AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ವರ್ಷದ ಮಕ್ಕಳಿಗೆ ತಿರುಪತಿ ತಿಮ್ಮಪ್ಪನ ವಿಶೇಷ ದರ್ಶನ ತುಂಬಾ ಸುಲಭ! ಆದರೆ ಷರತ್ತುಗಳು ಅನ್ವಯ.. ಸಂಪೂರ್ಣ ವಿವರ ನಿಮಗಾಗಿ

ಮಕ್ಕಳ ಜನನ ಪ್ರಮಾಣಪತ್ರ ಮತ್ತು ಪೋಷಕರ ಗುರುತಿನ ಚೀಟಿಯನ್ನು ಟಿಟಿಡಿ ಸಿಬ್ಬಂದಿ ಸುಪಥದ ಬಳಿ ಪರಿಶೀಲಿಸಿ ನಂತರ ನೇರವಾಗಿ ದರ್ಶನಕ್ಕೆ ಅವಕಾಶ ಮಾಡಿಕೊಡುತ್ತಾರೆ.

ಒಂದು ವರ್ಷದ ಮಕ್ಕಳಿಗೆ ತಿರುಪತಿ ತಿಮ್ಮಪ್ಪನ ವಿಶೇಷ ದರ್ಶನ ತುಂಬಾ ಸುಲಭ! ಆದರೆ ಷರತ್ತುಗಳು ಅನ್ವಯ.. ಸಂಪೂರ್ಣ ವಿವರ ನಿಮಗಾಗಿ
ಒಂದು ವರ್ಷದ ಮಕ್ಕಳಿಗೆ ತಿರುಪತಿ ತಿಮ್ಮಪ್ಪನ ವಿಶೇಷ ದರ್ಶನ ತುಂಬಾ ಸುಲಭ!
Follow us
ಸಾಧು ಶ್ರೀನಾಥ್​
|

Updated on: May 11, 2023 | 12:36 PM

ಕಲಿಯುಗದ ಆರಾಧ್ಯ ದೈವ ಶ್ರೀ ವೆಂಕಟೇಶ್ವರ ಸ್ವಾಮಿಯ ತವರು ತಿರುಮಲ ತಿರುಪತಿ ಕ್ಷೇತ್ರ (Tirumala Tirupati) ಸದಾ ಭಕ್ತರಿಂದ ತುಂಬಿ ತುಳುಕುತ್ತಿರುತ್ತದೆ. ತಿಮ್ಮಪ್ಪನ ದರ್ಶನಕ್ಕೆ ದೇಶ ವಿದೇಶಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು (Devotees) ಆಗಮಿಸುತ್ತಾರೆ. ಸರ್ವ ದರ್ಶನ, ದಿವ್ಯ ದರ್ಶನ, ಶ್ರೀವಾಣಿ ಟ್ರಸ್ಟ್ ದರ್ಶನ, ವಿಐಪಿ ಬ್ರೇಕ್ ದರ್ಶನ, ಶ್ರೀಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರಿಗೂ ಭಗವಂತನ ದರ್ಶನಕ್ಕೆ ರೂ. 300 ವಿಶೇಷ ಪ್ರವೇಶ ದರ್ಶನ ಪ್ರಾಪ್ತಿಯಾಗುತ್ತದೆ. ಸುಪಥ ದರ್ಶನಂನಂತಹ ಅನೇಕ ದರ್ಶನಗಳ ಮೂಲಕ ಭಗವಾನ್ ಸ್ವಾಮಿಯನ್ನು ಭೇಟಿ ಮಾಡಲು TTD (Tirumala Tirupati Devasthanams) ಭಕ್ತರನ್ನು ಶಕ್ತಗೊಳಿಸುತ್ತದೆ. ಸ್ವಾಮಿಯ ದರ್ಶನಕ್ಕೆ (Spiritual) ಬರುವ ಭಕ್ತರಿಗೆ ಉಚಿತ ದರ್ಶನ, ಅನ್ನಸಂತರ್ಪಣೆ, ಕುಡಿಯುವ ನೀರಿನ ವ್ಯವಸ್ಥೆ ಇರುತ್ತದೆ.

ಸ್ವಾಮಿಯ ದರ್ಶನಕ್ಕೆ ಬರುವ ವಯೋವೃದ್ಧರು, ದೈಹಿಕ ಹಾಗೂ ಮಾನಸಿಕ ಅಸ್ವಸ್ಥರು ಹಾಗೂ ಒಂದು ವರ್ಷದೊಳಗಿನ ಮಕ್ಕಳಿರುವ ಪಾಲಕರು ಗಂಟೆಗಟ್ಟಲೆ ಕಾದು ಕುಳಿತರೆ ನಾನಾ ತೊಂದರೆ ಅನುಭವಿಸಬೇಕಾಗಿದೆ. ಅವರ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿ – ಟಿಟಿಡಿ ದರ್ಶನದ ವಿಚಾರದಲ್ಲಿ ಆದ್ಯತೆ ನೀಡುತ್ತಿದೆ. ಒಂದು ವರ್ಷದೊಳಗಿನ ಮಕ್ಕಳಿಗೆ ಮತ್ತು ಅವರ ಪೋಷಕರಿಗೆ ಉಚಿತ ದರ್ಶನ ಸೇವೆ ಕಲ್ಪಿಸಿಕೊಡುತ್ತದೆ. ಟಿಟಿಡಿ ಈ ವಿಶೇಷ ದರ್ಶನ ನೀಡುತ್ತಿದೆ. ಹೀಗಾಗಿ ಒಂದು ವರ್ಷದೊಳಗಿನ ಮಕ್ಕಳಿರುವ ಪೋಷಕರು ಸ್ವಾಮಿಯ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ಕಾಯಬೇಕಾಗಿಲ್ಲ. ನೇರವಾಗಿ ದರ್ಶನಕ್ಕೆ ತೆರಳಬಹುದು. ಆದರೆ ಇಂತಹ ದರ್ಶನಕ್ಕೆ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅವು ಏನು ಅಂದರೆ…

ಸ್ವಾಮಿಯ ಉಚಿತ ದರ್ಶನಕ್ಕೆ ತೆರಳುವ ಒಂದು ವರ್ಷದೊಳಗಿನ ಮಕ್ಕಳ ಪೋಷಕರು ಮಗುವಿನ ಮೂಲ ಜನನ ಪ್ರಮಾಣ ಪತ್ರ ತರಬೇಕು. ಜನನ ಪ್ರಮಾಣಪತ್ರ ಇಲ್ಲದಿದ್ದರೆ.. ಮಗು ಡೆಲಿವರಿ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿಕೊಂಡ ಪ್ರಮಾಣಪತ್ರ ಸಲ್ಲಿಸಬೇಕು. ಮೂಲ ಪ್ರಮಾಣಪತ್ರಗಳನ್ನು ತೆಗೆದುಕೊಂಡು ಹೋಗಬೇಕು. ಹಾಗೆಯೇ.. ಪೋಷಕರ ಗುರುತಿನ ಚೀಟಿಗಳು (ಆಧಾರ್, ವೋಟರ್ ಐಡಿ, ಪ್ಯಾನ್ ನಂತಹ ಪ್ರಮಾಣ ಪತ್ರಗಳ ಅಗತ್ಯವಿರುತ್ತದೆ).

ಈ ವಿಶೇಷ ದರ್ಶನಕ್ಕಾಗಿ ಒಂದು ವರ್ಷದೊಳಗೆ ಮಗುವಿನೊಂದಿಗೆ ಪಾಲಕರಿಗೂ ಸಹ ಅವಕಾಶ ನೀಡಲಾಗುತ್ತದೆ. ಇದಲ್ಲದೆ.. 12 ವರ್ಷದೊಳಗಿನ ಬಾಲಕ- ಬಾಲಕಿಗೂ ಸಹ ಇಂತಹ ವಿಶೇಷ ಅವಕಾಶವಿದೆ. ಈ ದರ್ಶನಕ್ಕೆ ಭಕ್ತರು ಮುಂಗಡ ಕಾಯ್ದಿರಿಸಬೇಕಾಗಿಲ್ಲ. ಯಾವುದೇ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ. ಈ ದರ್ಶನಕ್ಕೆ ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ನೇರವಾಗಿ ಸುಪಥದ ಮೂಲಕ ಅನುಮತಿ ನೀಡಲಾಗುತ್ತದೆ.

ಮಕ್ಕಳ ಜನನ ಪ್ರಮಾಣಪತ್ರ ಮತ್ತು ಪೋಷಕರ ಗುರುತಿನ ಚೀಟಿಯನ್ನು ಟಿಟಿಡಿ ಸಿಬ್ಬಂದಿ ಸುಪಥದ ಬಳಿ ಪರಿಶೀಲಿಸಿ ನಂತರ ನೇರವಾಗಿ ದರ್ಶನಕ್ಕೆ ಅವಕಾಶ ಮಾಡಿಕೊಡುತ್ತಾರೆ. ಆದರೆ ಈ ದರ್ಶನಕ್ಕೆ ಹೋಗುವ ಪಾಲಕರು ಮತ್ತು ಮಕ್ಕಳು ಕೂಡ ಸಾಂಪ್ರದಾಯಿಕ ಬಟ್ಟೆಯಲ್ಲೇ ಹೋಗಬೇಕು.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಮದ್ವೆಯಾಗ್ತೀನಿ ಎಂದು ಕರೆದೊಯ್ದ..ಪ್ರೇಮಿಗಳ ಗೋವಾ ರಹಸ್ಯ ಬಿಚ್ಚಿಟ್ಟ ಆಯುಕ್ತ
ಮದ್ವೆಯಾಗ್ತೀನಿ ಎಂದು ಕರೆದೊಯ್ದ..ಪ್ರೇಮಿಗಳ ಗೋವಾ ರಹಸ್ಯ ಬಿಚ್ಚಿಟ್ಟ ಆಯುಕ್ತ
ಜೂನ್ 21ರಂದು ಕಾರ್ಯಕ್ರಮ, ಅಭಿನಂದನಾ ಗ್ರಂಥವೂ ಅಂದೇ ಬಿಡುಗಡೆ
ಜೂನ್ 21ರಂದು ಕಾರ್ಯಕ್ರಮ, ಅಭಿನಂದನಾ ಗ್ರಂಥವೂ ಅಂದೇ ಬಿಡುಗಡೆ
ರಶ್ಮಿಕಾ ಕೂಡ ಪ್ರಚಾರಕ್ಕೆ ಬರ್ತಾರೆ, ಆದರೆ ರಚಿತಾ ಬರಲಿಲ್ಲ: ನಾಗಶೇಖರ್ ಗರಂ
ರಶ್ಮಿಕಾ ಕೂಡ ಪ್ರಚಾರಕ್ಕೆ ಬರ್ತಾರೆ, ಆದರೆ ರಚಿತಾ ಬರಲಿಲ್ಲ: ನಾಗಶೇಖರ್ ಗರಂ
ಮುಂದಿನ ಅಸೆಂಬ್ಲಿ ಚುನಾವಣೆಯಲ್ಲೂ ಟಿಕೆಟ್ ಪಡೆಯುವ ವಿಶ್ವಾಸ ಪ್ರೀತಂ ಗೌಡಗೆ
ಮುಂದಿನ ಅಸೆಂಬ್ಲಿ ಚುನಾವಣೆಯಲ್ಲೂ ಟಿಕೆಟ್ ಪಡೆಯುವ ವಿಶ್ವಾಸ ಪ್ರೀತಂ ಗೌಡಗೆ
ಅದೃಷ್ಟವಶಾತ್ ಮರ ಉರುಳಿಬಿದ್ದಾಗ ಕಾರೊಳಗೆ ಯಾರೂ ಇರಲಿಲ್ಲ
ಅದೃಷ್ಟವಶಾತ್ ಮರ ಉರುಳಿಬಿದ್ದಾಗ ಕಾರೊಳಗೆ ಯಾರೂ ಇರಲಿಲ್ಲ
ಹಣ ಪಡೆದು ನಿರ್ಮಾಪಕಿಯ ಸತಾಯಿಸಿದರೇ ರಚಿತಾ ರಾಮ್, ವಿವರ ಇಲ್ಲಿದೆ
ಹಣ ಪಡೆದು ನಿರ್ಮಾಪಕಿಯ ಸತಾಯಿಸಿದರೇ ರಚಿತಾ ರಾಮ್, ವಿವರ ಇಲ್ಲಿದೆ
ನಂದಿನಿ ಉತ್ಪನ್ನಗಳ ಕಿಯಾಸ್ಕ್​ಗಳು 8 ನಿಲ್ದಾಣಗಳಲ್ಲಿ ಬರಲಿವೆ: ಶಿವಕುಮಾರ್
ನಂದಿನಿ ಉತ್ಪನ್ನಗಳ ಕಿಯಾಸ್ಕ್​ಗಳು 8 ನಿಲ್ದಾಣಗಳಲ್ಲಿ ಬರಲಿವೆ: ಶಿವಕುಮಾರ್
ಥಗ್ ಲೈಫ್ ರಿಲೀಸ್ ಆದರೆ ನಾವೇ ಟಿಕೆಟ್ ಖರೀದಿಸಿ ನೋಡ್ತಿವಿ: ಪ್ರವೀಣ್ ಶೆಟ್ಟಿ
ಥಗ್ ಲೈಫ್ ರಿಲೀಸ್ ಆದರೆ ನಾವೇ ಟಿಕೆಟ್ ಖರೀದಿಸಿ ನೋಡ್ತಿವಿ: ಪ್ರವೀಣ್ ಶೆಟ್ಟಿ
ಇರಾನ್‌ನಿಂದ 110 ಭಾರತದ ವಿದ್ಯಾರ್ಥಿಗಳಿರುವ ವಿಮಾನ ಇಂದು ರಾತ್ರಿ ದೆಹಲಿಗೆ
ಇರಾನ್‌ನಿಂದ 110 ಭಾರತದ ವಿದ್ಯಾರ್ಥಿಗಳಿರುವ ವಿಮಾನ ಇಂದು ರಾತ್ರಿ ದೆಹಲಿಗೆ
ಮಿನಿಸ್ಟರ್ ಜಮೀರ್ ಅಹ್ಮದ್ ಖಾನ್ ಸಾಹಬ್​ ಕೋ ಗುಸ್ಸಾ ಕ್ಯೋಂ ಆತಾ ಹೈ?
ಮಿನಿಸ್ಟರ್ ಜಮೀರ್ ಅಹ್ಮದ್ ಖಾನ್ ಸಾಹಬ್​ ಕೋ ಗುಸ್ಸಾ ಕ್ಯೋಂ ಆತಾ ಹೈ?