AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೃಷ್ಟಿಕರ್ತ ಬ್ರಹ್ಮನಿಗ್ಯಾಕಿಲ್ಲ ಪೂಜೆ? ರಾಜಸ್ಥಾನದ ಪುಷ್ಕರ್ ದೇಗುಲದ ರಹಸ್ಯ ಏನು!

ಸಾಮಾನ್ಯವಾಗಿ ನಮಗೆಲ್ಲಾ ತಿಳಿದಿರುವಂತೆ ಬ್ರಹ್ಮನಿಗೆ ಸರಸ್ವತಿ ಒಬ್ಬಳೇ ಮಡದಿ ಅಂತಾ ಗೊತ್ತು. ಆದ್ರೆ ಬ್ರಹ್ಮನ ಎರಡನೇ ಮಡದಿ ಯಾರು? ಬ್ರಹ್ಮ ಎರಡನೆ ವಿವಾಹವಾದದ್ದು ಏಕೆ? ಅನ್ನೋದರ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ಓದಿ. ರಾಜಸ್ಥಾನದ ಪುಷ್ಕರ ನಗರದಲ್ಲಿ ಹಿಂದೆ ವಜ್ರನಾಭ ಎಂಬ ರಾಕ್ಷಸ ಅಟ್ಟಹಾಸದಿಂದ ಮರೆಯುತ್ತಿದ್ದ. ವಜ್ರನಾಭ ತನ್ನ ಅಟ್ಟಹಾಸದಿಂದ ದೇವಾದಿ ದೇವತೆಗಳಿಗೂ, ಜನಸಾಮಾನ್ಯರಿಗೂ ಇನ್ನಿಲ್ಲದಂತೆ ಉಪದ್ರವ ನೀಡುತ್ತಿದ್ದ. ವಜ್ರನಾಭನ ಅಟ್ಟಹಾಸದಿಂದ ಬೆಸತ್ತ, ದೇವಾನುದೇವತೆಗಳು, ಜನಸಾಮಾನ್ಯರು ಬ್ರಹ್ಮದೇವನಿಗೆ ರಾಕ್ಷಸನ ಅಟ್ಟಹಾಸದಿಂದ ಪಾರು ಮಾಡುವಂತೆ ಮೊರೆಯಿಡುತ್ತಾರೆ. ದೇವತೆಗಳ, ಭಕ್ತರ ಮೊರೆ […]

ಸೃಷ್ಟಿಕರ್ತ ಬ್ರಹ್ಮನಿಗ್ಯಾಕಿಲ್ಲ ಪೂಜೆ? ರಾಜಸ್ಥಾನದ ಪುಷ್ಕರ್ ದೇಗುಲದ ರಹಸ್ಯ ಏನು!
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​|

Updated on: Aug 25, 2020 | 2:41 PM

Share

ಸಾಮಾನ್ಯವಾಗಿ ನಮಗೆಲ್ಲಾ ತಿಳಿದಿರುವಂತೆ ಬ್ರಹ್ಮನಿಗೆ ಸರಸ್ವತಿ ಒಬ್ಬಳೇ ಮಡದಿ ಅಂತಾ ಗೊತ್ತು. ಆದ್ರೆ ಬ್ರಹ್ಮನ ಎರಡನೇ ಮಡದಿ ಯಾರು? ಬ್ರಹ್ಮ ಎರಡನೆ ವಿವಾಹವಾದದ್ದು ಏಕೆ? ಅನ್ನೋದರ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ಓದಿ.

ರಾಜಸ್ಥಾನದ ಪುಷ್ಕರ ನಗರದಲ್ಲಿ ಹಿಂದೆ ವಜ್ರನಾಭ ಎಂಬ ರಾಕ್ಷಸ ಅಟ್ಟಹಾಸದಿಂದ ಮರೆಯುತ್ತಿದ್ದ. ವಜ್ರನಾಭ ತನ್ನ ಅಟ್ಟಹಾಸದಿಂದ ದೇವಾದಿ ದೇವತೆಗಳಿಗೂ, ಜನಸಾಮಾನ್ಯರಿಗೂ ಇನ್ನಿಲ್ಲದಂತೆ ಉಪದ್ರವ ನೀಡುತ್ತಿದ್ದ. ವಜ್ರನಾಭನ ಅಟ್ಟಹಾಸದಿಂದ ಬೆಸತ್ತ, ದೇವಾನುದೇವತೆಗಳು, ಜನಸಾಮಾನ್ಯರು ಬ್ರಹ್ಮದೇವನಿಗೆ ರಾಕ್ಷಸನ ಅಟ್ಟಹಾಸದಿಂದ ಪಾರು ಮಾಡುವಂತೆ ಮೊರೆಯಿಡುತ್ತಾರೆ.

ದೇವತೆಗಳ, ಭಕ್ತರ ಮೊರೆ ಆಲಿಸಿದ ಸೃಷ್ಟಿಕರ್ತ ಬ್ರಹ್ಮ ವಜ್ರನಾಭನ ಅಟ್ಟಹಾಸದಿಂದ ಮುಕ್ತಿ ಸಿಗುವಂತೆ ಮಾಡಲು, ಒಂದು ಯಾಗವನ್ನು ಮಾಡಲು ನಿರ್ಧರಿಸ್ತಾರೆ. ಯಾಗವನ್ನು ಮಾಡಲು ನಿರ್ಧರಿಸಿದ ಬ್ರಹ್ಮ, ತಾನು ಮಾಡುವ ಯಾಗಕ್ಕೆ ವಜ್ರನಾಭನಿಂದ ಯಾವುದೇ ತೊಂದರೆ ಉಂಟಾಗದಂತೆ ನೋಡಿಕೊಳ್ಳಲು ಪುಷ್ಕರ ನಗರದ ನಾಲ್ಕು ದಿಕ್ಕುಗಳಾದ ಪೂರ್ವಕ್ಕೆ ಸೂರಗಿರಿ, ಪಶ್ಚಿಮಕ್ಕೆ ಸಂಚೂರ, ಉತ್ತರಕ್ಕೆ ನೀಲ್ಗಿರಿ ಹಾಗೂ ದಕ್ಷಿಣಕ್ಕೆ ರತ್ನಗಿರಿ ಎಂಬ ಪರ್ವತಗಳನ್ನು ಸೃಷ್ಟಿಸಿ, ಕಾವಲು ಕಾಯುವುದಕ್ಕೆ ದೇವಯಾದಿಗಳನ್ನು ನೇಮಿಸುತ್ತಾರೆ.

ನಾಲ್ಕು ದಿಕ್ಕುಗಳಿಗೂ ದೇವಾದಿ ದೇವತೆಗಳನ್ನು ಕಾವಲು ಕಾಯಲು ನಿಲ್ಲಿಸಿ, ಬ್ರಹ್ಮದೇವ ಯಜ್ಞ ಮಾಡಲು ಆರಂಭಿಸ್ತಾನೆ. ಯಾವ ಉಪಟಳವು ಇಲ್ಲದೆ ಯಜ್ಞ ಸಾಂಗೋಪವಾಗಿ ಸಾಗಿ, ಹವಿಸ್ಸನ್ನು ಕೊಡುವ ಹಂತಕ್ಕೆ ಬರುತ್ತದೆ. ದಾನವನ ಅಟ್ಟಹಾಸವನ್ನು ಅಳಿಸಿ ಹಾಕಲು ಬ್ರಹ್ಮದೇವ ಕೈಗೊಂಡ ಯಜ್ಞಕ್ಕೆ ಹವಿಸ್ಸು ನೀಡುವ ಸಮಯದಲ್ಲಿ ಒಂದು ವಿಘ್ನ ಎದುರಾಯಿತು. ಹಾಗೆ ಎದುರಾದ ವಿಘ್ನನವೇ ಬ್ರಹ್ಮನ ಮಡದಿ ಸರಸ್ವತಿ, ಸಮಯಕ್ಕೆ ಸರಿಯಾಗಿ ಯಜ್ಞಕ್ಕೆ ಬಾರದೇ ಇದ್ದಿದ್ದು.

ರಾಜಸ್ಥಾನದ ಪುಷ್ಕರ್​ನಲ್ಲಿರುವ ಬ್ರಹ್ಮದೇವನ ದೇವಸ್ಥಾನದ ವಿಶೇಷತೆ: ಯಜ್ಞಕ್ಕೆ ಹವಿಸ್ಸು ಕೊಡಲು ದಂಪತಿ ಸಮೇತರಾಗಿ ಇರಬೇಕು. ಲಕ್ಷ್ಮೀ, ಇಂದ್ರರನ್ನ ಕಾಯುತ್ತಾ ದೇವಲೋಕದಲ್ಲಿ ಕೂತ ಸರಸ್ವತಿ ಹವಿಸ್ಸು ನೀಡುವ ಸಮಯಕ್ಕೆ ಬರೋದಿಲ್ಲಾ. ಇನ್ನೇನು ಹವಿಸ್ಸು ನೀಡುವ ಮುಹೂರ್ತ ಮೀರಿ ಹೋಗುವುದನ್ನು ಬ್ರಹ್ಮ ಗಮನಿಸ್ತಾನೆ.

ಹವಿಸ್ಸು ನೀಡುವ ಸುಮುಹೂರ್ತ ಮೀರುವುದನ್ನ ಅರಿತ ಬ್ರಹ್ಮದೇವ ಯಜ್ಞಕ್ಕೆ ಆಗಮಿಸಿದ ಗೂರ್ಜ ಸಮುದಾಯದ ಗಾಯತ್ರಿ ಎಂಬುವವಳನ್ನು ಮದುವೆಯಾಗಿ, ಇಬ್ಬರೂ ಸತಿ-ಪತಿಗಳಾಗಿ ಆಚರಣೆ ಮುಂದುವರೆಸುತ್ತಾರೆ. ಕೆಲ ಸಮಯದ ನಂತರ ಸರಸ್ವತಿ ದೇವಿಯು ಅಲ್ಲಿ ಬಂದು ತನ್ನ ಪತಿಯ ಪಕ್ಕದಲ್ಲಿ ಇನ್ನೊಬ್ಬಳು ಕುಳಿತಿರುವುದನ್ನು ಸಹಿಸಲಾರದೆ ಕೋಪಗೊಳ್ಳುತ್ತಾಳೆ.

ಸೃಷ್ಟಿಕರ್ತ ಬ್ರಹ್ಮನಿಗ್ಯಾಕಿಲ್ಲ ಪೂಜೆ? ಕೋಪಗೊಂಡ ಸರಸ್ವತಿಯು ಬ್ರಹ್ಮನನ್ನು ಕುರಿತು ಇನ್ನು ಮುಂದೆ ಜಗತ್ತಿನಲ್ಲಿ ನಿನ್ನನ್ನು ಯಾರೂ ಪೂಜಿಸದಿರಲಿ ಎಂಬ ಶಾಪವನ್ನು ನೀಡುತ್ತಾಳೆ. ಬ್ರಹ್ಮದೇವನಿಗೆ ಅಂದು ಸರಸ್ವತಿ ಶಾಪ ನೀಡಿದ್ದಲ್ಲದೆ, ಯಜ್ಞಕ್ಕೆ ತಡವಾಗಿ ಬರಲು ಕಾರಣರಾದ ಇನ್ನಿಬ್ಬರಿಗೂ ಘೋರವಾದಂತಹ ಶಾಪವನ್ನು ನೀಡ್ತಾಳೆ. ಸರಸ್ವತಿಯಿಂದ ಹಾಗೇ ಶಾಪಗ್ರಸ್ತರಾದವರೆ ಲಕ್ಷ್ಮೀ ಮತ್ತು ಇಂದ್ರ.

ಬ್ರಹ್ಮದೇವನು ನಡೆಸಿದಂತಹ ಯಜ್ಞಕ್ಕೆ ತಡವಾಗಿ ಬರಲು ಕಾರಣವಾದ ಇಂದ್ರನಿಗೆ ಸರಸ್ವತಿ ನೀಡಿದ ಶಾಪವೆಂದ್ರೆ ನೀನು ಪ್ರತಿ ಯುದ್ಧದಲ್ಲಿಯೂ ಸೋಲು ಕಾಣುವಂತಾಗಲಿ ಎಂಬುದು. ಸರಸ್ವತಿಯ ಈ ಶಾಪದ ಫಲವಾಗಿಯೇ ಇಂದ್ರ ಯಾರ ಮೇಲೆ ಯುದ್ಧ ಕೈಗೊಂಡರೂ ಅವನಿಗೆ ಸೋಲೆಂಬುದು ಕಟ್ಟಿಟ್ಟ ಬುತ್ತಿ. ಯಜ್ಞಕ್ಕೆ ತಡವಾಗಿ ಆಗಮಿಸಲು ಕಾರಣವಾದ ಮಹಾಲಕ್ಷ್ಮೀಗೆ, ನೀನು ಪತಿಯಿಂದ ದೂರಾಗಿ ವಿರಹ ವೇದನೆ ಅನುಭವಿಸು ಎಂತಲೂ ಶಾಪವಿತ್ತಳು.

ಸರಸ್ವತಿಯ ಈ ಶಾಪ ಕಾರಣದಿಂದಾಗಿಯೇ ಮಹಾಲಕ್ಷ್ಮೀ ವೈಕುಂಠವನ್ನೂ, ವಿಷ್ಣುವನ್ನು ತೊರೆದು ಭೂಲೋಕಕ್ಕೆ ಬರುವಂತಾಗಿದ್ದು. ಸರಸ್ವತಿ ಯಾವಾಗ ಶಾಪ ನೀಡಿದಳೋ ಅಲ್ಲೇ ಇದ್ದ ಗಾಯಿತ್ರಿ ದೇವಿಯು ತಾನು ಕೈಯಲ್ಲಿ ಹಿಡಿದಿದ್ದ ಅಮೃತವನ್ನು ಅಗ್ನಿಗೆ ಅರ್ಪಿಸಿ, ಸರಸ್ವತಿ ನೀಡಿದ ಶಾಪವು ಇಲ್ಲಿ ಫಲಿಸದಂತೆ ಮಾಡಿದಳು. ಆ ಕಾರಣದಿಂದಾಗಿ ಇಲ್ಲಿ ಬ್ರಹ್ಮನಿಗೆ ಪೂಜೆಯು ಲಭಿಸುವಂತಾಯಿತು. ಸರಸ್ವತಿಯ ಶಾಪ ಫಲಿಸದೆ ಸೃಷ್ಟಿಕಾರಕ ಬ್ರಹ್ಮ ಪೂಜೆಗೊಳ್ಳುತ್ತಿರುವ ದೇವಾಲಯ ಇರೋದಾದ್ರೂ ಎಲ್ಲಿ ಅಂದ್ರೆ? ಅದು ರಾಜಸ್ಥಾನದ ಪುಷ್ಕರ್ ಎಂಬಲ್ಲಿ!

ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?