AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ugadi 2024: ರಾಜಯೋಗದಲ್ಲಿ ಹೊಸ ವರ್ಷ ಪ್ರಾರಂಭ! ಹೇಗಿರಲಿದೆ ನಿಮ್ಮ ಭವಿಷ್ಯ

ವೈದಿಕ ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ, ಸುಮಾರು 30 ವರ್ಷಗಳ ನಂತರ, ಹೊಸ ವರ್ಷವು ಶುಭ ರಾಜಯೋಗದಲ್ಲಿ ಪ್ರಾರಂಭವಾಗಿದೆ. ಈ ದಿನದಂದು ಅಮೃತ ಸಿದ್ಧಿ ಯೋಗ, ಸರ್ವಾರ್ಥ ಸಿದ್ಧಿ ಯೋಗ ಮತ್ತು ಶೇಷ ರಾಜಯೋಗವು ಸಂಯೋಜನೆ ಗೊಂಡಿದೆ. ಹಾಗಾಗಿ ಇದು ವರ್ಷ ಪೂರ್ತಿ ಶುಭ ಫಲಗಳನ್ನು ನೀಡುತ್ತದೆ ಎಂದು ನಂಬಲಾಗಿದೆ. ಜೊತೆಗೆ ಈ ಬಾರಿ ಸಂವತ್ಸರ ರಾಜ ಮಂಗಳ ಮತ್ತು ಮಂತ್ರಿ ಶನಿದೇವ. ಹಾಗಾಗಿ ಶನಿ ಮತ್ತು ಮಂಗಳನ ಪ್ರಭಾವವು ವರ್ಷಪೂರ್ತಿ ಇರುತ್ತದೆ.

Ugadi 2024: ರಾಜಯೋಗದಲ್ಲಿ ಹೊಸ ವರ್ಷ ಪ್ರಾರಂಭ! ಹೇಗಿರಲಿದೆ ನಿಮ್ಮ ಭವಿಷ್ಯ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Apr 09, 2024 | 3:20 PM

Share

ಹೊಸ ವರ್ಷವು ಕ್ರೋಧಿನಾಮ ಸಂವತ್ಸರ ಚೈತ್ರ ಶುಕ್ಲ ಪ್ರತಿಪದಾ ದಿನದಂದು ಪ್ರಾರಂಭವಾಗಿದ್ದು ವರ್ಷವಿಡೀ ಶನಿ ಮತ್ತು ಮಂಗಳನ ಪ್ರಭಾವ ಇರುತ್ತದೆ. ವೈದಿಕ ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ, ಸುಮಾರು 30 ವರ್ಷಗಳ ನಂತರ, ಹೊಸ ವರ್ಷವು ಶುಭ ರಾಜಯೋಗದಲ್ಲಿ ಪ್ರಾರಂಭವಾಗಿದೆ. ಈ ದಿನದಂದು ಅಮೃತ ಸಿದ್ಧಿ ಯೋಗ, ಸರ್ವಾರ್ಥ ಸಿದ್ಧಿ ಯೋಗ ಮತ್ತು ಶೇಷ ರಾಜಯೋಗವು ಸಂಯೋಜನೆ ಗೊಂಡಿದೆ. ಹಾಗಾಗಿ ಇದು ವರ್ಷ ಪೂರ್ತಿ ಶುಭ ಫಲಗಳನ್ನು ನೀಡುತ್ತದೆ ಎಂದು ನಂಬಲಾಗಿದೆ. ಜೊತೆಗೆ ಈ ಬಾರಿ ಸಂವತ್ಸರ ರಾಜ ಮಂಗಳ ಮತ್ತು ಮಂತ್ರಿ ಶನಿದೇವ. ಹಾಗಾಗಿ ಶನಿ ಮತ್ತು ಮಂಗಳನ ಪ್ರಭಾವವು ವರ್ಷಪೂರ್ತಿ ಇರುತ್ತದೆ.

ವೈದಿಕ ಕ್ಯಾಲೆಂಡರ್ ಲೆಕ್ಕಾಚಾರದ ಪ್ರಕಾರ, ಹಿಂದೂ ಹೊಸ ವರ್ಷವು ಕ್ರೋಧಿನಾಮ ಸಂವತ್ಸರ ಚೈತ್ರ ಮಾಸದ ಶುಕ್ಲ ಪಕ್ಷದ ಪ್ರತಿಪದಾದಿಂದ ಅಂದರೆ ಎ. 9 ರಂದು ಪ್ರಾರಂಭವಾಗಿದೆ. ಹಾಗಾಗಿ ಎಲ್ಲಾ ಉಪವಾಸ ಮತ್ತು ಹಬ್ಬಗಳನ್ನು ಇದರ ಆಧಾರದ ಮೇಲೆ ಆಚರಿಸಲಾಗುತ್ತದೆ. ಈ ಬಾರಿ ಹೊಸ ವರ್ಷ ರಾಜಯೋಗದಲ್ಲಿ ಆರಂಭಗೊಂಡಿರುವುದರಿಂದ ಬಹಳ ವಿಶೇಷವಾಗಿದೆ.

ಇದನ್ನೂ ಓದಿ: ಯುಗಾದಿ ಹಬ್ಬದ ದಿನ ಏನು ಮಾಡಬೇಕು, ಮಾಡಬಾರದು?

ಶುಭ ಯೋಗ, ರಾಜಯೋಗ;

ಈ ವರ್ಷ ಆಕಾಶ ಕ್ಷೇತ್ರದಲ್ಲಿ ರಾಜ ಮಂಗಳನಾದರೆ ಅವನ ಮಂತ್ರಿ ಪಟ್ಟ ಶನಿಯಾಗಿದ್ದಾನೆ. ಶುಕ್ರನು ಕಮಾಂಡರ್ ನ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾನೆ ಹಾಗೂ ಈ ಸಂವತ್ಸರನ ವಾಹನ ಗೂಳಿ. ಜೊತೆಗೆ ಈ ಬಾರಿ ಸರ್ವಾರ್ಥ ಸಿದ್ಧಿ ಯೋಗ, ಅಮೃತ ಸಿದ್ಧಿ ಯೋಗ ಮತ್ತು ಶೇಷ ರಾಜಯೋಗದಲ್ಲಿ ಹೊಸ ವರ್ಷ ಪ್ರಾರಂಭವಾಗಿದೆ. ಇದಲ್ಲದೆ, ವರ್ಷದ ಮೊದಲ ದಿನದಂದು ರೇವತಿ ಮತ್ತು ಅಶ್ವಿನಿ ನಕ್ಷತ್ರ ಬಂದಿರುವುದು ಕಾಕತಾಳೀಯವಾಗಿದೆ. ಈ ದಿನ, ಚಂದ್ರನು ಗುರುವಿನ ರಾಶಿಯಾದ ಮೀನ ರಾಶಿಯಲ್ಲಿರುತ್ತಾನೆ. ಶನಿ ದೇವರು ತನ್ನದೇ ರಾಶಿಯಾದ ಕುಂಭ ರಾಶಿಯಲ್ಲಿರುತ್ತಾನೆ. ಇವೆಲ್ಲವೂ ಹೊಸ ವರ್ಷದ ಹೊಸತನಕ್ಕೆ ಮುನ್ನುಡಿ ಬರೆದಿದೆ. ಅಲ್ಲದೆ ವರ್ಷಪೂರ್ತಿ ಒಳ್ಳೆಯ ದಿನಗಳಿವೆ ಎಂಬುದನ್ನು ಸೂಚಿಸುತ್ತಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?