
ದೇಶಾದ್ಯಂತ ಗಣೇಶ ಚತುರ್ಥಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ದೇವಾಲಯಗಳು ಮತ್ತು ಪೂಜಾ ಮಂಟಪಗಳಿಂದ ಹಿಡಿದು ತಮ್ಮ ಮನೆಗಳಲ್ಲಿ ಭಕ್ತರು ಗಣಪತಿಯ ವಿಗ್ರಹವನ್ನು ಸ್ಥಾಪಿಸಿ ಗರಿಷ್ಟ 10 ದಿನಗಳ ಕಾಲ ಪೂಜಿಸುತ್ತಾರೆ. ಗಣೇಶ ಮಹೋತ್ಸವದ ಸಮಯದಲ್ಲಿ, ವಾತಾವರಣವು ಎಲ್ಲೆಡೆ ಭಕ್ತಿಯಿಂದ ಕೂಡಿರುತ್ತದೆ. ಪಂಚಾಂಗದ ಪ್ರಕಾರ, ಗಣೇಶ ಉತ್ಸವವು ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ದಶಿಯಿಂದ ಪ್ರಾರಂಭವಾಗಿ ಅನಂತ ಚತುರ್ದಶಿಯ ದಿನದಂದು ಕೊನೆಗೊಳ್ಳುತ್ತದೆ. 10 ದಿನಗಳ ಕಾಲ ಭಕ್ತಿಯಿಂದ ಗಣಪತಿಯನ್ನು ಪೂಜಿಸಿದ ನಂತರ, ವಿಗ್ರಹವನ್ನು ಕೆರೆಯಲ್ಲಿ ವಿಸರ್ಜಿಸಲಾಗುತ್ತದೆ. ಈ ವರ್ಷ ಗಣೇಶ ಚತುರ್ಥಿ ಯಾವಾಗ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಗಣೇಶ ಚತುರ್ಥಿಯಂದು ಭಕ್ತರಿಗೆ ಪ್ರತಿಷ್ಠಾಪನೆ ಮತ್ತು ಪೂಜೆಗೆ ಸುಮಾರು ಎರಡೂವರೆ ಗಂಟೆಗಳ ಕಾಲಾವಕಾಶ ಸಿಗುತ್ತದೆ. ಆಗಸ್ಟ್ 27 ರಂದು ಬೆಳಿಗ್ಗೆ 11:05 ರಿಂದ ಮಧ್ಯಾಹ್ನ 1:40 ರವರೆಗಿನ ಸಮಯವು ಗಣೇಶ ಪ್ರತಿಷ್ಠಾಪನೆ ಮತ್ತು ಪೂಜೆಗೆ ಶುಭವಾಗಿರುತ್ತದೆ.
ಇದನ್ನೂ ಓದಿ: ದೇವರಿಗೆ ಆರತಿ ಮಾಡುವಾಗ ಕಣ್ಣು ಮುಚ್ಚಬಾರದು ಎಂದು ಹೇಳುವುದೇಕೆ? ಕಾರಣ ಇಲ್ಲಿದೆ
ಈ ವರ್ಷ ಗಣೇಶ ಚತುರ್ಥಿಯಂದು ಅನೇಕ ಶುಭ ಯೋಗಗಳು ರೂಪುಗೊಳ್ಳುತ್ತಿವೆ. ಈ ವರ್ಷ ಗಣೇಶ ಚತುರ್ಥಿ ಬುಧವಾರದಿಂದ ಪ್ರಾರಂಭವಾಗುತ್ತಿದೆ, ಇದು ತುಂಬಾ ಶುಭವಾಗಿದೆ, ಏಕೆಂದರೆ ಬುಧವಾರ ಮತ್ತು ಚತುರ್ಥಿ ತಿಥಿ ಎರಡೂ ಗಣಪತಿ ಪೂಜೆಗೆ ಮೀಸಲಾಗಿವೆ. ಅಲ್ಲದೆ, ಆಗಸ್ಟ್ 27 ರಂದು ಗಣೇಶ ಚತುರ್ಥಿಯಂದು ನಾಲ್ಕು ಶುಭ ಯೋಗಗಳು ರೂಪುಗೊಳ್ಳುತ್ತಿವೆ. ಈ ದಿನ, ಶುಭ ಯೋಗ, ಶುಕ್ಲ ಯೋಗ, ಸರ್ವಾರ್ಥ ಸಿದ್ಧಿ ಯೋಗ ಮತ್ತು ರವಿ ಯೋಗದ ಸಂಯೋಜನೆ ಇರುತ್ತದೆ. ಇದರ ಜೊತೆಗೆ, ಹಸ್ತ ನಕ್ಷತ್ರ ಮತ್ತು ಚಿತ್ರ ನಕ್ಷತ್ರವೂ ಇರುತ್ತದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:32 pm, Wed, 6 August 25