AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mother’s Day 2024: ನಿಮ್ಮ ಅಮ್ಮನಲ್ಲಿ ರಾಮಾಯಣದಲ್ಲಿ ಬರುವ ತಾಯಂದಿರ ಈ ಗುಣ ಇದ್ದೆ ಇರುತ್ತೆ ಒಮ್ಮೆ ಗಮನಿಸಿ

ನಮ್ಮ ಸಂಸ್ಕೃತಿಯಲ್ಲಿ ತಾಯಿಗೆ ದೇವಿಯ ಸ್ಥಾನಮಾನವಿದೆ. ತಾಯಿ ನಮ್ಮ ಜೀವನದಲ್ಲಿ ಬರುವ ಮೊದಲ ಶಿಕ್ಷಕಿ ಜೊತೆಗೆ ಸ್ಫೂರ್ತಿಯ ಮೂಲ. ಅವಳು ನಮಗೆ ಜೀವನದ ಬಗ್ಗೆ ಪ್ರಮುಖ ಪಾಠಗಳನ್ನು ಕಲಿಸುತ್ತಾಳೆ. ಅದರಂತೆ ರಾಮಾಯಣ ಕಾಲದ ಕೆಲವು ಧೈರ್ಯಶಾಲಿ ತಾಯಂದಿರ ಬಗ್ಗೆ ತಿಳಿದುಕೊಳ್ಳಬೇಕಿದೆ. ಅವರ ನಿಷ್ಠೆ, ತಾಳ್ಮೆ ಎಲ್ಲವೂ ನಮಗೆ ಮಾದರಿಯಾಗಲಿದೆ.

Mother’s Day 2024: ನಿಮ್ಮ ಅಮ್ಮನಲ್ಲಿ ರಾಮಾಯಣದಲ್ಲಿ ಬರುವ ತಾಯಂದಿರ ಈ ಗುಣ ಇದ್ದೆ ಇರುತ್ತೆ ಒಮ್ಮೆ ಗಮನಿಸಿ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on: May 10, 2024 | 5:51 PM

Share

ಜೀವನದಲ್ಲಿ ತಾಯಿಗಿಂತ ಮಿಗಿಲಾದ ದೇವರಿಲ್ಲ. ಆಕೆ ಪ್ರೀತಿ, ಭರವಸೆ, ಸ್ಫೂರ್ತಿ, ಸಹಾನುಭೂತಿ, ತ್ಯಾಗ, ಧೈರ್ಯ, ಜ್ಞಾನ ಮತ್ತು ಶಿಕ್ಷಣದ ಸಂಕೇತ. ಹಾಗಾಗಿಯೇ ತಾಯಿ ತನ್ನ ಮಕ್ಕಳನ್ನು ಯಾವುದೇ ತಾರತಮ್ಯವಿಲ್ಲದೆ ಪ್ರೀತಿಸುತ್ತಾಳೆ. ಒಂಬತ್ತು ತಿಂಗಳು ಕಾಲ ಗರ್ಭದಲ್ಲಿ ಪೋಷಿಸುತ್ತಾಳೆ ಜೀವನದುದ್ದಕ್ಕೂ ಅವರನ್ನು ರಕ್ಷಿಸುತ್ತಾಳೆ. ಇನ್ನು ತಾಯಿಯ ಮಹತ್ವವನ್ನು ಧಾರ್ಮಿಕ ಗ್ರಂಥಗಳಲ್ಲಿಯೂ ವಿವರಿಸಿರುವುದನ್ನು ನೀವು ಕಾಣಬಹುದು. ತಾಯಂದಿರ ದಿನಾಚರಣೆಯ ಹೊಸ್ತಿಲಲ್ಲಿರುವಾಗ, ರಾಮಾಯಣ ಕಾಲದಲ್ಲಿ ಇದ್ದಂತಹ ಅತ್ಯಂತ ಧೈರ್ಯಶಾಲಿ ಮತ್ತು ಶಕ್ತಿಶಾಲಿ ತಾಯಂದಿರ ಬಗ್ಗೆ ತಿಳಿದುಕೊಳ್ಳೋಣ. ಅವರ ಗುಣಗಳು ನಮಗೆ ದಾರಿದೀಪವಾಗಬಹುದು.

ರಾಮಾಯಣ ಕಾಲದಲ್ಲಿದ್ದ ತಾಯಂದಿರು

ರಾಮಾಯಣ ಕಾಲದಲ್ಲಿ ಅನೇಕ ಮಹಾನ್ ತಾಯಂದಿರು ಇದ್ದರು ಎಂಬುದು ನಿಮಗೂ ತಿಳಿದಿರಬಹುದು. ಅವರು ತಮ್ಮ ಧೈರ್ಯ, ಶಕ್ತಿ ಮತ್ತು ಮಾತೃ ಪ್ರೇಮದ ಜೊತೆಯಲ್ಲಿ ಅನೇಕ ಅದ್ಭುತ ಕೆಲಸಗಳನ್ನು ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

ತಾಯಿ ಕೌಸಲ್ಯ

ತಾಯಿ ಕೌಸಲ್ಯ ಭಗವಾನ್ ಶ್ರೀ ರಾಮನ ತಾಯಿ. ಮರ್ಯಾದಾ ಪುರುಷೋತ್ತಮ ಶ್ರೀ ರಾಮನಿಗೆ ಜನ್ಮ ನೀಡಿದ್ದು ಮಾತ್ರವಲ್ಲ ಅವನು ರಾಜ್ಯವನ್ನು ತೊರೆದು ಕಾಡಿಗೆ ಹೊರಟಾಗ ಆಕೆ ಅದಕ್ಕೆ ಸಮ್ಮತಿಸಿ ತ್ಯಾಗ ಮತ್ತು ನಿಷ್ಠೆಗೆ ಹೆಸರುವಾಸಿಯಾದವಳು. ತನ್ನ ಮಗನ ಮೇಲೆ ಅಪಾರವಾದ ಪ್ರೀತಿ ಇದ್ದರೂ ಕೂಡ ಅವನ ನಡೆಯನ್ನು ಗೌರವಿಸಿದ್ದಳು. ತನ್ನ ಮಗನಿಗಿಲ್ಲದ ರಾಜ ಸೌಕರ್ಯ ತನಗೂ ಬೇಡ ಎಂದು ತ್ಯಜಿಸಿದ್ದಳು.

ತಾಯಿ ಸೀತಾ

ರಾಮಾಯಣದ ಪ್ರಮುಖ ಪಾತ್ರಗಳಲ್ಲಿ ಒಂದಾದ, ಮರ್ಯಾದಾ ಪುರುಷೋತ್ತಮ ಭಗವಾನ್ ರಾಮನ ಪತ್ನಿ ಸೀತಾ, ತಾಯಿ ಪ್ರೀತಿಗೆ ಅತ್ಯಂತ ಸುಂದರ ಉದಾಹರಣೆ. ಸೀತೆ ಲವ ಮತ್ತು ಕುಶ ಎಂಬ ಇಬ್ಬರು ಗಂಡು ಮಕ್ಕಳಿಗೆ ಜನ್ಮ ನೀಡಿದ ಬಳಿಕ ಗಂಡ ಮತ್ತು ಕುಟುಂಬದವರು ಇಲ್ಲದೆಯೇ ಅವರನ್ನು ಬೆಳೆಸಿದಳು. ಆಕೆಯ ಬಗ್ಗೆ ಯಾರೇ ಏನೇ ಹೇಳಿದರೂ ಅದಕ್ಕೆ ಕಿವಿಗೊಡದೆ ಜೀವನ ನಡೆಸಿದಳು.

ಇದನ್ನೂ ಓದಿ: ಸಂಬಳ ಇಲ್ಲ, ರಜೆ ಇಲ್ಲ, ನಮಗಾಗಿ ದುಡಿಯುವ ಅಮ್ಮನ ಆರೋಗ್ಯದ ಕಾಳಜಿ​​ ಬೇಕಲ್ವ, ಹೀಗೆ ಮಾಡಿ

ತಾಯಿ ಸುಮಿತ್ರಾ

ತಾಯಿ ಸುಮಿತ್ರಾಳ ಪ್ರೀತಿ, ತ್ಯಾಗ ಮತ್ತು ತಾಳ್ಮೆ ಪ್ರತಿಯೊಬ್ಬ ಮಹಿಳೆಯೂ ರೂಢಿಸಿಕೊಳ್ಳುವಂತದ್ದು. ಆಕೆಯ ಮಗ ಲಕ್ಷ್ಮಣ ತನ್ನ ಸಹೋದರನ ಮೇಲಿರುವ ಅಚಲವಾದ ಪ್ರೀತಿ ಮತ್ತು ಭಕ್ತಿಯಿಂದಾಗಿ, ರಾಮನ ಜೊತೆ ವನವಾಸಕ್ಕೆ ಹೋದ. ಆದರೆ ಮಗನ ನಿರ್ಧಾರವನ್ನು ಆಕೆ ಸ್ವೀಕರಿಸಿದಳು. ಅಷ್ಟು ಕಷ್ಟವಿದ್ದರೂ ತನ್ನ ಮಗನನ್ನು ಆಕೆ ತಡೆಯಲಿಲ್ಲ.

ಮಾತಾ ಮಂಡೋದರಿ

ತಾಯಿ ಮಂಡೋದರಿ ಯಾವಾಗಲೂ ಸತ್ಯ ಮತ್ತು ನೀತಿಯ ಮಾರ್ಗದಲ್ಲಿ ನಡೆದವಳು. ಅವಳು ಯಾವಾಗಲೂ ಸೀತಾ ಮಾತೆಯ ಒಳಿತನ್ನು ಬಯಸಿದಳು, ಈ ಕಾರಣದಿಂದಾಗಿ ಸೀತಾ ದೇವಿಯ ತಾಯಿ ಮಂಡೋದರಿಯನ್ನು ಪುರಾಣಗಳಲ್ಲಿ ಉಲ್ಲೇಖಿಸಲಾಗುತ್ತದೆ.

ಇವರೆಲ್ಲರೂ ನಮಗೆ ಕಥೆಯ ಪಾತ್ರಗಳಾಗಿ ಕಂಡುಬಂದಿರಬಹುದು ಆದರೆ ಅವರು ತಮ್ಮ ಕರ್ತವ್ಯಗಳನ್ನು ನಿಭಾಯಿಸಿದ ರೀತಿ ನಮಗೆಲ್ಲಾ ಮಾದರಿಯಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು