
ಈ ವರ್ಷ ಅಂದರೆ 2025 ರ ಶ್ರಾವಣ ಮಾಸ ಜುಲೈ 23 ರಿಂದ ಪ್ರಾರಂಭವಾಗಿ ಆಗಸ್ಟ್ 8 ರಂದು ಕೊನೆಗೊಳ್ಳಲಿದೆ. ಶ್ರಾವಣ ಮಾಸದಲ್ಲಿ ಬರುವ ಪ್ರತಿಯೊಂದು ಸೋಮವಾರವನ್ನು ಶ್ರಾವಣ ಸೋಮವಾರವೆಂದು ಆಚರಿಸಲಾಗುತ್ತದೆ. ಶ್ರಾವಣ ಸೋಮವಾರವು ಶಿವನ ಆರಾಧನೆಗೆ ಮೀಸಲಾದ ಮಂಗಳಕರ ದಿನವಾಗಿದೆ. ಈ ದಿನದಂದು ಶಿವನಿಗೆ ಕೆಲವೊಂದು ವಸ್ತುಗಳನ್ನು ಅರ್ಪಿಸುವುದು ಅತ್ಯಂತ ಶುಭಕರವಾಗಿ ಪರಿಗಣಿಸಲಾಗುತ್ತದೆ. ಇದರಿಂದ ಭಕ್ತರ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆಯಿದೆ.
ಶಿವನನ್ನು ಪೂಜಿಸುವ ಪ್ರಮುಖ ವಿಧಾನವೆಂದರೆ ಜಲಾಭಿಷೇಕ, ಅದು ಇಲ್ಲದೆ ಪೂಜೆ ಪೂರ್ಣಗೊಳ್ಳುವುದಿಲ್ಲ. ಶ್ರಾವಣ ಸೋಮವಾರದ ಸಮಯದಲ್ಲಿ, ಶಿವಲಿಂಗಕ್ಕೆ ಶುದ್ಧ ನೀರಿನಿಂದ ಅಭಿಷೇಕ ಮಾಡಬೇಕು. ನೀರಿನ ಜೊತೆಗೆ, ನೀವು ಗಂಗಾ ಜಲ, ಹಾಲು, ತುಪ್ಪ, ಮೊಸರು, ಜೇನುತುಪ್ಪ ಇತ್ಯಾದಿಗಳನ್ನು ಸೇರಿಸಿ ಅಭಿಷೇಕ ಮಾಡಬಹುದು.
ಶ್ರಾವಣ ಸೋಮವಾರದಂದು ಸಂಜೆ ಶಿವ ದೇವಾಲಯಕ್ಕೆ ಭೇಟಿ ನೀಡಿ ಶುದ್ಧ ಮನಸ್ಸಿನಿಂದ ದೀಪ ಹಚ್ಚಬೇಕು. ಇದು ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಮನೆಯಲ್ಲಿ ಶಿವಲಿಂಗವನ್ನು ಸ್ಥಾಪಿಸಿದರೆ, ಸಂಜೆ ಶಿವಲಿಂಗದ ಬಳಿ ದೀಪ ಹಚ್ಚಲು ಮರೆಯದಿರಿ.
ಶ್ರಾವಣ ಸೋಮವಾರದಂದು ಶಿವಲಿಂಗದ ಮೇಲೆ ಶಿವಮುತ್ತಿಯನ್ನು ಅರ್ಪಿಸಬೇಕು. ಇದು ಮುಖ್ಯವಾಗಿ ತೊಗರಿ ಬೇಳೆ, ಅಕ್ಕಿ, ಗೋಧಿ, ಎಳ್ಳು ಮತ್ತು ಹೆಸರುಬೇಳೆ ಮುಂತಾದ 5 ವಿಧದ ಧಾನ್ಯಗಳನ್ನು ಒಳಗೊಂಡಿದೆ. ಇದನ್ನು ಅರ್ಪಿಸುವುದರಿಂದ ಸಮಸ್ಯೆಗಳು ಕಡಿಮೆಯಾಗುತ್ತವೆ ಎಂದು ನಂಬಲಾಗಿದೆ.
ಇದನ್ನೂ ಓದಿ: ಹಳೆಯದಾದ ದೇವರ ಫೋಟೋಗಳನ್ನು ಅಲ್ಲಲ್ಲಿ ಎಸೆಯಬೇಡಿ ಈ ದೇವಾಲಯಕ್ಕೆ ತಂದುಕೊಡಿ
ಶ್ರಾವಣ ಸೋಮವಾರದಂದು, ಶಿವ ದೇವಾಲಯದಲ್ಲಿರುವ ತಾಮ್ರದ ಕಲಶದಲ್ಲಿ ಗಂಗಾ ಜಲವನ್ನು ತುಂಬಿಸಿ, ಅದಕ್ಕೆ ಅಕ್ಷತೆ, ಬಿಳಿ ಹೂವುಗಳು ಮತ್ತು ಶ್ರೀಗಂಧವನ್ನು ಸೇರಿಸಿ ಮತ್ತು ಓಂ ನಮಃ ಶಿವಾಯ ಮಂತ್ರವನ್ನು ಜಪಿಸುತ್ತಾ ಶಿವಲಿಂಗಕ್ಕೆ ಅರ್ಪಿಸಿ.
ಶ್ರಾವಣ ಸೋಮವಾರದಂದು ಉಪವಾಸ ಮಾಡಿ ಮತ್ತು ಸಾಧ್ಯವಾದಷ್ಟು ಮಂತ್ರಗಳನ್ನು ಪಠಿಸಿ. ಈ ದಿನದಂದು ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುವುದು ಅತ್ಯಂತ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:24 am, Thu, 24 July 25