AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti and Enemy: ಚಾಣಕ್ಯ ಹೇಳುವ ಈ 5 ವಿಷಯ ಪಾಲಿಸಿದರೆ ಶತ್ರುವನ್ನು ಸುಲಭವಾಗಿ ಸೋಲಿಸಬಹುದು

ಆಚಾರ್ಯ ಚಾಣಿಕ್ಯ ಹೇಳುವಂತೆ ಗೌಪ್ಯತೆ/ ಖಾಸಗಿತನ ಮತ್ತು ವಿಚಕ್ಷಣತೆ/ ವಿವೇಚನೆಯ ಮಹತ್ವವನ್ನು ಅರಿತುಕೊಳ್ಳಬೇಕು. ಗೌಪ್ಯ ಮಾಹಿತಿಯನ್ನು ಅನಗತ್ಯವಾಗಿ ಇತರರೊಂದಿಗೆ ಹಂಚಿಕೊಳ್ಳಬೇಡಿ ಎಂದು ಅವರು ಸಲಹೆ ನೀಡುತ್ತಾರೆ. ಇದಲ್ಲದೆ, ನಿಮ್ಮ ರಹಸ್ಯಗಳನ್ನು ಇತರರೊಂದಿಗೆ ಹಂಚಿಕೊಂಡಾಗ ಅದನ್ನು ನಿಮ್ಮ ವಿರುದ್ಧ ಬಳಸಬಹುದು. 

Chanakya Niti and Enemy: ಚಾಣಕ್ಯ ಹೇಳುವ ಈ 5 ವಿಷಯ ಪಾಲಿಸಿದರೆ ಶತ್ರುವನ್ನು ಸುಲಭವಾಗಿ ಸೋಲಿಸಬಹುದು
ಶತ್ರುವ ಸೋಲಿಸಲು ಚಾಣಕ್ಯ ಹೇಳುವ ಪಂಚ ಸೂತ್ರಗಳು
ಸಾಧು ಶ್ರೀನಾಥ್​
|

Updated on: Jun 28, 2024 | 7:34 AM

Share

ಮಾನವನಿಗೆ ಒಳ್ಳೆಯದು ಮತ್ತು ಕೆಟ್ಟದು, ಸುಖ-ದುಃಖ, ಸ್ನೇಹಿತರು ಮತ್ತು ಶತ್ರುಗಳು (Enemy) ಎಲ್ಲರೂ ಜೀವನದ ಭಾಗವಾಗಿ ಇರುತ್ತಾರೆ. ಆದರೆ ಆಚಾರ್ಯ ಚಾಣಕ್ಯರು ಸಂತೋಷದಿಂದ ಬದುಕಲು ಬದುಕಿನ ನಿಯಮಗಳನ್ನು ತಿಳಿಸಿದ್ದಾರೆ. ನಿಮ್ಮ ಜೀವನದಲ್ಲಿ ಶತ್ರುಗಳಿಂದ ನೀವು ಬಹಳಷ್ಟು ತೊಂದರೆಗಳನ್ನು ಎದುರಿಸುತ್ತಿದ್ದರೆ, ಚಾಣಕ್ಯನು ನೀತಿಶಾಸ್ತ್ರದಲ್ಲಿ (Chanakya Niti) ಹೇಳಿದ ಕೆಲವು ವಿಷಯಗಳನ್ನು ನೀವು ಖಂಡಿತವಾಗಿ ತಿಳಿದಿರಬೇಕು. ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಮತ್ತು ಶತ್ರುಗಳನ್ನು ಸುಲಭವಾಗಿ ಸೋಲಿಸಿ. ಜೀವನದಲ್ಲಿ ಶತ್ರುಗಳ ಹಿಡಿತದಿಂದ ನೀವು ಎಚ್ಚರಿಕೆಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು. ಆಚಾರ್ಯ ಚಾಣಕ್ಯರು (Acharya Chanakya) ತಮ್ಮ ವಿರೋಧಿಗಳನ್ನು ಸೋಲಿಸಲು ಮತ್ತು ಯಶಸ್ಸನ್ನು ಸಾಧಿಸಲು ಕೆಲವು ತಂತ್ರಗಳನ್ನು ವಿವರಿಸಿದರು. ಇದನ್ನು ಅನುಸರಿಸಿ ವ್ಯಕ್ತಿಯು ಪ್ರಯೋಜನ ಪಡೆಯುತ್ತಾನೆ. ಅವು ಯಾವುವು ಎಂಬುದನ್ನು ಇಂದು ತಿಳಿದುಕೊಳ್ಳೋಣ (Spiritual).

Chanakya Niti and Enemy: ಸ್ಪಷ್ಟ ಗುರಿಗಳನ್ನು ಹೊಂದಿರಿ

ಯಾರೇ ಆಗಲಿ ತಮ್ಮ ಗುರಿಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಬೇಕು. ಅವುಗಳನ್ನು ಸಾಧಿಸಲು ಯೋಜಿಸಿ. ಇದನ್ನು ಮಾಡುವುದರಿಂದ ಪ್ರಯೋಜನವಾಗುತ್ತದೆ. ಸ್ಪಷ್ಟವಾದ ನಿರ್ದೇಶನವನ್ನು ಹೊಂದಿರುವ ನೀವು ಗಮನ, ಪ್ರೇರಣೆ ಮತ್ತು ಗುರಿ ಆಧಾರಿತವಾಗಿರಲು ಸಹಾಯ ಮಾಡುತ್ತದೆ. ಇದನ್ನು ಮಾಡುವುದರಿಂದ ನಿಮ್ಮ ಶತ್ರುಗಳ ವಿರುದ್ಧ ಮೇಲುಗೈ ಸಾಧಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ಇದಲ್ಲದೆ, ಶತ್ರುಗಳು ನಿಮಗೆ ಹಾನಿ ಮಾಡದೆ, ಹಿಮ್ಮೆಟ್ಟುತ್ತಾರೆ.

Chanakya Niti and Enemy: ಸ್ವಯಂ ನಿಯಂತ್ರಣದ ಅಭಿವೃದ್ಧಿ

ಜೀವನದ ಯಶಸ್ಸಿಗೆ ಶಿಸ್ತು, ಪ್ರೇರಣೆ/ ಪ್ರಚೋದನೆ ಮತ್ತು ಭಾವನೆಗಳ ನಿಯಂತ್ರಣ ಬಹಳ ಮುಖ್ಯ ಎಂದು ಚಾಣಕ್ಯ ಹೇಳಿದರು. ಕ್ಷಣಿಕ ಭಾವನೆಗಳು ಅಥವಾ ಆಸೆಗಳಿಂದ ಪ್ರಭಾವಿತರಾಗದೆ ತರ್ಕಬದ್ಧ ನಿರ್ಧಾರಗಳನ್ನು ತೆಗೆದುಕೊಳ್ಳಲು ಸ್ವಯಂ ನಿಯಂತ್ರಣವನ್ನು ಪಾಲಿಸಿ. ಇದರಿಂದ ನೀವು ಜೀವನದಲ್ಲಿ ಯಶಸ್ವಿಯಾಗುವುದು ಖಂಡಿತ.

Also Read: ಶ್ರಮವಷ್ಟೇ ಅಲ್ಲ.. ಒಳ್ಳೆಯ ಮಾತು ಕೂಡ ನಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ

Chanakya Niti and Enemy: ಸ್ನೇಹವನ್ನು ಬುದ್ಧಿವಂತಿಕೆಯಿಂದ ಆರಿಸಿ

ನಿಮ್ಮನ್ನು ಪ್ರೇರೇಪಿಸುವ ಜನರೊಂದಿಗೆ ಸ್ನೇಹ ಬೆಳೆಸಿಕೊಳ್ಳಿ. ಸಮಾನ ರೀತಿಯ ಮೌಲ್ಯಗಳು ಮತ್ತು ಗುರಿಗಳನ್ನು ಹಂಚಿಕೊಳ್ಳುವ ಜನರೊಂದಿಗೆ ಸಂಪರ್ಕ ಸಾಧಿಸಿ. ಹೀಗೆ ಮಾಡುವುದರಿಂದ ಆರ್ಥಿಕ ಪ್ರಗತಿಗೆ ಅಡ್ಡಿಯಾಗುವ ಋಣಾತ್ಮಕ ಪರಿಣಾಮಗಳನ್ನು ತಪ್ಪಿಸಬಹುದು.

Chanakya Niti and Enemy: ನಿರಂತರವಾಗಿ ಕಲಿಯುತ್ತಿರಿ

ಜೀವನಪೂರ್ತಿ ಕಲಿಯುವ ಮನಸ್ಥಿತಿಯನ್ನು ಅಳವಡಿಸಿಕೊಳ್ಳಿ. ಜ್ಞಾನವನ್ನು ಬೆಳೆಸಿಕೊಳ್ಳಿ. ಹೊಸ ಆಲೋಚನೆಗಳಿಗೆ ಹೆಜ್ಜೆ ಹಾಕಿ. ಬದಲಾಗುತ್ತಿರುವ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಿ. ನಿರಂತರ ಕಲಿಕೆಯು ನಿಮ್ಮನ್ನು ಮುಂದೆ ಸಾಗುವಂತೆ ಮಾಡುತ್ತದೆ. ಪರಿಸ್ಥಿತಿಗೆ ಅನುಗುಣವಾಗಿ ತೆಗೆದುಕೊಳ್ಳುವ ನಿರ್ಧಾರಗಳು ನಿಮ್ಮ ಶತ್ರುಗಳ ಮೇಲೆ ವಿಜಯವನ್ನು ಖಚಿತಪಡಿಸುತ್ತದೆ.

Also Read: ಮೂಳೆ ಕೊರೆಯುವ ಚಳಿಯಲ್ಲಿಯೂ ಯುದ್ಧಕ್ಕೆ ಸನ್ನದ್ದರಾಗಿದ್ದೀರಾ? ಎಂಟೆದೆ ಬಂಟರನ್ನು ಕೈಬೀಸಿ ಕರೆಯುವ ಸದಾ ಉದ್ವಿಗ್ನ ಸ್ಥಳದಲ್ಲಿ ನಾಲ್ಕಾರು ಹೆಜ್ಜೆ ಹಾಕೋಣ ಬನ್ನೀ…

Chanakya Niti and Enemy: ಗೌಪ್ಯತೆಯನ್ನು ಕಾಪಾಡಿಕೊಳ್ಳಿ

ಆಚಾರ್ಯ ಚಾಣಿಕ್ಯ ಹೇಳುವಂತೆ ಗೌಪ್ಯತೆ/ ಖಾಸಗಿತನ ಮತ್ತು ವಿಚಕ್ಷಣತೆ/ ವಿವೇಚನೆಯ ಮಹತ್ವವನ್ನು ಅರಿತುಕೊಳ್ಳಬೇಕು. ಗೌಪ್ಯ ಮಾಹಿತಿಯನ್ನು ಅನಗತ್ಯವಾಗಿ ಇತರರೊಂದಿಗೆ ಹಂಚಿಕೊಳ್ಳಬೇಡಿ ಎಂದು ಅವರು ಸಲಹೆ ನೀಡುತ್ತಾರೆ. ಇದಲ್ಲದೆ, ನಿಮ್ಮ ರಹಸ್ಯಗಳನ್ನು ಇತರರೊಂದಿಗೆ ಹಂಚಿಕೊಂಡಾಗ ಅದನ್ನು ನಿಮ್ಮ ವಿರುದ್ಧ ಬಳಸಬಹುದು. ಅಥವಾ ಅದು ನಿಮಗೆ ಹಾನಿಯಾಗಬಹುದು.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)

ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ
ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದ ಸಿದ್ದರಾಮಯ್ಯಗೆ ಈಗ ಅದರ ಮೇಲೆಯೇ ಶಂಕೆ
ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದ ಸಿದ್ದರಾಮಯ್ಯಗೆ ಈಗ ಅದರ ಮೇಲೆಯೇ ಶಂಕೆ
ಬಿಜೆಪಿಯಲ್ಲಿ ಮೊದಲ ಹಂತದ ಶುದ್ಧೀಕರಣ ಕಾರ್ಯ ಮುಗಿದಿದೆ: ಸದಾನಂದಗೌಡ
ಬಿಜೆಪಿಯಲ್ಲಿ ಮೊದಲ ಹಂತದ ಶುದ್ಧೀಕರಣ ಕಾರ್ಯ ಮುಗಿದಿದೆ: ಸದಾನಂದಗೌಡ
ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿರುವಾಗಲೇ ಹೃದಯಾಘಾತದಿಂದ ವ್ಯಕ್ತಿ ಸಾವು
ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿರುವಾಗಲೇ ಹೃದಯಾಘಾತದಿಂದ ವ್ಯಕ್ತಿ ಸಾವು
ಶಾಸಕರ ಆಹ್ವಾನ ಬೇಕಿಲ್ಲ, ಮಂಡ್ಯ ಜನ ಜವಾಬ್ದಾರಿ ನೀಡಿದ್ದಾರೆ: ಹೆಚ್​ಡಿಕೆ
ಶಾಸಕರ ಆಹ್ವಾನ ಬೇಕಿಲ್ಲ, ಮಂಡ್ಯ ಜನ ಜವಾಬ್ದಾರಿ ನೀಡಿದ್ದಾರೆ: ಹೆಚ್​ಡಿಕೆ
ಡಿಕೆಶಿ ಪರವೋ, ಸಿದ್ದರಾಮಯ್ಯ ಪರವೋ? ಲಕ್ಷ್ಮೀ ಹೆಬ್ಬಾಳ್ಕರ್ ಏನಂದರು ನೋಡಿ!
ಡಿಕೆಶಿ ಪರವೋ, ಸಿದ್ದರಾಮಯ್ಯ ಪರವೋ? ಲಕ್ಷ್ಮೀ ಹೆಬ್ಬಾಳ್ಕರ್ ಏನಂದರು ನೋಡಿ!
ಪ್ರಯತ್ನಗಳಿಗಿಂತ ಪ್ರಾರ್ಥನೆ ಫಲ ನೀಡುತ್ತದೆ ಎಂದು ನಂಬಿದ್ದೇನೆ: ಶಿವಕುಮಾರ್
ಪ್ರಯತ್ನಗಳಿಗಿಂತ ಪ್ರಾರ್ಥನೆ ಫಲ ನೀಡುತ್ತದೆ ಎಂದು ನಂಬಿದ್ದೇನೆ: ಶಿವಕುಮಾರ್
ಹೊತ್ತಿ ಉರಿದ ಮೈಸೂರು-ಉದಯ್​ಪುರ ಪ್ಯಾಲೇಸ್ ಕ್ವೀನ್ ಎಕ್ಸ್​ಪ್ರೆಸ್​ ರೈಲು
ಹೊತ್ತಿ ಉರಿದ ಮೈಸೂರು-ಉದಯ್​ಪುರ ಪ್ಯಾಲೇಸ್ ಕ್ವೀನ್ ಎಕ್ಸ್​ಪ್ರೆಸ್​ ರೈಲು