AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ಹುತ್ತ ಇರುವ ಜಾಗದಲ್ಲಿ ಮನೆ ಕಟ್ಟಬಹುದೇ? ವಾಸ್ತು ತಜ್ಞರು ಹೇಳುವುದೇನು?

ಹುತ್ತ ಇರುವ ಜಾಗದಲ್ಲಿ ಮನೆ ಕಟ್ಟುವುದರ ಬಗ್ಗೆ ಡಾ. ಬಸವರಾಜ್ ಗುರೂಜಿ ಅವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ. ಹುತ್ತ ಇರುವ ನಿವೇಶನವನ್ನು ಖರೀದಿಸುವುದು ಲಾಭದಾಯಕವೇ ಅಥವಾ ನಷ್ಟಕರವೇ ಎಂಬುದರ ಬಗ್ಗೆ ಅವರು ವಿವರಿಸಿದ್ದಾರೆ. ಹುತ್ತದ ಸುತ್ತಲೂ ಸ್ಥಳ ಬಿಟ್ಟು ಮನೆ ಕಟ್ಟುವುದು ಶುಭ ಆದರೆ ದೊಡ್ಡ ಹುತ್ತವಿದ್ದರೆ ಎಂದಿಗೂ ನಾಶಪಡಿಸಬೇಡಿ ಎಂದು ಅವರು ಸಲಹೆ ನೀಡಿದ್ದಾರೆ.

Daily Devotional: ಹುತ್ತ ಇರುವ ಜಾಗದಲ್ಲಿ ಮನೆ ಕಟ್ಟಬಹುದೇ? ವಾಸ್ತು ತಜ್ಞರು ಹೇಳುವುದೇನು?
ಹುತ್ತ ಇರುವ ಜಾಗದಲ್ಲಿ ಮನೆ
ಅಕ್ಷತಾ ವರ್ಕಾಡಿ
|

Updated on: Jul 11, 2025 | 9:05 AM

Share

ಭೂಮಿ ಖರೀದಿ ಮಾಡುವಾಗ ಅಥವಾ ಮನೆ ಕಟ್ಟುವಾಗ ಹುತ್ತದ ಸಮಸ್ಯೆ ಎದುರಾಗುವುದು ಸಾಮಾನ್ಯ. ಹುತ್ತ ಇರುವ ಜಾಗದಲ್ಲಿ ಮನೆ ಕಟ್ಟುವ ಬಗ್ಗೆ ಹಲವು ನಂಬಿಕೆಗಳಿವೆ. ಕೆಲವು ಜನರು ಹುತ್ತವನ್ನು ಶುಭ ಸಂಕೇತವಾಗಿ ಪರಿಗಣಿಸಿದರೆ, ಇನ್ನು ಕೆಲವರು ಅಶುಭವೆಂದು ಪರಿಗಣಿಸುತ್ತಾರೆ. ಈ ಗೊಂದಲಕ್ಕೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಗುರೂಜಿಯವರ ಪ್ರಕಾರ, ಹುತ್ತ ಇರುವ ನಿವೇಶನವನ್ನು ಖರೀದಿಸುವುದು ದೋಷವಲ್ಲ. ಆದರೆ, ಹುತ್ತ ಇರುವ ಸ್ಥಳದಲ್ಲಿ ನೇರವಾಗಿ ಮನೆ ಕಟ್ಟುವುದು ಸೂಕ್ತವಲ್ಲ. ಹುತ್ತ ಸಣ್ಣದಾಗಿದ್ದರೆ ಆ ಮಣ್ಣನ್ನು ನೀರಿಗೆ ಅರ್ಪಿಸಿ ಮನೆ ಕಟ್ಟಬಹುದು. ಆದರೆ ದೊಡ್ಡ ಹುಟ್ಟುಗಳನ್ನು ನಾಶ ಮಾಡಬಾರದು. ಇದು ಅಶುಭಕರ ಎಂದು ಹೇಳಲಾಗುತ್ತದೆ. ಹುತ್ತ ಇರುವ ಸ್ಥಳವನ್ನು ಬಿಟ್ಟು ಸುತ್ತಮುತ್ತಲಿನ ಜಾಗದಲ್ಲಿ ಮನೆ ಕಟ್ಟಿದರೆ ಯಾವುದೇ ತೊಂದರೆ ಇರುವುದಿಲ್ಲ. ಹುತ್ತ ಪೂರ್ವ ಈಶಾನ್ಯ, ಆಗ್ನೇಯ, ವಾಯವ್ಯ ಅಥವಾ ನೈರುತ್ಯ ದಿಕ್ಕಿನಲ್ಲಿ ಇದ್ದರೂ ಕೂಡ ಈ ಮಾರ್ಗವನ್ನು ಅನುಸರಿಸಬಹುದು. ಹುಟ್ಟಿನ ಸುತ್ತಲೂ ಕನಿಷ್ಠ ಐದು ಅಡಿ ಜಾಗ ಬಿಟ್ಟು ಮನೆಯನ್ನು ನಿರ್ಮಿಸಬೇಕು.

ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಮದುವೆ ಸಮಯದಲ್ಲಿ ಅಲಂಕೃತ ತೆಂಗಿನಕಾಯಿ ಬಳಸುವುದು ಶುಭವೇ?

ಕೆಲವರು ಹುತ್ತವನ್ನು ನಾಶಪಡಿಸಿ ಮನೆ ಕಟ್ಟುತ್ತಾರೆ. ಆದರೆ, ಗುರೂಜಿಯವರು ಇದನ್ನು ಸೂಕ್ತವಲ್ಲ ಎಂದು ಹೇಳುತ್ತಾರೆ. ಹುತ್ತಗಳು ಪವಿತ್ರವಾದ ಸ್ಥಳಗಳಾಗಿವೆ ಎಂಬ ನಂಬಿಕೆಯಿದೆ. ಅಲ್ಲಿ ಋಷಿಗಳ ತಪಸ್ಸು, ಧ್ಯಾನ ಇತ್ಯಾದಿಗಳು ನಡೆದಿರಬಹುದು. ಹುತ್ತಗಳನ್ನು ಒಡೆಯುವುದರಿಂದ ನಕಾರಾತ್ಮಕ ಪರಿಣಾಮಗಳು ಉಂಟಾಗಬಹುದು ಎಂದು ಅನೇಕರು ನಂಬುತ್ತಾರೆ. ಆದ್ದರಿಂದ, ಹುತ್ತದ ಸಮಸ್ಯೆಯನ್ನು ಸೌಮ್ಯವಾಗಿ ನಿಭಾಯಿಸುವುದು ಉತ್ತಮ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಒಂದು ಆಧಾರ್ ಕಾರ್ಡ್​ಗೆ 2 ಚೀಲ ಯೂರಿಯಾ
ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಒಂದು ಆಧಾರ್ ಕಾರ್ಡ್​ಗೆ 2 ಚೀಲ ಯೂರಿಯಾ
ಪೂಜೆ ಮಾಡಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎನ್ನುವ ಗೃಹಿಣಿಯರು
ಪೂಜೆ ಮಾಡಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎನ್ನುವ ಗೃಹಿಣಿಯರು
‘ನಮ್ಮ ಮನೆ ಹತ್ತಿರವೇ ಅಟ್ಯಾಕ್ ಆಗಿದೆ’: ಪೊಲೀಸ್ ಎದುರು ಪ್ರಥಮ್ ಅಳಲು
‘ನಮ್ಮ ಮನೆ ಹತ್ತಿರವೇ ಅಟ್ಯಾಕ್ ಆಗಿದೆ’: ಪೊಲೀಸ್ ಎದುರು ಪ್ರಥಮ್ ಅಳಲು
ಹುಲಿರಾಯನ ಫೋಸ್​ ಕಂಡು ಹೌದು ಹುಲಿಯಾ ಎಂದ ಪ್ರವಾಸಿಗರು
ಹುಲಿರಾಯನ ಫೋಸ್​ ಕಂಡು ಹೌದು ಹುಲಿಯಾ ಎಂದ ಪ್ರವಾಸಿಗರು
PM Modi Speech Live: ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಭಾಷಣದ ನೇರಪ್ರಸಾರ
PM Modi Speech Live: ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಭಾಷಣದ ನೇರಪ್ರಸಾರ
ದರ್ಶನ್ ವಿಗ್ ಧರಿಸುತ್ತಾರೆ, ಅದನ್ನು ಹೇಗೆ ಕಿತ್ತುಕೊಳ್ಳಲಾದೀತು? ಪ್ರಥಮ್
ದರ್ಶನ್ ವಿಗ್ ಧರಿಸುತ್ತಾರೆ, ಅದನ್ನು ಹೇಗೆ ಕಿತ್ತುಕೊಳ್ಳಲಾದೀತು? ಪ್ರಥಮ್
ಹಿಮಾಚಲ ಪ್ರದೇಶದ ಮಂಡಿಯಲ್ಲಿ ಮೇಘಸ್ಫೋಟ; ದಿಢೀರ್ ಪ್ರವಾಹದಿಂದ ಮೂವರು ಸಾವು
ಹಿಮಾಚಲ ಪ್ರದೇಶದ ಮಂಡಿಯಲ್ಲಿ ಮೇಘಸ್ಫೋಟ; ದಿಢೀರ್ ಪ್ರವಾಹದಿಂದ ಮೂವರು ಸಾವು
ಪಹಲ್ಗಾಮ್ ದಾಳಿಗೆ ಭದ್ರತಾ ಲೋಪವೇ ಕಾರಣ: ಖರ್ಗೆ
ಪಹಲ್ಗಾಮ್ ದಾಳಿಗೆ ಭದ್ರತಾ ಲೋಪವೇ ಕಾರಣ: ಖರ್ಗೆ
ಕಾಂಗ್ರೆಸ್​ನ ದಲಿತ ವಿರೋಧಿ ನೀತಿಯಿಂದ ಖರ್ಗೆ ಸಿಎಂ ಆಗಲಿಲ್ಲ: ಜ್ಞಾನೇಂದ್ರ
ಕಾಂಗ್ರೆಸ್​ನ ದಲಿತ ವಿರೋಧಿ ನೀತಿಯಿಂದ ಖರ್ಗೆ ಸಿಎಂ ಆಗಲಿಲ್ಲ: ಜ್ಞಾನೇಂದ್ರ
ಅವಮಾನಗಳ ಹೊರತಾಗಿಯೂ ಸಿಎಂ ವಿರುದ್ಧ ಮಾತಾಡದ ಶಿವಕುಮಾರ್
ಅವಮಾನಗಳ ಹೊರತಾಗಿಯೂ ಸಿಎಂ ವಿರುದ್ಧ ಮಾತಾಡದ ಶಿವಕುಮಾರ್