AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vaccine Tourism: ಲಸಿಕೆ ಪ್ರವಾಸೋದ್ಯಮ; ಕೈಯಲ್ಲಿ ಹಣವಿದ್ದವರು ವಿದೇಶಕ್ಕೆ ತೆರಳಿ ಕೊವಿಡ್ ಲಸಿಕೆ ಹಾಕಿಸಿಕೊಂಡು ಬರಬಹುದೇ?

Covid Jabs in Abroad: ಸ್ಪುಟ್ನಿಕ್ ವಿ ಲಸಿಕೆಯ 2 ಡೋಸ್ ಪಡೆಯುವ ನಡುವಿನ 20 ದಿನಗಳಲ್ಲಿ ರಷ್ಯಾದ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವ ಅವಕಾಶವೂ ಈ ಪ್ಯಾಕೇಜ್​ನಲ್ಲಿತ್ತು. ಆದರೆ ಕೆಲವೇ ದಿನಗಳಲ್ಲಿ, ಆ ಕಂಪನಿಯ ವೆಬ್​ಸೈಟ್​ನಿಂದ ಲಸಿಕೆ ಪ್ರವಾಸೋದ್ಯಮದ ಪ್ಯಾಕೇಜ್ ಮಾಯವಾಯಿತು. ಹಾಗಾದರೆ ಏನಿದು ಲಸಿಕೆ ಪ್ರವಾಸೋದ್ಯಮ?

Vaccine Tourism: ಲಸಿಕೆ ಪ್ರವಾಸೋದ್ಯಮ; ಕೈಯಲ್ಲಿ ಹಣವಿದ್ದವರು ವಿದೇಶಕ್ಕೆ ತೆರಳಿ ಕೊವಿಡ್ ಲಸಿಕೆ ಹಾಕಿಸಿಕೊಂಡು ಬರಬಹುದೇ?
ಸಂಗ್ರಹ ಚಿತ್ರ
Follow us
guruganesh bhat
| Updated By: ಆಯೇಷಾ ಬಾನು

Updated on: May 24, 2021 | 7:30 AM

ನಾನು ಲಸಿಕೆ ಹಾಕಿಸಿಕೊಂಡೆ, ನಿಂದಾಯ್ತಾ? ಎಂದು ಪಕ್ಕದ ಮನೆಯವರ ಕೇಳಿದ್ದೇ ತಡ, ಇವನಿಗೆ ತಲೆ ಕೆಟ್ಟೇ ಹೋಯಿತು. ಮೊದಲು ಯಾವುದೋ ಗುಂಗಿನಲ್ಲಿ ಲಸಿಕೆ ಹಾಕಿಸಿಕೊಳ್ಳಲಿಲ್ಲ. ಈಗ ಹಾಕಿಸಿಕೊಳ್ಳುವಾ ಎಂದರೆ ಲಸಿಕೆಯೇ ಇಲ್ಲ. ಇನ್ನೆಷ್ಟು ದಿನ ಕಾಯಬೇಕೋ..ಎಂದು ಹಣೆ ಚಚ್ಚಿಕೊಂಡವನಿಗೆ ಒಂದುಕ್ಷಣ ವಿದೇಶಗಳಲ್ಲಿ ಲಸಿಕೆ ವಿತರಣೆ ಹೇಗೆ ಆಗುತ್ತಿದೆ ಎಂಬ ಯೋಚನೆ ಮೂಡದಿರಲ್ಲ. ಕೈಯಲ್ಲಿ ದುಡ್ಡಿದ್ದರೆ ವಿದೇಶಕ್ಕೆ ಹೋಗಾದರೂ ಸರಿ, ಲಸಿಕೆ ಹಾಕಿಸ್ಕೋತೀನಿ ಎಂದು ಒಮ್ಮೆ ಹೇಳಿಕೊಂಡಿರುವವರೂ ಇದ್ದಾರೂ. ಇಲ್ಲಿ ನಾವು ವಿವರಿಸುತ್ತಿರುವ ಕಥೆ ಅದೇ, ಲಸಿಕೆ ಪ್ರವಾಸೋದ್ಯಮ!

ಕೆಲವು ದಿನಗಳ ಹಿಂದೆ ದುಬೈ ಮೂಲದ ಪ್ರವಾಸೋದ್ಯಮ ಕಂಪನಿಯೊಂದು ಭಾರತದ ನಾಗರಿಕರಿಗೆ ಒಂದು ಯೋಜನೆ ರೂಪಿಸಿತ್ತು. ದೆಹಲಿಯಿಂದ ರಷ್ಯಾ ರಾಜಧಾನಿ ಮಾಸ್ಕೋಕ್ಕೆ ಹೋಗಿಬರುವ 24 ದಿನಗಳ ಪ್ಯಾಕೇಜ್ ಅದು. ಅರೆ! ಈ ಕೊವಿಡ್ ಜಂಜಾಟದಲ್ಲಿ ಈಗೆಂತ ರಷ್ಯಾಕ್ಕೆ ಪ್ರವಾಸ ಹೋಗುವುದು ಎಂದುಕೊಂಡಿರಾ? ಅಲ್ಲೇ ಇದೆ ವಿಶೇಷ. ದೆಹಲಿಯಿಂದ ಮಾಸ್ಕೋಕ್ಕೆ ಹೋಗಿ ರಷ್ಯಾದ ಸ್ಪುಟ್ನಿಕ್ ವಿ ಕೊವಿಡ್ ಲಸಿಕೆಯ ಎರಡೂ ಡೋಸ್ ಪಡೆದುಕೊಂಡು ಮರಳಿ ಭಾರತಕ್ಕೆ ಬರುವ ಅಪರೂಪದ ಪ್ರವಾಸದ ಆಫರ್ ನೀಡಿತ್ತು ಕಂಪೆನಿ. ಹಣ ಮಾತ್ರ ಬರೋಬ್ಬರಿ 1.24 ಲಕ್ಷ ಮಾತ್ರ.

ಸ್ಪುಟ್ನಿಕ್ ವಿ ಲಸಿಕೆಯ 2 ಡೋಸ್ ಪಡೆಯುವ ನಡುವಿನ 20 ದಿನಗಳಲ್ಲಿ ರಷ್ಯಾದ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವ ಅವಕಾಶವೂ ಈ ಪ್ಯಾಕೇಜ್​ನಲ್ಲಿತ್ತು. ಆದರೆ ಕೆಲವೇ ದಿನಗಳಲ್ಲಿ, ಆ ಕಂಪನಿಯ ವೆಬ್​ಸೈಟ್​ನಿಂದ ಲಸಿಕೆ ಪ್ರವಾಸೋದ್ಯಮದ ಪ್ಯಾಕೇಜ್ ಮಾಯವಾಯಿತು. ಹಾಗಾದರೆ ಏನಿದು ಲಸಿಕೆ ಪ್ರವಾಸೋದ್ಯಮ?

ವಿಶ್ವದ ಬಹುತೇಕ ದೇಶಗಳ ಬಳಿ ಸ್ವಂತ ಕೊವಿಡ್ ಲಸಿಕೆ ತಯಾರಿಸಲು ಸಾಧ್ಯವಾಗಿಲ್ಲ. ಕೇವಲ ಕೆಲವೇ ಕೆಲವು ದೇಶಗಳು ಲಸಿಕೆ ತಯಾರಿಸಿವೆ. ಯಾವ ದೇಶದಲ್ಲಿ ಲಸಿಕೆ ಲಭ್ಯವಿದೆಯೋ ಅಲ್ಲಿಗೆ ಹೋಗಿ ಲಸಿಕೆ ಪಡೆಯುವ ಕಲ್ಪನೆಯೇ ಲಸಿಕೆ ಪ್ರವಾಸೋದ್ಯಮ. ಹಾಗಾದರೆ, ಸದ್ಯದ ಮಟ್ಟಿಗೆ ಭಾರತದಲ್ಲಿ ಲಸಿಕೆ ಪ್ರವಾಸೋದ್ಯಮ ಅಳವಡಿಕೆ ಆಗಲು ಸಾಧ್ಯವೇ ಎಂದು ಕೇಳಿದರೆ ಒಂದೇ ಉತ್ತರ, ಇಲ್ಲ. ಸದ್ಯ ದೇಶದಲ್ಲಿ ಕೊವಿಡ್ ಸೋಂಕಿನ ಪ್ರಮಾಣ ವಿಪರೀತ ಹೆಚ್ಚಿರುವುದರಿಂದ ಭಾರತದಿಂದ ಆಗಮಿಸುವ ಪ್ರಯಾಣಿಕರ ಮೇಲೆ ಹಲವು ದೇಶಗಳು ನಿರ್ಬಂಧ ವಿಧಿಸಿವೆ. ಹೀಗಾಗಿ ಲಸಿಕೆ ಪ್ರವಾಸೋದ್ಯಮ ನಮ್ಮಲ್ಲಿ ಕಾರ್ಯಸಾಧುವಂತೂ ಅಲ್ಲ. ಭಾರತೀಯ ಪ್ರವಾಸೋದ್ಯಮ ನಿರ್ವಹಣಾ ಸಂಸ್ಥೆಯ ಹಿರಿಯ ಸದಸ್ಯ ಸುಭಾಶ್ ಗೋಯೆಲ್ ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಆದರೆ ಭಾರತದ ಪ್ರಯಾಣಿಕರ ಮೇಲಿನ ನಿರ್ಬಂಧ ತೆರವುಗೊಳಿಸಿದ ನಂತರ ಭಾರತೀಯರು ವಿದೇಶಗಳಿಗೆ ತೆರಳಿ ಲಸಿಕೆ ಪಡೆಯಬಹುದು ಎನ್ನುತ್ತಾರೆ ಅವರು.

ಈಗಾಗಲೇ ಶುರುವಾಗಿದೆ ಲಸಿಕೆ ಪ್ರವಾಸೋದ್ಯಮ! ಲಸಿಕೆ ಪ್ರವಾಸೋದ್ಯಮ ಎಂಬ ಕಲ್ಪನೆ ಹುಟ್ಟಿದ್ದೇ ತಡ, ಕೆಲವು ದೇಶಗಳು ಈ ಕಲ್ಪನೆಯ ಮೂಲಕ ತಮ್ಮ ದೇಶದ ಪ್ರವಾಸೋದ್ಯಮವನ್ನು ವಿಸ್ತರಿಸುತ್ತಿವೆ. ಯೂರೋಪಿಯನ್ ಯೂನಿಯನ್​ನ ಸ್ಯಾನ್ ಮ್ಯಾರಿನೋ ತನ್ನ ದೇಶಕ್ಕೆ ಇತರ ದೇಶಗಳಿಂದ ಪ್ರವಾಸಿಗಳು ಆಗಮಿಸಿ ಕೊವಿಡ್ ಲಸಿಕೆ ಪಡೆಯಲು ಅನುವು ಮಾಡಿಕೊಟ್ಟಿದೆ. ರಷ್ಯಾದಲ್ಲೂ ಈ ಯೋಜನೆ ಜಾರಿಗೆ ಬರುವ ಸಂಭವ ಹೆಚ್ಚಿದೆ. ಕೆನಡಾ ಮತ್ತು ದಕ್ಷಿಣ ಅಮೆರಿಕಾದ ಕೆಲವು ದೇಶಗಳ ನಾಗರಿಕರು ಲಸಿಕೆ ಪಡೆಯಲೆಂದೇ ವಿಮಾನವೇರಿ ಅಮೆರಿಕಕ್ಕೆ ಪ್ರವಾಸ ಮಾಡುವ ಸಾಧ್ಯತೆಯೂ ಇದೆ.

ಭಾರತೀಯರಿಗೂ ದೊರೆಯಬಹುದೇ ಅವಕಾಶ? ಸದ್ಯ ಭಾರತದಲ್ಲಿ ಲಸಿಕೆ ಪ್ರವಾಸೋದ್ಯಮ ಅಥವಾ ವ್ಯಾಕ್ಸಿನ್ ಟೂರಿಸಂ ಅನಧಿಕೃತ ಅಲ್ಲ. ಆದರೆ ಈ ವರ್ಷದ ಅಂತ್ಯದ ವೇಳೆಗೇ ಎಲ್ಲಾ ನಾಗರಿಕರಿಗೂ ಕೊವಿಡ್ ಲಸಿಕೆ ಸಿಗಲಿದೆ, ಮತ್ತೇಕೆ ವಿದೇಶಕ್ಕೆ ತೆರಳುತ್ತೀರಿ ಎಂದು ಸರ್ಕಾರದ ಮೂಲಗಳು ಪ್ರಶ್ನಿಸುತ್ತವೆ. ಸದ್ಯ ಜಾರಿಯಲ್ಲಿರುವ ಕಾನೂನು ಭಾರತೀಯರು ವಿದೇಶದಲ್ಲಿ ಲಸಿಕೆ ಪಡೆಯುವುದನ್ನು ನಿಷೇಧಿಸಿಲ್ಲ. ಆದರೆ ಭಾರತದ ಪ್ರಯಾಣಿಕರ ಮೇಲಿನ ನಿರ್ಬಂಧ ತೆರವುಗೊಳ್ಳಬೇಕಷ್ಟೇ. ಮತ್ತು ಮುಖ್ಯವಾಗಿ ಕೈಯಲ್ಲಿ ಅಷ್ಟು ದುಡ್ಡಿರಬೇಕು.

ಲಸಿಕೆ ಪಾಸ್​ಪೋರ್ಟ್ ಇದೆಯೇ ನಿಮ್ಮಲ್ಲಿ? ಈ ಕಲ್ಪನೆ ಇನ್ನೂ ಮುಂದುವರೆದು ಲಸಿಕೆ ಪಾಸ್​ಪೋರ್ಟ್​ನವರೆಗೂ ತಲುಪಿದೆ. ಕೊವಿಡ್ ಲಸಿಕೆ ಹಾಕಿಸಿಕೊಂಡ ಬಗ್ಗೆ ಅಧಿಕೃತ ದಾಖಲೆ ಇದ್ದಲ್ಲಿ ಮಾತ್ರ ಗಡಿಯೊಳಗೆ ಸೇರಿಸಿಕೊಳ್ಳುವುದಾಗಿ ಈಗಾಗಲೇ ಹಲವು ದೇಶಗಳು ಘೋಷಿಸಿವೆ. ಅದರಲ್ಲೂ ವಿಶೇಷವಾಗಿ ಯೂರೋಪಿಯನ್ ಯೂನಿಯನ್ ಈ ನಿರ್ಧಾರ ತಳೆದಿದೆ. ಹೀಗಾಗಿ ಭವಿಷ್ಯದಲ್ಲಿ ಕೊವಿಡ್ ಲಸಿಕೆ ಪಾಸ್​ಪೋರ್ಟ್ ಸಹ ವಿದೇಶ ಪ್ರಯಾಣಕ್ಕೆ ಕಡ್ಡಾಯವಾಗಬಹುದು.

ಇದನ್ನೂ ಓದಿ: Bengaluru Air: ಲಾಕ್​ಡೌನ್ ಪರಿಣಾಮ: ಬೆಂಗಳೂರು ನಗರದಲ್ಲಿ ಗಾಳಿಯ ಶುದ್ಧತೆ ಹೆಚ್ಚಳ

ಕೊವಿಡ್ 3ನೇ ಅಲೆಯಿಂದ ಮಕ್ಕಳಿಗೆ ಹೆಚ್ಚಿನ ಅಪಾಯ, ಭಾರತದಲ್ಲಿ ತಯಾರಿಸಿದ ಮೂಗಿಗೆ ಹಾಕುವ ಲಸಿಕೆ;ಗೇಮ್ ಚೇಂಜರ್; ಆಗುವ ಸಾಧ್ಯತೆ: ಸೌಮ್ಯ ಸ್ವಾಮಿನಾಥನ್

(What is Vaccine tourism can Indian travel to abroad to get Covid jabs all details in Kannada)

ಕಾಶ್ಮೀರದ ಶೋಪಿಯಾನ್​ನಲ್ಲಿ ಮೂವರು ಲಷ್ಕರ್ ಉಗ್ರರ ಎನ್​ಕೌಂಟರ್
ಕಾಶ್ಮೀರದ ಶೋಪಿಯಾನ್​ನಲ್ಲಿ ಮೂವರು ಲಷ್ಕರ್ ಉಗ್ರರ ಎನ್​ಕೌಂಟರ್
ಎಲ್ಲ ಸಂದೇಹಗಳನ್ನು ಪ್ರಧಾನಿ ಮೋದಿ ದೂರ ಮಾಡಿದ್ದಾರೆ: ವಿಜಯೇಂದ್ರ
ಎಲ್ಲ ಸಂದೇಹಗಳನ್ನು ಪ್ರಧಾನಿ ಮೋದಿ ದೂರ ಮಾಡಿದ್ದಾರೆ: ವಿಜಯೇಂದ್ರ
ನಿಮಗೆ ಇಂಗ್ಲಿಷ್ ಬರದಿದ್ದರೆ ಸುಮ್ಮನಿರಿ, ಪಾಕ್​ ರಕ್ಷಣಾ ಸಚಿವಗೆ ತರಾಟೆ
ನಿಮಗೆ ಇಂಗ್ಲಿಷ್ ಬರದಿದ್ದರೆ ಸುಮ್ಮನಿರಿ, ಪಾಕ್​ ರಕ್ಷಣಾ ಸಚಿವಗೆ ತರಾಟೆ
ರಾಜ್ಯ ಬಿಜೆಪಿ ನಾಯಕತ್ವದಿಂದ ಅಂತರ ಕಾಯ್ದುಕೊಂಡಿರುವ ಸಿದ್ದೇಶ್ವರ
ರಾಜ್ಯ ಬಿಜೆಪಿ ನಾಯಕತ್ವದಿಂದ ಅಂತರ ಕಾಯ್ದುಕೊಂಡಿರುವ ಸಿದ್ದೇಶ್ವರ
ಹಿಂದೂಗಳು ದುರ್ಬಲರು, ಆತ್ಮಹತ್ಯಾ ಬಾಂಬರ್​ಗಳನ್ನು ಕಳುಹಿಸುತ್ತೇನೆ
ಹಿಂದೂಗಳು ದುರ್ಬಲರು, ಆತ್ಮಹತ್ಯಾ ಬಾಂಬರ್​ಗಳನ್ನು ಕಳುಹಿಸುತ್ತೇನೆ
ರಾಕೇಶ್ ಪೂಜಾರಿ ತಂಗಿ ವಿಚಾರದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡ ಆನಂದ್
ರಾಕೇಶ್ ಪೂಜಾರಿ ತಂಗಿ ವಿಚಾರದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡ ಆನಂದ್
ಡಿಜಿಎಂಒಗಳ ಸಭೆಯಲ್ಲೂ ಪಾಕಿಸ್ತಾನಕ್ಕೆ ತಪರಾಕಿ, ತಂಟೆಗೆ ಬಂದರೆ ಜೋಕೆ!
ಡಿಜಿಎಂಒಗಳ ಸಭೆಯಲ್ಲೂ ಪಾಕಿಸ್ತಾನಕ್ಕೆ ತಪರಾಕಿ, ತಂಟೆಗೆ ಬಂದರೆ ಜೋಕೆ!
ರಕ್ಷಣಾ ಸಚಿವಾಲಯಕ್ಕೆ 25 ಲಕ್ಷ‌ ರೂ: ಸುಬುಧೇಂದ್ರ ತೀರ್ಥರಿಂದ ಘೋಷಣೆ
ರಕ್ಷಣಾ ಸಚಿವಾಲಯಕ್ಕೆ 25 ಲಕ್ಷ‌ ರೂ: ಸುಬುಧೇಂದ್ರ ತೀರ್ಥರಿಂದ ಘೋಷಣೆ
ಶಾಲೆಗೆ ಬರಲು ನಮಗೆ ಯಾವ ಭಯವೂ ಇಲ್ಲ ಎನ್ನುತ್ತಿರುವ ಮಕ್ಕಳು
ಶಾಲೆಗೆ ಬರಲು ನಮಗೆ ಯಾವ ಭಯವೂ ಇಲ್ಲ ಎನ್ನುತ್ತಿರುವ ಮಕ್ಕಳು
ನೆಲಮಂಗಲ: ಆಯಿಲ್ ಗೋಡೌನ್​ಗೆ ಬೆಂಕಿ, ಧಗಧಗಿಸಿದ ಗೋದಾಮು
ನೆಲಮಂಗಲ: ಆಯಿಲ್ ಗೋಡೌನ್​ಗೆ ಬೆಂಕಿ, ಧಗಧಗಿಸಿದ ಗೋದಾಮು