AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dussehra in Sri Lanka 2024: ರಾವಣನ ತವರು ಶ್ರೀಲಂಕಾದಲ್ಲಿ ದಸರಾ ಹಬ್ಬ ಹೇಗೆ ಜರುಗುತ್ತದೆ ಗೊತ್ತಾ?

Dussehra in Sri Lanka 2024: ದಸರಾ ಹಬ್ಬವನ್ನು ಭಾರತದಾದ್ಯಂತ ಮಾತ್ರವಲ್ಲದೆ ಪ್ರಪಂಚದಾದ್ಯಂತ ಅನೇಕ ಸ್ಥಳಗಳಲ್ಲಿ ಆಚರಿಸಲಾಗುತ್ತದೆ. ಈ ದಿನ ರಾಮನು ಲಂಕಾದ ರಾಜ ರಾವಣನನ್ನು ಕೊಂದನು. ದುಷ್ಟರ ವಿರುದ್ಧ ಒಳಿತಿನ ವಿಜಯದ ಸಂಕೇತವಾಗಿಯೂ ದಸರಾವನ್ನು ಆಚರಿಸಲಾಗುತ್ತದೆ. ಆದರೆ ಭಾರತದಲ್ಲಿ ಮಾತ್ರವಲ್ಲದೆ ರಾವಣನ ತವರು ಶ್ರೀಲಂಕಾದಲ್ಲಿಯೂ ದಸರಾ ಆಚರಣೆಯನ್ನು ಆಚರಿಸಲಾಗುತ್ತದೆ.

Dussehra in Sri Lanka  2024: ರಾವಣನ ತವರು ಶ್ರೀಲಂಕಾದಲ್ಲಿ ದಸರಾ ಹಬ್ಬ ಹೇಗೆ ಜರುಗುತ್ತದೆ ಗೊತ್ತಾ?
ಶ್ರೀಲಂಕಾದಲ್ಲಿ ದಸರಾ ಹಬ್ಬ ಹೇಗೆ ಜರುಗುತ್ತದೆ ಗೊತ್ತಾ?
ಸಾಧು ಶ್ರೀನಾಥ್​
|

Updated on:Oct 12, 2024 | 4:28 PM

Share

Dussehra in Sri Lanka 2024: ದಸರಾ ಹಬ್ಬವನ್ನು ದೇಶಾದ್ಯಂತ ಮಾತ್ರವಲ್ಲದೆ ಪ್ರಪಂಚದಾದ್ಯಂತ ಅನೇಕ ಸ್ಥಳಗಳಲ್ಲಿ ಆಚರಿಸಲಾಗುತ್ತದೆ. ಈ ದಿನ ರಾಮನು ಲಂಕಾದ ರಾಜ ರಾವಣನನ್ನು ಕೊಂದನು. ದುಷ್ಟರ ವಿರುದ್ಧ ಒಳಿತಿನ ವಿಜಯದ ಸಂಕೇತವಾಗಿಯೂ ದಸರಾವನ್ನು ಆಚರಿಸಲಾಗುತ್ತದೆ. ಈ ಹಬ್ಬದಂದು ಮೇಘನಾಥ ಮತ್ತು ಕುಂಭಕರ್ಣನ ಪ್ರತಿಕೃತಿಗಳನ್ನು ಸುಡಲಾಗುತ್ತದೆ. ಆದರೆ ಭಾರತದಲ್ಲಿ ಮಾತ್ರವಲ್ಲದೆ ರಾವಣನ ತವರು ಶ್ರೀಲಂಕಾದಲ್ಲಿಯೂ ದಸರಾ ಆಚರಣೆಯನ್ನು ಆಚರಿಸಲಾಗುತ್ತದೆ.

ಶ್ರೀಲಂಕಾದಲ್ಲಿ ದಸರಾ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಶ್ರೀಲಂಕಾದಲ್ಲಿ ಅನೇಕ ಸೀತಾದೇವಿ ದೇವಾಲಯಗಳಿವೆ. ದಸರಾ ದಿನದಂದು ಅಪಾರ ಸಂಖ್ಯೆಯ ಜನರು ಈ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ದಸರಾದಂದು ಶ್ರೀಲಂಕಾಕ್ಕೆ ಭೇಟಿ ನೀಡುವುದು ಉತ್ತಮ ಅನುಭವ. ಭಾರತದಲ್ಲಿ ದಸರಾದಂದು ರಾವಣನ ಪ್ರತಿಕೃತಿಗಳನ್ನು ಸುಡಲಾಗುತ್ತದೆ. ಹಾಗಾದರೆ ಶ್ರೀಲಂಕಾದಲ್ಲಿ ದಸರಾದಂದು ಜನರು ಏನು ಮಾಡುತ್ತಾರೆ? ನೆರೆಯ ದೇಶದಲ್ಲಿ ದಸರಾವನ್ನು ಹೇಗೆ ಆಚರಿಸುತ್ತಾರೆ ಎಂದು ತಿಳಿಯೋಣ..

ದಸರಾವನ್ನು ಹೇಗೆ ಆಚರಿಸಲಾಗುತ್ತದೆ ಭಾರತದಲ್ಲಿರುವಂತೆ ಶ್ರೀಲಂಕಾದಲ್ಲಿಯೂ ದಸರಾವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಜನರು ಪರಸ್ಪರ ಭೇಟಿಯಾಗುತ್ತಾರೆ. ದೇವರನ್ನು ಪೂಜಿಸಲಾಗುತ್ತದೆ. ಭಕ್ತಿಗೀತೆಗಳನ್ನು ಕೇಳುತ್ತಾ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಆದರೆ ದಸರಾ ದಿನದಂದು ಶ್ರೀಲಂಕಾದಲ್ಲಿ ರಾವಣ ದಹನವಾಗುವುದಿಲ್ಲ. ಶ್ರೀಲಂಕಾದಲ್ಲಿ ಜನರು ರಾವಣನ ಪ್ರತಿಕೃತಿಯನ್ನು ಸುಡುವ ಬದಲು ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಮಾಡುತ್ತಾರೆ. ಇಲ್ಲಿ ಜನರು ದೇವಸ್ಥಾನಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಶ್ರೀಲಂಕಾದಲ್ಲಿ ದಸರಾ ಹಬ್ಬ ನಾಳೆ ಭಾನುವಾರ ಅಕ್ಟೊಬರ್ 13, 2024 ರಂದು ಜರುಗುತ್ತದೆ. (Muniswaram Temple, Puttalam ಕೆಳಗಿನ ಚಿತ್ರ)

ಎಲ್ಲಿ ಆಚರಿಸಲಾಗುತ್ತದೆ? ಶ್ರೀ ಆಂಜನೇಯ ಸ್ವಾಮಿ ದೇವಾಲಯ: ಶ್ರೀಲಂಕಾದಲ್ಲಿ ರಾಮನ ಭಕ್ತ ಹನುಮಂತನ ದೇವಾಲಯವೂ ಇದೆ. ಈ ದೇವಾಲಯವು ಕೊಲಂಬೊದಿಂದ 45 ನಿಮಿಷಗಳ ದೂರದಲ್ಲಿದೆ. ಇಲ್ಲಿ ನೀವು ಪಂಚಮುಖಿ ಹನುಮಾನ್ ವಿಗ್ರಹವನ್ನು ನೋಡಬಹುದು. ದಸರಾ ದಿನ ಇಲ್ಲಿ ಜನಜಂಗುಳಿ ಇರುತ್ತದೆ.

ಶ್ರೀ ಭಕ್ತ ಹನುಮಾನ್ ದೇವಸ್ಥಾನ, ನುವಾರ ಎಲಿಯಾ

ಸೀತಾ ಅಮ್ಮನ್ ದೇವಸ್ಥಾನ: ಇದು ರಾವಣ ಸೀತಾ ದೇವಿಯನ್ನು ಅಪಹರಿಸಿ, ಇರಿಸಿದ್ದ ಸ್ಥಳವಾಗಿದೆ. ಈ ದೇವಾಲಯದ ಇತಿಹಾಸವು ಸುಮಾರು 5,000 ವರ್ಷಗಳಷ್ಟು ಹಳೆಯದು ಎಂದು ನಂಬಲಾಗಿದೆ. ಸೀತಾ ಅಮ್ಮನ್ ದೇವಾಲಯವು ನುವಾರಾ ಎಲಿಯಾದಿಂದ ಕೇವಲ 5 ಕಿಮೀ ದೂರದಲ್ಲಿದೆ.

ದಿವುರುಂಪೋಲ ದೇವಾಲಯ: ಈ ದೇವಾಲಯವನ್ನು ಹಿಂದೂ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಸೀತೆ ಅಗ್ನಿಪರೀಕ್ಷೆಗೆ ಒಳಗಾದ ಸ್ಥಳ ಎಂಬ ವಿಶೇಷ ಸ್ಥಾನ ಇದಕ್ಕಿದೆ. ಇಲ್ಲಿಯೂ ದಸರ ಆಚರಿಸಲಾಗುತ್ತದೆ. ಈ ದೇವಾಲಯವು ಸೀತಾ ಎಲಿಯದಿಂದ 15 ಕಿ.ಮೀ ದೂರದಲ್ಲಿದೆ. ಇಲ್ಲಿ ಸೀತಾ ಮಾತೆಯ ಅಗ್ನಿಪರೀಕ್ಷೆ ನಡೆಯಿತು ಎಂದು ಹೇಳಲಾಗುತ್ತದೆ. ಸೀತಾ ದೇವಿಯು ರಾವಣನ ಸೆರೆಯಿಂದ ಅವಳನ್ನು ಮುಕ್ತಗೊಳಿಸಿದ ನಂತರ ಬೆಂಕಿಗೆ ಹಾರಿ ತನ್ನ ಪರಿಶುದ್ಧತೆಯನ್ನು ಸಾಬೀತುಪಡಿಸಿದಳು ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)

Published On - 4:21 pm, Sat, 12 October 24

ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ
‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ