AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ramayan: ರಾವಣ ಸೀತೆಯನ್ನು ಅಪಹರಿಸಿಟ್ಟಿದ್ದ ಅಶೋಕವನ ಈಗ ಎಲ್ಲಿದೆ?

ರಾವಣ ಸೀತೆಯನ್ನು ಅಪಹರಣ ಮಾಡಿದ ನಂತರ ಆಕೆ ಆತನ ಲಂಕೆಯ ಅರಮನೆಯಲ್ಲಿ ಇರಲು ನಿರಾಕರಿಸಿದಳು. ಬಳಿಕ ಆಕೆ ಅಶೋಕವನದಲ್ಲಿ ಅಶೋಕ ವೃಕ್ಷದ ಅಡಿಯಲ್ಲಿ ವಾಸವಾಗಿದ್ದಳು ಎಂದು ರಾಮಾಯಣದಲ್ಲಿ ಹೇಳಲಾಗುತ್ತದೆ. ಹಾಗಾದರೆ, ಆ ಅಶೋಕವನ ಈಗ ಎಲ್ಲಿದೆ?

Ramayan: ರಾವಣ ಸೀತೆಯನ್ನು ಅಪಹರಿಸಿಟ್ಟಿದ್ದ ಅಶೋಕವನ ಈಗ ಎಲ್ಲಿದೆ?
ಸಾಂದರ್ಭಿಕ ಚಿತ್ರ
ಸುಷ್ಮಾ ಚಕ್ರೆ
|

Updated on: Jan 20, 2024 | 6:13 PM

Share

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ (Ram Mandir) ಪ್ರಾಣ ಪ್ರತಿಷ್ಠಾಪನೆಗೆ ಎಲ್ಲ ಸಿದ್ಧತೆಗಳೂ ನಡೆದಿವೆ. ಇಡೀ ದೇಶವೇ ಆ ಭಾವನಾತ್ಮಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಕಾದಿದೆ. ಹಿಂದೂಗಳ ಪವಿತ್ರ ಗ್ರಂಥವಾದ ರಾಮಾಯಣದ (Ramayan) ಪ್ರಕಾರ, ವನವಾಸದಲ್ಲಿದ್ದ ಸೀತೆಯನ್ನು (Sita Mata) ರಾವಣ ಅಪಹರಣ ಮಾಡಿ, ಅಶೋಕವನದಲ್ಲಿ ಇಟ್ಟಿದ್ದನು. ಈ ಅಶೋಕವನಕ್ಕೆ (Ashok Vatika) ಹೋಗುವುದು ಅಷ್ಟು ಸುಲಭವಾಗಿರಲಿಲ್ಲ. ರಾಮನ ನೆನಪಿನಲ್ಲಿ ಶೋಕತಪ್ತಳಾಗಿದ್ದ ಸೀತೆ ಅಶೋಕವನದಲ್ಲಿ ಕಳೆದ ದಿನಗಳ ಬಗ್ಗೆ ರಾಮಾಯಣದಲ್ಲಿ ವಿವರಿಸಲಾಗಿದೆ.

ತಮಿಳುನಾಡಿನ ಧನುಷ್ಕೋಡಿಯ ಬಳಿ ಅಶೋಕವನವಿದೆ. ಇದು ವಸಾಹತುಶಾಹಿಗಳಿಂದ ಅರೇಬಿಕ್ ಮತ್ತು ಸಿಲೋನ್‌ನಲ್ಲಿ ಸೆರೆಂಡಿಬ್ ಎಂದು ಕರೆಯಲ್ಪಟ್ಟಿದೆ. ಈ ಸ್ಥಳ ರಾವಣದ ಅಧಿಕಾರಕ್ಕೆ ಒಳಪಟ್ಟಿತ್ತು. ಈ ಐತಿಹಾಸಿಕ ದ್ವೀಪದಲ್ಲಿ ರಾಮಾಯಣಕ್ಕೆ ಸಂಬಂಧಿಸಿದ ಇತರೆ ಸ್ಥಳಗಳು ಕೂಡ ಇವೆ.

ಇದನ್ನೂ ಓದಿ: Ramayan: ಸೀತೆಯ ಅಗ್ನಿಪರೀಕ್ಷೆ ನಡೆದಿದ್ದು ಎಲ್ಲಿ?

ಶ್ರೀಲಂಕಾವನ್ನು ರಾಜ್ಯಗಳ ಬದಲಿಗೆ ಪ್ರಾಂತ್ಯಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ಒಟ್ಟಾರೆಯಾಗಿ 9 ಪ್ರಾಂತ್ಯಗಳಿವೆ. ಮಧ್ಯ ಪ್ರಾಂತ್ಯವು ಸುಂದರವಾದ ಪರ್ವತಗಳನ್ನು ಹೊಂದಿದೆ. ಸಮುದ್ರ ಮಟ್ಟದಿಂದ 6200 ಅಡಿ ಎತ್ತರದಲ್ಲಿರುವ ಈ ಪ್ರದೇಶದಲ್ಲಿ ‘ನುವಾರಾ ಎಲಿಯಾ’ ಎಂಬ ಹೆಸರಿನ ನಗರವಿದೆ. ‘ಸೀತಾ ಎಲಿಯ’ ಗ್ರಾಮವು ಈ ಸ್ಥಳದಿಂದ 5 ಕಿಮೀ ದೂರದಲ್ಲಿದೆ. ಸೀತಾ ನದಿಯ ದಡದಲ್ಲಿ 3000 ವರ್ಷಗಳಷ್ಟು ಹಳೆಯ ರಾಮ, ಲಕ್ಷ್ಮಣ ಮತ್ತು ಸೀತೆಯ ವಿಗ್ರಹಗಳಿವೆ. ಇಲ್ಲಿನ ದೇವಾಲಯವನ್ನು ನಂತರ ನಿರ್ಮಿಸಲಾಯಿತು.

ಈ ನದಿಯ ದಂಡೆಯ ಮೇಲೆ ರಾಮ, ಲಕ್ಷ್ಮಣ, ಸೀತಾ ಅವರ ನೆನಪಿನಲ್ಲಿ ದೇವಸ್ಥಾನ ನಿರ್ಮಿಸಲಾಗಿದೆ. ಈ ದೇವಸ್ಥಾನದ ಹಿಂದೆ ದಟ್ಟವಾದ ಕಾಡಿದೆ. ಆ ಕಾಡಿಗೆ ಯಾರೂ ಹೋಗುವುದಿಲ್ಲ. ಸ್ಥಳೀಯ ನಿವಾಸಿಗಳಿಗೂ ಆ ಕಾಡಿಗೆ ಹೋಗಲು ಅವಕಾಶವಿಲ್ಲ. ಆ ಅರಣ್ಯಕ್ಕೆ ಹೋಗುವ ಮಾರ್ಗವು ತುಂಬಾ ಕಷ್ಟಕರವಾಗಿದೆ. ಅದರಲ್ಲಿ ಹಲವಾರು ಮರಗಳಿವೆ. ಅದರಲ್ಲಿ ವಿಶೇಷವೆಂದರೆ ‘ಅಶೋಕ’ ಮರ. ಇದೇ ಅಶೋಕವನ. ಈ ಅಶೋಕವನದಲ್ಲಿ ಸೀತೆಯನ್ನು ಹನುಮಂತ ಭೇಟಿಯಾಗಿದ್ದ. ತಾನು ರಾಮನ ಭಕ್ತನೆಂದು ಆಕೆಗೆ ತಿಳಿಸಲು ಇದೇ ಜಾಗದಲ್ಲಿ ರಾಮನ ಉಂಗುರವನ್ನು ಸೀತೆಗೆ ನೀಡಿದ್ದ.

ಇದನ್ನೂ ಓದಿ: Ramayan: ರಾವಣನ ಶವ ಎಲ್ಲಿದೆ?; ಆತನ ಸಾವಿನ ಕುರಿತ ರಹಸ್ಯವೇನು?

‘ವಾಲ್ಮೀಕಿ ರಾಮಾಯಣ’ದಲ್ಲಿ ರಾಮಾಯಣ ಯುದ್ಧದ ನಂತರ ಹನುಮಂತ ಅಶೋಕ ವನಕ್ಕೆ ಬೆಂಕಿ ಹಚ್ಚಿದ ಬಗ್ಗೆ ಉಲ್ಲೇಖವಿದೆ. ಅಶೋಕ ವನದ ವಿಶೇಷತೆ ಎಂದರೆ ಬೂದಿಯಂತೆ ಕಾಣುವ ಕಪ್ಪು ಮಣ್ಣು. ಹನುಮಂತ ಇಡೀ ಅಶೋಕವನವನ್ನು ಭಸ್ಮ ಮಾಡಿದ್ದರಿಂದಲೇ ಇಲ್ಲಿನ ಮಣ್ಣು ಕಪ್ಪಾಗಿದೆ ಎಂಬುದು ಇಲ್ಲಿನ ಸ್ಥಳೀಯ ಹಿಂದೂಗಳ ನಂಬಿಕೆ. ಸೀತಾ ನದಿಯ ಇನ್ನೊಂದು ಬದಿಯಲ್ಲಿ ಅಂದರೆ ಅಶೋಕವನದ ಎದುರು ಭಾಗದಲ್ಲಿರುವ ಭೂಮಿಯ ಮಣ್ಣು ಕೆಂಪು ಬಣ್ಣದ್ದಾಗಿದೆ. ಅಲ್ಲದೆ, ಶ್ರೀಲಂಕಾದ ಇತರ ಎಲ್ಲಾ ಭಾಗಗಳಲ್ಲಿ ಮಣ್ಣು ಕೆಂಪು ಬಣ್ಣದ್ದಾಗಿದೆ.

ಅಶೋಕವನದಲ್ಲಿ ಸೀತೆಯನ್ನು ದಂಡಕಾರಣ್ಯದಿಂದ ಅಪಹರಿಸಿದ ನಂತರ ರಾಕ್ಷಸ ರಾಜ ರಾವಣನಿಂದ ಆಕೆಯನ್ನು ಸೆರೆಯಲ್ಲಿಟ್ಟ ಸ್ಥಳವಾಗಿದೆ. ಮಹಾಕಾವ್ಯ ರಾಮಾಯಣದಲ್ಲಿ ಸೀತಾ ಮಾತೆ ರಾವಣದ ಅರಮನೆಯಲ್ಲಿ ಉಳಿಯಲು ನಿರಾಕರಿಸಿದಳು. ಬಳಿಕ ಆಕೆ ಅಶೋಕವನದಲ್ಲಿರುವ ಅಶೋಕ ವೃಕ್ಷದ ಕೆಳಗೆ ವಾಸವಾಗಿದ್ದಳು ಎನ್ನಲಾಗುತ್ತದೆ. ಹನುಮಂತನ ಪಾದದ ಗುರುತುಗಳು ಈಗಲೂ ಇಲ್ಲಿನ ಬಂಡೆಗಳ ಮೇಲೆ ಗೋಚರಿಸುತ್ತವೆ. ಆ ಬಂಡೆಯ ಮೇಲೆ ಹನುಮಂತ ಮರದ ಮೇಲಿನಿಂದ ಜಿಗಿದಿದ್ದರಿಂದ ಆ ಆಳವಾದ ಗುರುತು ಮೂಡಿದೆ ಎನ್ನಲಾಗುತ್ತದೆ.

ಇನ್ನಷ್ಟು ಆಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ