ಮೂಳೆ ಕೊರೆಯುವ ಚಳಿಯಲ್ಲಿಯೂ ಯುದ್ಧಕ್ಕೆ ಸನ್ನದ್ದರಾಗಿದ್ದೀರಾ? ಎಂಟೆದೆ ಬಂಟರನ್ನು ಕೈಬೀಸಿ ಕರೆಯುವ ಸದಾ ಉದ್ವಿಗ್ನ ಸ್ಥಳದಲ್ಲಿ ನಾಲ್ಕಾರು ಹೆಜ್ಜೆ ಹಾಕೋಣ ಬನ್ನೀ…
Siachen Glacier: ಕಳೆದ ಐದು ವರ್ಷಗಳಲ್ಲಿ ಪರಿಸ್ಥಿತಿ ಇನ್ನೂ ಗಣನೀಯವಾಗಿ ಸುಧಾರಿಸಿದೆ. ಭಾರೀ ತೂಕದ ಹೆಲಿಕಾಪ್ಟರ್ಗಳು ಮತ್ತು ಡ್ರೋನ್ಗಳ ಸಹಾಯದಿಂದ ಭಾರತ ಸರ್ಕಾರವು ಚಳಿಗಾಲದಲ್ಲಿಯೂ ಸೈನಿಕರಿಗೆ ಅಗತ್ಯ ವಸ್ತುಗಳನ್ನು ತಲುಪಿಸಲು ಮತ್ತು ಹೆಲಿಕಾಪ್ಟರ್ಗಳ ಮೂಲಕ ಸೈನಿಕರಿಗೆ ಆಹಾರ ಪೂರೈಸಲು ದಿನಕ್ಕೆ 5 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ.

ಮೂಳೆ ಕೊರೆಯುವ ಚಳಿ.. ಆಮ್ಲಜನಕ ಉಪಕರಣವಿದ್ದರಷ್ಟೇ ಉಸಿರಾಟ.. ಸದಾ ಅಲ್ಲಿ ಶತ್ರುಸೇನೆ ಹಾರಿಸುವ ಬುಲ್ಲೆಟ್ಗಳಿಗಿಂತಲೂ ಭೀಕರ ಪರಿಸ್ಥಿತಿ.. ಐಸ್ ಬಿರುಗಾಳಿ ಮತ್ತು ಹಿಮನದಿಗಳಿರುವ ಸ್ಥಳ. ಇದು ಸಿಯಾಚಿನ್ ಗ್ಲೇಸಿಯರ್ ನಲ್ಲಿ ನಿರಂತರವಾಗಿ ಕಾವಲು ಕಾಯುತ್ತಿರುವ ಭಾರತದ ಸಾವಿರಾರು ಸೈನಿಕರ ಪರಿಸ್ಥಿತಿ. ವಿಶ್ವದ ಅತಿ ಎತ್ತರದ ಯುದ್ಧಭೂಮಿಯಲ್ಲಿ ಮೈನಸ್ 50 ಡಿಗ್ರಿ ತಾಪಮಾನ.. ಶತ್ರು ಶಿಬಿರಗಳಿಂದ ಬರುವ ಗುಂಡುಗಳಿಗಿಂತ ಅಪಾಯಕಾರಿ ಹವಾಮಾನ.. ಐಸ್ ಬಿರುಗಾಳಿ ಮತ್ತು ಹಿಮನದಿಗಳಿರುವ ಸ್ಥಳ. ಸಿಯಾಚಿನ್ ಒಂದು ಕಾಲದಲ್ಲಿ ಜಮ್ಮು ಮತ್ತು ಕಾಶ್ಮೀರದ ಭಾಗವಾಗಿತ್ತು. 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ, ಅದೀಗ ಕೇಂದ್ರಾಡಳಿತ ಪ್ರದೇಶವಾಗಿರುವ ಲಡಾಖ್ನ ಅವಿಭಾಜ್ಯ ಅಂಗವಾಗಿದೆ. ಸಿಯಾಚಿನ್ ಎಂದರೆ ಟಿಬೆಟಿಯನ್ ಭಾಷೆಯಲ್ಲಿ ‘ಬಾಲ್ಟಿ’ ಎಂದರೆ ‘ಗುಲಾಬಿ ಕಾಡು’. ಭಾರತದ ನಿಯಂತ್ರಣದಲ್ಲಿರುವ ಸಿಯಾಚಿನ್ ಮೇಲೆ 40 ವರ್ಷಗಳ ಹಿಂದೆ, ಪಾಕಿಸ್ತಾನ ಕಣ್ಣು ಹಾಕಿತ್ತು. ಪರ್ವತಾರೋಹಿಗಳನ್ನು ಕಳುಹಿಸಲು ಆರಂಭಿಸಿದ ಪಾಕಿಸ್ತಾನದ ದುರಹಂಕಾರಕ್ಕೆ ಕಡಿವಾಣ ಹಾಕಲು ಭಾರತೀಯ ಸೇನೆ ನಡೆಸಿದ ಕಾರ್ಯತಂತ್ರದ ಕ್ರಮವೇ ಆಪರೇಷನ್ ಮೇಘದೂತ್. ಭಾರತೀಯ ಸೇನೆ 15,000 ಅಡಿ ಎತ್ತರದಲ್ಲಿ ದಾಳಿ ನಡೆಸಿ ಗ್ಲೇಸಿಯರ್ ಕಡೆ ನೋಡಲೂ ಸಾಧ್ಯವಾಗದಂತೆ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಿದೆ ಭಾರತೀಯ ಸೇನೆ. ವಿವಾದ ಯಾಕೆ? ಸಿಯಾಚಿನ್ ಗ್ಲೇಸಿಯರ್ ಆರಂಭದಿಂದಲೂ ವಿವಾದಾತ್ಮಕವಾಗಿದೆ. ದೇಶ ವಿಭಜನೆಯ ಸಮಯದಲ್ಲಿ, ವಾಸ್ತವಿಕ ರೇಖೆಯ ಅಂಚಿನಲ್ಲಿ ಮಾನವ ಉಳಿವಿಗಾಗಿ ಯಾವುದೇ ಅವಕಾಶವಿಲ್ಲದ ಸಿಯಾಚಿನ್ ಪ್ರದೇಶದ ಬಗ್ಗೆ ಆ ಕಡೆ ಪಾಕಿಸ್ತಾನ ಅಥವಾ ಈ ಕಡೆ ಭಾರತವೂ ಸಹ ಗಮನ ಹರಿಸಲಿಲ್ಲ. 1949 ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಕರಾಚಿ ಒಪ್ಪಂದವು...