Black Cat omen: ಶುಭ ಕಾರ್ಯಗಳಿಗೆ ಹೊರಟಾಗ ಕಪ್ಪು ಬೆಕ್ಕು ದಾರಿಗೆ ಅಡ್ಡ ಬಂದರೆ ಅಶುಭವೇ?
ಕಪ್ಪು ಬೆಕ್ಕು ದಾರಿಗೆ ಅಡ್ಡ ಬಂದರೆ ಶುಭವೇ ಅಶುಭವೇ ಎಂಬುದು ಜನರಲ್ಲಿ ಸಾಮಾನ್ಯವಾಗಿರುವ ಪ್ರಶ್ನೆ. ಪುರಾತನ ನಂಬಿಕೆಗಳ ಪ್ರಕಾರ, ಕಪ್ಪು ಬೆಕ್ಕು ರಾಹು ಮತ್ತು ಕೇತುವಿನ ಸಂಕೇತವಾಗಿದ್ದು, ಕಲಹ, ಗಲಾಟೆ, ಹಾಗೂ ಕೆಲಸ ಕಾರ್ಯಗಳಲ್ಲಿ ವಿಳಂಬವನ್ನು ಸೂಚಿಸುತ್ತದೆ. ಇಂತಹ ಸಂದರ್ಭದಲ್ಲಿ ಸ್ವಲ್ಪ ಸಮಯ ಕಾಯುವುದು, ನೀರು ಕುಡಿಯುವುದು ಉತ್ತಮ ಎಂದು ಡಾ. ಬಸವರಾಜ್ ಗುರೂಜಿ ಸಲಹೆ ನೀಡಿದ್ದಾರೆ.

ಕಪ್ಪು ಬಣ್ಣವನ್ನು ಶನಿಯ ಪ್ರತೀಕ ಎಂದು ಪರಿಗಣಿಸಲಾಗುತ್ತದೆ. ಇದು ನಿಧಾನಗತಿ, ಅಜ್ಞಾನ ಮತ್ತು ಅಂಧಕಾರವನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಯಾವುದೇ ಬೆಕ್ಕು ದಾರಿಗೆ ಅಡ್ಡ ಬಂದರೆ, ಎಡಕ್ಕೆ ಹೋಗಲಿ ಅಥವಾ ಬಲಕ್ಕೆ ಹೋಗಲಿ, ನಮ್ಮ ಹಿರಿಯರು ವಾಹನವನ್ನು ನಿಲ್ಲಿಸಿ ಸ್ವಲ್ಪ ಸಮಯದ ನಂತರ ಮುಂದೆ ಸಾಗಲು ಸೂಚಿಸುತ್ತಾರೆ. ಕಪ್ಪು ಬೆಕ್ಕು ದಾರಿಗೆ ಅಡ್ಡ ಬಂದರೆ ಅದು ಅದೃಷ್ಟವೋ ದುರದೃಷ್ಟವೋ ಎಂಬ ಪ್ರಶ್ನೆ ಹಲವರ ಮನಸ್ಸಿನಲ್ಲಿ ಮೂಡುತ್ತದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.
ಶುಭ ಕಾರ್ಯಗಳಿಗೆ, ಹೊಸ ಕೆಲಸಗಳಿಗೆ, ಹೊಸ ವಾಹನ ಖರೀದಿಗೆ ಅಥವಾ ವಿವಾಹದ ವಿಷಯಗಳಿಗೆ ಹೊರಟಾಗ ಕಪ್ಪು ಬೆಕ್ಕು ಅಡ್ಡ ಬಂದರೆ, ಅದು ಕಲಹಗಳು, ಗಲಾಟೆಗಳು ಮತ್ತು ಮನಸ್ಸಿನಲ್ಲಿ ವಿಕೃತ ಭಾವನೆಗಳಿಗೆ ಕಾರಣವಾಗಬಹುದು ಎಂದು ನಂಬಲಾಗಿದೆ. ಇದು ಪ್ರಾಣಹಾನಿಯ ಸೂಚನೆಯಲ್ಲ, ಆದರೆ ಮಾನಸಿಕ ಒತ್ತಡ ಮತ್ತು ಸಂಬಂಧಗಳಲ್ಲಿ ಭಿನ್ನಾಭಿಪ್ರಾಯಗಳನ್ನು ಹೆಚ್ಚಿಸಬಹುದು. ಕಪ್ಪು ಬೆಕ್ಕು ರಾಹು ಗ್ರಹದ ಸಂಕೇತವಾಗಿದೆ. ಕಪ್ಪು ಬೆಕ್ಕಿನ ಕಣ್ಣುಗಳು ಕೇತು ಗ್ರಹದ ಸಂಕೇತವೆಂದು ಹೇಳಲಾಗುತ್ತದೆ, ಇದರಿಂದಾಗಿ ರಾಹು ಮತ್ತು ಕೇತು ಎರಡೂ ಅಂಶಗಳು ಕಪ್ಪು ಬೆಕ್ಕಿನಲ್ಲಿ ಇರುತ್ತವೆ ಎಂಬ ನಂಬಿಕೆಯಿದೆ. ಪುರಾಣಗಳ ಪ್ರಕಾರ, ಬೆಕ್ಕು ರಾಹು ಗ್ರಹದ ವಾಹನವೂ ಹೌದು.
ಹಾವೋ ಅಡ್ಡ ಬಂದರೆ ಕೆಲವೊಮ್ಮೆ ಶುಭವೆಂದು ಪರಿಗಣಿಸಿದರೆ, ಗೋವು ಅಡ್ಡ ಬರುವುದು ಬಹಳ ಶುಭವೆಂದು ಹೇಳಲಾಗುತ್ತದೆ. ಆದರೆ, ನಾಯಿ ಗೋಳಾಡುವುದು ಅಥವಾ ಅಳುವುದು ಯಾವುದೋ ಪ್ರಾಣಹಾನಿಯ ಸೂಚನೆ ಎಂದು ಹಿರಿಯರು ಹೇಳುತ್ತಾರೆ. ಅದೇ ರೀತಿ, ಕಪ್ಪು ಬೆಕ್ಕು ಅಡ್ಡ ಬರುವುದು ಅಪಾಯದ ಸೂಚನೆ. ಇದು ನಿಮ್ಮ ಮೇಲೆ ದಾಳಿ, ಗಲಾಟೆ, ಅಥವಾ ಕಲಹಗಳಿಗೆ ದಾರಿ ಮಾಡಿಕೊಡಬಹುದು. ಅಲ್ಲದೆ, ನೀವು ಮಾಡುತ್ತಿರುವ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು, ವಿಳಂಬಗಳು ಮತ್ತು ಅಪೂರ್ಣ ಕೆಲಸಗಳಿಗೆ ಕಾರಣವಾಗಬಹುದು. ಮನಸ್ಸಿನ ಸ್ಮೃತಿ ಪಟಲದ ಮೇಲೆ ಇದರ ಪ್ರಭಾವ ನೇರವಾಗಿ ಬೀಳುತ್ತದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?
ಯಾವುದೇ ದಿನ, ವಾರ, ಅಥವಾ ಕಾಲ ಎಂದು ಪರಿಗಣಿಸದೆ, ಒಳ್ಳೆಯ ಮನಸ್ಸಿನಿಂದ ಹೊರಟಾಗ ಕಪ್ಪು ಬೆಕ್ಕು ಅಡ್ಡ ಬಂದರೆ, ತಕ್ಷಣಕ್ಕೆ ಆತಂಕ ಪಡುವ ಅಗತ್ಯವಿಲ್ಲ. ಇದರ ಪರಿಹಾರವಾಗಿ, ಸ್ವಲ್ಪ ಸಮಯ ಕಾಯುವುದು ಉತ್ತಮ. ನಿಮ್ಮ ಕಾರಿನಲ್ಲಿ ನೀರಿದ್ದರೆ, ನೀರನ್ನು ಕುಡಿಯಿರಿ. ಒಂದೆರಡು ನಿಮಿಷ ಇಳಿದು ಓಡಾಡಿ ಅಥವಾ ಟ್ರಾಫಿಕ್ನಲ್ಲಿ ಸಿಲುಕಿದ್ದರೆ ರಸ್ತೆಯ ಬದಿಯಲ್ಲಿ ನಿಲ್ಲಿಸಿ. ಈ ರೀತಿಯಾಗಿ ಸ್ವಲ್ಪ ವಿರಾಮ ತೆಗೆದುಕೊಂಡು ಮುಂದೆ ಸಾಗುವುದು ಒಳ್ಳೆಯದು ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
