AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Temple Travel: ಬೆಟ್ಟ, ಗುಡ್ಡದಂತಹ ರಮ್ಯ ಮನೋಹರ ಪ್ರದೇಶಗಳಲ್ಲಿ ನೆಲೆ ನಿಂತ ಶಕ್ತಿ ದೇವತೆಗಳ ಭವ್ಯ ಮಂದಿರಗಳು

ಪರ್ವತದ ಶ್ರೇಣಿಯಂತಹ ಎತ್ತರದ ಪ್ರದೇಶಗಳಲ್ಲಿ ಪೂಜಿಸಲ್ಪಡುತ್ತಿರುವ ಶಕ್ತಿ ಶಾಲಿ ದೇವರ ದೇವಸ್ಥಾನಗಳ ಪರಿಚಯವನ್ನು ಇಲ್ಲಿ ಮಾಡಿಕೊಡುವ ಪ್ರಯತ್ನ ಮಾಡಿದ್ದೇವೆ. ಸುತ್ತಲೂ ಅರಣ್ಯ, ಹಚ್ಚ ಹಸಿರಿನ ರಾಶಿ ಟ್ರಾವೆಲ್ ಪ್ರಿಯರಿಗೆ ಇಷ್ಟವಾಗುವ ಹಾಗೂ ಭಕ್ತರಿಗೆ ಆಧ್ಯಾತ್ಮದತ್ತ ಮತ್ತಷ್ಟು ಸೆಳೆಯುವ ಪುಣ್ಯ ಕ್ಷೇತ್ರಗಳ ಪಟ್ಟಿ ಇಲ್ಲಿದೆ. ಭಾರತದಲ್ಲಿ ಇಂತಹ ಅನೇಕ ದೇವಾಲಯಗಳಿವೆ, ಅಲ್ಲಿ ಹೆಣ್ಣು ದೇವತೆಗಳನ್ನು ಹೆಚ್ಚಾಗಿ ಪೂಜಿಸಲಾಗುತ್ತದೆ. ಗುಹೆಗಳು, ಬೆಟ್ಟಗಳು ಮತ್ತು ದಟ್ಟವಾದ ಕಾಡುಗಳಲ್ಲಿ ನೆಲೆಗೊಂಡಿರುವ ಈ ದೇವಾಲಯಗಳು ಹೆಚ್ಚು ಪೂಜನೀಯ.

TV9 Web
| Updated By: preethi shettigar|

Updated on:Dec 11, 2021 | 7:38 AM

Share
ಸಪ್ತಶೃಂಗಿ ದೇವಿ(Saptashrungi Temple): ಈ ದೇವಸ್ಥಾನವು ನಾಸಿಕ್‌ನಲ್ಲಿದೆ. ಸಪ್ತಶೃಂಗಿ ತಾಯಿಯ ಆಶೀರ್ವಾದ ಪಡೆಯಲು ಇಲ್ಲಿಗೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಸಪ್ತಶೃಂಗಿ ಎಂದರೆ ಏಳು ಪರ್ವತ ಶಿಖರಗಳಲ್ಲಿ ನೆಲೆಸಿರುವವಳೆಂದರ್ಥ. 51 ಶಕ್ತಿಪೀಠಗಳಲ್ಲಿ ಸಪ್ತಶೃಂಗಿ ದೇವಿ ದೇವಾಲಯವೂ ಒಂದು.

must visit temples in india these temples of goddess are situated on the mountains

1 / 5
ಕಾಮಾಕ್ಯ ದೇವಾಲಯ(Kamakhya Temple): ಇದು ದುರ್ಗಾ ಮಾತೆಯ ಅತ್ಯಂತ ಪ್ರಸಿದ್ಧ ದೇವಾಲಯವಾಗಿದೆ. ಗುವಾಹಟಿ ಬಳಿಯ ನೀಲಾಚಲ ಎಂಬ ಬೆಟ್ಟಗಳಲ್ಲಿ 20 ದೇವಾಲಯಗಳಿವೆ. ಅವುಗಳಲ್ಲಿ ಒಂದು ಕಾಮಾಕ್ಯ ದೇವಿಯ ದೇವಾಲಯ. ಈ ದೇವಾಲಯವು 51 ಶಕ್ತಿ ಪೀಠಗಳಲ್ಲಿ ಒಂದಾಗಿದೆ. ಈ ದೇವಾಲಯದಲ್ಲಿ ಎರಡು ಕೋಣೆಗಳಿವೆ, ಮೂರು ಮಂಟಪಗಳು ಮತ್ತು ಗರ್ಭಗುಡಿ ಇದೆ, ತಾಯಿ ಸತಿಯ ಯೋನಿಯು ಗರ್ಭಗುಡಿಯಲ್ಲಿ ಬಿದ್ದಿದೆ ಎಂದು ನಂಬಲಾಗಿದೆ.

ಕಾಮಾಕ್ಯ ದೇವಾಲಯ(Kamakhya Temple): ಇದು ದುರ್ಗಾ ಮಾತೆಯ ಅತ್ಯಂತ ಪ್ರಸಿದ್ಧ ದೇವಾಲಯವಾಗಿದೆ. ಗುವಾಹಟಿ ಬಳಿಯ ನೀಲಾಚಲ ಎಂಬ ಬೆಟ್ಟಗಳಲ್ಲಿ 20 ದೇವಾಲಯಗಳಿವೆ. ಅವುಗಳಲ್ಲಿ ಒಂದು ಕಾಮಾಕ್ಯ ದೇವಿಯ ದೇವಾಲಯ. ಈ ದೇವಾಲಯವು 51 ಶಕ್ತಿ ಪೀಠಗಳಲ್ಲಿ ಒಂದಾಗಿದೆ. ಈ ದೇವಾಲಯದಲ್ಲಿ ಎರಡು ಕೋಣೆಗಳಿವೆ, ಮೂರು ಮಂಟಪಗಳು ಮತ್ತು ಗರ್ಭಗುಡಿ ಇದೆ, ತಾಯಿ ಸತಿಯ ಯೋನಿಯು ಗರ್ಭಗುಡಿಯಲ್ಲಿ ಬಿದ್ದಿದೆ ಎಂದು ನಂಬಲಾಗಿದೆ.

2 / 5
ಮಾನಸಾ ದೇವಿ ದೇವಸ್ಥಾನ(Manasa Devi Temple): ಈ ದೇವಸ್ಥಾನವು ಹರಿದ್ವಾರದಲ್ಲಿದೆ. ಭಾರತದ ಅತ್ಯಂತ ಪವಿತ್ರವಾದ ದೇವಸ್ಥಾನಗಳಲ್ಲಿ ಇದೂ ಒಂದು. ಈ ದೇವಾಲಯವು ಭಿಲ್ವಾ ಬೆಟ್ಟಗಳ ಮೇಲೆ ನೆಲೆಗೊಂಡಿದೆ. ಮಾನಸಾ ದೇವಿಯ ಮುಂದೆ ಏನೇ ಪ್ರಾರ್ಥನೆ ಸಲ್ಲಿಸಿದರೂ ತಾಯಿ ನೆರವೇರಿಸುತ್ತಾಳೆ ಎಂದು ಹೇಳಲಾಗುತ್ತದೆ. ಈ ದೇವಾಲಯದ ಸಮೀಪದಲ್ಲಿ ಚಂಡಿ ದೇವಿಯ ದೇವಾಲಯವೂ ಇದೆ.

ಮಾನಸಾ ದೇವಿ ದೇವಸ್ಥಾನ(Manasa Devi Temple): ಈ ದೇವಸ್ಥಾನವು ಹರಿದ್ವಾರದಲ್ಲಿದೆ. ಭಾರತದ ಅತ್ಯಂತ ಪವಿತ್ರವಾದ ದೇವಸ್ಥಾನಗಳಲ್ಲಿ ಇದೂ ಒಂದು. ಈ ದೇವಾಲಯವು ಭಿಲ್ವಾ ಬೆಟ್ಟಗಳ ಮೇಲೆ ನೆಲೆಗೊಂಡಿದೆ. ಮಾನಸಾ ದೇವಿಯ ಮುಂದೆ ಏನೇ ಪ್ರಾರ್ಥನೆ ಸಲ್ಲಿಸಿದರೂ ತಾಯಿ ನೆರವೇರಿಸುತ್ತಾಳೆ ಎಂದು ಹೇಳಲಾಗುತ್ತದೆ. ಈ ದೇವಾಲಯದ ಸಮೀಪದಲ್ಲಿ ಚಂಡಿ ದೇವಿಯ ದೇವಾಲಯವೂ ಇದೆ.

3 / 5
ನೈನಾ ದೇವಿ ದೇವಸ್ಥಾನ(Naina Devi Temple): ಈ ದೇವಸ್ಥಾನವು ಹಿಮಾಚಲ ಪ್ರದೇಶದ ಬಿಲಾಸ್‌ಪುರದಲ್ಲಿದೆ. ನೈನಿ ಸರೋವರದ ಉತ್ತರದ ಅಂಚಿನಲ್ಲಿದೆ. ನವರಾತ್ರಿ ಮತ್ತು ಶ್ರಾವಣ ಅಷ್ಟಮಿಯಂದು ಇಲ್ಲಿ ಭಕ್ತರ ದೊಡ್ಡ ಸರತಿ ಸಾಲು ಇರುತ್ತದೆ. ಇಲ್ಲಿ ಭಕ್ತರು ರಸ್ತೆ ಅಥವಾ ಕೇಬಲ್ ಕಾರ್ ಸೌಲಭ್ಯದ ಮೂಲಕ ಹೋಗಬಹುದು. ಇದು ಕೂಡ 52 ಶಕ್ತಿ ಪೀಠಗಳಲ್ಲಿ ಒಂದಾಗಿದೆ.

ನೈನಾ ದೇವಿ ದೇವಸ್ಥಾನ(Naina Devi Temple): ಈ ದೇವಸ್ಥಾನವು ಹಿಮಾಚಲ ಪ್ರದೇಶದ ಬಿಲಾಸ್‌ಪುರದಲ್ಲಿದೆ. ನೈನಿ ಸರೋವರದ ಉತ್ತರದ ಅಂಚಿನಲ್ಲಿದೆ. ನವರಾತ್ರಿ ಮತ್ತು ಶ್ರಾವಣ ಅಷ್ಟಮಿಯಂದು ಇಲ್ಲಿ ಭಕ್ತರ ದೊಡ್ಡ ಸರತಿ ಸಾಲು ಇರುತ್ತದೆ. ಇಲ್ಲಿ ಭಕ್ತರು ರಸ್ತೆ ಅಥವಾ ಕೇಬಲ್ ಕಾರ್ ಸೌಲಭ್ಯದ ಮೂಲಕ ಹೋಗಬಹುದು. ಇದು ಕೂಡ 52 ಶಕ್ತಿ ಪೀಠಗಳಲ್ಲಿ ಒಂದಾಗಿದೆ.

4 / 5
ವೈಷ್ಣೋ ದೇವಿ ದೇವಾಲಯ(Vaishno Devi temple): ವೈಷ್ಣೋ ದೇವಿ ಸ್ಥಳವು ಉತ್ತರ ಭಾರತದ ಅತ್ಯಂತ ಪೂಜ್ಯ ಮತ್ತು ಪವಿತ್ರ ತಾಣಗಳಲ್ಲಿ ಒಂದು. ಇದು ದುರ್ಗಾ ಮಾತೆಯ ಅತ್ಯಂತ ಪ್ರಸಿದ್ಧ ದೇವಾಲಯವೆಂದು ಪರಿಗಣಿಸಲಾಗಿದೆ. ಜಮ್ಮುವಿನ ತ್ರಿಕೂಟ ಪರ್ವತಗಳ ಮೇಲಿರುವ ವೈಷ್ಣೋದೇವಿ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.

ವೈಷ್ಣೋ ದೇವಿ ದೇವಾಲಯ(Vaishno Devi temple): ವೈಷ್ಣೋ ದೇವಿ ಸ್ಥಳವು ಉತ್ತರ ಭಾರತದ ಅತ್ಯಂತ ಪೂಜ್ಯ ಮತ್ತು ಪವಿತ್ರ ತಾಣಗಳಲ್ಲಿ ಒಂದು. ಇದು ದುರ್ಗಾ ಮಾತೆಯ ಅತ್ಯಂತ ಪ್ರಸಿದ್ಧ ದೇವಾಲಯವೆಂದು ಪರಿಗಣಿಸಲಾಗಿದೆ. ಜಮ್ಮುವಿನ ತ್ರಿಕೂಟ ಪರ್ವತಗಳ ಮೇಲಿರುವ ವೈಷ್ಣೋದೇವಿ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.

5 / 5

Published On - 7:15 am, Sat, 11 December 21

ವಿಷ್ಣುವರ್ಧನ್​​ಗೆ ಕರ್ನಾಟಕ ರತ್ನ ನೀಡುವ ಬಗ್ಗೆ ಸಿಎಂ ಸಕಾರಾತ್ಮಕ ಸ್ಪಂದನೆ
ವಿಷ್ಣುವರ್ಧನ್​​ಗೆ ಕರ್ನಾಟಕ ರತ್ನ ನೀಡುವ ಬಗ್ಗೆ ಸಿಎಂ ಸಕಾರಾತ್ಮಕ ಸ್ಪಂದನೆ
ಸಿನಿಮಾ ಸಾಹಸಕ್ಕೆ ಕೈ ಹಾಕಿದ ‘ಅಮೃತಾಂಜನ್’ ಕಿರುಚಿತ್ರದ ಹುಡುಗರು
ಸಿನಿಮಾ ಸಾಹಸಕ್ಕೆ ಕೈ ಹಾಕಿದ ‘ಅಮೃತಾಂಜನ್’ ಕಿರುಚಿತ್ರದ ಹುಡುಗರು
ಅಪಾಯದ ಮಟ್ಟ ಮೀರಿದ ಜಮ್ಮು-ಕಾಶ್ಮೀರದ ಝೀಲಂ ನದಿ, ಪ್ರವಾಹದ ಎಚ್ಚರಿಕೆ
ಅಪಾಯದ ಮಟ್ಟ ಮೀರಿದ ಜಮ್ಮು-ಕಾಶ್ಮೀರದ ಝೀಲಂ ನದಿ, ಪ್ರವಾಹದ ಎಚ್ಚರಿಕೆ
ಬಾನು ಮುಸ್ತಾಕ್ ಮನೆಯಲ್ಲಿ ಕುರಾನ್ ಜತೆ ಭಗವದ್ಗೀತೆ
ಬಾನು ಮುಸ್ತಾಕ್ ಮನೆಯಲ್ಲಿ ಕುರಾನ್ ಜತೆ ಭಗವದ್ಗೀತೆ
ದರ್ಶನ್ ನೋವು ನೋಡಿ ಖುಷಿಪಡುವ ಕೆಲವರು ಇದ್ದಾರೆ: ನಿರ್ದೇಶಕ ಪ್ರೇಮ್
ದರ್ಶನ್ ನೋವು ನೋಡಿ ಖುಷಿಪಡುವ ಕೆಲವರು ಇದ್ದಾರೆ: ನಿರ್ದೇಶಕ ಪ್ರೇಮ್
ಮೈಸೂರು ದಸರಾ ಉದ್ಘಾಟನೆ: ಫಲತಾಂಬೂಲ ನೀಡಿ ಬಾನು ಮುಸ್ತಾಕ್​ಗೆ ಆಹ್ವಾನ
ಮೈಸೂರು ದಸರಾ ಉದ್ಘಾಟನೆ: ಫಲತಾಂಬೂಲ ನೀಡಿ ಬಾನು ಮುಸ್ತಾಕ್​ಗೆ ಆಹ್ವಾನ
ದರ್ಶನ್ ಅವರನ್ನು ಭೇಟಿ ಮಾಡಿದ್ದೆ, ನೋವಿನಿಂದ ನುಡಿದ ಪ್ರೇಮ್
ದರ್ಶನ್ ಅವರನ್ನು ಭೇಟಿ ಮಾಡಿದ್ದೆ, ನೋವಿನಿಂದ ನುಡಿದ ಪ್ರೇಮ್
ಕೇದಾರನಾಥ- ಸೋನ್‌ಪ್ರಯಾಗ ಮಾರ್ಗದಲ್ಲಿ ಭೂಕುಸಿತ; ಹಲವಾರು ವಾಹನಗಳಿಗೆ ಹಾನಿ
ಕೇದಾರನಾಥ- ಸೋನ್‌ಪ್ರಯಾಗ ಮಾರ್ಗದಲ್ಲಿ ಭೂಕುಸಿತ; ಹಲವಾರು ವಾಹನಗಳಿಗೆ ಹಾನಿ
ರಾಧಿಕಾ ಕುಮಾರಸ್ವಾಮಿ ಜತೆಗಿನ ಹಣಕಾಸಿನ ವ್ಯವಹಾರ ಬಗ್ಗೆ ಜಮೀರ್ ಸ್ಪಷ್ಟನೆ
ರಾಧಿಕಾ ಕುಮಾರಸ್ವಾಮಿ ಜತೆಗಿನ ಹಣಕಾಸಿನ ವ್ಯವಹಾರ ಬಗ್ಗೆ ಜಮೀರ್ ಸ್ಪಷ್ಟನೆ
ಜಮೀರ್ ಅಹಮ್ಮದ್​​ ಜೊತೆಗಿನ ಹಣಕಾಸಿನ ವ್ಯವಹಾರ ಬಿಚ್ಚಿಟ್ಟ ಕೆಜಿಎಫ್ ಬಾಬು
ಜಮೀರ್ ಅಹಮ್ಮದ್​​ ಜೊತೆಗಿನ ಹಣಕಾಸಿನ ವ್ಯವಹಾರ ಬಿಚ್ಚಿಟ್ಟ ಕೆಜಿಎಫ್ ಬಾಬು