AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hindu Ritual: ತಿಥಿ ಊಟಕ್ಕೆ ಹೋಗಿ ಬಂದರೆ ಕೆಟ್ಟದ್ದೇ ಆಗುತ್ತಾ? ತಜ್ಞರು ಹೇಳುವುದೇನು?

ಯಾರೇ ದೈವಾಧೀನರಾದಾಗ ಅವರ ನೆನಪಿನಲ್ಲಿ ತಿಥಿ ಊಟ ಅಥವಾ ತಿಥಿ ಆಹಾರವನ್ನು ಸೇವಿಸುವ ಪದ್ಧತಿ ನಮ್ಮ ಸಂಪ್ರದಾಯದಲ್ಲಿದೆ. ಆದರೆ ತಿಥಿ ಕಾರ್ಯಕ್ರಮಗಳಲ್ಲಿ ಆಹಾರ ಸೇವಿಸುವುದು ಶುಭವೇ ಅಥವಾ ಅಶುಭವೇ ಎಂಬ ಪ್ರಶ್ನೆ ಅನೇಕರಲ್ಲಿದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

Hindu Ritual: ತಿಥಿ ಊಟಕ್ಕೆ ಹೋಗಿ ಬಂದರೆ ಕೆಟ್ಟದ್ದೇ ಆಗುತ್ತಾ? ತಜ್ಞರು ಹೇಳುವುದೇನು?
ತಿಥಿ ಊಟ
ಅಕ್ಷತಾ ವರ್ಕಾಡಿ
|

Updated on: Apr 09, 2026 | 8:26 AM

Share

ಯಾರೇ ದೈವಾಧೀನರಾದಾಗ, ಸ್ವರ್ಗಸ್ಥರಾದಾಗ ಅಥವಾ ವೈಕುಂಠ ಪ್ರಯಾಣ ಬೆಳೆಸಿದಾಗ, ಅವರ ನೆನಪಿನಲ್ಲಿ ತಿಥಿ ಊಟ ಅಥವಾ ತಿಥಿ ಆಹಾರವನ್ನು ಸೇವಿಸುವ ಪದ್ಧತಿ ನಮ್ಮ ಸಂಪ್ರದಾಯದಲ್ಲಿದೆ. ಆದರೆ, ಈ ತಿಥಿ ಊಟವನ್ನು ಸೇವಿಸಬಹುದೇ ಅಥವಾ ಇದು ಏನಾದರೂ ತೊಂದರೆಯನ್ನು ತರುತ್ತದೆಯೇ ಎಂಬ ಬಗ್ಗೆ ಹಲವರಲ್ಲಿ ಪ್ರಶ್ನೆಗಳು ಮತ್ತು ಸಂಶಯಗಳಿವೆ. ಕೆಲವರು ತಿಥಿ ಊಟಕ್ಕೆ ಹೋಗಲು ನಿರಾಕರಿಸುತ್ತಾರೆ, ಇದರಿಂದ ಅದೃಷ್ಟ ಕೆಡುತ್ತದೆ ಅಥವಾ ಅಶುಭವಾಗುತ್ತದೆ ಎಂದು ಭಾವಿಸುತ್ತಾರೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ವಾಸ್ತವವಾಗಿ, ಯಾವುದೇ ವ್ಯಕ್ತಿ ದೇಹ ತ್ಯಾಗ ಮಾಡಿದಾಗ, ಅವರ ಆತ್ಮವು ಈ ಲೋಕದಿಂದ ನಿರ್ಗಮಿಸುತ್ತದೆ. ಆ ನಂತರ ಮೂರು ದಿನಗಳ ಅಥವಾ ಹನ್ನೊಂದನೇ ದಿನದ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಈ ಹನ್ನೊಂದನೇ ದಿನದಂದು ಎಲ್ಲ ಬಂಧುಬಾಂಧವರನ್ನು, ಸ್ನೇಹಿತರನ್ನು ಕರೆದು, ದಿವಂಗತರ ಭಾವಚಿತ್ರಕ್ಕೆ ಪೂಜೆ ಮಾಡಿ, ಅವರ ನೆನಪಿನಲ್ಲಿ ಆಹಾರ ಸೇವನೆ ಮಾಡುವ ಪದ್ಧತಿಯನ್ನೇ ನಾವು ತಿಥಿ ಊಟ ಎಂದು ಕರೆಯುತ್ತೇವೆ. ಕುಟುಂಬದವರಿಗೆ ಮೂರು ಅಥವಾ ಹನ್ನೊಂದು ದಿನಗಳ ಸೂತಕವಿರುತ್ತದೆ ನಿಜ. ಆದರೆ, ಈ ಕಾರ್ಯಕ್ರಮಕ್ಕೆ ಬಂದು ಆಹಾರ ಸೇವನೆ ಮಾಡುವ ಬಂಧುಗಳು, ಸ್ನೇಹಿತರಿಗೆ ಇದರಿಂದ ಯಾವುದೇ ರೀತಿಯ ಕಂಟಕ ಅಥವಾ ಆಧ್ಯಾತ್ಮಿಕ ತೊಂದರೆಗಳು ಎದುರಾಗುತ್ತವೆ ಎಂಬುದು ಸಂಪೂರ್ಣ ತಪ್ಪು ಕಲ್ಪನೆ.

ತಿಥಿ ಊಟ ಸೇವಿಸುವುದರಿಂದ ಅದೃಷ್ಟ ಹಾಳಾಗುವುದಿಲ್ಲ, ಅಥವಾ ಯಾವುದೇ ತೊಂದರೆಗಳು ಬರುವುದಿಲ್ಲ. ಇದಕ್ಕೆ ಯಾವುದೇ ಸಂಬಂಧವೂ ಇಲ್ಲ. ಬದುಕಿದ್ದಾಗ ಆ ವ್ಯಕ್ತಿ ನಮ್ಮೊಂದಿಗಿದ್ದ ಬಾಂಧವ್ಯದಂತೆಯೇ, ಮರಣಾನಂತರ ಅವರ ಆತ್ಮಕ್ಕೆ ಸಲ್ಲಿಸುವ ಗೌರವವೇ ತಿಥಿ ಊಟ. ಅವರ ನೆನಪಿನಲ್ಲಿ ನೀಡುವ ಅನ್ನ ಅಥವಾ ಆಹಾರವು ಆ ಆತ್ಮಕ್ಕೆ ತೃಪ್ತಿ ನೀಡಿ, ನಿಮಗಿನ್ನೂ ಧನಾತ್ಮಕ ಆಶೀರ್ವಾದಗಳನ್ನು ನೀಡುತ್ತದೆ. ಅದು ಚಿಕ್ಕ ಮಕ್ಕಳಾಗಿರಲಿ, ಹಿರಿಯರಾಗಿರಲಿ, ಅಥವಾ ಅನಾರೋಗ್ಯದಿಂದ ಅಥವಾ ಆಕಸ್ಮಿಕವಾಗಿ ಹೋಗಿರಲಿ. ಅವರ ಆತ್ಮವು ನಿಮ್ಮನ್ನು ಹರಸುತ್ತದೆ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ತಿಥಿ ಊಟಕ್ಕೆ ಹೋಗಿ ಬಂದರೆ ಅಪಘಾತವಾಯಿತು, ಆರೋಗ್ಯ ಕೆಟ್ಟಿತು ಅಥವಾ ಇನ್ಯಾವುದೋ ತೊಂದರೆಯಾಯಿತು ಎಂಬ ಮಾತುಗಳು ಕೇವಲ ಕಾಕತಾಳೀಯ ಘಟನೆಗಳು. ಅವುಗಳಿಗೆ ತಿಥಿ ಊಟಕ್ಕೂ ಯಾವುದೇ ಸಂಬಂಧವಿಲ್ಲ. ಗರುಡ ಪುರಾಣದ ಪ್ರಕಾರವೂ, ಈ ಸಂದರ್ಭದಲ್ಲಿ ನೀಡುವ ಒಂದು ತೊಟ್ಟು ನೀರು, ತೀರ್ಥ ಅಥವಾ ಪ್ರಸಾದದಿಂದ ಯಾವುದೇ ರೀತಿಯ ದುಷ್ಪರಿಣಾಮಗಳಾಗುವುದಿಲ್ಲ.

ಹಿರಿಯರು ಮತ್ತು ಬುದ್ಧಿಜೀವಿಗಳ ಮಾತುಗಳನ್ನು ಗಮನಿಸಿದರೆ, ತಿಥಿ ಊಟಕ್ಕೆ ಹೋಗಿ ಬರುವುದರಿಂದ ನಮ್ಮಲ್ಲಿರುವ ಎಷ್ಟೋ ದೋಷಗಳು ಹೊರಟುಹೋಗುತ್ತವೆ ಎಂದು ಹೇಳುವುದನ್ನು ಕೇಳುತ್ತೇವೆ. ಹನ್ನೊಂದನೇ ದಿನದ ತಿಥಿ ಇರಬಹುದು ಅಥವಾ ವಾರ್ಷಿಕ ತಿಥಿ ಕಾರ್ಯಕ್ರಮಗಳಿರಬಹುದು, ಇವುಗಳಿಗೆ ಹೋಗಿ ಆಹಾರ ಸೇವಿಸುವುದು ಯಾವುದೇ ಕಾರಣಕ್ಕೂ ಹಾನಿಕರವಲ್ಲ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
‘ಸಾಕ್ಷ್ಯ ವಿಚಾರಣೆ ವಿಳಂಬ ಆಗುತ್ತಿದೆ, ಜಾಮೀನು ಕೊಡಿ’; ದರ್ಶನ್ ಅರ್ಜಿ
‘ಸಾಕ್ಷ್ಯ ವಿಚಾರಣೆ ವಿಳಂಬ ಆಗುತ್ತಿದೆ, ಜಾಮೀನು ಕೊಡಿ’; ದರ್ಶನ್ ಅರ್ಜಿ
ಪಿಯು ವಿದ್ಯಾರ್ಥಿನಿಯರ ನಾಪತ್ತೆ ಪ್ರಕರಣ: ಸಿಐಡಿ ತನಿಖೆಗೆ ಆದೇಶ
ಪಿಯು ವಿದ್ಯಾರ್ಥಿನಿಯರ ನಾಪತ್ತೆ ಪ್ರಕರಣ: ಸಿಐಡಿ ತನಿಖೆಗೆ ಆದೇಶ
ಬಂಗಾಳ ಅಂತಿಮ ಸಮರದಲ್ಲಿ ಆರಂಭಿಕ ವಿಘ್ನ
ಬಂಗಾಳ ಅಂತಿಮ ಸಮರದಲ್ಲಿ ಆರಂಭಿಕ ವಿಘ್ನ
ಸಂಸದ ಸುನಿಲ್ ಬೋಸ್ ಮನೆಯಲ್ಲಿ ಸಚಿವ ಮಹದೇವಪ್ಪ ಡಿನ್ನರ್ ಮೀಟಿಂಗ್
ಸಂಸದ ಸುನಿಲ್ ಬೋಸ್ ಮನೆಯಲ್ಲಿ ಸಚಿವ ಮಹದೇವಪ್ಪ ಡಿನ್ನರ್ ಮೀಟಿಂಗ್
ವಾರಾಣಸಿಯ ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ
ವಾರಾಣಸಿಯ ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ
ಡಿಕೆಶಿ ಬಣಕ್ಕೆ ಮೇ ಕ್ರಾಂತಿ ಕನಸು: ಸಿದ್ದರಾಮಯ್ಯ ಬಣ ಅಹಿಂದ ಕಾರ್ಡ್​ ಪ್ಲೇ!
ಡಿಕೆಶಿ ಬಣಕ್ಕೆ ಮೇ ಕ್ರಾಂತಿ ಕನಸು: ಸಿದ್ದರಾಮಯ್ಯ ಬಣ ಅಹಿಂದ ಕಾರ್ಡ್​ ಪ್ಲೇ!
ಹಾಸನ ಹಲವು ಅವಾಂತರ ಸೃಷ್ಟಿಸಿದ ಮಳೆ: ಧರೆಗುರುಳಿದ ವಿದ್ಯುತ್​ ಕಂಬ, ಮರಗಳು
ಹಾಸನ ಹಲವು ಅವಾಂತರ ಸೃಷ್ಟಿಸಿದ ಮಳೆ: ಧರೆಗುರುಳಿದ ವಿದ್ಯುತ್​ ಕಂಬ, ಮರಗಳು
ಐವಿ ಡ್ರಿಪ್​ ಹಾಕಿಸಿಕೊಂಡು ಕೆಲಸಕ್ಕೆ ಹಾಜರಾದ ಅಂಗನವಾಡಿ ಕಾರ್ಯಕರ್ತೆ
ಐವಿ ಡ್ರಿಪ್​ ಹಾಕಿಸಿಕೊಂಡು ಕೆಲಸಕ್ಕೆ ಹಾಜರಾದ ಅಂಗನವಾಡಿ ಕಾರ್ಯಕರ್ತೆ
‘ಮಗನೇ ಈಗಲೂ ನನಗೆ ಸಿನಿಮಾ ಅರ್ಥ ಆಗಿಲ್ಲ ಅಂತಿದ್ರು’; ವಿನೋದ್
‘ಮಗನೇ ಈಗಲೂ ನನಗೆ ಸಿನಿಮಾ ಅರ್ಥ ಆಗಿಲ್ಲ ಅಂತಿದ್ರು’; ವಿನೋದ್
ಇಂದು ಈ ರಾಶಿಯವರಿಗೆ ಪ್ರೇಮ ವ್ಯವಹಾರಗಳಿಗೆ ಮನ್ನಣೆ
ಇಂದು ಈ ರಾಶಿಯವರಿಗೆ ಪ್ರೇಮ ವ್ಯವಹಾರಗಳಿಗೆ ಮನ್ನಣೆ