Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯಲ್ಲಿ ಕಷ್ಟ ಇದ್ರೂ ಕೈ ಹಿಡಿದ ಜಗ್ಲಿಂಗ್ ಪ್ರತಿಭೆ, ಗಿನ್ನಿಸ್ ದಾಖಲೆ ನಿರ್ಮಿಸಲು ಬೇಕಾಗಿದೆ ನೆರವಿನ ಹಸ್ತ..

ಆಕೆ ಅಪ್ಪಟ ಹಳ್ಳಿಗಾಡಿನ ಪ್ರತಿಭೆ. ತನ್ನ ಕಷ್ಟಗಳ ನಡುವೆಯೂ ಆಕೆಗೆ ಆ ಒಂದು ಕಲೆ ಕೈಹಿಡಿದಿದೆ. ಈ ಕಲೆಯ ಮೂಲಕವೇ ಆ ಹುಡುಗಿ ಸದ್ದು ಮಾಡಲು ಸಜ್ಜಾಗಿದ್ದಾಳೆ. ಅರೆ ಯಾರು ಆಕೆ? ಆಕೆಯ ಕಲೆ ಎಂತಹದ್ದು? ಈ ಸ್ಟೋರಿ ಓದಿ.

ಮನೆಯಲ್ಲಿ ಕಷ್ಟ ಇದ್ರೂ ಕೈ ಹಿಡಿದ ಜಗ್ಲಿಂಗ್ ಪ್ರತಿಭೆ, ಗಿನ್ನಿಸ್ ದಾಖಲೆ ನಿರ್ಮಿಸಲು ಬೇಕಾಗಿದೆ ನೆರವಿನ ಹಸ್ತ..
Follow us
ಆಯೇಷಾ ಬಾನು
|

Updated on:Dec 02, 2020 | 7:49 AM

ಧಾರವಾಡ: ಜಿಲ್ಲೆಯ ಕುಂದಗೋಳದ ಬೆಟದೂರು ಗ್ರಾಮದ ಕವಿತಾ ಎಂಬ ಹುಡುಗಿ ತನ್ನ ಕಲೆ ಮೂಲಕ ಜನರ ಗಮನ ಸೆಳೆಯುತ್ತಿದ್ದಾಳೆ. ಪಬ್ ಅಥವಾ ಹೈಫೈ ಬಾರ್​ಗಳಿಗೆ ಭೇಟಿ ಕೊಟ್ಟವರಿಗೆ ಈ ಕಲೆ ಚೆನ್ನಾಗೇ ತಿಳಿದಿರುತ್ತೆ. ಅಂದಹಾಗೆ ಆ ಕಲೆಯೇ ಗಿರಗಿರನೆ ಬಾಟಲ್ ತಿರುಗಿಸುವುದು. ಅದನ್ನು ಜಗ್ಲಿಂಗ್‌ ಅಂತಾರೆ.

‘ಪೇಜ್‌ ಥ್ರೀ’ ಸಂಸ್ಕೃತಿ ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ ಜಗ್ಲಿಂಗ್ ಕಲೆಗೆ ತುಂಬಾನೆ ಬೆಲೆ ಇದೆ. ಹೈಫೈ ಪಾರ್ಟಿಗಳಲ್ಲಿ ಗಿರಗಿರನೆ ಬಾಟಲ್ ತಿರುಗಿಸುವ ಈ ಕಲೆಗಾರರು ಎಲ್ಲರ ಗಮನಸೆಳೆಯುತ್ತಾರೆ. ಹೀಗೆ ಅಪ್ಪಟ ಗ್ರಾಮೀಣ ಪ್ರತಿಭೆಯಾದ ಈ ಯುವತಿ ಕವಿತಾ ಎಲ್ಲರ ಗಮನ ಸೆಳೆಯುತ್ತಿದ್ದಾಳೆ. ಬೆಟದೂರು ಗ್ರಾಮದ ಕವಿತಾ ಇದೀಗ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದು. ಜಗ್ಲಿಂಗ್ ಕಲಿತ ಯುವತಿಗೆ ಹಣಕಾಸಿನ ಕೊರತೆ: ಕೊರೊನಾ ಸಮಯವನ್ನೇ ಸದುಪಯೋಗ ಪಡಿಸಿಕೊಂಡ ಕವಿತಾ, ಲೈಫ್‌ನಲ್ಲಿ ಏನಾದ್ರೂ ಡಿಫರೇಂಟ್‌ ಆಗಿ ಸಾಧನೆ ಮಾಡಬೇಕು ಅನ್ನೋ ಛಲಕ್ಕೆ ಬೆಂಬಲ ಸಿಕ್ಕಿದೆ. ಬೆಟದೂರಿನ ಹೆತ್ತವರು ಕೃಷಿಕರಾಗಿದ್ರೂ, ಮಗಳ ಇಚ್ಛೆಗೆ ಅಡ್ಡಿ ಪಡಿಸಲಿಲ್ಲಾ. ಜಗ್ಲಿಂಗ್‌ನಲ್ಲಿ ಆಸಕ್ತಿ ತೋರಿಸುತ್ತಿದ್ದ ಹಿನ್ನೆಲೆಯಲ್ಲಿ ಪೂನಾದಲ್ಲಿ ತರಬೇತಿ ಕೊಡಿಸಲಾಗಿದೆ. ಪಕ್ಕಾ ಟ್ರೈನಿಂಗ್ ಪಡೆದಿರುವ ಕವಿತಾ, ಗಿನ್ನಿಸ್‌ ಬುಕ್‌ ಆಫ್‌ ರೆಕಾರ್ಡನಲ್ಲಿ ತಮ್ಮ ಸಾಧನೆಯ ಚಾಪು ಒತ್ತಲು ಅಣಿಯಾಗಿದ್ದಾಳೆ.

ಇನ್ನು ಕವಿತಾ ಗಿನ್ನೀಸ್ ರೆಕಾರ್ಡ್​ಗೆ ಅಣಿಯಾಗಿದ್ದರೂ ಅದಕ್ಕೆ ಲಕ್ಷಾಂತರ ರೂಪಾಯಿ ಅಗತ್ಯವಾಗಿದೆ. ಆದರೆ ಬಡ ಕೂಲಿ ಕಾರ್ಮಿಕರಾದ ಕವಿತಾ ಅವರ ತಂದೆ-ತಾಯಿ ಇದನ್ನ ಭರಿಸುವ ಶಕ್ತಿ ಹೊಂದಿಲ್ಲ. ಹೀಗಾಗಿ ದಾನಿಗಳ ಸಹಾಯದ ನಿರೀಕ್ಷೆಯಲ್ಲಿದೆ ಈ ಕುಟುಂಬ. -ರಹಮತ್ ಕಂಚಗಾರ್

Published On - 7:48 am, Wed, 2 December 20

ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್