AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Padmini Ekadashi: ಇಂದು ‘ಅಧಿಕ ಮಾಸ’ದ ಪದ್ಮಿನಿ ಏಕಾದಶಿ; ಈ ದಿನದ ಮಹತ್ವ, ಪೂಜಾ ವಿಧಾನ ಮತ್ತು ವ್ರತದ ಮಹಿಮೆ

ಪದ್ಮಿನಿ ಏಕಾದಶಿಯು ಅಧಿಕ ಮಾಸದಲ್ಲಿ ಬರುವ ಅಪರೂಪದ ಏಕಾದಶಿಯಾಗಿದೆ. ಇದನ್ನು ಪುರುಷೋತ್ತಮ ಏಕಾದಶಿ ಎಂದೂ ಕರೆಯುತ್ತಾರೆ. ಶ್ರೀ ವಿಷ್ಣುವಿಗೆ ಸಮರ್ಪಿತವಾದ ಈ ದಿನದಂದು ಉಪವಾಸ ಮತ್ತು ಪೂಜೆ ಮಾಡುವುದರಿಂದ ಹಿಂದಿನ ಪಾಪಗಳು ಪರಿಹಾರವಾಗಿ ಆಧ್ಯಾತ್ಮಿಕ ಶಾಂತಿ, ಉತ್ತಮ ಸಂತಾನ, ಸಂಪತ್ತು ಲಭಿಸುತ್ತದೆ. ಸರಿಯಾದ ವ್ರತ ವಿಧಾನ ಮತ್ತು ಪೌರಾಣಿಕ ಕಥೆ ಮತ್ತು ಇದರ ಮಹತ್ವವನ್ನು ಇಲ್ಲಿ ತಿಳಿದುಕೊಳ್ಳಿ.

Padmini Ekadashi: ಇಂದು 'ಅಧಿಕ ಮಾಸ'ದ ಪದ್ಮಿನಿ ಏಕಾದಶಿ; ಈ ದಿನದ ಮಹತ್ವ, ಪೂಜಾ ವಿಧಾನ ಮತ್ತು ವ್ರತದ ಮಹಿಮೆ
ಇಂದು 'ಅಧಿಕ ಮಾಸ'ದ ಪದ್ಮಿನಿ ಏಕಾದಶಿImage Credit source: Pinterest
ಅಕ್ಷತಾ ವರ್ಕಾಡಿ
|

Updated on:May 27, 2026 | 8:49 AM

Share

ಪದ್ಮಿನಿ ಏಕಾದಶಿಯು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಮತ್ತು ವಿಶೇಷವಾದ ಏಕಾದಶಿಗಳಲ್ಲಿ ಒಂದಾಗಿದೆ. ಇದು ಸಾಮಾನ್ಯವಾಗಿ ಪ್ರತಿ ಮೂರು ವರ್ಷಗಳಿಗೊಮ್ಮೆ ಬರುವ ‘ಅಧಿಕ ಮಾಸ‘ದ ಶುಕ್ಲ ಪಕ್ಷದ ಸಮಯದಲ್ಲಿ ಬರುತ್ತದೆ. ಈ ಅಪರೂಪದ ಏಕಾದಶಿಯನ್ನು ಕಮಲ ಏಕಾದಶಿ ಮತ್ತು ಪುರುಷೋತ್ತಮ ಏಕಾದಶಿ ಎಂದೂ ಭಕ್ತಿಯಿಂದ ಕರೆಯಲಾಗುತ್ತದೆ. ಶ್ರೀಮನ್ನಾರಾಯಣನಿಗೆ ಅತ್ಯಂತ ಪ್ರಿಯವಾದ ಈ ದಿನದಂದು ಉಪವಾಸ ಮತ್ತು ವಿಶೇಷ ಪೂಜೆ ಮಾಡುವುದರಿಂದ ಜೀವನದಲ್ಲಿ ಹಲವು ಪಟ್ಟು ಸತ್ಫಲಗಳು ಸಿಗುತ್ತವೆ ಎಂದು ಪುರಾಣಗಳು ಹೇಳುತ್ತವೆ. ಈ ಬಾರಿ, ಅಧಿಕ ಜ್ಯೇಷ್ಠ ಮಾಸದ ಮೇ 27 ರಂದು ಪದ್ಮಿನಿ ಏಕಾದಶಿ ಬಂದಿದ್ದು, ಭಕ್ತರು ಈ ದಿನವನ್ನು ಅಪಾರ ಭಕ್ತಿ-ಶ್ರದ್ಧೆಗಳಿಂದ ಆಚರಿಸುತ್ತಾರೆ.

ಪದ್ಮಿನಿ ಏಕಾದಶಿಯ ವಿಶೇಷತೆ ಮತ್ತು ಮಹತ್ವ:

ಪ್ರತಿ ತಿಂಗಳು ಎರಡು ಏಕಾದಶಿಗಳು ಬರುವುದು ಸಾಮಾನ್ಯ. ಆದರೆ ಅಧಿಕ ಮಾಸದಲ್ಲಿ ಬರುವ ಶುಕ್ಲ ಪಕ್ಷದ ಏಕಾದಶಿಗೆ ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕವಾಗಿ ವಿಶಿಷ್ಟ ಸ್ಥಾನವಿದೆ. ಈ ಇಡೀ ಮಾಸವು ಭಗವಾನ್ ವಿಷ್ಣುವಿಗೆ ಸಮರ್ಪಿತವಾಗಿದ್ದು, ಇದನ್ನು ‘ಪುರುಷೋತ್ತಮ ಮಾಸ’ ಎಂದು ಕರೆಯಲಾಗುತ್ತದೆ. ಆದ್ದರಿಂದಲೇ ಈ ದಿನಕ್ಕೆ ಪುರುಷೋತ್ತಮ ಏಕಾದಶಿ ಎಂಬ ಹೆಸರು ಬಂದಿದೆ.

ವ್ರತದ ಫಲ:

ಪದ್ಮಿನಿ ಏಕಾದಶಿಯ ದಿನದಂದು ಉಪವಾಸ ಹಾಗೂ ಆರಾಧನೆ ಮಾಡುವುದರಿಂದ ಹಿಂದಿನ ಜನ್ಮಗಳ ಪಾಪಗಳು ಪರಿಹಾರವಾಗುತ್ತವೆ. ಮನಸ್ಸಿಗೆ ಆಧ್ಯಾತ್ಮಿಕ ಶಾಂತಿ ಸಿಗುವುದರ ಜೊತೆಗೆ ಉತ್ತಮ ಸಂತಾನ, ಸಂಪತ್ತು ಮತ್ತು ಯಶಸ್ಸು ಲಭಿಸುತ್ತದೆ ಎಂಬುದು ಭಕ್ತರ ದೃಢ ನಂಬಿಕೆ.

ಪದ್ಮಿನಿ ಏಕಾದಶಿ ಪೂಜಾ ವಿಧಾನ:

ಈ ಪವಿತ್ರ ದಿನದಂದು ವಿಷ್ಣುವನ್ನು ಆರಾಧಿಸಲು ಶಾಸ್ತ್ರೋಕ್ತವಾದ ಕೆಲವು ನಿಯಮಗಳಿವೆ. ಭಕ್ತರು ಸೂರ್ಯೋದಯಕ್ಕೂ ಮುನ್ನವೇ ಎದ್ದು ಸ್ನಾನ ಮಾಡಬೇಕು. ಸಾಧ್ಯವಾದರೆ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದು ಅತ್ಯಂತ ಶುಭ ತರುತ್ತದೆ. ಸ್ನಾನದ ನಂತರ, ಇಡೀ ದಿನ ಯಾವುದೇ ಆಹಾರವನ್ನು ಸೇವಿಸದೆ ಭಕ್ತಿಯಿಂದ ಉಪವಾಸ (ವ್ರತ) ಮಾಡಲು ಮನಸ್ಸಿನಲ್ಲಿಯೇ ಸಂಕಲ್ಪ ಮಾಡಿಕೊಳ್ಳಬೇಕು. ಪೂಜಾ ಕೊಠಡಿಯನ್ನು ಸ್ವಚ್ಛಗೊಳಿಸಿ, ಮಾವಿನ ಎಲೆಗಳ ತೋರಣಗಳಿಂದ ಅಲಂಕರಿಸಬೇಕು. ಒಂದು ಮರದ ಪೀಠದ ಮೇಲೆ ಅರಿಶಿನ ಮತ್ತು ಕುಂಕುಮದಿಂದ ಮಂಡಲ ಬರೆದು, ಅದರ ಮೇಲೆ ವಿಷ್ಣುವಿನ ಚಿತ್ರ ಅಥವಾ ವಿಗ್ರಹವನ್ನು ಪ್ರತಿಷ್ಠಾಪಿಸಬೇಕು. ತಾಮ್ರ ಅಥವಾ ಬೆಳ್ಳಿಯ ಪಾತ್ರೆಯಲ್ಲಿ ಶುದ್ಧವಾದ ನೀರನ್ನು ತುಂಬಿಸಿ ಕಲಶವನ್ನು ಸಿದ್ಧಪಡಿಸಬೇಕು. ನಂತರ ತೆಂಗಿನಕಾಯಿಗೆ ಹೊಸ ಬಟ್ಟೆಯನ್ನು ಸುತ್ತಿ ಆ ಕಲಶದ ಮೇಲಿಡಬೇಕು.

ಶ್ರೀಹರಿಯ ಅಲಂಕಾರ ಮತ್ತು ಮಂತ್ರ ಪಠಣ:

  • ಶ್ರೀಮನ್ನಾರಾಯಣನನ್ನು ಅಲಂಕಾರ ಪ್ರಿಯನೆಂದು ಕರೆಯಲಾಗುತ್ತದೆ. ಆದ್ದರಿಂದ ದೇವರಿಗೆ ತುಳಸಿ ದಳಗಳು, ಹಳದಿ ಹೂವುಗಳು ಮತ್ತು ಕಮಲದ ಹೂವುಗಳಿಂದ ಆಕರ್ಷಕವಾಗಿ ಅಲಂಕಾರ ಮಾಡಬೇಕು.
  • ಹಸುವಿನ ಶುದ್ಧ ತುಪ್ಪದಿಂದ ದೀಪವನ್ನು ಹಚ್ಚಿ ಪೂಜಿಸುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ.
  • ಪೂಜೆಯ ಸಮಯದಲ್ಲಿ ವಿಷ್ಣು ಸಹಸ್ರನಾಮ, ಅಷ್ಟೋತ್ತರ ಶತನಾಮಾವಳಿ ಮತ್ತು ವಿಷ್ಣು ಸ್ತೋತ್ರಗಳನ್ನು ಭಕ್ತಿಯಿಂದ ಪಠಿಸುವುದು ಶ್ರೇಷ್ಠ.
  • ದೇವರಿಗೆ ಬಾಳೆಹಣ್ಣು ಮತ್ತು ತೆಂಗಿನಕಾಯಿ ಸೇರಿದಂತೆ ವಿವಿಧ ನೈವೇದ್ಯಗಳನ್ನು ಅರ್ಪಿಸಿ ಮಹಾಮಂಗಳಾರತಿ ಮಾಡಬೇಕು.
  • ಸಂಜೆ ಜೀವರಾಶಿಗಳು ವಿಶ್ರಮಿಸುವ ಸಮಯದಲ್ಲಿ ಹತ್ತಿರದ ವಿಷ್ಣು ದೇವಸ್ಥಾನಕ್ಕೆ ಭೇಟಿ ನೀಡಿ, ದೇವರಿಗೆ ತುಳಸಿ ಮಾಲೆಗಳನ್ನು ಅರ್ಪಿಸುವುದು ಶುಭ ತರುತ್ತದೆ.
  • ರಾತ್ರಿಯಿಡೀ ಭಗವಂತನ ನಾಮಸ್ಮರಣೆ, ಭಜನೆ ಮತ್ತು ಕೀರ್ತನೆಗಳೊಂದಿಗೆ ಜಾಗರಣೆ ಮಾಡುವುದರಿಂದ ಉಪವಾಸ ವ್ರತಕ್ಕೆ ಪರಿಪೂರ್ಣ ಪುಣ್ಯ ಸಿಗುತ್ತದೆ.

ಇದನ್ನೂ ಓದಿ: ಜೂ.5 ಪಂಚಕ ಯೋಗ; ಈ 4 ರಾಶಿಯವರ ಅದೃಷ್ಟ ಬದಲಾಯಿಸಲಿದೆ ಗ್ರಹಗಳ ಅಪರೂಪದ ಸ್ಥಾನ!

ದ್ವಾದಶಿಯಂದು ವ್ರತ ಮುಕ್ತಾಯ (ಪಾರಣೆ):

ಏಕಾದಶಿಯ ಮರುದಿನ ಅಂದರೆ ಹನ್ನೆರಡನೇ ದಿನ (ದ್ವಾದಶಿ) ಬೆಳಿಗ್ಗೆ ವ್ರತವನ್ನು ಮುಗಿಸಬೇಕು. ಈ ದಿನವೂ ಮುಂಜಾನೆ ಎದ್ದು ವಿಷ್ಣುವಿಗೆ ವಿಶೇಷ ನೈವೇದ್ಯವನ್ನು ಅರ್ಪಿಸಬೇಕು. ನಂತರ ಸತ್ಪಾತ್ರರಾದ ಬ್ರಾಹ್ಮಣರಿಗೆ ಅಥವಾ ದೀನದಲಿತರಿಗೆ ಭೋಜನ ಮಾಡಿಸಿ, ದಕ್ಷಿಣೆ-ದಾನಗಳನ್ನು ನೀಡಬೇಕು. ಈ ಧರ್ಮಕಾರ್ಯಗಳ ನಂತರ ಭಕ್ತರು ತಾವೂ ಪ್ರಸಾದವನ್ನು ಸ್ವೀಕರಿಸಿ ಉಪವಾಸವನ್ನು ಕೊನೆಗೊಳಿಸಬೇಕು (ಪಾರಣೆ ಮಾಡಬೇಕು).

ಪದ್ಮಿನಿ ಏಕಾದಶಿ ವ್ರತದ ಪೌರಾಣಿಕ ಕಥೆ:

ಪುರಾಣಗಳ ಪ್ರಕಾರ, ತ್ರೇತಾಯುಗದಲ್ಲಿ ಒಬ್ಬ ಪ್ರತಾಪಶಾಲಿ ರಾಜನಿದ್ದನು. ಆದರೆ ಅವನಿಗೆ ಮಕ್ಕಳಿಲ್ಲದ ಕಾರಣ ಆತ ಮತ್ತು ಆತನ ರಾಣಿ ತೀವ್ರ ದುಃಖಿತರಾಗಿದ್ದರು. ಆಗ ಅನಸೂಯಾ ದೇವಿಯು ರಾಣಿಗೆ ಈ ಪದ್ಮಿನಿ ಏಕಾದಶಿ ವ್ರತದ ಮಹಿಮೆಯನ್ನು ತಿಳಿಸಿ, ಅದನ್ನು ಆಚರಿಸಲು ಸಲಹೆ ನೀಡಿದಳು. ರಾಣಿ ಪದ್ಮಿನಿಯು ದೇವಿಯ ಮಾರ್ಗದರ್ಶನದಂತೆ ಅತ್ಯಂತ ಶ್ರದ್ಧಾಭಕ್ತಿಗಳಿಂದ ಈ ಏಕಾದಶಿ ಉಪವಾಸವನ್ನು ಆಚರಿಸಿದಳು. ಅವಳ ನಿಷ್ಕಲ್ಮಶ ಭಕ್ತಿಗೆ ಮೆಚ್ಚಿದ ಭಗವಾನ್ ವಿಷ್ಣುವು ಅವಳ ಸನ್ಮುಖದಲ್ಲಿ ಪ್ರತ್ಯಕ್ಷನಾಗಿ ವರವನ್ನು ನೀಡಿದನು. ಆ ವರದ ಪ್ರಸಾದವಾಗಿ ರಾಣಿಗೆ ಒಬ್ಬ ಮಹಾನ್ ಪರಾಕ್ರಮಿ ಮಗ ಜನಿಸಿದನು. ಆತನೇ ಮುಂದೆ ಜಗತ್ಪ್ರಸಿದ್ಧ ಯೋಧ ಕಾರ್ತವೀರ್ಯ ಅರ್ಜುನ ಎಂದು ಖ್ಯಾತನಾದನು ಎಂದು ಪುರಾಣಗಳು ವಿವರಿಸುತ್ತವೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:48 am, Wed, 27 May 26

Follow Us
Akshatha Vorkady
Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ವಿಡಿಯೋ: ಭಾರಿ ಮಳೆಗೆ ಮತ್ತೆ ಸೋರಿದ ಏರ್​ಪೋರ್ಟ್ ಟರ್ಮಿನಲ್ 1ರ ಮೇಲ್ಛಾವಣಿ!
ವಿಡಿಯೋ: ಭಾರಿ ಮಳೆಗೆ ಮತ್ತೆ ಸೋರಿದ ಏರ್​ಪೋರ್ಟ್ ಟರ್ಮಿನಲ್ 1ರ ಮೇಲ್ಛಾವಣಿ!
ನೇಪಾಳದಲ್ಲಿ ಭಾರಿ ಮಳೆ, ತರಗತಿಗೆ ನುಗ್ಗಿದ ನೀರು
ನೇಪಾಳದಲ್ಲಿ ಭಾರಿ ಮಳೆ, ತರಗತಿಗೆ ನುಗ್ಗಿದ ನೀರು
ಇಂದು ಈ ರಾಶಿಯವರಿಗೆ ಅನಾರೋಗ್ಯ ಚಿಂತೆ ಕಾಡಬಹುದು
ಇಂದು ಈ ರಾಶಿಯವರಿಗೆ ಅನಾರೋಗ್ಯ ಚಿಂತೆ ಕಾಡಬಹುದು
ಶತಕ ವಂಚಿತರಾದರೂ ವಿಶ್ವ ದಾಖಲೆ ಮುರಿದ ರಜತ್ ಪಾಟಿದರ್
ಶತಕ ವಂಚಿತರಾದರೂ ವಿಶ್ವ ದಾಖಲೆ ಮುರಿದ ರಜತ್ ಪಾಟಿದರ್
ಏಳು ಮಗುವೇ; ಸತ್ತ ಆನೆಮರಿಯನ್ನು ಸೊಂಡಿಲಿಂದ ಎಬ್ಬಿಸಲು ಪ್ರಯತ್ನಿಸಿದ ತಾಯಾನೆ
ಏಳು ಮಗುವೇ; ಸತ್ತ ಆನೆಮರಿಯನ್ನು ಸೊಂಡಿಲಿಂದ ಎಬ್ಬಿಸಲು ಪ್ರಯತ್ನಿಸಿದ ತಾಯಾನೆ
ಬೆಂಗಳೂರಿಗೆ ಹೈಕಮಾಂಡ್ ನಾಯಕರು: ಗ್ಯಾರಂಟಿ ಆಯ್ತು ಸಿದ್ದರಾಮಯ್ಯ ರಾಜೀನಾಮೆ!
ಬೆಂಗಳೂರಿಗೆ ಹೈಕಮಾಂಡ್ ನಾಯಕರು: ಗ್ಯಾರಂಟಿ ಆಯ್ತು ಸಿದ್ದರಾಮಯ್ಯ ರಾಜೀನಾಮೆ!
ಆಲಿಕಲ್ಲು ಮಳೆ; ಮನೆ ಮೇಲ್ಚಾವಣಿ ಮೇಲಿನ ಕಲ್ಲುಬಿದ್ದು 6 ವರ್ಷದ ಮಗು ಸಾವು
ಆಲಿಕಲ್ಲು ಮಳೆ; ಮನೆ ಮೇಲ್ಚಾವಣಿ ಮೇಲಿನ ಕಲ್ಲುಬಿದ್ದು 6 ವರ್ಷದ ಮಗು ಸಾವು
ಕಿತ್ತೂರು ರಾಣಿ ಚೆನ್ನಮ್ಮ ಕುರಿತು ಕನ್ನಡದಲ್ಲಿ ಬರುತ್ತಿದೆ ಎಐ ಸಿನಿಮಾ
ಕಿತ್ತೂರು ರಾಣಿ ಚೆನ್ನಮ್ಮ ಕುರಿತು ಕನ್ನಡದಲ್ಲಿ ಬರುತ್ತಿದೆ ಎಐ ಸಿನಿಮಾ
ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದರಾಮಯ್ಯ ನಿರ್ಧಾರ
ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದರಾಮಯ್ಯ ನಿರ್ಧಾರ
ಇನ್ನೇನು ಟೇಕಾಫ್ ಆಗಬೇಕೆನ್ನುವಷ್ಟರಲ್ಲಿ ಇಂಡಿಗೋ ವಿಮಾನದಲ್ಲಿ ಹೊಗೆ
ಇನ್ನೇನು ಟೇಕಾಫ್ ಆಗಬೇಕೆನ್ನುವಷ್ಟರಲ್ಲಿ ಇಂಡಿಗೋ ವಿಮಾನದಲ್ಲಿ ಹೊಗೆ