AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shivaratri Special Recipe : ಶಿವನ ನೈವೇದ್ಯಕ್ಕೆ ಈ ಸುಲಭ ಸಿಹಿತಿಂಡಿಗಳು ಸಾಕು

ಇಂದು ನಾಡಿನೆಲ್ಲೆಡೆ ಶಿವರಾತ್ರಿ ಹಬ್ಬದ ಸಂಭ್ರಮವು ಮನೆ ಮಾಡಿದೆ. ಈಗಾಗಲೇ ಶಿವ ದೇವಾಲಯಗಳಲ್ಲಿ ಶಿವನಿಗೆ ವಿಶೇಷ ಪೂಜೆ ಹಾಗೂ ಅಭಿಷೇಕಗಳು ಶುರುವಾಗಿದೆ. ಇತ್ತ ಮನೆಯಲ್ಲಿಯು ಶಿವ ಭಕ್ತಾಧಿಗಳು ಜಾಗರಣೆ, ಉಪವಾಸಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದ್ದಾರೆ. ಈ ಮಹಾಶಿವರಾತ್ರಿಯ ಹಬ್ಬದಂದು ಮನೆಯಲ್ಲೇ ವಿವಿಧ ರೀತಿಯ ಸಿಹಿ ತಿಂಡಿಗಳನ್ನು ಶಿವನಿಗೆ ನೈವೇದ್ಯ ಇಡುತ್ತಾರೆ. ಮನೆಯಲ್ಲಿ ಈ ಕೆಲವೇ ಕೆಲವು ಸಾಮಗ್ರಿಗಳಿದ್ದರೆ ಸಿಹಿ ಗೆಣಸಿನ ಹೋಳಿಗೆ ಹಾಗೂ ಬಾಳೆಹಣ್ಣಿನ ಬರ್ಫಿ ಮಾಡಿ ಶಿವನಿಗೆ ಅರ್ಪಿಸಬಹುದು.

Shivaratri Special Recipe : ಶಿವನ ನೈವೇದ್ಯಕ್ಕೆ ಈ ಸುಲಭ ಸಿಹಿತಿಂಡಿಗಳು ಸಾಕು
ಸಾಯಿನಂದಾ
| Edited By: |

Updated on: Mar 08, 2024 | 12:05 PM

Share

ಶಿವರಾತ್ರಿ ಹಬ್ಬವು ಬಂದೆ ಬಿಟ್ಟಿತು, ದೇಶದಾದಂತ್ಯ ಇಂದು ಶಿವರಾತ್ರಿಯ ಸಂಭ್ರಮವು ಜೋರಾಗಿದೆ. ಈ ಮಹಾ ಶಿವರಾತ್ರಿಯ ದಿನದಂದು ಕೆಲವರು ಉಪವಾಸ ಮಾಡಿ ವೃತ ಆಚರಿಸುತ್ತಾರೆ. ಆದರೆ ಉಪವಾಸದ ಸಮಯದಲ್ಲಿ ಕೆಲವರು ಸಿಹಿ ತಿನಿಸುಗಳನ್ನು ದೇವರಿಗೆ ನೈವೇದ್ಯವಾಗಿಟ್ಟು ತಾವು ಕೂಡ ಪ್ರಸಾದವಾಗಿ ಸ್ವೀಕರಿಸುತ್ತಾರೆ. ಈ ದಿನದಂದು ಮನೆಯಲ್ಲೇ ಸುಲಭವಾದ ಕೆಲವು ರೆಸಿಪಿಗಳನ್ನು ಮಾಡಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಬಹುದು.

ಸಿಹಿ ಗೆಣಸಿನ ಹೋಳಿಗೆ ಬೇಕಾಗುವ ಪದಾರ್ಥಗಳು:

* ಗೋಧಿ ಹಿಟ್ಟು

* ಚಿರೋಟಿ ರವೆ

* ಮೈದಾಹಿಟ್ಟು

* ಅರಿಶಿಣ

* ಬೇಯಿಸಿಟ್ಟ ಗೆಣಸು

* ಬೆಲ್ಲ

* ಅಡುಗೆ ಎಣ್ಣೆ

* ತುಪ್ಪ

* ಉಪ್ಪು

ಇದನ್ನೂ ಓದಿ: ಶಿವನನ್ನು ಸುಲಭವಾಗಿ ಮೆಚ್ಚಿಸಲು ಈ ನೈವೇದ್ಯಗಳನ್ನು ಅರ್ಪಿಸಿ

ತಯಾರಿಸುವ ವಿಧಾನ:

* ಮೊದಲಿಗೆ ಗೋಧಿ ಹಿಟ್ಟು, ಚಿರೋಟಿ ರವೆ, ಮೈದಾ, ಚಿಟಿಕೆಯಷ್ಟು ಅರಶಿನ, ಉಪ್ಪು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು.

* ಕಲಸಿಟ್ಟ ಹಿಟ್ಟಿನ ಮೇಲೆ ಒಂದೆರಡು ಚಮಚ ಅಡುಗೆ ಎಣ್ಣೆ ಹಾಕಿ ಸ್ವಲ್ಪ ಹೊತ್ತು ಹಾಗೆ ಬಿಟ್ಟಿಡಿ.

* ಇನ್ನೊಂದೆಡೆ ಗ್ಯಾಸ್ ಮೇಲೆ ಸಿಹಿ ಗೆಣಸನ್ನು ತೊಳೆದು ಬೇಯಿಸಿಕೊಳ್ಳಿ. ಬೆಂದ ಸಿಹಿ ಗೆಣಸಿನ ಸಿಪ್ಪೆ ತೆಗೆದು ಪುಡಿ ಮಾಡಿ ಬೆಲ್ಲ ಸೇರಿಸಿ ಹೂರಣವನ್ನು ಸಿದ್ಧಮಾಡಿಟ್ಟುಕೊಳ್ಳಿ.

* ಕಲಸಿಟ್ಟ ಹಿಟ್ಟನ್ನು ಉಂಡೆಯಾಕಾರ ಮಾಡಿಕೊಂಡು, ಅದಕ್ಕೆ ಹೂರಣವನ್ನು ತುಂಬಿ ಅದನ್ನು ಕೈಯಲ್ಲೇ ತಟ್ಟಿಕೊಂಡು, ಆ ಬಳಿಕ ದುಂಡಗೆ ಲಟ್ಟಿಸಿಕೊಳ್ಳಿ.

* ಲಟ್ಟಿಸಿದ ಹೋಳಿಗೆಯನ್ನು ಕಾವಲಿನ ಮೇಲೆ ಹಾಕಿ ಕಂದು ಬಣ್ಣ ಬರುವವರೆಗೆ ಕಾಯಿಸಿಕೊಂಡರೆ ಸಿಹಿ ಸಿಹಿಯಾದ ಗೆಣಸಿನ ಹೋಳಿಗೆಯೂ ಸವಿಯಲು ಸಿದ್ಧವಾಗಿರುತ್ತದೆ.

ಬಾಳೆ ಹಣ್ಣಿನ ಬರ್ಫಿಗೆ ಬೇಕಾಗುವ ಸಾಮಗ್ರಿಗಳು:

* ಬಾಳೆಹಣ್ಣು

* ಹಾಲು

* ಸಕ್ಕರೆ

* ತುಪ್ಪ

* ತುರಿದ ತೆಂಗಿನ ಕಾಯಿ

* ಅಕ್ರೋಡ

 ಬಾಳೆ ಹಣ್ಣಿನ ಬರ್ಫಿ ಮಾಡುವ ವಿಧಾನ :

* ಬಾಳೆಹಣ್ಣನ್ನು ಚೆನ್ನಾಗಿ ಕಿವುಚಿಕೊಂಡು, ಹಾಲಿನಲ್ಲಿ ಬೆರೆಸಿ ಗಟ್ಟಿಯಾಗುವವರೆಗೆ ಕುದಿಸಿಕೊಳ್ಳಿ.

* ಇದಕ್ಕೆ ತುಪ್ಪ ಹಾಕಿ ಕಂದು ಬಣ್ಣ ಬರುವವರೆಗೂ ಕೈಯಾಡಿಸುತ್ತಾ ಇರಿ.

* ಆ ಬಳಿಕ ಸಕ್ಕರೆ, ತೆಂಗಿನ ಕಾಯಿಯ ತುರಿ ಹಾಗೂ ಅಕ್ರೋಡ ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ.

* ಒಂದು ಬಟ್ಟಲಿಗೆ ತುಪ್ಪ ಸವರಿ ಈ ಮಿಶ್ರಣವನ್ನು ಹಾಕಿ ತಣ್ಣಗಾಗಲು ಬಿಡಿ. ಬೇಕಾದ ಆಕಾರದಲ್ಲಿ ಕತ್ತರಿಸಿದರೆ ರುಚಿ ರುಚಿಯಾದ ಬಾಳೆಹಣ್ಣಿನ ಬರ್ಫಿ ಸವಿಯಲು ಸಿದ್ಧ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್