AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Women’s Day Special : ತಾಯಿಯಂತಹ ರೂಮ್‌ಮೇಟ್ ದೊರೆತಾಗ…

ಅಕ್ಕ-ತಂಗಿಯರಿಲ್ಲದ ನನಗೆ ಅವರಂತೂ ನೆಚ್ಚಿನ ಅಕ್ಕರಾಗಿ ಬಿಟ್ಟಿದ್ದರು. ಒಂದೇ ರೂಮಿನಲ್ಲಿ ಇರುತ್ತಿದ್ದ ಕಾರಣದಿಂದಲೋ ಏನೋ ನಮ್ಮಲ್ಲಿ ಯಾವುದೇ ರೀತಿಯ ಮುಚ್ಚು-ಮರೆ ಇರುತ್ತಿರಲಿಲ್ಲ.

Women’s Day Special : ತಾಯಿಯಂತಹ ರೂಮ್‌ಮೇಟ್ ದೊರೆತಾಗ...
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Mar 08, 2022 | 7:30 AM

Share

ಪ್ರತಿಯೊಬ್ಬರ ಜೀವನದಲ್ಲಿಯೂ ಸ್ಪೂರ್ತಿಯಾಗಿ ಒಬ್ಬ ಮಹಿಳೆ ಇದ್ದೇ ಇರುತ್ತಾಳೆ. ಹಲವರಿಗೆ ಅದು ತಾಯಿಯಾಗಿರುತ್ತಾರೆ, ಇನ್ನು ಕೆಲವರಿಗೆ ಹೆಂಡತಿ, ಅಕ್ಕ, ತಂಗಿಯಾಗಿರುತ್ತಾರೆ. ಆದರೆ ನನ್ನ ಜೀವನದಲ್ಲಿ ಮಾತ್ರ ವಿಶೇಷ ಎಂದರೆ ನನಗೆ ಇವತ್ತಿಗೂ ಸ್ಪೂರ್ತಿಯಾಗಿರುವ ಮಹಿಳೆ ಎಂದರೆ ಅದು ನನ್ನ ರೂಮ್‌ಮೇಟ್. ಮೂರು ವರ್ಷದ ಹಿಂದೆ ನನ್ನ ಓದಿಗಾಗಿ ನಾನು ಮೈಸೂರನ್ನು ಆಯ್ಕೆ ಮಾಡಿಕೊಂಡಿದ್ದೆ. ಪುಟ್ಟ ಹಳ್ಳಿಯಿಂದ ಹೋದ ನನಗೆ ಮೈಸೂರು ಮಹಾನದಿಯಂತೆ ಗೋಚರವಾಗಿತ್ತು. ಇನ್ನು ಈ ಮಹಾನದಿಯಲ್ಲಿ ನನಗೆ ಸುಲಭವಾಗಿ ಈಜಲು ಕಲಿಸಿ, ಸರಿಯಾದ ದಡಕ್ಕೆ ತಲುಪಿಸುವ ಹೊಣೆಗಾರಿಕೆಯನ್ನು ಅತ್ಯಂತ ಪ್ರೀತಿಯಿಂದ ನೆರವೇರಿಸಿಕೊಟ್ಟವರು ಧನ್ಯತಾ. ಹೆಸರೇ ಹೇಳುವಂತೆ ಸದಾ ಧನ್ಯತಾ ಭಾವದೊಂದಿಗೆ ಎಲ್ಲರನ್ನೂ ತನ್ನೆಡೆಗೆ ಸೆಳೆಯುತ್ತಿದ್ದರು.

ಅಕ್ಕ-ತಂಗಿಯರಿಲ್ಲದ ನನಗೆ ಅವರಂತೂ ನೆಚ್ಚಿನ ಅಕ್ಕರಾಗಿ ಬಿಟ್ಟಿದ್ದರು. ಒಂದೇ ರೂಮಿನಲ್ಲಿ ಇರುತ್ತಿದ್ದ ಕಾರಣದಿಂದಲೋ ಏನೋ ನಮ್ಮಲ್ಲಿ ಯಾವುದೇ ರೀತಿಯ ಮುಚ್ಚು-ಮರೆ ಇರುತ್ತಿರಲಿಲ್ಲ. ಎಲ್ಲವನ್ನು ಅವರಲ್ಲಿ ಹೇಳಿಕೊಳ್ಳುತ್ತಿದ್ದೆ.ಓದಿನ ವಿಷಯದಲ್ಲಿಯೂ ಹಾಗೆ, ಅವರಂತೂ ಸದಾ ತಾನು ಬಂದ ಉದ್ದೇಶ ಏನು ಎನ್ನುವುದನ್ನು ಮರೆತ ದಿನವೇ ಇಲ್ಲ. ಯಾವಾಗಲೂ ಒಂದಲ್ಲಾ ಒಂದು ಕೆಲಸದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುತ್ತಿದ್ದರು. ಸಮಯವನ್ನು ಎಂದಿಗೂ ಹಾಳುಮಾಡುತ್ತಿರಲಿಲ್ಲ. ಕೇವಲ ಪಠ್ಯದ ಓದಿಗೆ ಮಾತ್ರ ಸೀಮಿತವಾಗದೇ ಅದರಿಂದಾಚೆಗೂ ಪಠ್ಯೇತರದಲ್ಲಿನ ಅವರ ಆಸಕ್ತಿ ನನ್ನನ್ನು ಬೆರಗುಗೊಳಿಸುತ್ತಿತ್ತು. ನನ್ನ ಜೀವನದಲ್ಲಿ ನಾನಾಗಿಯೇ ಕಷ್ಟವನ್ನು ಎಳೆದುಕೊಂಡು ಭಯ, ದುಃಖ, ಚಿಂತೆ ಇವುಗಳಿಂದ ಮನಸ್ಸನ್ನು ಗೊಂದಲದ ಗೂಡಾಗಿಸಿಕೊಂಡಿದ್ದೆ.

ಊಟ-ತಿಂಡಿ, ಓದು, ನಿದ್ದೆ ಯಾವುದು ಮಾಡಲು ಸಾಧ್ಯವಾಗದ ಸ್ಥಿತಿಯಲ್ಲಿ ನನ್ನನ್ನು, ಒಂದು ತಾಯಿ ತನ್ನ ಪುಟ್ಟ ಮಗುವಿಗೆ ಹೇಗೆ ಪ್ರೀತಿಯ ತುತ್ತನ್ನಿಡುತ್ತಾಳೋ ಹಾಗೆ ತುತ್ತಿಟ್ಟವರು ಅವರು. ಆಗಿದ್ದೆಲ್ಲ ಆಗಿ ಹೋಯಿತು. ಜೀವನವೆಂದರೆ ಸುಖ-ದುಃಖಗಳ ಮಿಶ್ರಣ, ಎಲ್ಲವನ್ನು ಎದುರಿಸಿ ಬದುಕುವುದೇ ನಿಜವಾದ ಜೀವನ ಎಂದು ತಿದ್ದಿ ಬುದ್ಧಿ ಹೇಳಿದ ನನ್ನ ಗುರು ಅವರು. ಜವಾಬ್ದಾರಿ, ಪ್ರಬುದ್ಧತೆ, ತಿಳುವಳಿಕೆ ಹೀಗೆ ಎಲ್ಲದರಲ್ಲಿಯೂ ಮಾದರಿಯಾಗಿರುವ ಧನ್ಯತಾ ನಾನು ನಿಮ್ಮ ಪ್ರೀತಿಗೆ ಧನ್ಯಳು. ತಾಯಿಯ ಮಮತೆ, ತಂದೆಯ ರಕ್ಷಣೆ ಎಲ್ಲವನ್ನೂ ಮೂರು ವರ್ಷಗಳಲ್ಲಿ ತೋರಿಸಿ ನೂರು ವರ್ಷಗಳಿಗಾಗುವಷ್ಟು ಸ್ಪೂರ್ತಿಯನ್ನು ನೀಡಿರುವ ನಿಮಗೆ ಈ ಮಹಿಳಾದಿನದಂದು ಸಲಾಮ್

ಭಾರತಿ ಹೆಗಡೆ ಶಿರಸಿ

‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್