AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Theatre Day ; ಮಧ್ಯಾಹ್ನಕ್ಕೆ ಹೊಸ ಪ್ರಹಸನ : ‘ಕೈಕೈ ಹಿಡಕೊಂಡು’

‘ಮೂಗು ತೂರಿಸೋದು ಅನ್ನೋ ಪದ ನಿನ್ನಿಂದಾಗೇ ಬಂದಿರೋದು ನೋಡು. ಸುಮ್ನಿರು, ನಾನೇ ಹೇಳ್ತೀನಿ. ವಿಷಯ ಏನಪ್ಪಾಂದ್ರೆ, ಇನ್ನು ಮೇಲೆ ಈ ಮೂಗು- ಬಾಯಿ ಮುಚ್ಕೊಂಡ್ ಓಡಾಡೋದು ಬೇಡ್ವಂತೆ, ಇನ್ನುಮೇಲೆ ನನಗೆ-ನಿನಗೆ ಸಜಾ ಅಂತೆ.’

World Theatre Day ; ಮಧ್ಯಾಹ್ನಕ್ಕೆ ಹೊಸ ಪ್ರಹಸನ : 'ಕೈಕೈ ಹಿಡಕೊಂಡು'
ಸೌಜನ್ಯ : ಅಂತರ್ಜಾಲ
ಶ್ರೀದೇವಿ ಕಳಸದ
|

Updated on:Mar 27, 2021 | 1:23 PM

Share

ಕೊರೊನಾದಿಂದ ಈವತ್ತು ಮೂಗು ಬಾಯಿ ಮುಚ್ಚಿಕೊಂಡೇ ಜೀವನ ಸಾಗಿಸುತ್ತಿದ್ದೇವೆ. ರೂಪಾಂತರಗೊಂಡ ವೈರಸ್​ನಿಂದಾಗಿ ಮುಂದೊಂದು ದಿನ ಕಣ್ಣು, ಕಿವಿಯನ್ನೂ ಮುಚ್ಚಿಕೊಂಡು ಓಡಾಡಬೇಕು ಎಂದು ಫರಮಾನು ಹೊರಡಿಸುವಂತಾದರೆ? ಹೀಗೊಂದು ಎಳೆಯನ್ನು ನಮ್ಮ ಬರಹಗಾರರಿಗೆ ತಲುಪಿಸಿ, ನಿಮ್ಮಲ್ಲಿ ಮೊಳೆತ ಆಲೋಚನೆಗಳಿಗೆ ಸಂಭಾಷಣೆಯ ರೂಪು ಕೊಡಿ ಎಂದು ಕೇಳಿಕೊಳ್ಳಲಾಯಿತು. ಇನ್ನು ನೀವುಂಟು ಅವರು ಸೃಷ್ಟಿಸಿದ ಪಾತ್ರಗಳುಂಟು ಮತ್ತು ‘ವಿಶ್ವ ರಂಗಭೂಮಿ ದಿನ’ವೂ ಉಂಟು.

ಪರಿಕಲ್ಪನೆ : ಶ್ರೀದೇವಿ ಕಳಸದ

ನಾಟಕ : ಕೈಕೈ ಹಿಡಕೊಂಡು

ರಚನೆ : ಸೌರಭಾ ಕಾರಿಂಜೆ

ದೃಶ್ಯ ಒಂದು

ಕಿವಿ: ಅಲ್ಲ ಕಣ್ಣೇ, ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಅನ್ನೋದು ನಿಜ ಆಯ್ತು ನೋಡು. ಕಣ್ಣು: ಅಂತದ್ದೇನಾಯ್ತು ಈಗ? ಯಾವುದಕ್ಕೆ ಪೀಠಿಕೆ ಹಾಕ್ತಾ ಇದ್ದೀಯ?

ಬಾಯಿ: ನಾ ಹೇಳ್ತೀನಿ ನಾ ಹೇಳ್ತೀನಿ!

ಕಿವಿ: ನೀನು ಸುಮ್ನಿರೋ. ಹೊಸಾ ವೈರಸ್ ಬಂದಿದೆ ಕಣೋ, ಸುದ್ದಿ ಕೇಳಿಲ್ವ?

ಕಣ್ಣು: ಕಿವಿ ನೀನು, ನಾನಲ್ವಲ್ಲಾ? ಕೇಳೋದು ನಿನ್ನ ಕೆಲಸ. ನಾನು ಇವತ್ತಿನ ಪೇಪರ್ ಓದಿಲ್ಲ ಅಷ್ಟೇ.

ಕಿವಿ: ಅದೂ ಸರಿ ಅನ್ನು. ಇವತ್ತೇ ಈ ಬಾಯಿ ನನ್ ಮಗ ಯಾರಿಗೋ ಹೇಳ್ತಾ ಇದ್ದ.

ಕಣ್ಣು: ಏನಂತೆ?

ಬಾಯಿ: ನಾ ಹೇಳ್ತೀನಿ ನಾ ಹೇಳ್ತೀನಿ.

ಕಿವಿ: ಬಾಯೀ, ಮುಚ್ಚಿಕೋ!

ಮೂಗು: ನಾ ಹೇಳ್ತೀನಿ ನಾ ಹೇಳ್ತೀನಿ.

ಕಿವಿ: ಮೂಗು ತೂರಿಸೋದು ಅನ್ನೋ ಪದ ನಿನ್ನಿಂದಾಗೇ ಬಂದಿರೋದು ನೋಡು. ಸುಮ್ನಿರು, ನಾನೇ ಹೇಳ್ತೀನಿ. ವಿಷಯ ಏನಪ್ಪಾಂದ್ರೆ, ಇನ್ನು ಮೇಲೆ ಈ ಮೂಗು- ಬಾಯಿ ಮುಚ್ಕೊಂಡ್ ಓಡಾಡೋದು ಬೇಡ್ವಂತೆ, ಇನ್ನುಮೇಲೆ ನನಗೆ-ನಿನಗೆ ಸಜಾ ಅಂತೆ. ಹೊಸಾ ವೈರಸ್ ಕಣ್ಣು ಕಿವಿ ಮೂಲಕ ಅಟ್ಯಾಕ್ ಮಾಡೋದಂತೆ, ಅದಕ್ಕೆ.

ಕಣ್ಣು: ಅಯ್ಯಯ್ಯೋ.

ಬಾಯಿ: ಹಾ ಹಾ ಹಾ ಎಷ್ಟು ಒಳ್ಳೆ ಸುದ್ದಿ!

ಮೂಗು: ನಮ್ಮ ಕಷ್ಟ ಏನಂತ ನಿಮಗೂ ಗೊತ್ತಾಗಲಿ ಸ್ವಲ್ಪ.

ಕಣ್ಣು: ಏ… ಹೋಗ್ರೋ. ಇವೆಲ್ಲ ಯಾಕೋ ಆಗಲ್ಲ ಹೋಗಲ್ಲ ಅನಿಸತ್ತೆ. ನಮ್ಮಿಬ್ಬರನ್ನು ಬಿಟ್ಟು ಬದುಕು ಸಾಧ್ಯವಾ?

ಕಿವಿ: ನನಗೂ ಹಾಗೇ ಅನಿಸೋದು. ಈ ಬಾಯಿಯ ಕೊಬ್ಬು ಎಷ್ಟೇ ಇದ್ದರೂ ಇವನು ಮಾತಾಡದಿದ್ದರೆ ಯಾರೂ ಸಾಯಲ್ಲ.

ಕಣ್ಣು: ಈ ಮೂಗೇನೂ ಕಮ್ಮಿ ಇಲ್ಲ. ನಾನಿಲ್ಲದಿದ್ದರೆ ಮನುಷ್ಯ ಸಾಯೋದೇ ಅಂತ ಕೊಬ್ಬಾಡ್ತಾ ಇರ್ತಾನೆ. ಆದ್ರೆ ಒಂದು ಮಾಸ್ಕ್ ಹಾಕೋಕೂ ನಿನ್ನ ಸಹಾಯ ಬೇಕು.

ಕಿವಿ: ಅಲ್ಲ… ಯಾವ ಕನ್ನಡಕಾನೂ ಸಾಲಲ್ಲ ಅಂತೆ ವೈರಸ್​ನಿಂದ ರಕ್ಷಿಸಿಕೊಳ್ಳೋಕೆ. ಇಡೀ ಮನುಷ್ಯ ಜಾತೀನೇ ಕಣ್ಮುಚ್ಕೋಬೇಕಂತಪ್ಪಾ. ಸಾಧ್ಯನಾ?

ಕಣ್ಣು: ಕಿವೀನೂ ಮುಚ್ಚಿಕೊಂಡ್ರೆ ಮಾತಾಡೋದೇ ಕೇಳಿಸಲ್ಲ. ಬಾಯಿ ಇದ್ರೂ ಪ್ರಯೋಜನ ಇಲ್ಲ. ಆ ಕಡೆಯಿಂದ ಕಾಣೋದೂ ಇಲ್ಲ, ಈ ಕಡೆಯಿಂದ ಕೇಳೋದೂ ಇಲ್ಲ. ಹೇಗೆ ಬದುಕ್ತಾರೆ ಈ ಮನುಷ್ಯರು? ಸಾಧ್ಯಾನೇ ಇಲ್ಲ.

(ಕಣ್ಣು-ಕಿವಿ ಗಹಗಹಿಸಿ ನಗು)

ಮೂಗು-ಬಾಯಿ: ಏನಾದ್ರೂ ಆಗಲಿ, ನಮ್ಮ ವನವಾಸ ಮುಗೀತಪ್ಪ.

ಕಣ್ಣು: ಸ್ವಾರ್ಥಿಗಳಾ…

ಬಾಯಿ: ಇಕ್ಕೋ ಇವರಿಗೆ. ಇಷ್ಟು ದಿನ ಆರಾಮಾಗಿದ್ದು ಈಗ ನಮ್ಮನ್ನು ಆಡ್ಕೋತಾರೆ.

(ಕಣ್ಣು-ಕಿವಿ-ಮೂಗು-ಬಾಯಿ ಮಾರಾಮಾರಿ)

ದೃಶ್ಯ ಎರಡು

ಕಣ್ಣು: ಏನು ನಡೀತಾ ಇದೆ? ನನ್ ಕಣ್ಣಿಗೆ ಪಟ್ಟಿಬಿದ್ದು ಒಂದು ವರ್ಷ ಆಯಿತು.

ಕಿವಿ: ಯಾರಿಗ್ಗೊತ್ತು, ಮನುಷ್ಯ ಮತ್ತು ಅವನ ಜೊತೆ ನಾವೆಲ್ಲ ಬದುಕಿದ್ದೀವಾ ಇನ್ನೂ?

ಮೂಗು: ನಾನಂತೂ ಉಸಿರಾಡ್ತಾ ಇದ್ದೀನಿ.

ಬಾಯಿ: ನನಗಂತೂ ಊಟ ಬೀಳ್ತಾ ಇದೆ. ಇವರು ಹಾಡಂತೂ ಹಾಡ್ತಾ ಇರ್ತಾರೆ. ಬದುಕಿರಲೇಬೇಕು.

ಕಣ್ಣು ಕಿವಿ ಮೂಗು ಬಾಯಿ (ಕೋರಸ್​): ಹೇಗೆ ಹೇಗೆ ಹೇಗೆ ಹೇಗೆ?

(ಹತ್ತು-ಹದಿನೈದು ಮನುಷ್ಯರು ಕಣ್ಣು-ಕಿವಿ ಮುಚ್ಚಿಕೊಂಡು, ಒಬ್ಬರ ಕೈ ಒಬ್ಬರು ಹಿಡಿದುಕೊಂಡು, ಕೋರಸ್​ನಲ್ಲಿ ಹಾಡಿಕೊಂಡು ನಿಧಾನಕ್ಕೆ ನಡೆಯುತ್ತಿದ್ದಾರೆ.)

ಸ್ಪರ್ಶ (ಕಿರುನಗು ಬೀರುತ್ತಾ) : ನೀವು ನಾಲ್ಕು ಜನ ನನ್ನನ್ನು ಮರೆತೇ ಬಿಟ್ಟಿರಲ್ಲ. ನಾನಿರೋವರೆಗೂ ಮನುಷ್ಯ ಬದುಕಿಯೇ ಬದುಕ್ತಾನೆ. ಕೈ-ಕೈ ಹಿಡಿದುಕೊಂಡೇ

ಬದುಕಿಬಿಡ್ತಾನೆ.

ಇದನ್ನೂ ಓದಿ : World Theatre Day ; ಮತ್ತೊಂದ್ ನಾಟಕ ಬಂತ್ರಪೋ : ಮರೋನಾ ವೈರಸ್’

Published On - 1:03 pm, Sat, 27 March 21

Follow Us
ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಭಾರೀ ಚರ್ಚೆ: ಫೈನಲಿ ಏನಾಯ್ತು?
ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಭಾರೀ ಚರ್ಚೆ: ಫೈನಲಿ ಏನಾಯ್ತು?
ವಿಚಾರಣೆಗೆ ಬಂದಿದ್ದ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್ ಕೊಟ್ಟ ಪೊಲೀಸ್ರು
ವಿಚಾರಣೆಗೆ ಬಂದಿದ್ದ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್ ಕೊಟ್ಟ ಪೊಲೀಸ್ರು
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!