AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Black Thread Benefits: ಮಹಿಳೆಯರು ಎಡಗಾಲಿಗೆ ಕಪ್ಪು ದಾರ ಧರಿಸುವುದರಿಂದ ಇದೆ ಅದ್ಭುತ ಲಾಭ!

ಜ್ಯೋತಿಷ್ಯದ ಪ್ರಕಾರ, ಕಪ್ಪು ದಾರ ಶನಿ ದೇವರ ಸಂಕೇತವಾಗಿದೆ. ಇದು ದುಷ್ಟ ದೃಷ್ಟಿ, ನಕಾರಾತ್ಮಕ ಶಕ್ತಿಗಳಿಂದ ರಕ್ಷಣೆ ನೀಡುತ್ತದೆ. ಶನಿ ಕೃಪೆ, ಆರೋಗ್ಯ, ಸ್ಥಿರತೆ, ಆರ್ಥಿಕ ಸುಧಾರಣೆಗಳಿಗೆ ಇದನ್ನು ಧರಿಸಲಾಗುತ್ತದೆ. ಶನಿವಾರದಂದು, ಸ್ನಾನ ಮಾಡಿ ಶನಿ ಮಂತ್ರ ಪಠಿಸಿ, ಎಡಗಾಲಿಗೆ ಕಟ್ಟಿದರೆ ವಿಶೇಷ ಲಾಭ. ಇದು ನಂಬಿಕೆ ಮತ್ತು ಸಕಾರಾತ್ಮಕ ಜೀವನ ಶೈಲಿಯ ಭಾಗ.

Black Thread Benefits: ಮಹಿಳೆಯರು ಎಡಗಾಲಿಗೆ ಕಪ್ಪು ದಾರ ಧರಿಸುವುದರಿಂದ ಇದೆ ಅದ್ಭುತ ಲಾಭ!
ಕಪ್ಪು ದಾರ
ಅಕ್ಷತಾ ವರ್ಕಾಡಿ
|

Updated on: Jan 01, 2026 | 11:22 AM

Share

ಜ್ಯೋತಿಷ್ಯದ ಪ್ರಕಾರ ಕಪ್ಪು ದಾರವು ಶನಿ ದೇವರನ್ನು ಪ್ರತಿನಿಧಿಸುವ ಶಕ್ತಿಯ ಸಂಕೇತವಾಗಿದೆ. ದುಷ್ಟ ದೃಷ್ಟಿ, ನಕಾರಾತ್ಮಕ ಶಕ್ತಿಗಳು ಹಾಗೂ ಅಶುಭ ಪ್ರಭಾವಗಳಿಂದ ರಕ್ಷಣೆ ಪಡೆಯಲು ಅನೇಕರು ಕೈಗೆ ಅಥವಾ ಕಾಲಿಗೆ ಕಪ್ಪು ದಾರವನ್ನು ಧರಿಸುತ್ತಾರೆ. ವಿಶೇಷವಾಗಿ ಮಹಿಳೆಯರು ದುರದೃಷ್ಟ ನಿವಾರಣೆ, ಆರೋಗ್ಯ ರಕ್ಷಣೆ ಮತ್ತು ಜೀವನದ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಕಾಲಿಗೆ ಕಪ್ಪು ದಾರವನ್ನು ಕಟ್ಟುತ್ತಾರೆ ಎಂಬ ನಂಬಿಕೆಯಿದೆ.

ಕಪ್ಪು ದಾರ ಕಟ್ಟುವುದರಿಂದ ಶನಿದೇವರ ಆಶೀರ್ವಾದ ಸದಾ ನಿಮ್ಮ ಮೇಲಿರುತ್ತದೆ. ಇದರಿಂದ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ನಕಾರಾತ್ಮಕ ಶಕ್ತಿಗಳ ಪ್ರಭಾವ ಕಡಿಮೆಯಾಗುತ್ತದೆ. ಜೊತೆಗೆ ಜೀವನದಲ್ಲಿ ಸ್ಥಿರತೆ ಮತ್ತು ಶಾಂತಿ ದೊರೆಯುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.

ಕಪ್ಪು ದಾರ ಧರಿಸಲು ಶುಭ ದಿನ ಮತ್ತು ವಿಧಾನ:

  • ಶನಿವಾರ ಕಪ್ಪು ದಾರವನ್ನು ಧರಿಸಲು ಅತ್ಯಂತ ಶುಭ ದಿನವೆಂದು ಪರಿಗಣಿಸಲಾಗಿದೆ.
  • ಮಹಿಳೆಯರು ಎಡಗಾಲಿಗೆ ಕಪ್ಪು ದಾರವನ್ನು ಕಟ್ಟುವುದು ವಿಶೇಷ ಫಲ ನೀಡುತ್ತದೆ.

ಕಪ್ಪು ದಾರ ಧರಿಸುವ ವಿಧಾನ:

  • ಶನಿವಾರ ಬೆಳಿಗ್ಗೆ ಸ್ನಾನ ಮಾಡಿ ಶುಚಿಯಾಗಿರಬೇಕು.
  • ಶನಿ ದೇವಾಲಯಕ್ಕೆ ತೆರಳಿ
  • ಶನಿದೇವರಿಗೆ ಎಳ್ಳೆಣ್ಣೆ ಅರ್ಪಿಸಿ
  • ಶನಿ ಮಂತ್ರವನ್ನು ಪಠಿಸಿ
  • ನಂತರ ಕಪ್ಪು ದಾರವನ್ನು ಎಡಗಾಲಿಗೆ ಕಟ್ಟಬೇಕು

ಇದನ್ನೂ ಓದಿ: ಸಾಮಾನ್ಯ ಜನರು ದೇವಸ್ಥಾನದ ಗರ್ಭಗುಡಿ ಪ್ರವೇಶ ಮಾಡಬಾರದು ಯಾಕೆ?

ಕಪ್ಪು ದಾರ ಧರಿಸುವುದರಿಂದ ದೊರೆಯುವ ಲಾಭಗಳು:

  • ವ್ಯಾಪಾರ ಅಥವಾ ಉದ್ಯೋಗದಲ್ಲಿ  ಆರ್ಥಿಕ ಸಮಸ್ಯೆಯಿಂದ ಮುಕ್ತಿ
  • ಸಾಲ, ನಷ್ಟ, ಅಡೆತಡೆಗಳಿಂದ ಬಳಲುತ್ತಿದ್ದರೆ ಪರಿಹಾರ
  • ಕಂಕಣ ಬಲ ಕೂಡಿಬರಲಿದೆ
  • ವೈವಾಹಿಕ ಜೀವನದಲ್ಲಿ ಸಂತೋಷ ಸಮೃದ್ಧಿ
  • ಜಾತಕದಲ್ಲಿ ಶನಿ, ರಾಹು–ಕೇತು ದೋಷಗಳಿಂದ ಮುಕ್ತಿ

ಅಂತಹ ಸಂದರ್ಭಗಳಲ್ಲಿ ಪುರುಷರು ಮತ್ತು ಮಹಿಳೆಯರು ಎರಡೂ ಕಾಲಿಗೆ ಅಥವಾ ಕೈಗೆ ಕಪ್ಪು ದಾರವನ್ನು ಧರಿಸಬಹುದು ಎಂದು ಜ್ಯೋತಿಷ್ಯ ಸಲಹೆ ನೀಡುತ್ತದೆ.

ಗಮನಿಸಬೇಕಾದ ವಿಷಯ:

ಕಪ್ಪು ದಾರವನ್ನು ಧರಿಸುವುದು ಆಸ್ಥೆಯ ಮತ್ತು ನಂಬಿಕೆಯ ಭಾಗ. ಇದರೊಂದಿಗೆ ಶುದ್ಧ ಜೀವನ ಶೈಲಿ, ಸಕಾರಾತ್ಮಕ ಚಿಂತನೆ ಮತ್ತು ಶ್ರಮವೂ ಅಷ್ಟೇ ಮುಖ್ಯ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಬಿಎಸ್​​ವೈ ಬರ್ತಿದ್ದಂತೆ ಜೈಕಾರ; ಹೇಗಿದೆ ನೋಡಿ ರಾಜಾಹುಲಿ ಎಂಟ್ರಿ
ಬಿಎಸ್​​ವೈ ಬರ್ತಿದ್ದಂತೆ ಜೈಕಾರ; ಹೇಗಿದೆ ನೋಡಿ ರಾಜಾಹುಲಿ ಎಂಟ್ರಿ
ಒಳಮೀಸಲಾತಿ ಹುದ್ದೆಗಳ ರೋಸ್ಟರ್ ಬಿಂದು ಸಮಸ್ಯೆ: ಮುನಿಯಪ್ಪ ಹೇಳಿದ್ದಿಷ್ಟು
ಒಳಮೀಸಲಾತಿ ಹುದ್ದೆಗಳ ರೋಸ್ಟರ್ ಬಿಂದು ಸಮಸ್ಯೆ: ಮುನಿಯಪ್ಪ ಹೇಳಿದ್ದಿಷ್ಟು
Live: ಚಿತ್ರದುರ್ಗದಲ್ಲಿ ಬಿಎಸ್​ವೈ ಅಭಿಮಾನೋತ್ಸವ ನೇರ ಪ್ರಸಾರ
Live: ಚಿತ್ರದುರ್ಗದಲ್ಲಿ ಬಿಎಸ್​ವೈ ಅಭಿಮಾನೋತ್ಸವ ನೇರ ಪ್ರಸಾರ
ಬಿಎಸ್​​ವೈ ಅಭಿಮಾನೋತ್ಸವ: ಕಾರ್ಯಕರ್ತರು, ಅಭಿಮಾನಿಗಳಿಗೆ ಭರ್ಜರಿ ಭೋಜನ
ಬಿಎಸ್​​ವೈ ಅಭಿಮಾನೋತ್ಸವ: ಕಾರ್ಯಕರ್ತರು, ಅಭಿಮಾನಿಗಳಿಗೆ ಭರ್ಜರಿ ಭೋಜನ
ಕೆರೆ ಏರಿಯ ಮೇಲೆ ಮದುವೆ ದಿಬ್ಬಣದ ಬಸ್​​ ಪಲ್ಟಿ: ತಪ್ಪಿದ ಭಾರಿ ಅನಾಹುತ
ಕೆರೆ ಏರಿಯ ಮೇಲೆ ಮದುವೆ ದಿಬ್ಬಣದ ಬಸ್​​ ಪಲ್ಟಿ: ತಪ್ಪಿದ ಭಾರಿ ಅನಾಹುತ
ಬಿಜೆಪಿಯನ್ನು ಗೆಲ್ಲಿಸಿದ ಬಂಗಾಳದ ಜನತೆಗೆ ಪ್ರಧಾನಿ ಮೋದಿ ಶಿರ ಬಾಗಿ ನಮಸ್ಕಾರ
ಬಿಜೆಪಿಯನ್ನು ಗೆಲ್ಲಿಸಿದ ಬಂಗಾಳದ ಜನತೆಗೆ ಪ್ರಧಾನಿ ಮೋದಿ ಶಿರ ಬಾಗಿ ನಮಸ್ಕಾರ
ಇಂದು ಪ್ರಮಾಣವಚನ ಸ್ವೀಕರಿಸಿದ ಬಂಗಾಳದ ಬಿಜೆಪಿ ಸಚಿವರ ಪಟ್ಟಿ ಇಲ್ಲಿದೆ
ಇಂದು ಪ್ರಮಾಣವಚನ ಸ್ವೀಕರಿಸಿದ ಬಂಗಾಳದ ಬಿಜೆಪಿ ಸಚಿವರ ಪಟ್ಟಿ ಇಲ್ಲಿದೆ
ಬಿಜೆಪಿಯ ಹಿರಿಯ ಕಾರ್ಯಕರ್ತ ಮಖನಲಾಲ್ ಕಾಲಿಗೆರಗಿ ನಮಸ್ಕರಿಸಿದ ಪ್ರಧಾನಿ ಮೋದಿ
ಬಿಜೆಪಿಯ ಹಿರಿಯ ಕಾರ್ಯಕರ್ತ ಮಖನಲಾಲ್ ಕಾಲಿಗೆರಗಿ ನಮಸ್ಕರಿಸಿದ ಪ್ರಧಾನಿ ಮೋದಿ
ಉಪೇಂದ್ರ ಚುನಾವಣೆಗೆ ಏಕೆ ನಿಲ್ಲಲ್ಲ? ಉತ್ತರಿಸಿದ ನಟ
ಉಪೇಂದ್ರ ಚುನಾವಣೆಗೆ ಏಕೆ ನಿಲ್ಲಲ್ಲ? ಉತ್ತರಿಸಿದ ನಟ
ಕೊಲ್ಕತ್ತಾಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
ಕೊಲ್ಕತ್ತಾಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ