AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಇಂತಹ ಸಂದರ್ಭಗಳನ್ನು ಎದುರಿಸುವುದಕ್ಕಿಂತ ತಪ್ಪಿಸಿಕೊಳ್ಳುವುದೇ ಒಳ್ಳೆಯದು; ಚಾಣಕ್ಯ ಹೇಳುವ ನೀತಿ ಇಲ್ಲಿದೆ

ಎಂತಹ ಸನ್ನಿವೇಶಗಳಲ್ಲಿ ನಾವು ಜಾಗರೂಕರಾಗಿ ಇರಬೇಕು. ಯಾವುದರಿಂದ ತಪ್ಪಿಸಿಕೊಳ್ಳಬೇಕು ಎಂದು ಯೋಚಿಸುತ್ತಿದ್ದಿರಾ? ಆಚಾರ್ಯ ಚಾಣಕ್ಯ ಅಂಥ ಕೆಲವು ಸಂದರ್ಭಗಳನ್ನು ಗುರುತಿಸಿ ಸೂಚನೆ ನೀಡಿದ್ಧಾರೆ.

Chanakya Niti: ಇಂತಹ ಸಂದರ್ಭಗಳನ್ನು ಎದುರಿಸುವುದಕ್ಕಿಂತ ತಪ್ಪಿಸಿಕೊಳ್ಳುವುದೇ ಒಳ್ಳೆಯದು; ಚಾಣಕ್ಯ ಹೇಳುವ ನೀತಿ ಇಲ್ಲಿದೆ
ಚಾಣಕ್ಯ
Follow us
TV9 Web
| Updated By: ganapathi bhat

Updated on:Aug 14, 2021 | 1:04 PM

ಸಾಮಾನ್ಯವಾಗಿ ನಾವು ಜೀವನದಲ್ಲಿ ಎಂತಹ ಸನ್ನಿವೇಶವೇ ಬರಲಿ ಅದನ್ನು ಎದುರಿಸಿಯೇ ಎದುರಿಸುತ್ತೇವೆ ಎಂದು ಹೇಳುತ್ತೇವೆ. ಇದೇ ಮಾತನ್ನು ಆದರ್ಶವಾಗಿ ಸ್ವೀಕರಿಸುತ್ತೇವೆ. ಆದರೆ, ಕೆಲವೊಂದು ಬಾರಿ ಇದಕ್ಕೆ ವಿರುದ್ಧವಾಗಿ ನಾವು ನಡೆದುಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ ಕೆಲವು ಪರಿಸ್ಥಿತಿಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನವನ್ನು ಕೂಡ ಮುಜುಗರವಿಲ್ಲದೆ ಮಾಡಬೇಕಾಗುತ್ತದೆ. ಕೆಲವೊಂದು ಸನ್ನಿವೇಶವನ್ನು ಎದುರಿಸುತ್ತೇನೆ ಎಂದು ಮುಂದೆ ನಿಂತರೆ ನಮ್ಮ ಜೀವಕ್ಕೆ ಕುತ್ತು ಬರುವ ಅಪಾಯ ಇರುತ್ತದೆ. ಘನತೆ, ಗೌರವಕ್ಕೂ ಸಮಸ್ಯೆ ಉಂಟಾಗುವ ಸಂಭವ ಇರುತ್ತದೆ.

ಹಾಗಾದರೆ, ಎಂತಹ ಸನ್ನಿವೇಶಗಳಲ್ಲಿ ನಾವು ಜಾಗರೂಕರಾಗಿ ಇರಬೇಕು. ಯಾವುದರಿಂದ ತಪ್ಪಿಸಿಕೊಳ್ಳಬೇಕು ಎಂದು ಯೋಚಿಸುತ್ತಿದ್ದಿರಾ? ಆಚಾರ್ಯ ಚಾಣಕ್ಯ ಅಂಥ ಕೆಲವು ಸಂದರ್ಭಗಳನ್ನು ಗುರುತಿಸಿ ಸೂಚನೆ ನೀಡಿದ್ಧಾರೆ. ಚಾಣಕ್ಯ ನೀತಿಯಲ್ಲಿ ಯಾವ ಸನ್ನಿವೇಶವನ್ನು ನಾವು ತಪ್ಪಿಸಿಕೊಳ್ಳುವುದು ಒಳ್ಳೆಯದು ಎಂದು ಹೇಳಿದ್ದಾರೆ. ಅವು ಯಾವುವು ಎಂದು ಇಲ್ಲಿ ತಿಳಿಯಿರಿ.

  1. ಯಾವುದೇ ಕಡೆಯಲ್ಲಿ ಗುಂಪು ಘರ್ಷಣೆ, ಹಿಂಸಾಚಾರ, ಘಾತಕ ಕೃತ್ಯಗಳು ನಡೆಯುತ್ತಿದ್ದರೆ ಅಂಥಾ ಸ್ಥಳದಲ್ಲಿ ನಿಲ್ಲುವುದು ಒಳ್ಳೆಯದಲ್ಲ. ಅಂತಹ ಜಾಗದಲ್ಲಿ ಉಳಿಯುವುದರಿಂದ ಸಮಸ್ಯೆಗಳು ಉಂಟಾಗಬಹುದು. ಅಲ್ಲಿ ಗುಂಪು ಘರ್ಷಣೆ ನಡೆಯುತ್ತಿದ್ದರೆ ಆ ಗುಂಪಿನ ಜನರಿಗೆ ಯಾವ ವ್ಯತ್ಯಾಸವೂ ತಿಳಿಯದೆ, ಹಿಂಸೆ, ಹಲ್ಲೆಯೊಂದೇ ಉಳಿದು ನಮಗೂ ಹಾನಿ ಉಂಟಾಗಬಹುದು. ಅಪಾಯ ಎದುರಾಗಬಹುದು. ಹಾಗಾಗಿ, ಹಿಂಸಾಚಾರ ಆಗುವ ಸ್ಥಳದಲ್ಲಿ ಉಳಿಯದೇ ಇರುವುದು ಉತ್ತಮ.
  2. ನಿಮ್ಮ ಶತ್ರುವೇ ನಿಮ್ಮ ಮೇಲೆ ದಾಳಿ ನಡೆಸಿದರೂ ಒಂದು ಕ್ಷಣಕ್ಕೆ ನೀವು ತಪ್ಪಿಸಿಕೊಳ್ಳಲೇಬೇಕು. ಹಾಗೆ ತಪ್ಪಿಸಿಕೊಳ್ಳುವುದು ಒಳ್ಳೆಯದು. ವಿರೋಧಿಯೇ ಆಗಲಿ ಆತ ಯಾಕೆ ನಿಮ್ಮ ವಿರುದ್ಧ ತಿರುಗಿ ಬಿದ್ದಿದ್ದಾನೆ, ಯಾಕೆ ದಾಳಿ ಮಾಡಿದ್ದಾನೆ ಎಂದು ತಿಳಿಯಲು ನಿಮಗೆ ಸ್ವಲ್ಪ ಸಮಯವಾದರೂ ಬೇಕು. ಅದು ಬಿಟ್ಟು, ಧೈರ್ಯ ತೋರಲು ಹೋಗಿ ಜೀವ ಮತ್ತು ಜೀವನವನ್ನು ಅಪಾಯಕ್ಕೆ ಸಿಕ್ಕಿಹಾಕಿಸಿಕೊಳ್ಳುವುದು ಒಳ್ಳೆಯದಲ್ಲ.
  3. ಕ್ಷಾಮ ಅಥವಾ ಬರಗಾಲ ಇದ್ದಂತಹ ಕಡೆಯಲ್ಲಿ ಉಳಿಯುವುದು ಸರಿಯಲ್ಲ. ಅಂತಹ ಪ್ರದೇಶದಲ್ಲಿ ತುತ್ತು ತುತ್ತಿಗೂ ಹಾಹಾಕಾರ ಇರುತ್ತದೆ. ಹಾಗಿರುವಾಗ ಆ ಸ್ಥಳವನ್ನು ಆದಷ್ಟು ಬೇಗನೆ ಬಿಟ್ಟು ತೆರಳುವುದು ಒಳ್ಳೆಯದು. ಅಂತಹ ಪ್ರದೇಶದಲ್ಲಿ ದೀರ್ಘಕಾಲದವರೆಗೆ ಬಾಳಿ, ಬದುಕುವುದು ಕಷ್ಟವಾಗಬಹುದು. ಹಾಗಾಗಿ, ಕೂಡಲೇ ಬರಗಾಲ, ಕ್ಷಾಮ ಉಂಟಾಗಿರುವ ಸ್ಥಳವನ್ನು ಬಿಟ್ಟುಹೋಗಬೇಕು.
  4. ನಿಮ್ಮ ಬಳಿಗೆ ಯಾರೋ ಒಬ್ಬ ಅಪರಿಚಿತ ಅನುಮಾನಾಸ್ಪದ ವ್ಯಕ್ತಿ, ಗುಣನಡತೆ ಸರಿ ಇಲ್ಲದ ವ್ಯಕ್ತಿ, ಅಪರಾಧಿ ಈ ರೀತಿಯ ಜನರು ಬಂದು ನಿಂತರೆ ನೀವು ಸದ್ದಿಲ್ಲದೆ ಅಲ್ಲಿಂದ ಆಚೆ ಹೋಗಬೇಕು. ಅಂತಹ ಸ್ಥಳದಲ್ಲಿ ಮತ್ತೂ ಉಳಿದುಕೊಳ್ಳುವುದು, ಅವರೊಂದಿಗೆ ಕಾಲ ಕಳೆಯುವುದು ಅಪಾಯ. ಅದರಿಂದ ನಮ್ಮ ಘನತೆ, ಗೌರವಕ್ಕೂ ಕುಂದು ಉಂಟಾಗಬಹುದು. ಹಾಗಾಗಿ ಇಂತಹ ಸ್ಥಳಗಳಲ್ಲಿ ಹೆಚ್ಚು ಹೊತ್ತು ನಿಲ್ಲದಿರುವುದು ಒಳ್ಳೆಯದು.

ಇದನ್ನೂ ಓದಿ: Chanakya Niti: ಈ ಮೂರು ಗುಣಗಳು ಇರುವ ಹೆಂಡತಿ ಇದ್ದರೆ ಮನೆಗೆ ಒಳ್ಳೆಯದು

Lucky colour: ಜನ್ಮರಾಶಿಗೆ ಅನುಗುಣವಾಗಿ ಯಾರಿಗೆ ಯಾವುದು ಅದೃಷ್ಟದ ಬಣ್ಣ?

Published On - 7:56 pm, Sun, 30 May 21

ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ
ಧಗಧಗನೆ ಹೊತ್ತಿ ಉರಿದ ಚೀನಾದ ರೆಸ್ಟೋರೆಂಟ್; 22 ಜನ ಸಾವು
ಧಗಧಗನೆ ಹೊತ್ತಿ ಉರಿದ ಚೀನಾದ ರೆಸ್ಟೋರೆಂಟ್; 22 ಜನ ಸಾವು
ಉಗ್ರರ ದಾಳಿ: ಮಂಜುನಾಥ್​ ಕುಟುಂಬಕ್ಕೆ ಸಾಂತ್ವಾನ ಹೇಳಿದ 103 ವರ್ಷದ ಅಜ್ಜಿ
ಉಗ್ರರ ದಾಳಿ: ಮಂಜುನಾಥ್​ ಕುಟುಂಬಕ್ಕೆ ಸಾಂತ್ವಾನ ಹೇಳಿದ 103 ವರ್ಷದ ಅಜ್ಜಿ
ದರಿದ್ರ ದೇಶವಾದ ಪಾಕಿಸ್ತಾನದ ವಿರುದ್ಧ ಯುದ್ಧವಾಗಲೇಬೇಕು; ಎಂ.ಬಿ ಪಾಟೀಲ್
ದರಿದ್ರ ದೇಶವಾದ ಪಾಕಿಸ್ತಾನದ ವಿರುದ್ಧ ಯುದ್ಧವಾಗಲೇಬೇಕು; ಎಂ.ಬಿ ಪಾಟೀಲ್
ಹೇಳಿಕೆ ಮೂಲಕ ಮುತ್ಸದ್ದಿತನದ ಪರಿಚಯ ನೀಡಿದ ಮಾಜಿ ಪ್ರಧಾನಿ ದೇವೇಗೌಡ
ಹೇಳಿಕೆ ಮೂಲಕ ಮುತ್ಸದ್ದಿತನದ ಪರಿಚಯ ನೀಡಿದ ಮಾಜಿ ಪ್ರಧಾನಿ ದೇವೇಗೌಡ