AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bathing Before Cooking: ಅಡುಗೆ ಮಾಡುವ ಮುನ್ನ ಸ್ನಾನ ಮಾಡುವುದು ಏಕೆ ಕಡ್ಡಾಯ? ಶಾಸ್ತ್ರಗಳು ಹೇಳುವುದೇನು?

ಭಾರತೀಯ ಸಂಸ್ಕೃತಿಯಲ್ಲಿ ಅಡುಗೆ ಮಾಡುವ ಮುನ್ನ ಮತ್ತು ಊಟಕ್ಕೂ ಮುನ್ನ ಸ್ನಾನ ಮಾಡುವುದು ಕೇವಲ ಸಂಪ್ರದಾಯವಲ್ಲ. ಇದು ಆಳವಾದ ಆಧ್ಯಾತ್ಮಿಕ ಹಾಗೂ ವೈಜ್ಞಾನಿಕ ಮಹತ್ವ ಹೊಂದಿದೆ. ಈ ನಿಯಮ ಪಾಲಿಸುವುದರಿಂದ ದೈಹಿಕ, ಮಾನಸಿಕ ಶುದ್ಧಿ ಹಾಗೂ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಇದು ಆರೋಗ್ಯವನ್ನು ಸುಧಾರಿಸಿ, ದಾರಿದ್ರ್ಯವನ್ನು ದೂರವಿಟ್ಟು ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಲು ನೆರವಾಗುತ್ತದೆ.

Bathing Before Cooking: ಅಡುಗೆ ಮಾಡುವ ಮುನ್ನ ಸ್ನಾನ ಮಾಡುವುದು ಏಕೆ ಕಡ್ಡಾಯ? ಶಾಸ್ತ್ರಗಳು ಹೇಳುವುದೇನು?
ಅಡುಗೆ ಮಾಡುವ ಮುನ್ನ ಸ್ನಾನ ಮಾಡುವುದು
ಅಕ್ಷತಾ ವರ್ಕಾಡಿ
|

Updated on:Jul 11, 2026 | 2:09 PM

Share

ಸನಾತನ ಸಂಸ್ಕೃತಿಯಲ್ಲಿ ಆಹಾರವನ್ನು ‘ಅನ್ನಬ್ರಹ್ಮ’ ಎಂದು ಪೂಜಿಸಲಾಗುತ್ತದೆ. “ನಾವು ತಿನ್ನುವ ಆಹಾರವೇ ನಮ್ಮ ಆಲೋಚನೆ ಮತ್ತು ವ್ಯಕ್ತಿತ್ವವನ್ನು ರೂಪಿಸುತ್ತದೆ” ಎಂಬುದು ಹಿರಿಯರ ನಂಬಿಕೆ. ಅದಕ್ಕಾಗಿಯೇ ಶಾಸ್ತ್ರಗಳಲ್ಲಿ ಆಹಾರವನ್ನು ಸಿದ್ಧಪಡಿಸುವಾಗ ಮತ್ತು ಅದನ್ನು ಸೇವಿಸುವಾಗ ಕೆಲವು ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಲಾಗಿದೆ. ಅದರಲ್ಲಿ ಅತ್ಯಂತ ಪ್ರಮುಖವಾದುದು – ಅಡುಗೆ ಮನೆಗೆ ಪ್ರವೇಶಿಸುವ ಮುನ್ನ ಹಾಗೂ ಊಟ ಮಾಡುವ ಮುನ್ನ ಸ್ನಾನ ಮಾಡುವುದು.

ಇಂದಿನ ಧಾವಂತದ ಜೀವನದಲ್ಲಿ ಇದು ಕೇವಲ ಒಂದು ಸಂಪ್ರದಾಯ ಅಥವಾ ಮೂಢನಂಬಿಕೆಯಂತೆ ಕಾಣಿಸಬಹುದು. ಆದರೆ ಇದರ ಹಿಂದೆ ಆಳವಾದ ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣಗಳಿವೆ. ಈ ನಿಯಮಗಳನ್ನು ಪಾಲಿಸುವುದರಿಂದ ಆರೋಗ್ಯ ಮತ್ತು ಮನೆಯಲ್ಲಿನ ಧನಾತ್ಮಕ ಶಕ್ತಿ ಹೇಗೆ ಹೆಚ್ಚುತ್ತದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ಸಕಾರಾತ್ಮಕ ಶಕ್ತಿಯ ಸಂಚಾರ (Positive Energy):

ಯಾವುದೇ ವ್ಯಕ್ತಿ ಸ್ನಾನ ಮಾಡದೆ ಅಡುಗೆ ಮನೆಗೆ ಪ್ರವೇಶಿಸಿ ಆಹಾರವನ್ನು ಸಿದ್ಧಪಡಿಸಿದರೆ, ಆ ಆಹಾರವನ್ನು ಪವಿತ್ರ ಎಂದು ಪರಿಗಣಿಸಲಾಗುವುದಿಲ್ಲ” ಎನ್ನುತ್ತದೆ ಶಾಸ್ತ್ರ. ಸ್ನಾನ ಮಾಡಿದ ನಂತರ ತಯಾರಿಸುವ ಆಹಾರವು ಧನಾತ್ಮಕ ಶಕ್ತಿಯ ಮೂಲವಾಗುತ್ತದೆ. ಇದು ನಮ್ಮ ದೇಹಕ್ಕೆ ಶಕ್ತಿಯನ್ನು ನೀಡುವುದಲ್ಲದೆ, ಮಾನಸಿಕವಾಗಿಯೂ ನಮ್ಮನ್ನು ಸದೃಢಗೊಳಿಸುತ್ತದೆ.

ಇದನ್ನೂ ಓದಿ: ಶ್ರಾದ್ಧದಲ್ಲಿ ಮೊದಲು ಕಾಗೆಗೆ ಅನ್ನ ಯಾಕೆ ನೀಡುತ್ತಾರೆ? ಇದರ ಹಿಂದಿದೆ ಗರುಡ ಪುರಾಣ ಮತ್ತು ರಾಮಾಯಣದ ಕುತೂಹಲಕಾರಿ ಕಥೆ

ದಾರಿದ್ರ್ಯದ ಆಹ್ವಾನ ಹಾಗೂ ದೇವತೆಗಳ ಅಸಮಾಧಾನ:

ಸ್ನಾನ ಮಾಡದೆ ಅಡುಗೆ ಮಾಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಪ್ರವೇಶಿಸುತ್ತದೆ. ಇದು ಮನೆಯಲ್ಲಿ ದಾರಿದ್ರ್ಯವನ್ನು ತರುತ್ತದೆ ಮತ್ತು ಲಕ್ಷ್ಮಿ ದೇವಿಯ ಕೋಪಕ್ಕೆ ಕಾರಣವಾಗಬಹುದು. ಅಷ್ಟೇ ಅಲ್ಲದೆ, ಅಂತಹ ಅಡುಗೆ ಮನೆಯಲ್ಲಿ ಅನ್ನಪೂರ್ಣೇಶ್ವರಿ ದೇವಿಯು ನೆಲೆಸುವುದಿಲ್ಲ ಎಂಬ ನಂಬಿಕೆಯಿದೆ.

ಆದ್ದರಿಂದ ದೇಹದ ಶುದ್ಧೀಕರಣವಾಗಿರಲಿ ಅಥವಾ ಮಾನಸಿಕ ಪವಿತ್ರತೆಯಾಗಿರಲಿ, ಅಡುಗೆ ಮಾಡುವ ಮತ್ತು ಊಟ ಮಾಡುವ ಮುನ್ನ ಸ್ನಾನ ಮಾಡುವುದು ಅತ್ಯಂತ ಮುಖ್ಯವಾದ ನಿಯಮವಾಗಿದೆ. ಈ ನಿಯಮವನ್ನು ಪಾಲಿಸುವುದರಿಂದ ನಾವು ದೈಹಿಕ ಹಾಗೂ ಮಾನಸಿಕ ಆರೋಗ್ಯ ಎರಡನ್ನೂ ವೃದ್ಧಿಸಿಕೊಳ್ಳಬಹುದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:02 pm, Sat, 11 July 26

Follow Us