AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Japa: ವಿವಿಧ ಜಪಮಾಲೆಗಳ ಮಹತ್ವ; ಇಷ್ಟಾರ್ಥ ಸಿದ್ಧಿಗೆ ಯಾವ ಮಾಲೆಯಿಂದ ಜಪ ಮಾಡಬೇಕು ಗೊತ್ತಾ?

ಕಲಿಯುಗದಲ್ಲಿ ಜಪಕ್ಕೆ ಅಪಾರ ಮಹತ್ವವಿದೆ. ರುದ್ರಾಕ್ಷಿ, ತುಳಸಿ, ಸ್ಪಟಿಕ, ಮತ್ತು ಕಮಲ ಮಾಲೆಗಳಂತಹ ನಾಲ್ಕು ಪ್ರಮುಖ ಮಾಲೆಗಳಿಂದ ಜಪ ಮಾಡುವುದರಿಂದ ಶಿವ, ವಿಷ್ಣು, ಮತ್ತು ಮಹಾಲಕ್ಷ್ಮಿಯ ಕೃಪೆ ಲಭಿಸುತ್ತದೆ. ಅಕಾಲ ಮೃತ್ಯು ನಿವಾರಣೆ, ಶತ್ರು ನಾಶ, ಮತ್ತು ದಾರಿದ್ರ್ಯ ಮುಕ್ತಿ ಸೇರಿದಂತೆ ಅನೇಕ ಆಧ್ಯಾತ್ಮಿಕ ಮತ್ತು ಲೌಕಿಕ ಪ್ರಯೋಜನಗಳನ್ನು ಪಡೆಯಬಹುದು. ಭಕ್ತಿ ಮತ್ತು ನಂಬಿಕೆಯಿಂದ ಜಪ ಮಾಡುವುದು ಅತ್ಯಂತ ಮುಖ್ಯ.

Japa: ವಿವಿಧ ಜಪಮಾಲೆಗಳ ಮಹತ್ವ; ಇಷ್ಟಾರ್ಥ ಸಿದ್ಧಿಗೆ ಯಾವ ಮಾಲೆಯಿಂದ ಜಪ ಮಾಡಬೇಕು ಗೊತ್ತಾ?
ವಿವಿಧ ಜಪಮಾಲೆಗಳ ಮಹತ್ವImage Credit source: Pinterest
ಅಕ್ಷತಾ ವರ್ಕಾಡಿ
|

Updated on: Jun 09, 2026 | 10:34 AM

Share

ಜಪ ಎಂದರೆ ಕೇವಲ ಮಂತ್ರ ಪಠಣವಲ್ಲ, ಅದು ಭಗವಂತನೊಂದಿಗೆ ಭಾವನಾತ್ಮಕವಾಗಿ ಸಂಪರ್ಕ ಸಾಧಿಸುವ ಒಂದು ಪ್ರಕ್ರಿಯೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು “ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ, ತದಹಂ ಭಕ್ತ್ಯುಪಹೃತಮಶ್ನಾಮಿ ಪ್ರಯತಾತ್ಮನಃ” ಎಂದು ಹೇಳಿದ್ದು, ಭಕ್ತಿಯಿಂದ ಅರ್ಪಿಸಿದ ಒಂದು ಎಲೆ, ಹೂವು, ಹಣ್ಣು ಅಥವಾ ನೀರನ್ನೂ ಸಂತೋಷದಿಂದ ಸ್ವೀಕರಿಸುವುದಾಗಿ ತಿಳಿಸಿದ್ದಾನೆ. ಹಾಗೆಯೇ, ಜಪವು ನಮ್ಮ ಪ್ರೀತಿ ಮತ್ತು ಭಕ್ತಿಯ ಸಂಕೇತವಾಗಿದೆ.

ಪ್ರಾಚೀನ ಕೃತ, ತ್ರೇತಾ, ದ್ವಾಪರ ಯುಗಗಳಲ್ಲಿ ಭಗವಂತನನ್ನು ಒಲಿಸಿಕೊಳ್ಳಲು ಅಖಂಡ ಭಜನೆ, ತಪಸ್ಸು, ದೀರ್ಘಕಾಲದ ಯಜ್ಞ-ಯಾಗಾದಿಗಳು ಬೇಕಾಗಿದ್ದವು. ಆದರೆ ಕಲಿಯುಗದಲ್ಲಿ ಜಪಕ್ಕೆ ಅತಿ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಲಾಗಿದೆ. ಕೇವಲ ಒಂದು ಗಂಟೆಯ ಜಪದಿಂದಲೂ ದೈವಿಕ ಅನುಭೂತಿ ಪಡೆಯಲು ಸಾಧ್ಯ. ಜಪ ಮಾಡುವಾಗ ಕೆಲವರು ಮಾಲೆಗಳನ್ನು ಬಳಸಿದರೆ, ಮತ್ತೆ ಕೆಲವರು ಬಾಯಲ್ಲಿ ಅಥವಾ ಮೌನವಾಗಿ ಪಠಿಸುತ್ತಾರೆ. ಆದರೆ ಮಾಲೆಯೊಂದಿಗೆ ಜಪ ಮಾಡುವುದು ಏಕಾಗ್ರತೆ ಮತ್ತು ನಂಬಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಅನುಷ್ಕಾ ಶರ್ಮಾ ಕತ್ತಿನಲ್ಲಿರುವ ತುಳಸಿ ಮಾಲೆ ಗಮನಿಸಿದ್ದೀರಾ? ಧರಿಸುವುದರ ಹಿಂದಿನ ಅಸಲಿ ಕಾರಣ ಇಲ್ಲಿದೆ

ಕಲಿಯುಗದಲ್ಲಿ ಜಪಕ್ಕೆ ಪ್ರಾಶಸ್ತ್ಯವಿರುವ ನಾಲ್ಕು ಪ್ರಮುಖ ಮಾಲೆಗಳಿವೆ:

  • ರುದ್ರಾಕ್ಷಿ ಮಾಲೆ: ಇದು ಶಿವನ ನೇರ ಅನುಗ್ರಹವನ್ನು ನೀಡುತ್ತದೆ. ರುದ್ರಾಕ್ಷಿ ಮಾಲೆಯನ್ನು ಧರಿಸುವುದರಿಂದ ಅಕಾಲ ಮೃತ್ಯು ದೂರವಾಗುತ್ತದೆ ಮತ್ತು ಸಾಕ್ಷಾತ್ ಶಿವನ ಕೃಪೆಗೆ ಪಾತ್ರರಾಗುತ್ತಾರೆ. ಶಿವನು ಸಕಲ ಇಷ್ಟಾರ್ಥಗಳನ್ನು ಪೂರೈಸುವ ದೇವರು. ಆದರೆ ಕೇವಲ ಮಾಲೆಯನ್ನು ಧರಿಸುವುದು ಮುಖ್ಯವಲ್ಲ, ನಮ್ಮ ಕರ್ಮವೂ ಶುದ್ಧವಾಗಿರಬೇಕು.
  • ಸ್ಪಟಿಕ ಮಾಲೆ: ಸ್ಪಟಿಕ ಮಾಲೆಯು ವಿಶೇಷ ಶಕ್ತಿಗಳನ್ನು ನೀಡುತ್ತದೆ. ಇದನ್ನು ಧರಿಸುವುದರಿಂದ ಎದುರಿನ ವ್ಯಕ್ತಿಯ ಮನಸ್ಸನ್ನು ಅರಿಯುವ ಶಕ್ತಿ ಬರುತ್ತದೆ ಮತ್ತು ತಾಂತ್ರಿಕವಾಗಿ ಒಬ್ಬ ವ್ಯಕ್ತಿಯಲ್ಲಿ ಅತಿ ವಿಶೇಷವಾದ ಶಕ್ತಿಗಳು ಪ್ರಕಟಗೊಳ್ಳುತ್ತವೆ.
  • ತುಳಸಿ ಮಾಲೆ: ವಿಷ್ಣುವಿಗೆ ಅತ್ಯಂತ ಪ್ರಿಯವಾದ ಈ ಮಾಲೆಯನ್ನು ಎಲ್ಲಾ ವರ್ಗದವರೂ ಧರಿಸಬಹುದು. ಇಸ್ಕಾನ್‌ನಂತಹ ಸಂಸ್ಥೆಗಳಲ್ಲಿ ವಯಸ್ಸಿನ ಭೇದವಿಲ್ಲದೆ ಎಲ್ಲರೂ ಇದನ್ನು ಧರಿಸುವುದನ್ನು ಕಾಣಬಹುದು. ತುಳಸಿ ಮಾಲೆಯು ವಿಷ್ಣುವಿನ ಕೃಪೆಯನ್ನು ತಂದು, ಜೀವನ ನಿರ್ವಹಣೆಗೆ ಬೇಕಾದ ಶಕ್ತಿಯನ್ನು ನೀಡುತ್ತದೆ. ಪದ್ಮಪುರಾಣದ ಪ್ರಕಾರ, ತುಳಸಿ ಮಾಲೆಯನ್ನು ಕನಿಷ್ಠ 108 ದಿನಗಳ ಕಾಲ ಕುತ್ತಿಗೆಯಲ್ಲಿ ಧರಿಸುವುದರಿಂದ ಅಶ್ವಮೇಧ ಯಜ್ಞ ಮಾಡಿದ ಫಲ ಲಭಿಸುತ್ತದೆ ಎಂದು ನಂಬಲಾಗಿದೆ.
  • ಕಮಲಮಣಿ ಮಾಲೆ (ಕಮಲ ಬೀಜದ ಮಾಲೆ): ಇದು ಮಹಾಲಕ್ಷ್ಮಿ ಅಥವಾ ಕಮಲಾಕ್ಷಿಗೆ ಅತ್ಯಂತ ಪ್ರಿಯವಾದ ಮಾಲೆ. ಈ ಮಾಲೆಯಿಂದ ಜಪ ಮಾಡುವುದರಿಂದ ಶತ್ರುಗಳು ನಾಶವಾಗುತ್ತಾರೆ, ದೃಷ್ಟಿ ದೋಷ ನಿವಾರಣೆಯಾಗುತ್ತದೆ, ಮಾಟ-ಮಂತ್ರ ಪ್ರಯೋಗಗಳು ದೂರವಾಗುತ್ತವೆ. ಇದರೊಂದಿಗೆ ಮಹಾಲಕ್ಷ್ಮಿಯ ಸಂಪೂರ್ಣ ಕೃಪೆ ಲಭಿಸಿ, ದಾರಿದ್ರ್ಯ ನಾಶವಾಗಿ, ಸಾಲಗಳಿಂದ ಮುಕ್ತಿ ಸಿಕ್ಕು ಋಣಮುಕ್ತರಾಗುತ್ತಾರೆ.

ಯಾವುದೇ ಮಾಲೆಯನ್ನು ಕೇವಲ ಶೋಕಿಗಾಗಿ ಅಥವಾ ಜನರಿಗೆ ಆಧ್ಯಾತ್ಮಿಕತೆಯನ್ನು ಪ್ರದರ್ಶಿಸಲು ಧರಿಸಬಾರದು. ಮಾಲೆಯನ್ನು ಧರಿಸಿದಾಗ ನಮ್ಮ ಮನಸ್ಸು ಭಗವಂತನ ಕಡೆಗೆ ತಿರುಗಬೇಕು ಮತ್ತು ಭಗವಂತನ ಮೇಲೆ ಅಚಲವಾದ ನಂಬಿಕೆ ಇರಬೇಕು. ಬ್ರಾಹ್ಮಿ ಮುಹೂರ್ತ, ಅಭಿಜಿನ್ ಮುಹೂರ್ತ, ಗೋಧೂಳಿ ಮುಹೂರ್ತದಂತಹ ಶುಭ ಸಮಯಗಳಲ್ಲಿ ಪ್ರತಿದಿನ ಕನಿಷ್ಠ ಐದು ನಿಮಿಷಗಳ ಕಾಲ ಜಪ ಮಾಡುವುದರಿಂದ ಜನ್ಮ ಜನ್ಮಾಂತರದ ಪಾಪಗಳು ನಾಶವಾಗುತ್ತವೆ. ಎಲ್ಲವೂ ನಂಬಿಕೆಯ ಆಧಾರದ ಮೇಲೆ ನಿಂತಿವೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ಕರಗಿದ ಉಕ್ಕನ್ನು ಹೊತ್ತೊಯ್ಯುತ್ತಿದ್ದ ಲ್ಯಾಡಲ್ ಸ್ಫೋಟ, 8 ಮಂದಿ ಸಾವು
ಕರಗಿದ ಉಕ್ಕನ್ನು ಹೊತ್ತೊಯ್ಯುತ್ತಿದ್ದ ಲ್ಯಾಡಲ್ ಸ್ಫೋಟ, 8 ಮಂದಿ ಸಾವು
‘ಕ್ಷೇತ್ರಪಾಲ’ ಸಿನಿಮಾದಲ್ಲಿ ದೈವದ ಕಥೆ? ವಿವರಿಸಿದ ತಂಡ
‘ಕ್ಷೇತ್ರಪಾಲ’ ಸಿನಿಮಾದಲ್ಲಿ ದೈವದ ಕಥೆ? ವಿವರಿಸಿದ ತಂಡ
ಗೋಕರ್ಣದ ಮಹಾಬಲೇಶ್ವರ ದೇಗುಲದಲ್ಲಿ ಆತ್ಮಲಿಂಗವನ್ನೇ ಆವರಿಸಿದ ಕೊಳಚೆ ನೀರು
ಗೋಕರ್ಣದ ಮಹಾಬಲೇಶ್ವರ ದೇಗುಲದಲ್ಲಿ ಆತ್ಮಲಿಂಗವನ್ನೇ ಆವರಿಸಿದ ಕೊಳಚೆ ನೀರು
ಇಂದು ಈ ರಾಶಿಯವರ ವಿವಾಹ ವಿಚಾರದಲ್ಲಿ ಪ್ರಗತಿ
ಇಂದು ಈ ರಾಶಿಯವರ ವಿವಾಹ ವಿಚಾರದಲ್ಲಿ ಪ್ರಗತಿ
ದೇಶಕ್ಕಾಗಿ ಪ್ರಾಣತೆತ್ತ ಮಗನ ನೆನೆದು ರಾಷ್ಟ್ರಪತಿ ಮುಂದೆ ಕಣ್ಣೀರಿಟ್ಟ ತಾಯಿ
ದೇಶಕ್ಕಾಗಿ ಪ್ರಾಣತೆತ್ತ ಮಗನ ನೆನೆದು ರಾಷ್ಟ್ರಪತಿ ಮುಂದೆ ಕಣ್ಣೀರಿಟ್ಟ ತಾಯಿ
ಮೃತರ ಸಂಖ್ಯೆ 35ಕ್ಕೆ ಏರಿಕೆ: ಫಿಲಿಫೈನ್ ಭೂಕಂಪದ ಕರಾಳತೆ ಹೇಗಿತ್ತು ನೋಡಿ
ಮೃತರ ಸಂಖ್ಯೆ 35ಕ್ಕೆ ಏರಿಕೆ: ಫಿಲಿಫೈನ್ ಭೂಕಂಪದ ಕರಾಳತೆ ಹೇಗಿತ್ತು ನೋಡಿ
ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ಹೊಸ ಸಿಎಂ, ಹೊಸ ಸಂಪ್ರದಾಯ: ಈ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?
ಹೊಸ ಸಿಎಂ, ಹೊಸ ಸಂಪ್ರದಾಯ: ಈ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?
ಚುನಾವಣೆಯಲ್ಲಿ ನಿಲ್ಲದೇ ಸಿಎಂ ಆದ ಕಥೆ: ಇದು ‘ಕಾಮನ್ ಮ್ಯಾನ್’ ಸಸ್ಪೆನ್ಸ್
ಚುನಾವಣೆಯಲ್ಲಿ ನಿಲ್ಲದೇ ಸಿಎಂ ಆದ ಕಥೆ: ಇದು ‘ಕಾಮನ್ ಮ್ಯಾನ್’ ಸಸ್ಪೆನ್ಸ್
ಕೆನಡಾದಲ್ಲಿ ಭಾರತೀಯ ಯುವಕರ ಬಳಿ ಸಹಾಯ ಕೇಳಿದ ಯುವತಿ
ಕೆನಡಾದಲ್ಲಿ ಭಾರತೀಯ ಯುವಕರ ಬಳಿ ಸಹಾಯ ಕೇಳಿದ ಯುವತಿ