಕರಿಸಿದ ಬಂಗಾಳದ ಬಿಜೆಪಿ ಸಚಿವರ ಪಟ್ಟಿ ಇಲ್ಲಿದೆ
ಇಂದು ಪ್ರಮಾಣವಚನ ಸ್ವೀಕರಿಸಿದ ಬಂಗಾಳದ ಬಿಜೆಪಿ ಸಚಿವರ ಪಟ್ಟಿ ಇಲ್ಲಿದೆ
ಬಿಜೆಪಿಯ ಹಿರಿಯ ಕಾರ್ಯಕರ್ತ ಮಖನಲಾಲ್ ಕಾಲಿಗೆರಗಿ ನಮಸ್ಕರಿಸಿದ ಪ್ರಧಾನಿ ಮೋದಿ
ಬಿಜೆಪಿಯ ಹಿರಿಯ ಕಾರ್ಯಕರ್ತ ಮಖನಲಾಲ್ ಕಾಲಿಗೆರಗಿ ನಮಸ್ಕರಿಸಿದ ಪ್ರಧಾನಿ ಮೋದಿ
ಉಪೇಂದ್ರ ಚುನಾವಣೆಗೆ ಏಕೆ ನಿಲ್ಲಲ್ಲ? ಉತ್ತರಿಸಿದ ನಟ
ಉಪೇಂದ್ರ ಚುನಾವಣೆಗೆ ಏಕೆ ನಿಲ್ಲಲ್ಲ? ಉತ್ತರಿಸಿದ ನಟ
ಕೊಲ್ಕತ್ತಾಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
ಕೊಲ್ಕತ್ತಾಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
Live: ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ; ಅಧಿಕಾರ ಸ್ವೀಕಾರ ಲೈವ್
Live: ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ; ಅಧಿಕಾರ ಸ್ವೀಕಾರ ಲೈವ್