Dream Astrology: ಕನಸಿನಲ್ಲಿ ಹಾವನ್ನು ನೋಡುವುದು ಮಂಗಳಕರವೇ ಅಥವಾ ಅಶುಭವೇ? ಈ ಕನಸು ಭವಿಷ್ಯ ನಿರ್ಧಾರ ಮಾಡುತ್ತದೆಯೇ?

ಪ್ರತಿಯೊಂದು ಕನಸಿಗೂ ವಿಭಿನ್ನ ಅರ್ಥವಿದೆ. ಅಂತೆಯೇ, ಶ್ರಾವಣ ಮಾಸದಲ್ಲಿ ನಿಮ್ಮ ಕನಸಿನಲ್ಲಿ ಹಾವುಗಳನ್ನು ನೋಡಿದರೆ, ಅದು ಹಣವನ್ನು ಪಡೆಯಲು ಸಂಬಂಧಿಸಿದ ಸೂಚನೆಗಳನ್ನು ನೀಡುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

Dream Astrology: ಕನಸಿನಲ್ಲಿ ಹಾವನ್ನು ನೋಡುವುದು ಮಂಗಳಕರವೇ ಅಥವಾ ಅಶುಭವೇ? ಈ ಕನಸು ಭವಿಷ್ಯ ನಿರ್ಧಾರ ಮಾಡುತ್ತದೆಯೇ?
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 05, 2023 | 9:57 AM

ಪ್ರತಿಯೊಬ್ಬ ವ್ಯಕ್ತಿಯು ಮಲಗಿದಾಗ ವಿವಿಧ ರೀತಿಯ ಕನಸುಗಳು ಬೀಳುತ್ತವೆ. ಈ ಕನಸುಗಳು ಖಂಡಿತವಾಗಿಯೂ ಹಲವು ಅರ್ಥವನ್ನು ಹೊಂದಿರುತ್ತದೆ. ಅದರಲ್ಲಿ ಕೆಲವು ಕನಸುಗಳನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ, ಅವು ಭವಿಷ್ಯದ ಘಟನೆಗಳತ್ತ ಬೊಟ್ಟು ಮಾಡುತ್ತವೆ. ಅದೇ ರೀತಿ ಹಿಂದೂ ಧರ್ಮದಲ್ಲಿ ಒಳ್ಳೆಯ ಹಾವನ್ನು ಪೂಜನೀಯ ಎಂದು ಪರಿಗಣಿಸಲಾಗುತ್ತದೆ. ಈ ಹಾವು ಶಿವನ ಕುತ್ತಿಗೆಯ ಸುತ್ತಲಿನ ಹಾರವು ಹೌದು. ಅದರಿಂದಾಗಿಯೇ ಶಿವನನ್ನು ಹಾವುಗಳ ದೇವರು ಎಂದೂ ಕರೆಯಲಾಗುತ್ತದೆ. ಹಾಗಾಗಿ ನಿಮ್ಮ ಕನಸಿನಲ್ಲಿ ಹಾವನ್ನು ನೋಡಿದರೆ, ಅದಕ್ಕೆ ವಿಶೇಷ ಮಹತ್ವ ಮತ್ತು ಅರ್ಥವಿದೆ. ಕನಸಿನ ವಿಜ್ಞಾನದ ಪ್ರಕಾರ, ಶ್ರಾವಣ ಮಾಸದಲ್ಲಿ ವಿವಿಧ ರೀತಿಯ ಹಾವಿನ ನೋಟವು ವಿಭಿನ್ನ ಅರ್ಥಗಳನ್ನು ಹೊಂದಿದೆ.

ಕನಸಿನಲ್ಲಿ ವಿನೋದದಲ್ಲಿರುವ ಹಾವನ್ನು ನೋಡಿದರೆ: ಒಬ್ಬ ವ್ಯಕ್ತಿಯು ಶ್ರಾವಣ ಮಾಸದಲ್ಲಿ (ಹಿಂದೂ ಕ್ಯಾಲೆಂಡರ್​​ನ ಐದನೇ ತಿಂಗಳು) ತನ್ನ ಕನಸಿನಲ್ಲಿ ಹಾವು ಹೆಡೆಯನ್ನು ಎತ್ತುವುದನ್ನು ನೋಡಿದರೆ, ಅಂತಹ ಕನಸು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ರೀತಿಯ ಕನಸು ನಿಮಗೆ ಶೀಘ್ರದಲ್ಲೇ ಕೆಲವು ದೊಡ್ಡ ವಿತ್ತೀಯ ಲಾಭವನ್ನು ಪಡೆಯುವ ಸೂಚನೆಯಾಗಿರಬಹುದು ಅಥವಾ ಇದರೊಂದಿಗೆ, ಆಸ್ತಿಯಲ್ಲಿ ಅನೇಕ ರೀತಿಯ ಲಾಭಗಳನ್ನು ಪಡೆಯುವ ಸಾಧ್ಯತೆಯೂ ಇದೆ ಎಂಬುದನ್ನು ಸೂಚಿಸುವ ಕನಸಾಗಿರಬಹುದು.

ಹಳದಿ ಹಾವು ಕನಸಿನಲ್ಲಿ ಬಂದರೆ: ಶ್ರಾವಣ ಮಾಸದಲ್ಲಿ, ರಾತ್ರಿ ಸಮಯದಲ್ಲಿ ನಿಮ್ಮ ಕನಸಿನಲ್ಲಿ ಹಳದಿ ಬಣ್ಣದ ಹಾವು ಕಂಡರೆ, ಕೆಲಸ ಅಥವಾ ವ್ಯವಹಾರಕ್ಕಾಗಿ ಮತ್ತೊಂದು ನಗರಕ್ಕೆ ಹೋಗಬೇಕಾಗಬಹುದು ಎಂಬುದನ್ನು ನಿಮಗೆ ತೋರ್ಪಡಿಸಲಿದೆ.

ಕನಸಿನಲ್ಲಿ ಹಸಿರು ಹಾವನ್ನು ನೋಡಿದರೆ: ಶ್ರಾವಣ ಮಾಸದಲ್ಲಿ ಒಬ್ಬ ವ್ಯಕ್ತಿಯು ತನ್ನ ಕನಸಿನಲ್ಲಿ ಹಸಿರು ಹಾವನ್ನು ನೋಡಿದರೆ, ನಿಮ್ಮ ಜೀವನದಲ್ಲಿ ಉತ್ತಮ ಅವಕಾಶಗಳನ್ನು ಪಡೆಯಲಿದ್ದೀರಿ ಎಂದರ್ಥ. ಈ ರೀತಿಯ ಕನಸನ್ನು ಶ್ರಾವಣ ಮಾಸದಲ್ಲಿ ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: Dream Astrology: ಕನಸಿನಲ್ಲಿ ಈ ಸಂಕೇತಗಳು ಕಂಡುಬಂದರೆ ಮದುವೆ ನಿಶ್ಚಯವಾಗುತ್ತದೆ, ಶ್ರೀಮಂತ ವರನೇ ಸಿಗುತ್ತಾನಂತೆ!

ಬಿಳಿ ಹಾವನ್ನು ಕನಸಿನಲ್ಲಿ ನೋಡಿದರೆ: ಕನಸಿನ ಭವಿಷ್ಯದ ಪ್ರಕಾರ, ಕನಸಿನಲ್ಲಿ ಬಿಳಿ ಬಣ್ಣದ ಹಾವನ್ನು ನೋಡುವುದು ತುಂಬಾ ಶುಭವೆಂದು ಪರಿಗಣಿಸಲಾಗಿದೆ. ಬಿಳಿ ಬಣ್ಣದ ಹಾವನ್ನು ನೋಡುವುದು ನೀವು ಶೀಘ್ರದಲ್ಲೇ ಸಾಕಷ್ಟು ಹಣವನ್ನು ಪಡೆಯಲಿದ್ದೀರಿ ಎಂಬುದನ್ನು ಸೂಚಿಸುತ್ತದೆ. ಜೊತೆಗೆ ನೀವು ಉದ್ಯೋಗ ಮತ್ತು ವ್ಯವಹಾರದಲ್ಲಿ ಸಾಕಷ್ಟು ಲಾಭವನ್ನು ಪಡೆಯಬಹುದು.

ಹಾವನ್ನು ಹಿಡಿಯುವ ಕನಸು ಬಿದ್ದರೆ: ಅನೇಕ ಬಾರಿ ಒಬ್ಬ ವ್ಯಕ್ತಿಯು ಕನಸಿನಲ್ಲಿ ಹಾವನ್ನು ಹಿಡಿಯುವುದನ್ನು ಕನಸನ್ನು ಕಾಣುತ್ತಾನೆ. ನಾವು ಅಂತಹ ಕನಸು ಕಂಡಾಗ ಹೆದರುತ್ತೇವೆ. ಆದರೆ ಕನಸಿನ ಭವಿಷ್ಯದ ಪ್ರಕಾರ, ಅಂತಹ ಕನಸನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಕನಸು ಮುಂಬರುವ ಸಮಯದಲ್ಲಿ ನೀವು ಅತೀ ಹೆಚ್ಚು ಹಣವನ್ನು ಪಡೆಯುತ್ತೀರಿ. ಇದರೊಂದಿಗೆ, ನೀವು ಜೀವನದ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯಲಿದ್ದೀರಿ ಎಂಬುದನ್ನು ನಿಮಗೆ ತಿಳಿಸುವ ಮಾರ್ಗವಾಗಿದೆ.

ಈ ಲೇಖನದಲ್ಲಿ ಒದಗಿಸಲಾದ ಮಾಹಿತಿ ಸತ್ಯಾಸತ್ಯತೆ ಅಥವಾ ವಿಶ್ವಾಸಾರ್ಹತೆಯನ್ನು ಖಾತರಿಪಡಿಸಲಾಗುವುದಿಲ್ಲ

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಜಾ ಸುದ್ದಿ
ಹಾಲಿನ ದರ ಏರಿಕೆ ಹಣ ರೈತರಿಗೆ ಹೋಗೋದು ಬಿಜೆಪಿ ನಾಯಕರಿಗೆ ಇಷ್ಟವಿಲ್ಲ:ಡಿಕೆಶಿ
ಹಾಲಿನ ದರ ಏರಿಕೆ ಹಣ ರೈತರಿಗೆ ಹೋಗೋದು ಬಿಜೆಪಿ ನಾಯಕರಿಗೆ ಇಷ್ಟವಿಲ್ಲ:ಡಿಕೆಶಿ
ಕೆಂಪೇಗೌಡ ಜಯಂತಿ; ನಮ್ಮ ಹೆಸರಿಲ್ಲದಿರುವುದು ದೊಡ್ಡ ವಿಷಯವಲ್ಲ: ಕುಮಾರಸ್ವಾಮಿ
ಕೆಂಪೇಗೌಡ ಜಯಂತಿ; ನಮ್ಮ ಹೆಸರಿಲ್ಲದಿರುವುದು ದೊಡ್ಡ ವಿಷಯವಲ್ಲ: ಕುಮಾರಸ್ವಾಮಿ
ಮುಸ್ಲಿಂ ವೋಟು ವನ್-ಸೈಡೆಡ್ ಆಗಿ ಸಾಗರ್ ಸಿಕ್ಕಿದ್ದು ಅಂತ ಹೇಳಿದ್ದು: ಜಮೀರ್
ಮುಸ್ಲಿಂ ವೋಟು ವನ್-ಸೈಡೆಡ್ ಆಗಿ ಸಾಗರ್ ಸಿಕ್ಕಿದ್ದು ಅಂತ ಹೇಳಿದ್ದು: ಜಮೀರ್
ಉಡುಪಿ: ಬಿರುಸುಗೊಂಡ ಮುಂಗಾರು ಮಳೆ; ಕಾಪು, ಮಲ್ಪೆ ಕಡಲ ಕಿನಾರೆ ಪ್ರಕ್ಷುಬ್ಧ
ಉಡುಪಿ: ಬಿರುಸುಗೊಂಡ ಮುಂಗಾರು ಮಳೆ; ಕಾಪು, ಮಲ್ಪೆ ಕಡಲ ಕಿನಾರೆ ಪ್ರಕ್ಷುಬ್ಧ
ಸಂಸತ್ ಭವನದಲ್ಲಿ ಪರಸ್ಪರ ಕೈ ಕುಲುಕಿದ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ
ಸಂಸತ್ ಭವನದಲ್ಲಿ ಪರಸ್ಪರ ಕೈ ಕುಲುಕಿದ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ
‘ದರ್ಶನ್ ಇರುವ ಫ್ಲೋರ್​ನಲ್ಲಿ ಹೆಣ್ಣು ಮಕ್ಕಳು ಇರುವಂತಿರಲಿಲ್ಲ’
‘ದರ್ಶನ್ ಇರುವ ಫ್ಲೋರ್​ನಲ್ಲಿ ಹೆಣ್ಣು ಮಕ್ಕಳು ಇರುವಂತಿರಲಿಲ್ಲ’
ವಿರೋಧ ಪಕ್ಷದ ನಾಯಕ ಆರ್ ಅಶೋಕರನ್ನು ತರಾಟೆಗೆ ತೆಗೆದುಕೊಂಡ ಹೆಚ್ ವಿಶ್ವನಾಥ್
ವಿರೋಧ ಪಕ್ಷದ ನಾಯಕ ಆರ್ ಅಶೋಕರನ್ನು ತರಾಟೆಗೆ ತೆಗೆದುಕೊಂಡ ಹೆಚ್ ವಿಶ್ವನಾಥ್
ರೈತರ ಮಕ್ಕಳಿಗೆ ಕನ್ಯೆ ಹುಡುಕಿ ಕೊಡಿ; ಜಿಲ್ಲಾಧಿಕಾರಿಗೆ ಮನವಿ ಮಾಡಿದ ಯುವಕ
ರೈತರ ಮಕ್ಕಳಿಗೆ ಕನ್ಯೆ ಹುಡುಕಿ ಕೊಡಿ; ಜಿಲ್ಲಾಧಿಕಾರಿಗೆ ಮನವಿ ಮಾಡಿದ ಯುವಕ
ಹಾಲಿನ ದರ ಹೆಚ್ಚಳ ಮಾಡಿದ್ದು ಸರ್ಕಾರವಲ್ಲ, ಕೆಎಂಎಫ್ ಎಂದಿದ್ದ ಸಿಎಂ ಉಲ್ಟಾ!
ಹಾಲಿನ ದರ ಹೆಚ್ಚಳ ಮಾಡಿದ್ದು ಸರ್ಕಾರವಲ್ಲ, ಕೆಎಂಎಫ್ ಎಂದಿದ್ದ ಸಿಎಂ ಉಲ್ಟಾ!
ಚುನಾಯಿತ ಜನಪ್ರತಿನಿಧಿ ಎಲ್ಲ ಸಮುದಾಯಳಿಗಾಗಿ ದುಡಿಯಬೇಕು: ಪ್ರಿಯಾಂಕ್ ಖರ್ಗೆ
ಚುನಾಯಿತ ಜನಪ್ರತಿನಿಧಿ ಎಲ್ಲ ಸಮುದಾಯಳಿಗಾಗಿ ದುಡಿಯಬೇಕು: ಪ್ರಿಯಾಂಕ್ ಖರ್ಗೆ