AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vaikuntha Ekadashi 2023: ವೈಕುಂಠ ಏಕಾದಶಿ ಶುಭ ಮುಹೂರ್ತ, ಮಹತ್ವ ಮತ್ತು ಮಂತ್ರಗಳು

ವೈಕುಂಠ ಏಕಾದಶಿಯಂದು ಭಕ್ತರು ಕಠಿಣ ಉಪವಾಸವನ್ನು ಆಚರಿಸುತ್ತಾರೆ. ಸಂಪೂರ್ಣವಾಗಿ ಉಪವಾಸ ಮಾಡಲಾಗದವರು ಹಣ್ಣುಗಳು ಮತ್ತು ಹಾಲು ಸೇವಿಸಬಹುದು.

Vaikuntha Ekadashi 2023: ವೈಕುಂಠ ಏಕಾದಶಿ ಶುಭ ಮುಹೂರ್ತ, ಮಹತ್ವ ಮತ್ತು ಮಂತ್ರಗಳು
ವೈಕುಂಠ ಏಕಾದಶಿ
TV9 Web
| Edited By: |

Updated on:Jan 02, 2023 | 10:20 AM

Share

Vaikuntha Ekadashi 2023: ಭಗವಾನ್ ವಿಷ್ಣುವಿನ(Lord Vishnu) ಭಕ್ತರಿಗೆ ಏಕಾದಶಿ ತನ್ನದೇ ಆದ ಧಾರ್ಮಿಕ ಮಹತ್ವವನ್ನು ಹೊಂದಿದೆ. ಈ ದಿನದಂದು ಭಕ್ತರು ಉಪವಾಸವನ್ನು ಆಚರಿಸುತ್ತಾರೆ ಮತ್ತು ಭಗವಾನ್ ಶ್ರೀ ವಿಷ್ಣುವಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಿ ಪ್ರಾರ್ಥನೆಯನ್ನು ಮಾಡುತ್ತಾರೆ. ವೈಕುಂಠ ಏಕಾದಶಿಯನ್ನು ಮುಕ್ಕೋಟಿ ಏಕಾದಶಿ, ಪುತ್ರದಾ ಏಕಾದಶಿ ಎಂದು ಕರೆಯುತ್ತಾರೆ. ವೈಕುಂಠ ಏಕಾದಶಿ ವ್ರತವು 2023 ರ ಹೊಸ ವರ್ಷದ ಮೊದಲ ವ್ರತವಾಗಿದೆ.

ವೈಕುಂಠ ಏಕಾದಶಿ ಶುಭ ಮುಹೂರ್ತ

ಜನವರಿ 2, 2023 ರಂದು ವೈಕುಂಠ ಏಕಾದಶಿಯನ್ನು ಆಚರಿಸಲಾಗುತ್ತದೆ. ಏಕಾದಶಿ ತಿಥಿಯು ಜನವರಿ 1 ರಂದು 07:11 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಜನವರಿ 2, 2023 ರಂದು ರಾತ್ರಿ 08:23 ಕ್ಕೆ ಕೊನೆಗೊಳ್ಳುತ್ತದೆ.

ಮರುದಿನ ಸೂರ್ಯೋದಯದ ನಂತರ ಏಕಾದಶಿ ಪಾರಣವನ್ನು ಮಾಡಲಾಗುತ್ತದೆ. ಪಾರಣ ಎಂದರೆ ಉಪವಾಸ ಮುರಿಯುವುದು. ಆದ್ದರಿಂದ, ಈ ದಿನದಂದು ಉಪವಾಸ ಮಾಡುವ ಭಕ್ತರು, ಜನವರಿ 3 ರಂದು ಪಾರಣ ಸಮಯವು ಬೆಳಗ್ಗೆ 07:14 ರಿಂದ 09:19 ವರೆಗೆ ಇರುತ್ತದೆ.

ಇದನ್ನೂ ಓದಿ: Sabarimala Ayyappa Swamy Temple: ಹದಿನೆಂಟು ಮೆಟ್ಟಿಲುಗಳನ್ನು ಏರಿ ಮಲೆಯಲ್ಲಿ ನೆಲೆ ನಿಂತ ಅಯ್ಯಪ್ಪಸ್ವಾಮಿ ಜನ್ಮ ರಹಸ್ಯ

ವೈಕುಂಠ ಏಕಾದಶಿಯಂದು ಭಕ್ತರು ಕಠಿಣ ಉಪವಾಸವನ್ನು ಆಚರಿಸುತ್ತಾರೆ. ಸಂಪೂರ್ಣವಾಗಿ ಉಪವಾಸ ಮಾಡಲಾಗದವರು ಹಣ್ಣುಗಳು ಮತ್ತು ಹಾಲು ಸೇವಿಸಬಹುದು. ಭಕ್ತರು ಈ ದಿನ ವಿಷ್ಣುವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ ಮತ್ತು ವಿಷ್ಣು ವ್ರತವನ್ನು ಜಪಿಸುತ್ತಾರೆ. ಹಾಗೂ “ಜಪ” ಮತ್ತು “ಧ್ಯಾನ” ದಲ್ಲಿ ತೊಡಗುತ್ತಾರೆ. ಭಕ್ತರು ವೈಕುಂಠ ಏಕಾದಶಿಯ ರಾತ್ರಿ ಜಾಗರಣೆ ಮಾಡಿ ಕಥೆಗಳನ್ನು ಕೇಳುವುದು, ಮತ್ತು ಭಗವಾನ್ ವಿಷ್ಣುವಿನ ಭಜನೆಗಳನ್ನು ಹಾಡುತ್ತಾರೆ. ಸಂಜೆ, ಭಕ್ತರು ವಿಷ್ಣುವಿನ ದೇಗುಲಗಳಿಗೆ ಭೇಟಿ ನೀಡುತ್ತಾರೆ.

ವೈಕುಂಠ ಏಕಾದಶಿ ಮಹತ್ವ

ವೈಕುಂಠ ಏಕಾದಶಿ ದಿನವನ್ನು ವಿಷ್ಣುವಿನ ಅನುಯಾಯಿಗಳಿಗೆ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನದಂದು, ವೈಕುಂಠ ದ್ವಾರ, ಭಗವಾನ್ ವಿಷ್ಣುವಿನ ಅಂತರಂಗದ ಪ್ರವೇಶದ್ವಾರವು ತೆರೆಯುತ್ತದೆ ಮತ್ತು ಈ ದಿನದಂದು ಉಪವಾಸ ಮಾಡುವ ಎಲ್ಲಾ ಭಕ್ತರಿಗೆ ಸ್ವರ್ಗವನ್ನು ಪ್ರವೇಶಿಸಲು ಮತ್ತು ಮೋಕ್ಷವನ್ನು ಪಡೆಯಲು ಅನುವು ಮಾಡಿಕೊಡುತ್ತದೆ ಎಂದು ಭಾವಿಸಲಾಗಿದೆ. ಶ್ರೀರಂಗಂನ ಶ್ರೀ ರಂಗನಾಥಸ್ವಾಮಿ ದೇವಸ್ಥಾನ ಮತ್ತು ತಿರುಪತಿಯ ತಿರುಮಲ ವೆಂಕಟೇಶ್ವರ ದೇವಸ್ಥಾನಕ್ಕೆ ವೈಕುಂಠ ಏಕಾದಶಿ ಬಹಳ ಮಹತ್ವದ ದಿನ. ಹಿಂದೂ ಪುರಾಣಗಳ ಪ್ರಕಾರ, ವೈಕುಂಠ ಏಕಾದಶಿಯ ದಿನದಂದು ಸಾಗರ ಮಂಥನವನ್ನು ನಡೆಸಲಾಯಿತು. ಈ ಸಾಗರ ಮಂಥನದ ಸಮಯದಲ್ಲಿ, ಕ್ಷೀರ ಸಾಗರದಿಂದ ದೈವಿಕ ಅಮೃತವು ಹೊರಹೊಮ್ಮಿತು, ಅದನ್ನು ದೇವರುಗಳ ನಡುವೆ ವಿತರಿಸಲಾಯಿತು. ಆದ್ದರಿಂದ ಈ ಮಂಗಳಕರ ದಿನದಂದು ಸಾಯುವ ಜನರು ಜನನ ಮತ್ತು ಮರಣ ಚಕ್ರದಿಂದ ಮುಕ್ತರಾಗುತ್ತಾರೆ ಮತ್ತು ಭಗವಾನ್ ವಿಷ್ಣುವಿನ ಸ್ವರ್ಗೀಯ ನಿವಾಸ ಅಥವಾ ವೈಕುಂಠ ಧಾಮವನ್ನು ತಲುಪುತ್ತಾರೆ ಎಂದು ಹಿಂದೂ ಭಕ್ತರು ನಂಬುತ್ತಾರೆ. ಭಗವಾನ್ ಭೀಷ್ಮನು ಈ ಪವಿತ್ರ ದಿನದಂದು ಮರಣಹೊಂದಿದನು ಎಂದು ನಂಬಲಾಗಿದೆ ಮತ್ತು ಈ ನಿರ್ದಿಷ್ಟ ಕಾರಣಕ್ಕಾಗಿ, ಈ ಏಕಾದಶಿಯನ್ನು ಕೆಲವು ಪ್ರದೇಶಗಳಲ್ಲಿ “ಭೀಷ್ಮ ಏಕಾದಶಿ” ಎಂದೂ ಕರೆಯಲಾಗುತ್ತದೆ.

ವೈಕುಂಠ ಏಕಾದಶಿಯಂದು ಜಪಿಸಬೇಕಾದ ಮಂತ್ರ

ಮಂತ್ರ ವಿಷ್ಣು ಮಂತ್ರ “ಓಂ ನಮೋ ಭಗವತೇ ವಾಸುದೇವಾಯ” ಕೃಷ್ಣ ಮಹಾ ಮಂತ್ರ “ಹರೇ ಕೃಷ್ಣ, ಹರೇ ಕೃಷ್ಣ ಕೃಷ್ಣ, ಕೃಷ್ಣ ಹರೇ ಹರೇ, ಹರೇ ರಾಮ, ಹರೇ ರಾಮ ರಾಮ, ರಾಮ ಹರೇ ಹರೇ”

Published On - 10:20 am, Mon, 2 January 23

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್