AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bhoo Varahaswamy, Kallahalli: ಸ್ವಂತ ಮನೆ ಕಟ್ಟಬೇಕು ಅನ್ನೋ ಅಸೆ ನೆರವೇರಿಸುವ ಭೂ ವರಾಹ ಸ್ವಾಮಿ

ವರಾಹ ಮೂರ್ತಿಯ ಕಾಲಿನ ಮೇಲೆ ಭೂ ದೇವಿಯು ಆಸೀನಳಾಗಿದ್ದಾಳೆ. ಸುಮಾರು 14 ಅಡಿ ಎತ್ತರದ ಕಪ್ಪು ಸಾಲಿಗ್ರಾಮ ಶಿಲೆಯಲ್ಲಿ ಕಡಿದಿರುವ ಈ ವಿಗ್ರಹವು ನೋಡಲು ರಮಣೀಯವಾಗಿ ತೋರುತ್ತದೆ. ಈ ಸ್ಥಳಕ್ಕೆ ವಿಶೇಷ ಪೌರಾಣಿಕ ಮಹತ್ವ ಇದೆ.

Bhoo Varahaswamy, Kallahalli: ಸ್ವಂತ ಮನೆ ಕಟ್ಟಬೇಕು ಅನ್ನೋ ಅಸೆ ನೆರವೇರಿಸುವ ಭೂ ವರಾಹ ಸ್ವಾಮಿ
ಕಲ್ಲಹಳ್ಳಿಯ ಭೂ ವರಾಹ ಸ್ವಾಮಿ
TV9 Web
| Updated By: ಸಾಧು ಶ್ರೀನಾಥ್​|

Updated on: Jan 06, 2023 | 6:06 AM

Share

ಸ್ವಂತ ಮನೆ ಕಟ್ಟಬೇಕು ಎನ್ನುವುದು ಪ್ರತಿಯೊಬ್ಬರ ಜೀವನದ ಕನಸು ಆಗಿರುತ್ತದೆ. ಅನೇಕ ಜನರು ಅನೇಕ ಪ್ರಯತ್ನಗಳನ್ನು ಮಾಡಿದರೂ ಸಹ ಮನೆ ಕಟ್ಟಿಸುವ ಕನಸು ಮಾತ್ರ ಕನಸಾಗಿಯೇ ಇರುತ್ತದೆ. ಕೆಲವರ ಬಳಿ ಎಷ್ಟೇ ಹಣ ಇದ್ದರೂ ಕೂಡಾ ಅವರು ತಮಗೆ ಇಷ್ಟ ಬಂದ ಹಾಗೇ ಒಂದು ಸ್ವಂತ ಮನೆಯನ್ನು ಕಟ್ಟಿಕೊಳ್ಳಲು ಆಗದೇ ಒದ್ದಾಡುತ್ತಾ ಇರುತ್ತಾರೆ. ಆದರೆ ಇಂತಹ ಸಮಸ್ಯೆಯ ಪರಿಹಾರಕ್ಕಾಗಿಯೇ ಇಲ್ಲಿ ಇಂದು ದೇವಾಲಯವಿದೆ. ಇಲ್ಲಿ ನೆಲೆಸಿರುವ ದೇವರು ಸ್ವಂತ ಮನೆ ಕಟ್ಟಿಸುವ ಕನಸನ್ನು ನನಸು ಮಾಡುವರು ಎನ್ನುವುದು ಕೆಲವರ ಅಚಲ ನಂಬಿಕೆ (Spiritual). ಈ ವಿಶಿಷ್ಟ ದೇವಾಲಯ ಇರುವುದು ಮಂಡ್ಯ (Mandya) ಜಿಲ್ಲೆಯಲ್ಲಿ ಕೆಆರ್ ಪೇಟೆ (KR Pet) ತಾಲೂಕಿನಿಂದ 18 ಕಿಲೋಮೀಟರ್ ದೂರದಲ್ಲಿರುವ ಕಲ್ಲಹಳ್ಳಿಯ ಹೇಮಾವತಿ ನದಿ ತೀರದಲ್ಲಿರುವ ಭೂ ವರಾಹಸ್ವಾಮಿ ದೇವಾಲಯ (Bhoo Varahaswamy Temple -Kallahalli).

ಇಲ್ಲಿನ ವಿಶೇಷ ಎಂದರೆ ವರಾಹ ಮೂರ್ತಿಯ ಕಾಲಿನ ಮೇಲೆ ಭೂ ದೇವಿಯು ಆಸೀನಳಾಗಿದ್ದಾಳೆ. ಈ ಕಾರಣದಿಂದಾಗಿ ಈ ಮೂರ್ತಿಗೆ ಭೂ ವರಾಹ ಮೂರ್ತಿ ಎಂದು ಕರೆಯಲಾಗುತ್ತದೆ. ಸುಮಾರು 14 ಅಡಿ ಎತ್ತರದ ಕಪ್ಪು ಸಾಲಿಗ್ರಾಮ ಶಿಲೆಯಲ್ಲಿ ಕಡಿದಿರುವ ಈ ವಿಗ್ರಹವು ನೋಡಲು ರಮಣೀಯವಾಗಿ ತೋರುತ್ತದೆ. ಈ ಸ್ಥಳಕ್ಕೆ ವಿಶೇಷ ಪೌರಾಣಿಕ ಮಹತ್ವ ಇದೆ.

ಹಿರಣ್ಯಾಕ್ಷನನ್ನು ಕೊಂದ ವರಾಹ ರೂಪದ ವಿಷ್ಣು ಇದೇ ಸ್ಥಳದಲ್ಲಿ ತನ್ನ ಕೋಪವನ್ನು ಶಮನ ಗೊಳಿಸಿಕೊಂಡರು ಎಂಬ ನಂಬಿಕೆ ಇದೆ. ನಂತರ ಗೌತಮ ಮುನಿಗಳು ಇಲ್ಲಿ ವರಾಹ ಮೂರ್ತಿಯನ್ನು ಸಾಲಿಗ್ರಾಮ ಶಿಲೆಯಲ್ಲಿ ಸ್ಥಾಪಿಸಿ ಪೂಜಿಸಿದರು ಎಂಬ ಪ್ರತೀತಿ ಕೂಡಾ ಇದೆ. ಋಷಿಮುನಿಗಳು ಪ್ರಾರ್ಥಿಸಿ ಪೂಜಿಸುತ್ತಿದ್ದ ಈ ಮೂರ್ತಿಯು ಕಾಲ ಕ್ರಮೇಣ ಭೂಗರ್ಭದಲ್ಲಿ ಹುದುಗಿ ಹೋಗುತ್ತದೆ.

13 ನೆ ಶತಮಾನದಲ್ಲಿ ಹೊಯ್ಸಳರ ದೊರೆ ಮೂರನೇ ವೀರ ಬಲ್ಲಾಳನು ಈ ಕಾಡಿನಲ್ಲಿ ಬೇಟೆ ಆಡಲು ಬಂದಾಗ ದಾರಿ ತಪ್ಪುತ್ತಾನೆ. ನಂತರ ಒಂದು ದೊಡ್ಡ ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಾ ಇದ್ದಾಗ ಇಂದು ಬೇಟೆ ನಾಯಿ ಒಂದು ಮೊಲವನ್ನು ಬೆನ್ನಟ್ಟುವ ದೃಶ್ಯವನ್ನು ಕಾಣುತ್ತಾನೆ. ಈ ದೃಶ್ಯವನ್ನು ಕಂಡ ರಾಜನಿಗೆ ಈ ಸ್ಥಳದಲ್ಲಿ ಯಾವುದೋ ದಿವ್ಯ ಶಕ್ತಿ ಇರಬಹುದು ಎಂದು ಭಾಸವಾಗಿ ಇಡೀ ಪ್ರದೇಶವನ್ನು ಹುಡುಕುತ್ತಾನೆ. ಆಗ ಭೂಮಿಯೊಳಗೆ ಹುದುಗಿ ಹೋದ ಈ ವಿಗ್ರಹ ಆತನಿಗೆ ಕಂಡುಬರುತ್ತದೆ. ಆಗ ರಾಜನು ಈ ದೇವರಿಗೆ ಪೂಜೆಯನ್ನು ಸಲ್ಲಿಸಿ ದೇವಾಲಯವನ್ನು ಕೂಡಾ ನಿರ್ಮಿಸುತ್ತಾನೆ.

ಈ ಭೂ ವರಾಹ ಸ್ವಾಮಿಗೆ ಹರಕೆಯನ್ನು ಹೊತ್ತು ಭಕ್ತಿ ಶ್ರದ್ಧೆಯಿಂದ ಈಡೇರಿಸಿದರೆ ಭುವಿಗೆ ಸಂಬಂಧಿಸಿದ ಯಾವುದೇ ವಿವಾದ ಆದರೂ ಕೂಡಾ ಬಹುಬೇಗ ಇತ್ಯರ್ಥ ಆಗುತ್ತದೆ. ಇಲ್ಲಿ ಮರಳು ಮತ್ತು ಇಟ್ಟಿಗೆಯನ್ನು ಪೂಜೆ ಮಾಡಿಸಿ ಅದನ್ನೇ ಮನೇ ಕಟ್ಟಲು ಬಳಸಿದಲ್ಲಿ ಮನೇ ಕಟ್ಟುವ ಕಾರ್ಯ ಶುಭಕರವಾಗಿ ನೆರವೇರುವುದು ಎಂದು ಹಾಗೂ ಆ ಮನೆಗಳಲ್ಲಿ ವಾಸಿಸುವ ಜನರಿಗೂ ಕೂಡಾ ಸುಖ ಶಾಂತಿ ನೆಮ್ಮದಿ ದೊರೆಯುವುದು ಎಂದು ಭಕ್ತರಲ್ಲಿ ಅಚಲ ನಂಬಿಕೆ ಇದೆ. ಹಾಗಾಗಿ ಅನೇಕ ಭಕ್ತರು ಇಟ್ಟಿಗೆಯನ್ನು ಪೂಜೆ ಮಾಡಿಸಿಕೊಂಡು ಹೋಗುತ್ತಾರೆ.

ಶಿಥಿಲಾವಸ್ಥೆಯಲ್ಲಿರುವ ಈ ದೇವಾಲಯವನ್ನು ಇತ್ತೀಚೆಗಷ್ಟೇ ಜೀರ್ಣೋದ್ಧಾರ ಮಾಡಲಾಗಿದೆ. ಇದಕ್ಕೆ ಕಾರಣ ಇದೇ ಭೂ ವರಾಹ ಸ್ವಾಮಿ ಎನ್ನಬಹುದು. ಕೆಲವು ವರ್ಷಗಳ ಹಿಂದೆ ಮುಂಬೈ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉದ್ಯಮಿ ಒಬ್ಬರ ಕನಸಲ್ಲಿ ಬಂದೂ ತಾನು ನೆಲೆಸಿರುವ ಕಲ್ಲಹಳ್ಳಿಗೆ ಬಂದು ದೇವಾಯಲವನ್ನು ಜೀರ್ಣೋದ್ಧಾರ ಮಾಡುವಂತೆ ಹೇಳುತ್ತಾರೆ. ಕುತೂಹಲದಿಂದ ಆ ಉದ್ಯಮಿ ಇಲ್ಲಿ ಬಂದು ನೋಡಿದಾಗ ಆಳೆತ್ತರದ ಭೂ ವರಾಹ ಸ್ವಾಮಿ ಮೂರ್ತಿಯನ್ನು ನೋಡಿ ಪರೀಕ್ಷಿಸಿ ತಾವೇ ಮುಂದೆ ನಿಂತು ಜೀರ್ಣೋದ್ಧಾರ ಮಾಡುತ್ತಾರೆ. (ಲೇಖನ: ಆನಂದ ಸಾಗರ)

ಮತ್ತಷ್ಟು ಧಾರ್ಮಿಕ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!