AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hanuman Dhwaja: ಮಾಟ-ಮಂತ್ರ ನಕಾರಾತ್ಮಕ ಶಕ್ತಿಯಿಂದ ಮನೆಯನ್ನ ರಕ್ಷಿಸಲು ಹನುಮಧ್ವಜ ಕಟ್ಟಿ; ಜ್ಯೋತಿಷ್ಯ ಸಲಹೆ ಇಲ್ಲಿದೆ

ಹನುಮಧ್ವಜವು ಮನೆಯ ಮೇಲೆ ಇದ್ದರೆ ಸಂಪೂರ್ಣ ರಕ್ಷಣೆ ಮತ್ತು ಶುಭವನ್ನು ತರುತ್ತದೆ. ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನ ರಥಕ್ಕೆ ಹನುಮನ ಬಾವುಟವಿದ್ದ ಕಾರಣ ಯಾವುದೇ ಆಯುಧಗಳಿಂದ ಹಾನಿಯಾಗಲಿಲ್ಲ. ಆಧುನಿಕ ಯುಗದಲ್ಲಿಯೂ ಹನುಮಧ್ವಜವು ಪೀಡೆ, ಮಾಟ, ಮಂತ್ರ, ಅನಾರೋಗ್ಯ, ಮಾನಸಿಕ ಚಿತ್ರಹಿಂಸೆಗಳಿಂದ ಮನೆಯನ್ನು ರಕ್ಷಿಸಿ ಸಕಾರಾತ್ಮಕ ಶಕ್ತಿಯನ್ನು ನೀಡುತ್ತದೆ ಎಂದು ಡಾ. ಬಸವರಾಜ್ ಗುರೂಜಿಯವರು ಸಲಹೆ ನೀಡಿದ್ದಾರೆ.

Hanuman Dhwaja: ಮಾಟ-ಮಂತ್ರ ನಕಾರಾತ್ಮಕ ಶಕ್ತಿಯಿಂದ ಮನೆಯನ್ನ ರಕ್ಷಿಸಲು ಹನುಮಧ್ವಜ ಕಟ್ಟಿ; ಜ್ಯೋತಿಷ್ಯ ಸಲಹೆ ಇಲ್ಲಿದೆ
ಹನುಮಧ್ವಜ
ಅಕ್ಷತಾ ವರ್ಕಾಡಿ
|

Updated on: Dec 02, 2025 | 11:06 AM

Share

ನೀವು ಕಟ್ಟಿಸಿದ ಮನೆಯಾಗಿರಲಿ, ಬಾಡಿಗೆ ಮನೆಯಾಗಿರಲಿ, ಅಥವಾ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿರಲಿ, ಮನೆಯ ಮೇಲೆ ಹನುಮಧ್ವಜವನ್ನು ಇಡುವುದು ಆ ಮನೆಗೆ ಸರ್ವಶ್ರೇಷ್ಠ ಶುಭವನ್ನು ತರುತ್ತದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ಸಲಹೆ ನೀಡಿದ್ದಾರೆ. ಈ ಬಾವುಟವು ಬಟ್ಟೆಯಿಂದ ಮಾಡಿದ್ದಾಗಿದ್ದು, ಹನುಮನ ಚಿತ್ರವನ್ನು ಹೊಂದಿರುತ್ತದೆ. ಹನುಮನ ಚಿತ್ರವು ಭಕ್ತಾಂಜನೇಯ, ವೀರಾಂಜನೇಯ (ಗದೆಯೊಂದಿಗೆ), ಅಥವಾ ಅಭಯಾಂಜನೇಯ (ಆಶೀರ್ವದಿಸುವ ಭಂಗಿಯಲ್ಲಿ) ಯಾವುದೇ ರೂಪದಲ್ಲಿರಬಹುದು. ಅಂತಹ ಬಾವುಟವನ್ನು ಮನೆಯ ಮೇಲೆ ಇರಿಸಿದರೆ, ಪ್ರತಿ ವಿಷಯದಲ್ಲೂ ಮನೆಗೆ ಶುಭ ಪ್ರಾಪ್ತವಾಗುತ್ತದೆ.

ತ್ರಿಕಾಲದಲ್ಲಿಯೂ, ಅಂದರೆ ಬ್ರಾಹ್ಮೀ ಮುಹೂರ್ತ, ಅಭಿಜಿನ್ ಮುಹೂರ್ತ, ಗೋದೋಳಿ ಮುಹೂರ್ತಗಳ ಜೊತೆಗೆ, ಬೆಳಗಿನ ಜಾವದ ಬ್ರಾಹ್ಮೀ ಕಾಲ ಮತ್ತು ದೈವ ಕಾಲದಲ್ಲಿ ದೇವರ ಲಹರಿಗಳು ಭೂಮಿಯ ಮೇಲೆ ಸಂಚರಿಸುತ್ತವೆ. ಇಂತಹ ಪವಿತ್ರ ಸಮಯದಲ್ಲಿ ಮನೆಯ ಮೇಲೆ ಹನುಮಧ್ವಜ ಇದ್ದರೆ, ಆ ಮನೆಗೆ ಪರಿಪೂರ್ಣ ರಕ್ಷಣೆ ದೊರೆಯುತ್ತದೆ. ಇದಕ್ಕೆ ಒಂದು ಪ್ರಸಿದ್ಧ ಉದಾಹರಣೆ ಕುರುಕ್ಷೇತ್ರ ಯುದ್ಧದಲ್ಲಿ ಕಂಡುಬರುತ್ತದೆ. ಅರ್ಜುನನ ರಥದಲ್ಲಿ ಹನುಮನ ಬಾವುಟವಿದ್ದ ಕಾರಣ ಯುದ್ಧದ ಉದ್ದಕ್ಕೂ ರಥಕ್ಕೆ ಯಾವುದೇ ಹಾನಿಯಾಗಲಿಲ್ಲ. ಹನುಮನು ರಥದಿಂದ ಹೊರಟ ತಕ್ಷಣ, ರಥವು ಅಗ್ನಿಗೆ ಆಹುತಿಯಾಯಿತು ಎಂಬುದು ಪುರಾಣ ಕಥೆಗಳಿಂದ ತಿಳಿದುಬರುತ್ತದೆ. ಹನುಮನ ಬಾವುಟ ಅಥವಾ ಹನುಮನ ಅಂಶ ಇರುವವರೆಗೂ ರಥವು ಸುರಕ್ಷಿತವಾಗಿತ್ತು.

ಕೇವಲ ಕುರುಕ್ಷೇತ್ರ ಮಾತ್ರವಲ್ಲದೆ, ಧರ್ಮನಿರತರಾಗಿರುವ ಎಲ್ಲರಿಗೂ ಹನುಮನ ರಕ್ಷಣೆ ಸದಾ ಇರುತ್ತದೆ. ಹನುಮಧ್ವಜದ ಉಪಸ್ಥಿತಿಯು ಪೀಡೆ, ಪಿಶಾಚಿ, ಮಾಟ, ಮಂತ್ರಗಳು, ಅನಾರೋಗ್ಯಗಳು, ಮತ್ತು ಮಾನಸಿಕ ಚಿತ್ರಹಿಂಸೆಗಳಂತಹ ನಕಾರಾತ್ಮಕ ಶಕ್ತಿಗಳಿಂದ ಮನೆಯನ್ನು ದೂರವಿರಿಸಲು ಸಹಾಯ ಮಾಡುತ್ತದೆ. ಒಂದು ಸಣ್ಣ ಪ್ರಯತ್ನದಿಂದ ಇವೆಲ್ಲವನ್ನೂ ನಿವಾರಿಸಬಹುದು.

ಇದನ್ನೂ ಓದಿ: ಮನೆಗೆ ಹೊಸ ವರ್ಷದ ಕ್ಯಾಲೆಂಡರ್ ತರುತ್ತಿದ್ದೀರಾ? ಹಾಗಿದ್ರೆ ಈ ವಿಷ್ಯ ತಿಳಿದುಕೊಳ್ಳಿ

ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವವರಿಗೆ ಮನೆ ಮೇಲೆ ಬಾವುಟ ಹಾಕಲು ಸಾಧ್ಯವಾಗದಿದ್ದರೆ, ಮುಖ್ಯ ಸಿಂಹದ್ವಾರದ ಹತ್ತಿರ ಒಂದು ಸಣ್ಣ ಹನುಮನ ಬಾವುಟವನ್ನು ಇರಿಸಬಹುದು. ಇದು ಸಹ ಮನೆಗೆ ರಕ್ಷಣೆಯನ್ನು ಒದಗಿಸುತ್ತದೆ ಮತ್ತು ಯಾವುದೇ ಕಂಟಕಗಳು ಬರುವುದಿಲ್ಲ ಎಂದು ಹೇಳಲಾಗುತ್ತದೆ. ಎಲ್ಲವೂ ಶುಭವಾಗುತ್ತದೆ. ಹನುಮನು ಅಶ್ವತ್ಥಾಮ, ಬಲಿ, ವ್ಯಾಸ, ವಿಭೀಷಣ, ಪರಶುರಾಮರಂತಹ ಸಪ್ತ ಚಿರಂಜೀವಿಗಳಲ್ಲಿ ಒಬ್ಬನಾಗಿದ್ದಾನೆ. ಈ ಕಾರಣದಿಂದಲೂ ಹನುಮನಿಗೆ ವಿಶೇಷ ಶಕ್ತಿ ಇದೆ. ಹನುಮಧ್ವಜವು ಅತ್ಯಂತ ಶಕ್ತಿಶಾಲಿಯಾದ ಧ್ವಜವಾಗಿದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ರಷ್ಯಾ ಅಧ್ಯಕ್ಷ ಪುಟಿನ್​​ ಸ್ವಾಗತಕ್ಕೆ ವಿಮಾನ ನಿಲ್ದಾಣಕ್ಕೆ ತೆರಳಿದ ಮೋದಿ
ರಷ್ಯಾ ಅಧ್ಯಕ್ಷ ಪುಟಿನ್​​ ಸ್ವಾಗತಕ್ಕೆ ವಿಮಾನ ನಿಲ್ದಾಣಕ್ಕೆ ತೆರಳಿದ ಮೋದಿ
ಜಾರ್ಖಂಡ್ ಕಲ್ಲಿದ್ದಲು ಪ್ರದೇಶದಲ್ಲಿ ವಿಷಕಾರಿ ಅನಿಲ ಸೋರಿಕೆ; ಇಬ್ಬರು ಸಾವು
ಜಾರ್ಖಂಡ್ ಕಲ್ಲಿದ್ದಲು ಪ್ರದೇಶದಲ್ಲಿ ವಿಷಕಾರಿ ಅನಿಲ ಸೋರಿಕೆ; ಇಬ್ಬರು ಸಾವು
ಸಾಕ್ಷಿ ಕೇಳ್ತಿದ್ದ ಸಿದ್ರಾಮಯ್ಯಗೆ ವಿಡಿಯೋ ಪ್ಲೇ ಮಾಡಿ ತೋರಿಸಿದ ಅಶೋಕ್​
ಸಾಕ್ಷಿ ಕೇಳ್ತಿದ್ದ ಸಿದ್ರಾಮಯ್ಯಗೆ ವಿಡಿಯೋ ಪ್ಲೇ ಮಾಡಿ ತೋರಿಸಿದ ಅಶೋಕ್​
ನಿರ್ದೇಶಕ ಸಂಗೀತ್ ಸಾಗರ್ ನಿಧನಕ್ಕೂ ಮುನ್ನ ಪರಿಸ್ಥಿತಿ ಹೇಗಿತ್ತು?
ನಿರ್ದೇಶಕ ಸಂಗೀತ್ ಸಾಗರ್ ನಿಧನಕ್ಕೂ ಮುನ್ನ ಪರಿಸ್ಥಿತಿ ಹೇಗಿತ್ತು?