AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Akshaya Tritiya 2021: ಅಕ್ಷಯ ತೃತೀಯ ಹಬ್ಬದ, ಮಹತ್ವ, ವಿಶೇಷತೆ ಮತ್ತು ಪೂಜಾ ವಿಧಾನ ಇಲ್ಲಿದೆ

Akshaya Tritiya Festival 2021:ಅಕ್ಷಯ ತೃತೀಯವನ್ನು ಹೊಸ ಉದ್ಯಮಗಳು, ಮದುವೆಗಳು ಮತ್ತು ಚಿನ್ನವನ್ನು ಖರೀದಿಸಲು ಶುಭ ದಿನವೆಂದು ಪರಿಗಣಿಸಲಾಗಿದೆ. ಏಕೆಂದರೆ ಈ ದಿನ ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಪ್ರತಿವರ್ಷ ದೇಶಾದ್ಯಂತ ಲಕ್ಷಾಂತರ ಭಾರತೀಯರು ಆಭರಣವನ್ನು ಖರೀದಿಸಲು ಮುಂದಾಗುತ್ತಾರೆ.

Akshaya Tritiya 2021: ಅಕ್ಷಯ ತೃತೀಯ ಹಬ್ಬದ, ಮಹತ್ವ, ವಿಶೇಷತೆ ಮತ್ತು ಪೂಜಾ ವಿಧಾನ ಇಲ್ಲಿದೆ
ಅಕ್ಷಯ ತೃತೀಯ ಹಬ್ಬದ ಶುಭಾಶಯಗಳು
preethi shettigar
|

Updated on: May 14, 2021 | 8:13 AM

Share

ಭಾರತ ಮತ್ತು ನೇಪಾಳದಲ್ಲಿ ವಾರ್ಷಿಕ ವಸಂತಕಾಲದ ಹಬ್ಬಗಳಲ್ಲಿ ಒಂದಾಗಿ ಇದನ್ನು ಆಚರಿಸುತ್ತಾರೆ. ಅದರಲ್ಲೂ ಹಿಂದೂಗಳು ಮತ್ತು ಜೈನರು ಅಕ್ಷಯ ತೃತೀಯವನ್ನು ವಿಶೇಷವಾಗಿ ಆಚರಿಸುತ್ತಾರೆ. ಹಿಂದೂ ಕ್ಯಾಲೆಂಡರ್‌ನ ಪ್ರಕಾರ ವೈಶಾಖ ತಿಂಗಳ ಮೂರನೇ ಚಂದ್ರ ದಿನವನ್ನು ಅಕ್ಷಯ ತೃತೀಯ ಎಂದು ಕರೆಯಲಾಗುತ್ತದೆ. ಗ್ರೆಗೋರಿಯನ್ ಕ್ಯಾಲೆಂಡರ್​ನಲ್ಲಿ, ಅಕ್ಷಯ ತೃತೀಯ ಪ್ರತಿ ವರ್ಷ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಬರಲಿದ್ದು, ಈ ತಿಂಗಳು ಪ್ರಾರಂಭದಿಂದ ಅಂತ್ಯದ ವರೆಗೆ ಶುಭವಾಗಿರುತ್ತದೆ ಎಂದು ಹೇಳಲಾಗುತ್ತದೆ.

ಅಖಾ ತೀಜ್ ಅಥವಾ ಅಕ್ತಿ ಎಂದೂ ಕರೆಯಲ್ಪಡುವ ಈ ಹಬ್ಬವನ್ನು ಭಾರತ ಮತ್ತು ನೇಪಾಳದಲ್ಲಿ ಅತ್ಯಂತ ಶುಭ ದಿನವನ್ನಾಗಿ ಪರಿಗಣಿಸಲಾಗುತ್ತದೆ. ಹಾಗಾದರೆ ಈ ದಿನದ ಐತಿಹಾಸಿಕ ಮಹತ್ವ ಏನು? ಪೂಜಾ ವಿಧಾನ ಹೇಗೆ ಎನ್ನುವುದನ್ನು ತಿಳಿದುಕೊಳ್ಳುವುದು ಕೂಡ ಮುಖ್ಯವಾಗುತ್ತದೆ.

ಪೂಜೆಯ ಸಮಯ ಅಕ್ಷಯ ತೃತೀಯ ಹಬ್ಬದ ಈ ದಿನವು ಪ್ರಾರಂಭದಿಂದ ಅಂತ್ಯದ ವರೆಗೆ ಶುಭವಾಗಿದ್ದರೂ, ಅದರಲ್ಲೂ ವಿಶೇಷವಾಗಿ ಚಿನ್ನವನ್ನು ಖರೀದಿಸಲು ಇದು ಶುಭ ದಿನವಾದರೂ, ಪೂಜಾ ಮುಹೂರ್ತ ಬೆಳಿಗ್ಗೆ 05:38 ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 12:18 ಕ್ಕೆ ಕೊನೆಗೊಳ್ಳುತ್ತದೆ. ಆದರೆ ತೃತೀಯ ತಿಥಿ ಮೇ 14 ರಂದು ಬೆಳಿಗ್ಗೆ 5:38 ಕ್ಕೆ ಪ್ರಾರಂಭವಾಗಿ ಮರುದಿನ ಅಂದರೆ ಮೇ 15 ರಂದು 7:59 ಕ್ಕೆ ಕೊನೆಗೊಳ್ಳುತ್ತದೆ.

ಇತಿಹಾಸ ಮತ್ತು ಮಹತ್ವ ಹಿಂದೂ ಪುರಾಣದ ಪ್ರಕಾರ, ಅಕ್ಷಯ ತೃತೀಯದ ಈ ದಿನವು ತ್ರೇತಾ ಯುಗದ ಆರಂಭವನ್ನು ಸೂಚಿಸುತ್ತದೆ. ಅಲ್ಲದೇ ಪರಶುರಾಮನ ಜನ್ಮ ದಿನವು ಅಂದೇ ಆಗಿರುವುದರಿಂದ ಈ ದಿನವನ್ನು ಪರಶುರಾಮ ಜಯಂತಿ ಎಂದು ಕರೆಯಲಾಗುತ್ತದೆ. ಹಿಂದೂ ಪುರಾಣದ ಪ್ರಕಾರ ಪರಶುರಾಮನನ್ನು ವಿಷ್ಣುವಿನ ಆರನೇ ಅವತಾರ ಎಂದು ಕರೆಯಲಾಗುತ್ತದೆ.

ಪುರಾಣದ ದಂತಕಥೆಯ ಪ್ರಕಾರ ಪೂರ್ವಜರು ಮೋಕ್ಷವನ್ನು ಸಾಧಿಸುವ ಸಲುವಾಗಿ ಸಹಾಯ ಮಾಡುವಂತೆ ಭಗೀರಥ ರಾಜನ ಆಜ್ಞೆಯ ಮೇರೆಗೆ ಗಂಗಾ ನದಿಯುವ ಭೂಮಿಗೆ ಇಳಿದ ಈ ದಿನವನ್ನು ಅಕ್ಷಯ ತೃತೀಯ ಎಂದು ಕರೆಯಲಾಗುತ್ತದೆ. ಈ ದಿನದಂದು ವೇದ ವ್ಯಾಸ ಮಹಾಭಾರತವನ್ನು ಗಣೇಶನಿಗೆ ನಿರೂಪಿಸಿದ್ದಾರೆ. ಅಲ್ಲದೇ ಕೃಷ್ಣ ಮತ್ತು ಸುದಾಮನ ಕಥೆಯನ್ನು ಕೂಡ ಈ ದಿನ ಸಾರುತ್ತದೆ ಎಂಬ ನಂಬಿಕೆಯು ಇದೆ.

ಇನ್ನೊಂದು ಕಥೆಯ ಪ್ರಕಾರ ಕೃಷ್ಣನು ಅಕ್ಷಯ ಪಾತ್ರೆಯನ್ನು ದ್ರೌಪತಿಗೆ ಅರ್ಪಿಸಿದನು. ಆ ಮೂಲಕ ಈ ಪಾತ್ರೆ ಸದಾ ಆಹಾರವನ್ನು ತುಂಬಿರುವ ಮಡಿಕೆಯಾಯಿತು ಮತ್ತು ಇದು ಪಾಂಡವರ ಹಸಿವು ನೀಗಿಸಲು ಸಹಾಯವಾಯಿತು. ಮತ್ತೊಂದು ದಂತಕಥೆಯ ಪ್ರಕಾರ, ಈ ದಿನದಂದು ಸುದಾಮಾ ತನ್ನ ಬಾಲ್ಯದ ಗೆಳೆಯ ಕೃಷ್ಣನನ್ನು ದ್ವಾರಕಾದಲ್ಲಿ ಭೇಟಿ ಮಾಡಿ ಅಪರಿಮಿತ ಸಂಪತ್ತನ್ನು ಪಡೆದಳು ಎಂದು ಹೇಳಲಾಗುತ್ತದೆ.

ಆಚರಣೆಗಳು ತಮ್ಮ ಪೂರ್ವಜರು ಮತ್ತು ಹೆತ್ತವರಿಗಾಗಿ ಪ್ರಾರ್ಥನೆ ಮಾಡುವ ಮೂಲಕ ದಿನವನ್ನು ಪ್ರಾರಂಭಿಸಲಾಗುತ್ತದೆ ಮತ್ತು ಆಧ್ಯಾತ್ಮಿಕ ಜ್ಞಾನೋದಯವನ್ನು ಬಯಸುತ್ತಾರೆ. ಅಲ್ಲದೆ ಕೆಲವು ಜನರು ಹಸಿದವರಿಗೆ ಆಹಾರ ಅಥವಾ ಅಗತ್ಯ ವಸ್ತುಗಳ ದಾನವನ್ನು ಮಾಡಿ ಸರ್ವಶಕ್ತನ ಆಶೀರ್ವಾದ ಪಡೆಯುತ್ತಾರೆ.

ಅಕ್ಷಯ ತೃತೀಯವನ್ನು ಹೊಸ ಉದ್ಯಮಗಳು, ಮದುವೆಗಳು ಮತ್ತು ಚಿನ್ನವನ್ನು ಖರೀದಿಸಲು ಶುಭ ದಿನವೆಂದು ಪರಿಗಣಿಸಲಾಗಿದೆ. ಏಕೆಂದರೆ ಈ ದಿನ ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಪ್ರತಿವರ್ಷ ದೇಶಾದ್ಯಂತ ಲಕ್ಷಾಂತರ ಭಾರತೀಯರು ಆಭರಣವನ್ನು ಖರೀದಿಸಲು ಮುಂದಾಗುತ್ತಾರೆ.

ಇದನ್ನೂ ಓದಿ:

Akshaya Tritiya: ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿಸುವುದು ಅದೃಷ್ಟ ತರುತ್ತದೆಯಾ? ಇಲ್ಲಿದೆ ಪೂರ್ಣ ಮಾಹಿತಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ