AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jyotirlinga Darshan: ಜ್ಯೋತಿರ್ಲಿಂಗ ದರ್ಶನದ ನಂತರ ಆರೋಗ್ಯದಲ್ಲಿ ವ್ಯತ್ಯಾಸವಾಗುವುದೇಕೆ? ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಕಾರಣ ಇಲ್ಲಿದೆ

ಜ್ಯೋತಿರ್ಲಿಂಗಗಳ ದರ್ಶನದ ನಂತರ ಅನೇಕ ಭಕ್ತರಿಗೆ ಇದ್ದಕ್ಕಿದ್ದಂತೆ ದೇಹ ಭಾರವಾಗುವುದು, ತಲೆನೋವು ಅಥವಾ ತೀವ್ರ ಆಯಾಸದ ಅನುಭವವಾಗುವುದು ಏಕೆ? ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಕುರಿತು ವ್ಯಾಪಕ ಚರ್ಚೆಗಳು ನಡೆಯುತ್ತಿದ್ದು, ಇದರ ಹಿಂದಿರುವ ಧಾರ್ಮಿಕ ನಂಬಿಕೆಗಳು ಹಾಗೂ ಪ್ರಾಯೋಗಿಕ ಮತ್ತು ವೈಜ್ಞಾನಿಕ ಸತ್ಯವೇನು ಎಂಬುದರ ವಿವರವನ್ನು ಇಲ್ಲಿ ತಿಳಿದುಕೊಳ್ಳಿ.

Jyotirlinga Darshan: ಜ್ಯೋತಿರ್ಲಿಂಗ ದರ್ಶನದ ನಂತರ ಆರೋಗ್ಯದಲ್ಲಿ ವ್ಯತ್ಯಾಸವಾಗುವುದೇಕೆ? ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಕಾರಣ ಇಲ್ಲಿದೆ
ಜ್ಯೋತಿರ್ಲಿಂಗ ದರ್ಶನದ ನಂತರ ಆರೋಗ್ಯದಲ್ಲಿ ವ್ಯತ್ಯಾಸImage Credit source: triptotemples
ಅಕ್ಷತಾ ವರ್ಕಾಡಿ
|

Updated on: Aug 01, 2026 | 1:16 PM

Share

ಸನಾತನ ಧರ್ಮದಲ್ಲಿ 12 ಜ್ಯೋತಿರ್ಲಿಂಗಗಳಿಗೆ ಅತ್ಯಂತ ಪವಿತ್ರ ಹಾಗೂ ವಿಶೇಷ ಮಹತ್ವವಿದೆ. ಇದೇ ಕಾರಣಕ್ಕಾಗಿ ವರ್ಷವಿಡೀ ಭಕ್ತರು ಮಧ್ಯಪ್ರದೇಶದ ಓಂಕಾರೇಶ್ವರ, ಆಂಧ್ರಪ್ರದೇಶದ ಮಲ್ಲಿಕಾರ್ಜುನ, ಮಹಾರಾಷ್ಟ್ರದ ತ್ರ್ಯಂಬಕೇಶ್ವರ, ಉತ್ತರ ಪ್ರದೇಶದ ಕಾಶಿ ವಿಶ್ವನಾಥ ಹಾಗೂ ಉಜ್ಜಯಿನಿಯ ಮಹಾಕಾಳೇಶ್ವರದಂತಹ ಪ್ರಸಿದ್ದ ಜ್ಯೋತಿರ್ಲಿಂಗಗಳ ದರ್ಶನಕ್ಕೆ ಉತ್ಸವದಿಂದ ಆಗಮಿಸುತ್ತಾರೆ.

ಆದರೆ, ಅನೇಕ ಭಕ್ತರಿಗೆ ದರ್ಶನದ ನಂತರ ಇದ್ದಕ್ಕಿದ್ದಂತೆ ದೇಹ ಭಾರವಾಗುವುದು, ತೀವ್ರ ಆಯಾಸ ಅಥವಾ ಆರೋಗ್ಯದಲ್ಲಿ ವ್ಯತ್ಯಾಸವಾದ ಅನುಭವವಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಕುರಿತು ವ್ಯಾಪಕ ಚರ್ಚೆಗಳು ನಡೆಯುತ್ತಿದ್ದು, ಇದರ ಹಿಂದಿರುವ ಧಾರ್ಮಿಕ ನಂಬಿಕೆಗಳು ಹಾಗೂ ಪ್ರಾಯೋಗಿಕ ಮತ್ತು ವೈಜ್ಞಾನಿಕ ಸತ್ಯವೇನು ಎಂಬುದರ ವಿವರ ಇಲ್ಲಿದೆ.

ಆಧ್ಯಾತ್ಮಿಕ ನಿರ್ವಿಶೀಕರಣ (Spiritual Detox):

ಜ್ಯೋತಿರ್ಲಿಂಗ ಕ್ಷೇತ್ರಗಳು ಅತ್ಯಂತ ಹೆಚ್ಚಿನ ಆಧ್ಯಾತ್ಮಿಕ ಶಕ್ತಿ ಮತ್ತು ಪ್ರಬಲವಾದ ಕಂಪನಗಳನ್ನು (Vibrations) ಹೊಂದಿರುತ್ತವೆ ಎಂದು ತಜ್ಞರು ಹೇಳುತ್ತಾರೆ. ಭಕ್ತರು ಈ ದೇವಾಲಯಗಳನ್ನು ಪ್ರವೇಶಿಸಿದಾಗ, ಅಲ್ಲಿನ ತೀವ್ರ ಸಕಾರಾತ್ಮಕ ಶಕ್ತಿಯು ದೇಹದ ಮೇಲಿನ ನಕಾರಾತ್ಮಕತೆಯನ್ನು ಹೊರಹಾಕಲು ಪ್ರೇರೇಪಿಸುತ್ತದೆ. ದೇಹದಲ್ಲಿ ದೀರ್ಘಕಾಲದಿಂದ ಸಂಗ್ರಹವಾಗಿದ್ದ ನಕಾರಾತ್ಮಕ ಆಲೋಚನೆಗಳು, ಒತ್ತಡ ಹಾಗೂ ನಕಾರಾತ್ಮಕ ಶಕ್ತಿಯು ಬಿಡುಗಡೆಯಾಗುವಾಗ (Cleanse) ತಾತ್ಕಾಲಿಕವಾಗಿ ತಲೆನೋವು, ಆಯಾಸ ಅಥವಾ ದೇಹ ಭಾರವಾದ ಅನುಭವವಾಗಬಹುದು. ಇದೊಂದು ರೀತಿಯ ಆಧ್ಯಾತ್ಮಿಕ ಶೋಧನೆಯಾಗಿದ್ದು, ಇದಕ್ಕೆ ಹೆದರುವ ಅಗತ್ಯವಿಲ್ಲ ಎಂದು ಆಧ್ಯಾತ್ಮಿಕವಾದಿಗಳು ತಿಳಿಸುತ್ತಾರೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಭಕ್ತಿ, ಧ್ಯಾನ ಮತ್ತು ಉಪವಾಸದ ಪರಿಣಾಮ:

ಧಾರ್ಮಿಕ ದೃಷ್ಟಿಕೋನದಲ್ಲಿ ಜ್ಯೋತಿರ್ಲಿಂಗ ಯಾತ್ರೆಯು ಒಂದು ಮಹತ್ವದ ತಪಸ್ಸಿದ್ದಂತೆ. ಭಕ್ತರು ದರ್ಶನಕ್ಕೂ ಮುನ್ನ ಉಪವಾಸ ವ್ರತ ಆಚರಿಸುವುದು, ಮೈಲಿಗಟ್ಟಲೆ ಬರಿಗಾಲಿನಲ್ಲಿ ನಡೆಯುವುದು ಹಾಗೂ ನಿರಂತರವಾಗಿ ದೇವರೆಡೆಗೆ ಮನಸ್ಸನ್ನು ಕೇಂದ್ರೀಕರಿಸಿ ಧ್ಯಾನಿಸುವುದನ್ನು ಮಾಡುತ್ತಾರೆ. ದರ್ಶನದ ಕ್ಷಣದಲ್ಲಿ ಭಕ್ತಿಯು ಉತ್ತುಂಗಕ್ಕೇರಿ, ತದನಂತರ ಭಾವನಾತ್ಮಕವಾಗಿ ಆಂತರಿಕ ಶಕ್ತಿಯು ಶಾಂತಸ್ಥಿತಿಗೆ ಮರಳುತ್ತದೆ. ಈ ಶಕ್ತಿಯ ಹಠಾತ್ ಸಮತೋಲನದಿಂದಾಗಿ ದೇಹವು ಹಗುರ ಅಥವಾ ತೀವ್ರವಾಗಿ ಸಡಿಲಗೊಂಡಂತಾಗುತ್ತದೆ. ಇದನ್ನು ಕೆಲವರು ದೌರ್ಬಲ್ಯ ಅಥವಾ ಅನಾರೋಗ್ಯವೆಂದು ತಪ್ಪಾಗಿ ಗ್ರಹಿಸುತ್ತಾರೆ.

ಆರೋಗ್ಯ ತಜ್ಞರು ಹಾಗೂ ವೈಜ್ಞಾನಿಕ ಕಾರಣಗಳು:

ವೈದ್ಯಕೀಯ ಹಾಗೂ ಆರೋಗ್ಯ ತಜ್ಞರ ಪ್ರಕಾರ, ಈ ಆಯಾಸಕ್ಕೆ ಸ್ಪಷ್ಟ ಪ್ರಾಯೋಗಿಕ ಕಾರಣಗಳಿವೆ: ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವುದು, ಪ್ರಯಾಣದ ಆಯಾಸ ಹಾಗೂ ಸರಿಯಾದ ಸಮಯಕ್ಕೆ ಆಹಾರ-ನಿದ್ರೆ ಸಿಗದಿರುವುದು ದೇಹವನ್ನು ಸಂಪೂರ್ಣವಾಗಿ ಬಳಲಿಸುತ್ತದೆ. ಇದಲ್ಲದೇ ಕೇದಾರನಾಥದಂತಹ ಅತ್ಯಂತ ಎತ್ತರದ ಹಿಮಾಲಯದ ಪ್ರದೇಶಗಳಲ್ಲಿರುವ ಜ್ಯೋತಿರ್ಲಿಂಗ ದರ್ಶನದ ವೇಳೆ ಗಾಳಿಯಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಿರುತ್ತದೆ. ಇದರಿಂದ ತಲೆತಿರುಗುವಿಕೆ ಮತ್ತು ವಾಂತಿ ಬರುವಂತಾಗುವುದು ಸಹಜ. ಜೊತೆಗೆ ಗರ್ಭಗುಡಿ ಹಾಗೂ ಮಂದಿರದ ಆವರಣದಲ್ಲಿರುವ ವಿಪರೀತ ಜನದಟ್ಟಣೆ, ಬಿಸಿಲು ಮತ್ತು ಆರ್ದ್ರತೆಯಿಂದಾಗಿ ಸಾಕಷ್ಟು ನೀರು ಕುಡಿಯದಿದ್ದರೆ ದೇಹ ನಿರ್ಜಲೀಕರಣಕ್ಕೆ (Dehydration) ಒಳಗಾಗಿ ತಕ್ಷಣಕ್ಕೆ ಅನಾರೋಗ್ಯ ಆವರಿಸುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ
ಬಾಗಲಕೋಟೆಯಲ್ಲಿ ಅಜಾನ್ ವಿವಾದ: ಸಿಡಿದೆದ್ದ ಬಿಜೆಪಿ, ಹಿಂದೂ ಸಂಘಟನೆಗಳು
ಬಾಗಲಕೋಟೆಯಲ್ಲಿ ಅಜಾನ್ ವಿವಾದ: ಸಿಡಿದೆದ್ದ ಬಿಜೆಪಿ, ಹಿಂದೂ ಸಂಘಟನೆಗಳು
ಭಾರತ-ಬಾಂಗ್ಲಾ ಗಡಿ ಭದ್ರಪಡಿಸದೆ ಬಂಗಾಳ ಭದ್ರವಾಗಲು ಸಾಧ್ಯವಿಲ್ಲ; ಅಮಿತ್ ಶಾ
ಭಾರತ-ಬಾಂಗ್ಲಾ ಗಡಿ ಭದ್ರಪಡಿಸದೆ ಬಂಗಾಳ ಭದ್ರವಾಗಲು ಸಾಧ್ಯವಿಲ್ಲ; ಅಮಿತ್ ಶಾ
ಮಠದಲ್ಲೇ ಅಪ್ರಾಪ್ತೆ ಮೇಲೆರಗಿ ಅಟ್ಟಹಾಸ: ಸ್ವಾಮೀಜಿ ಅರೆಸ್ಟ್
ಮಠದಲ್ಲೇ ಅಪ್ರಾಪ್ತೆ ಮೇಲೆರಗಿ ಅಟ್ಟಹಾಸ: ಸ್ವಾಮೀಜಿ ಅರೆಸ್ಟ್
ನೈಸರ್ಗಿಕವಾಗಿ ಬಾಳೆಕಾಯಿ ಹಣ್ಣು ಮಾಡುವ ವಿಧಾನ ಹೇಗೆ? ವಿಡಿಯೋ ನೋಡಿ
ನೈಸರ್ಗಿಕವಾಗಿ ಬಾಳೆಕಾಯಿ ಹಣ್ಣು ಮಾಡುವ ವಿಧಾನ ಹೇಗೆ? ವಿಡಿಯೋ ನೋಡಿ
ನಾಗೇಂದ್ರ ಮತ್ತಷ್ಟು ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ಸಿಬಿಐ ಪತ್ರ!
ನಾಗೇಂದ್ರ ಮತ್ತಷ್ಟು ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ಸಿಬಿಐ ಪತ್ರ!
ಹೇಗೆ ನಡೀತಿದೆ ‘ಟಾಕ್ಸಿಕ್’ ಕಟೌಟ್ ತಯಾರಿ? ವಿಡಿಯೋ ನೋಡಿ
ಹೇಗೆ ನಡೀತಿದೆ ‘ಟಾಕ್ಸಿಕ್’ ಕಟೌಟ್ ತಯಾರಿ? ವಿಡಿಯೋ ನೋಡಿ
2 ಕೋಟಿ ರೂ. ವೆಚ್ಚದಲ್ಲಿ 700 ವರ್ಷಗಳ ಪುರಾತನ ದೇಗುಲ ಜೀರ್ಣೋದ್ಧಾರ
2 ಕೋಟಿ ರೂ. ವೆಚ್ಚದಲ್ಲಿ 700 ವರ್ಷಗಳ ಪುರಾತನ ದೇಗುಲ ಜೀರ್ಣೋದ್ಧಾರ