Female Ganesha: ವಿಘ್ನೇಶ್ವರಿ- ಇದು ಮಾನವೀಯತೆಯ ತಾಣ… ಗಣೇಶ ಹೆಣ್ಣಿನ ರೂಪದಲ್ಲಿ ಕಾಣಿಸಿಕೊಂಡಿರುವುದು ಈ ಸ್ಥಳದಲ್ಲಿ ಮಾತ್ರ, ಏಕೆ?

| Updated By: ಸಾಧು ಶ್ರೀನಾಥ್​

Updated on: Jun 21, 2024 | 8:19 AM

Suchindram Shakti Peeth Sthanumalayan: ಈ ದೇವಾಲಯವು ಸತಿ ದೇವಿಯ 51 ಶಕ್ತಿ ಪೀಠಗಳಲ್ಲಿ ಒಂದಾಗಿದೆ. ಈ ದೇವಾಲಯದಲ್ಲಿ ಶಕ್ತಿ ನಾರಾಯಣಿಯನ್ನು ಪೂಜಿಸಲಾಗುತ್ತದೆ. ಪುರಾಣಗಳ ಪ್ರಕಾರ ಶಕ್ತಿ ಪೀಠಗಳು ಸತಿಯ ದೇಹದ ಭಾಗಗಳು, ಬಟ್ಟೆ ಅಥವಾ ಆಭರಣಗಳು ಬಿದ್ದ ಸ್ಥಳಗಳಾಗಿವೆ. ಇವುಗಳನ್ನು ಅತ್ಯಂತ ಪವಿತ್ರ ಯಾತ್ರಾ ಸ್ಥಳಗಳೆಂದು ಪರಿಗಣಿಸಲಾಗಿದೆ

Female Ganesha: ವಿಘ್ನೇಶ್ವರಿ- ಇದು ಮಾನವೀಯತೆಯ ತಾಣ... ಗಣೇಶ ಹೆಣ್ಣಿನ ರೂಪದಲ್ಲಿ ಕಾಣಿಸಿಕೊಂಡಿರುವುದು ಈ ಸ್ಥಳದಲ್ಲಿ ಮಾತ್ರ, ಏಕೆ?
ಸ್ತ್ರೀ ರೂಪದಲ್ಲಿರುವ ಗಣಪತಿಯ ಆರಾಧನೆ
Follow us on

ಸತಿದೇವಿಯ ದೇಹದ ಭಾಗಗಳನ್ನು ಸಮಾಧಿ ಮಾಡಿರುವ ಸ್ಥಳಗಳನ್ನು ಶಕ್ತಿ ಪೀಠಗಳೆಂದು ಭಕ್ತರು ಪೂಜಿಸುತ್ತಾರೆ. ಅಂತಹ ಶಕ್ತಿ ಪೀಠವೆಂದರೆ ಶುಚಿಂದ್ರಂ ಶಕ್ತಿ ಪೀಠ. ಇದು ಹಿಂದೂಗಳಿಗೆ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿದೆ. ಈ ದೇವಾಲಯವು ಭಾರತದ ತಮಿಳುನಾಡು ರಾಜ್ಯದ ಕನ್ಯಾಕುಮಾರಿಯಲ್ಲಿದೆ. ಸುಚೀಂದ್ರಂ ಶಕ್ತಿ ಪೀಠವನ್ನು ತನುಮಲಯನ್ ಅಥವಾ ಸ್ಥನುಮಾಲಯ ದೇವಸ್ಥಾನ ಎಂದೂ ಕರೆಯುತ್ತಾರೆ. ಸುಚಿಂದ್ರಂ ಶಕ್ತಿಪೀಠದ (Suchindram Shakti Peeth) ದೇವಾಲಯದಲ್ಲಿ, ದೇವಾಲಯದ (Hindu temple) ಮುಖ್ಯ ದೇವತೆಗಳು ಶಿವ, ವಿಷ್ಣು ಮತ್ತು ಬ್ರಹ್ಮ ಒಂದೇ ರೂಪದಲ್ಲಿರುತ್ತಾರೆ. ಈ ರೂಪವನ್ನು ಸ್ಥಾನುಮಲಯಂ ಎಂದು ಕರೆಯಲಾಗುತ್ತದೆ. ಈ ದೇವಾಲಯವು ಶೈವ ಮತ್ತು ವೈಷ್ಣವ ಪಂಥಗಳ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಸ್ಥನುಮಲಾಯ (Sthanumalayan) ಎಂದರೆ ತ್ರಿಮೂರ್ತಿಗಳು.. ಸ್ಥನು ಎಂದರೆ ಶಿವ, ಮಾಲ್ ಎಂದರೆ ವಿಷ್ಣು, ಆಯ ಎಂದರೆ ಬ್ರಹ್ಮ. ಸುಚಿಂದ್ರಂ ದೇವಾಲಯವು ತನ್ನ ವಾಸ್ತುಶಿಲ್ಪದ ಶ್ರೇಷ್ಠತೆಗೆ ವಿಶ್ವ ಪ್ರಸಿದ್ಧವಾಗಿದೆ. ಅದರ ಭವ್ಯವಾದ ಏಳು ಅಂತಸ್ತಿನ ಬಿಳಿ ದೇವಾಲಯದ ಗುಮ್ಮಟವು ಬಹು ದೂರದಿಂದ ಗೋಚರಿಸುತ್ತದೆ (Spiritual).

ಇಲ್ಲಿ ಸತಿಯ ಹಲ್ಲು ಬಿದ್ದಿದೆ ಎಂಬುದು ಸ್ಥಳೀಯ ಐತಿಹ್ಯ

ಈ ದೇವಾಲಯವು ಸತಿ ದೇವಿಯ 51 ಶಕ್ತಿ ಪೀಠಗಳಲ್ಲಿ ಒಂದಾಗಿದೆ. ಈ ದೇವಾಲಯದಲ್ಲಿ ಶಕ್ತಿ ನಾರಾಯಣಿಯನ್ನು ಪೂಜಿಸಲಾಗುತ್ತದೆ. ಪುರಾಣಗಳ ಪ್ರಕಾರ ಶಕ್ತಿ ಪೀಠಗಳು ಸತಿಯ ದೇಹದ ಭಾಗಗಳು, ಬಟ್ಟೆ ಅಥವಾ ಆಭರಣಗಳು ಬಿದ್ದ ಸ್ಥಳಗಳಾಗಿವೆ. ಇವುಗಳನ್ನು ಅತ್ಯಂತ ಪವಿತ್ರ ಯಾತ್ರಾ ಸ್ಥಳಗಳೆಂದು ಪರಿಗಣಿಸಲಾಗಿದೆ. ಹಿಂದೂಗಳು ಅತ್ಯಂತ ಗೌರವ ಭಾವದಿಂದ ಪೂಜಿಸುತ್ತಾರೆ (The Thanumalayan Temple, also called Sthanumalayan Temple, Hindu temple located in Suchindram in the Kanyakumari district).

Also Read: ಕಾಳ ಸರ್ಪ ದೋಷಗಳು ಎಷ್ಟಿವೆ? ಯಾರದೇ ಜಾತಕದಲ್ಲಿನ ಅಪಾಯಕಾರಿ ದೋಷ ಯಾವುದು, ಪರಿಹಾರವೇನು?

ಪುರಾಣಗಳ ಪ್ರಕಾರ ಸತಿಯು ತನ್ನ ತಂದೆ ದಕ್ಷನು ಮಾಡಿದ ಯಜ್ಞ ಕುಂಡಕ್ಕೆ ಹಾರಿ ತನ್ನ ಪ್ರಾಣವನ್ನು ತ್ಯಾಗ ಮಾಡಿದಳು. ಆಗ ಶಂಕರನು ಸತಿದೇವಿಯ ದೇಹವನ್ನು ಹೊತ್ತು ಎಲ್ಲೆಂದರಲ್ಲಿ ಸುತ್ತುತ್ತಿದ್ದನು. ಆ ಸಮಯದಲ್ಲಿ ವಿಷ್ಣುವು ತನ್ನ ಸುದರ್ಶನ ಚಕ್ರದಿಂದ ಸತಿದೇವಿಯ ಮೃತ ದೇಹವನ್ನು ಖಂಡಿಸಿದನು. ನಂತರ ಸತಿಯ ದೇಹವನ್ನು 51 ಭಾಗಗಳಾಗಿ ವಿಂಗಡಿಸಲಾಯಿತು. ಸತಿದೇವಿಯ ಹಲ್ಲು ಬಿದ್ದ ಸ್ಥಳ ಸುಚೀಂದ್ರಂ ಶಕ್ತಿ ಪೀಠ ಎಂಬ ನಂಬಿಕೆ ಇದೆ.

ಸ್ತ್ರೀ ರೂಪದಲ್ಲಿರುವ ಗಣಪತಿಯ ಆರಾಧನೆ

ವಿಘ್ನನಿವಾರಕ ಗಣಪತಿಯನ್ನು ವಿವಿಧ ಭಂಗಿಗಳಲ್ಲಿ ಪೂಜಿಸಲಾಗುತ್ತದೆ. ಆದರೆ ಈ ಶಕ್ತಿಪೀಠದಲ್ಲಿ ದೇವಿಯನ್ನು ನಾರಾಯಣಿ ರೂಪದಲ್ಲಿ.. ಗಣಪತಿಯನ್ನು ಸ್ತ್ರೀಯ ರೂಪದಲ್ಲಿ ಅಂದರೆ ವಿಘ್ನೇಶ್ವರಿ ರೂಪದಲ್ಲಿ (Female Ganesha -Ganeshini) ಪೂಜಿಸಲಾಗುತ್ತದೆ. ಗಣಪತಿಯನ್ನು ಹೆಣ್ಣಿನ ರೂಪದಲ್ಲಿ ಪೂಜಿಸುವುದು ದೇಶದ ಬೇರೆಲ್ಲೂ ಇಲ್ಲ.

ದೇವಾಲಯದ ವಾಸ್ತುಶಿಲ್ಪವು ವಿಶಿಷ್ಟವಾಗಿದೆ

ದೇವಾಲಯದಲ್ಲಿ ಸುಮಾರು 30 ಚಿಕ್ಕ ಮತ್ತು ದೊಡ್ಡ ದೇವಾಲಯಗಳಿವೆ. ಒಂದು ಸ್ಥಳದಲ್ಲಿ ವಿಷ್ಣುವಿನ ವಿಗ್ರಹವಿದೆ. ದೇವಾಲಯವನ್ನು ಪ್ರವೇಶಿಸಿದ ತಕ್ಷಣ ಸೀತಾ ಮತ್ತು ರಾಮನ ವಿಗ್ರಹವನ್ನು ಬಲಭಾಗದಲ್ಲಿ ಪ್ರತಿಷ್ಠಾಪಿಸಲಾಗಿದೆ. ಸಮೀಪದಲ್ಲಿ ವಿಘ್ನೇಶ್ವರಿ ರೂಪದ ಗಣೇಶ ದೇವಸ್ಥಾನ.. ಅದರ ಮುಂದೆ ನವಗ್ರಹ ಮಂಟಪ. ಒಂಬತ್ತು ಗ್ರಹಗಳ ಪ್ರತಿಮೆಗಳು ಈ ಮಂಟಪದಲ್ಲಿ ಸುಂದರವಾಗಿ ನಿಂತಿವೆ. ಅಲಂಕಾರ ಮಂಟಪದ ನಾಲ್ಕು ಸಂಗೀತ ಸ್ತಂಭಗಳು ಇಲ್ಲಿ ಆಕರ್ಷಕವಾಗಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ದೇವಾಲಯದ ಪ್ರವೇಶದ ಬಲಭಾಗದಲ್ಲಿರುವ ಅಲಂಕಾರ ಮಂಟಪವು ಒಂದೇ ಗ್ರಾನೈಟ್‌ನಿಂದ ಕೆತ್ತಿದ ನಾಲ್ಕು ಸಂಗೀತ ಸ್ತಂಭಗಳನ್ನು ಹೊಂದಿದೆ. ಈ ಕಂಬಗಳು ಮೃದಂಗ, ಸಿತಾರ, ತಂಬೂರ, ಜಲತರಂಗ ಮುಂತಾದ ವಿವಿಧ ವಾದ್ಯಗಳ ಧ್ವನಿಯನ್ನು ನೀಡುತ್ತವೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)

Published On - 7:30 am, Fri, 21 June 24