Sign In

By signing in or creating an account, you agree with Associated Broadcasting Company's Terms & Conditions and Privacy Policy.

Garuda Purana: ಪತ್ನಿಯನ್ನು ಹಿಂಸಿಸುವ, ಅವಮಾನಿಸುವ ಪತಿಗೆ ಏನು ಶಿಕ್ಷೆ? ಗರುಡ ಪುರಾಣದ ಹೇಳುವುದೇನು?

ಗರುಡ ಪುರಾಣವು ಪತಿ-ಪತ್ನಿಯರ ನಡುವಿನ ಪವಿತ್ರ ಸಂಬಂಧವನ್ನು ವಿವರಿಸುತ್ತದೆ. ಪತ್ನಿಯನ್ನು ದೈಹಿಕ ಅಥವಾ ಮಾನಸಿಕವಾಗಿ ಹಿಂಸಿಸುವುದು, ಅವಮಾನಿಸುವುದು, ಅಥವಾ ಅವಳಿಗೆ ಮೋಸ ಮಾಡುವುದು ರೌರವ, ಕುಂಭಿಕಾ ನರಕಗಳಿಗೆ ಕಾರಣವಾಗುತ್ತದೆ ಎಂದು ಪುರಾಣ ಹೇಳುತ್ತದೆ. ಮನುಸ್ಮೃತಿಯ ಪ್ರಕಾರ, ಪತ್ನಿಗೆ ತೊಂದರೆ ನೀಡುವ ಪುರುಷನು ಈ ಜನ್ಮದಲ್ಲಿ ಮತ್ತು ಮುಂದಿನ ಜನ್ಮದಲ್ಲಿಯೂ ಶಿಕ್ಷೆ ಅನುಭವಿಸುತ್ತಾನೆ.

Garuda Purana: ಪತ್ನಿಯನ್ನು ಹಿಂಸಿಸುವ, ಅವಮಾನಿಸುವ ಪತಿಗೆ ಏನು ಶಿಕ್ಷೆ? ಗರುಡ ಪುರಾಣದ ಹೇಳುವುದೇನು?
Garuda Purana
Follow us
ಅಕ್ಷತಾ ವರ್ಕಾಡಿ
|

Updated on: Apr 09, 2025 | 9:58 AM

ಹಿಂದೂ ಧರ್ಮದಲ್ಲಿ ಗಂಡ ಹೆಂಡತಿಯ ನಡುವಿನ ಸಂಬಂಧವನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗಿದೆ. ಅದರಂತೆ ಗರುಡ ಪುರಾಣ(Garuda Purana) ದಲ್ಲಿ ವೈವಾಹಿಕ ಜೀವನಕ್ಕೆ ಸಂಬಂಧಿಸಿದ ಕೆಲವು ನಿಯಮಗಳನ್ನು ನೀಡಲಾಗಿದೆ. ಅದೇ ಸಮಯದಲ್ಲಿ, ಗಂಡನು ತನ್ನ ಹೆಂಡತಿಯೊಂದಿಗೆ ಹೇಗೆ ವರ್ತಿಸಬೇಕು ಮತ್ತು ಹೇಗೆ ವರ್ತಿಸಬಾರದು ಎಂಬುದನ್ನೂ ಕೂಡ ವಿವರಿಸಲಾಗಿದೆ.

ದೈಹಿಕ ಮತ್ತು ಮಾನಸಿಕ ನೋವು:

ಗರುಡ ಪುರಾಣದ ಏಳನೇ ಅಧ್ಯಾಯದ ಪ್ರಕಾರ, ಗಂಡನು ತನ್ನ ಹೆಂಡತಿಯನ್ನು ದೈಹಿಕವಾಗಿ ಅಥವಾ ಮಾನಸಿಕವಾಗಿ ಹಿಂಸಿಸಿದರೆ, ಮರಣದ ನಂತರ ಅವನನ್ನು ‘ರೌರವ ನರಕ’ಕ್ಕೆ ಕಳುಹಿಸಲಾಗುತ್ತದೆ. ರೌರವ ನರಕದಲ್ಲಿ ರುರು ಎಂಬ ಭಯಾನಕ ಸರ್ಪ ವಾಸಿಸುತ್ತದೆ. ಅದು ನಿರಂತರವಾಗಿ ಪಾಪಿಗಳನ್ನು ಕಚ್ಚುತ್ತದೆ. ಮನು ಸ್ಮೃತಿಯ ಪ್ರಕಾರ, ತನ್ನ ಹೆಂಡತಿಗೆ ತೊಂದರೆ ನೀಡುವ ಪುರುಷನು ತನ್ನ ಮುಂದಿನ ಜನ್ಮದಲ್ಲಿಯೂ ಸಹ ಕಷ್ಟವನ್ನು ಅನುಭವಿಸುತ್ತಾನೆ ಎಂದು ಹೇಳಲಾಗಿದೆ.

ಹೆಂಡತಿಗೆ ಮೋಸ ಮಾಡುವ ಪತಿಗೆ ಏನು ಶಿಕ್ಷೆ?

ಗರುಡ ಪುರಾಣದ 10 ನೇ ಶ್ಲೋಕದ ಪ್ರಕಾರ ತನ್ನ ಹೆಂಡತಿಗೆ ಮೋಸ ಮಾಡುವ ಪತಿ, ತನ್ನ ಹೆಂಡತಿಯ ಹೊರತಾಗಿ ಇತರ ಸ್ತ್ರೀಯರೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಯನ್ನು ಸಾವಿನ ನಂತರ ಕುಂಭಿಕಾ ನರಕಕ್ಕೆ ಎಸೆಯಲಾಗುತ್ತದೆ. ಅಲ್ಲಿ, ಯಮನ ರಾಕ್ಷಸರು ಆತ್ಮವನ್ನು ಕುದಿಯುವ ಎಣ್ಣೆಯಲ್ಲಿ ಎಸೆದು ಭಯಂಕರವಾಗಿ ಹಿಂಸಿಸಲಾಗುತ್ತದೆ.

ಇದನ್ನೂ ಓದಿ: ಮನೆಯಲ್ಲಿ ಗಿಳಿ ಸಾಕಿದ್ದೀರಾ ಅಥವಾ ಸಾಕುವ ಪ್ಲ್ಯಾನ್ ಇದ್ಯಾ? ಹಾಗಿದ್ರೆ ಈ ವಿಷ್ಯ ತಿಳಿದಿರಲಿ

ಹೆಂಡತಿಯನ್ನು ನಿರಂತರವಾಗಿ ಅವಮಾನಿಸುವುದು:

ತನ್ನ ಹೆಂಡತಿಯನ್ನು ನಿರಂತರವಾಗಿ ಅವಮಾನಿಸುವ ಗಂಡನಿಗೆ, ಮಹಾಭಾರತದ ಅನುಶಾಸನಿಕ ಪರ್ವದ 88 ನೇ ಅಧ್ಯಾಯದಲ್ಲಿ ತನ್ನ ಹೆಂಡತಿಯನ್ನು ಅವಮಾನಿಸುವ ಪುರುಷನು ಸಾವಿನ ನಂತರವೂ ತನ್ನ ಮುಂದಿನ ಜನ್ಮದಲ್ಲಿ ಬಳಲುತ್ತಾನೆ ಎಂದು ಬರೆಯಲಾಗಿದೆ. ಇದರೊಂದಿಗೆ, ಮನುಸ್ಮೃತಿಯ ಪ್ರಕಾರ, ಮಹಿಳೆಯನ್ನು ಅವಮಾನಿಸುವ ವ್ಯಕ್ತಿಯ ಜೀವನವು ನರಕವಾಗುತ್ತದೆ ಎಂದು ಹೇಳಲಾಗಿದೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್