AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾವಿನ ಮನೆಯಲ್ಲಿ ಒಲೆಯನ್ನು ಹಚ್ಚುವುದಿಲ್ಲ, ಏಕೆ ಗೊತ್ತಾ?

ಹಿರಿಯರು ಆಚರಿಸಿಕೊಂಡು ಬಂದಿರುವ ಕೆಲವು ಆಚಾರ, ವಿಚಾರಗಳು ನಮಗೆ ವಿಚಿತ್ರ ಅನಿಸಿದರೂ ಕೂಡ ಅದರ ಹಿಂದೆ ಒಂದು ಬಲವಾದ ಕಾರಣ ಇರುತ್ತೆ. ಮನುಷ್ಯನ ಜನನದಿಂದ ಹಿಡಿದು ಮರಣದವರೆಗೂ ನಾವು ಹಲವು ಆಚಾರ ವಿಚಾರಗಳನ್ನು ಪಾಲಿಸುತ್ತಲೇ ಬಂದಿದ್ದೇವೆ, ಇಂದಿಗೂ ಪಾಲಿಸುತ್ತಿದ್ದೇವೆ. ನಾವು ಆಚರಿಸುವ ಕೆಲವು ಆಚರಣೆಗಳು ನಮಗೆ ಮೂಢನಂಬಿಕೆ ಅನಿಸಿದರೂ ಕೂಡ ಅದರ ಹಿಂದೆ ವೈಜ್ಞಾನಿಕ ಅರಿವು ಇರುತ್ತೆ. ಇನ್ನು ನಾವು ಪ್ರತಿ ಆಚರಣೆಯನ್ನು ನಂಬಲೇಬೇಕು ಅನ್ನೋದು ತಪ್ಪು. ಯಾಕಂದ್ರೆ ಕೆಲವು ಆಚರಣೆಗಳು ಅವರವರ ಮನಸ್ಸಿಗೆ ಸಂಬಂಧಿಸಿದ್ದು. ಕೆಲವರು […]

ಸಾವಿನ ಮನೆಯಲ್ಲಿ ಒಲೆಯನ್ನು ಹಚ್ಚುವುದಿಲ್ಲ, ಏಕೆ ಗೊತ್ತಾ?
ಸಾಧು ಶ್ರೀನಾಥ್​
|

Updated on: Nov 15, 2019 | 7:46 AM

Share

ಹಿರಿಯರು ಆಚರಿಸಿಕೊಂಡು ಬಂದಿರುವ ಕೆಲವು ಆಚಾರ, ವಿಚಾರಗಳು ನಮಗೆ ವಿಚಿತ್ರ ಅನಿಸಿದರೂ ಕೂಡ ಅದರ ಹಿಂದೆ ಒಂದು ಬಲವಾದ ಕಾರಣ ಇರುತ್ತೆ. ಮನುಷ್ಯನ ಜನನದಿಂದ ಹಿಡಿದು ಮರಣದವರೆಗೂ ನಾವು ಹಲವು ಆಚಾರ ವಿಚಾರಗಳನ್ನು ಪಾಲಿಸುತ್ತಲೇ ಬಂದಿದ್ದೇವೆ, ಇಂದಿಗೂ ಪಾಲಿಸುತ್ತಿದ್ದೇವೆ. ನಾವು ಆಚರಿಸುವ ಕೆಲವು ಆಚರಣೆಗಳು ನಮಗೆ ಮೂಢನಂಬಿಕೆ ಅನಿಸಿದರೂ ಕೂಡ ಅದರ ಹಿಂದೆ ವೈಜ್ಞಾನಿಕ ಅರಿವು ಇರುತ್ತೆ.

ಇನ್ನು ನಾವು ಪ್ರತಿ ಆಚರಣೆಯನ್ನು ನಂಬಲೇಬೇಕು ಅನ್ನೋದು ತಪ್ಪು. ಯಾಕಂದ್ರೆ ಕೆಲವು ಆಚರಣೆಗಳು ಅವರವರ ಮನಸ್ಸಿಗೆ ಸಂಬಂಧಿಸಿದ್ದು. ಕೆಲವರು ಅವುಗಳನ್ನು ನಂಬ್ತಾರೆ, ಇನ್ನು ಕೆಲವರು ನಂಬೋದಿಲ್ಲ. ಅಂತಹ ಕೆಲವು ಆಚರಣೆಗಳಲ್ಲಿ ಒಂದು ಸಾವಿನ ಸೂತಕ. ಸಾವನ್ನಪ್ಪಿದ ಮನೆಯಲ್ಲಿ ಸೂತಕ ಇರುತ್ತೆ ಎಂಬ ನಂಬಿಕೆ ಇದೆ. ಇಷ್ಟಕ್ಕೂ ಸಾವಿನ ಮನೆಯಲ್ಲಿ ಸೂತಕ ಎಷ್ಟು ದಿನ ಇರುತ್ತೆ. ಏನಿದು ಸಾವಿನ ಸೂತಕ? ಬನ್ನಿ ತಿಳಿಯೋಣ.

ಸಾವಿನ ಮನೆಯ ಸೂತಕ * ಸತ್ತ ವ್ಯಕ್ತಿಯ ಮನೆಯಲ್ಲಿ ಒಲೆಯನ್ನು ಹಚ್ಚಬಾರದು. ಅಡುಗೆ ಮಾಡಬಾರದು ಅನ್ನುವ ವಿಷಯ ಎಲ್ಲರಿಗೂ ಗೊತ್ತೇ ಇರುತ್ತೆ. * ಕೆಲವರ ಮನೆಯಲ್ಲಿ ಮೂರು ದಿನ, ಹನ್ನೊಂದು ದಿನ ಮತ್ತು ಒಂಬತ್ತು ದಿನಗಳ ಶೋಕಾಚರಣೆಯನ್ನು ಮಾಡ್ತಾರೆ. * ಕೆಲವೊಂದು ಧರ್ಮದಲ್ಲಿ ಒಂದೊಂದು ಆಚರಣೆ ಇರುತ್ತೆ. ಒಬ್ಬ ವ್ಯಕ್ತಿ ಸತ್ತರೆ ಹಿಂದೂ ಧರ್ಮದ ಪ್ರಕಾರ 11 ದಿನಗಳವರೆಗೆ ಶೋಕಾಚರಣೆಯನ್ನು ಮಾಡಲಾಗುತ್ತೆ. * ಮುಸ್ಲಿಂ ಧರ್ಮದಲ್ಲಿ ಮೂರೂ ದಿನ, ಕ್ರಿಶ್ಚಿಯನ್ ಧರ್ಮದಲ್ಲಿ 30 ದಿನಗಳ ತನಕ ಶೋಕಾಚರಣೆಯನ್ನು ಮಾಡಲಾಗುತ್ತೆ.

ಏಕೆ ಒಲೆ ಹಚ್ಚಬಾರದು?: ಇನ್ನು ಸತ್ತ ವ್ಯಕ್ತಿಯ ಮನೆಯಲ್ಲಿ ಏಕೆ ಒಲೆ ಹಚ್ಚಬಾರದು ಮತ್ತು ಅಡುಗೆ ಮಾಡಬಾರದು ಅನ್ನೋದಕ್ಕೂ ಕಾರಣವಿದೆ. ಮನೆಯಲ್ಲಿ ಒಬ್ಬ ವ್ಯಕ್ತಿ ಮರಣ ಹೊಂದಿದ್ದಾರೆ ಎನ್ನುವ ಕಾರಣಕ್ಕೆ ಮನೆಯಲ್ಲಿನ ಜನರು ಉಪವಾಸ ಮಾಡಬೇಕು ಎಂಬ ನಿಯಮವಿಲ್ಲ. ಮನೆಯಲ್ಲಿ ಅಡುಗೆ ಮಾಡದೇ ಬೇರೆಯವರು ತಂದು ಕೊಡುವ ಆಹಾರ ಸೇವಿಸಬಹುದು. ಸಾವಿನ ಮನೆಯವರು ಅಡುಗೆ ಮಾಡಿದರೆ ಮೃತದೇಹದ ಜೊತೆಗೆ ಅವರ ಆತ್ಮ ಕೂಡ ಸುಟ್ಟು ಹೋಗುತ್ತೆ ಅನ್ನೋ ನಂಬಿಕೆ ಇದೆ.

ಇನ್ನು ವಾಸ್ತವವಾಗಿ ಹೇಳಬೇಕೆಂದರೆ ಸಾವನ್ನಪ್ಪಿದವರ ಮನೆಯವರಿಗೆ ದುಃಖಿಸಲು ಮತ್ತು ಮೃತರಿಗೆ ಸಂತಾಪವನ್ನು ವ್ಯಕ್ತಪಡಿಸಲು ಸ್ವಲ್ಪ ಸಮಯ ಸಿಗಲಿ ಅನ್ನುವ ಉದ್ದೇಶದಿಂದ ಈ ನಿಯಮ ಮಾಡಲಾಗಿದೆ. ಮೃತರ ಮನೆಯವರಿಗೆ ಮತ್ತು ಅವರ ಸಂಬಂಧಿಕರಿಗೆ ದುಃಖವನ್ನು ನೀಗಿಸಿಕೊಳ್ಳಲು ಒಂದಷ್ಟು ಸಮಯಾವಕಾಶವನ್ನು ನೀಡುವ ಸಲುವಾಗಿ ಈ ಆಚರಣೆಯನ್ನು ಪಾಲಿಸಿಕೊಂಡು ಬರಲಾಗಿದೆ. ಇನ್ನು ಮರಣಿಸಿದವರ ಮೇಲೆ ನಮಗಿರುವ ಗೌರವ, ವಿಧೇಯತೆಯ ಸೂಚಕವಾಗಿ ಒಂದು ವರ್ಷದ ಕಾಲ ಹಬ್ಬ-ಹರಿದಿನಗಳು, ಶುಭ ಸಮಾರಂಭಗಳನ್ನು ಆಚರಿಸೋದಿಲ್ಲ. ಆದರೆ ಅವುಗಳನ್ನು ಆಚರಿಸೋದು ಬಿಡೋದು ಅವರವರ ನಂಬಿಕೆಗೆ ಬಿಟ್ಟದ್ದು.

ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ