AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vasthu Tips: ಅಡುಗೆಮನೆಯಲ್ಲಿ ಮುರಿದ ಪಾತ್ರೆಗಳನ್ನು ಎಂದಿಗೂ ಇಡಬಾರದು ಯಾಕೆ ಗೊತ್ತಾ?

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಮುರಿದ ಪಾತ್ರೆಗಳನ್ನು ಇಟ್ಟುಕೊಳ್ಳುವುದು ಅಶುಭ. ಇವು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸಿ, ಕುಟುಂಬದಲ್ಲಿ ಮಾನಸಿಕ ಒತ್ತಡ, ಆರ್ಥಿಕ ತೊಂದರೆ ಹಾಗೂ ಸಂಬಂಧಗಳಲ್ಲಿ ಬಿರುಕು ತರಬಹುದು. ಅಲ್ಲದೆ, ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತವೆ. ನಿಮ್ಮ ಅಡುಗೆಮನೆಯಲ್ಲೂ ಇಂತಹ ಪಾತ್ರೆಗಳಿದ್ದರೆ, ತಕ್ಷಣವೇ ಅವುಗಳನ್ನು ತೆಗೆದುಹಾಕಿ.

Vasthu Tips: ಅಡುಗೆಮನೆಯಲ್ಲಿ ಮುರಿದ ಪಾತ್ರೆಗಳನ್ನು ಎಂದಿಗೂ ಇಡಬಾರದು ಯಾಕೆ ಗೊತ್ತಾ?
ಮುರಿದ ಪಾತ್ರೆImage Credit source: Getty Images
ಅಕ್ಷತಾ ವರ್ಕಾಡಿ
|

Updated on: Jul 01, 2026 | 3:08 PM

Share

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ಅತ್ಯಂತ ಚಿಕ್ಕ ವಸ್ತು ಕೂಡ ನಮ್ಮ ಜೀವನದ ಮೇಲೆ ಆಳವಾದ ಮತ್ತು ಗಮನಾರ್ಹವಾದ ಪರಿಣಾಮವನ್ನು ಬೀರುತ್ತದೆ. ಅದಕ್ಕಾಗಿಯೇ ಮನೆಯಲ್ಲಿ ಇಡುವ ಪ್ರತಿಯೊಂದು ವಸ್ತುವಿನ ಬಗ್ಗೆಯೂ ನಾವು ಜಾಗರೂಕರಾಗಿರಬೇಕು. ಮುಖ್ಯವಾಗಿ, ಅಡುಗೆಮನೆಯನ್ನು ಮನೆಯ ಅತ್ಯಂತ ಪವಿತ್ರ ಮತ್ತು ಪ್ರಮುಖ ಭಾಗವೆಂದು ಪರಿಗಣಿಸಲಾಗುತ್ತದೆ. ಆದರೆ, ನಾವು ದಿನನಿತ್ಯ “ಮುಂದೆ ಎಂದಾದರೂ ಉಪಯೋಗಕ್ಕೆ ಬರಬಹುದು” ಎಂದು ಯೋಚಿಸುತ್ತಾ ಬಿರುಕು ಬಿಟ್ಟ ಅಥವಾ ಮುರಿದ ಅಡುಗೆ ಪಾತ್ರೆಗಳನ್ನು ನಿರ್ಲಕ್ಷಿಸಿ ಅಲ್ಲೇ ಇಟ್ಟಿರುತ್ತೇವೆ. ನಮ್ಮ ಈ ಸಣ್ಣ ಅಜಾಗರೂಕತೆಯು ಮನೆಯಲ್ಲಿನ ಸಕಾರಾತ್ಮಕ ಶಕ್ತಿಯನ್ನು ಹೇಗೆ ನಾಶಪಡಿಸುತ್ತದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ಮುರಿದ ಪಾತ್ರೆಗಳಿಂದ ಹೆಚ್ಚಾಗುತ್ತೆ ನಕಾರಾತ್ಮಕ ಶಕ್ತಿ:

ವಾಸ್ತು ಶಾಸ್ತ್ರದ ಪ್ರಕಾರ, ಮುರಿದ ಅಥವಾ ಬಿರುಕು ಬಿಟ್ಟ ಪಾತ್ರೆಗಳು ನಕಾರಾತ್ಮಕ ಶಕ್ತಿಯನ್ನು ಬಲವಾಗಿ ಆಕರ್ಷಿಸುತ್ತವೆ. ಅಂತಹ ವಸ್ತುಗಳು ಮನೆಯ ಒಟ್ಟಾರೆ ವಾತಾವರಣದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಪರಿಣಾಮವಾಗಿ ಕುಟುಂಬದ ಸದಸ್ಯರಲ್ಲಿ ಅನಗತ್ಯ ಮಾನಸಿಕ ಒತ್ತಡ, ಕಿರಿಕಿರಿ ಮತ್ತು ಆತಂಕ ಕ್ರಮೇಣ ಹೆಚ್ಚಾಗುತ್ತಾ ಹೋಗುತ್ತದೆ. ಮನೆಯಲ್ಲಿ ನೆಮ್ಮದಿ ಇರಬೇಕಾದರೆ ಇಂತಹ ವಸ್ತುಗಳನ್ನು ತಕ್ಷಣವೇ ಹೊರಹಾಕಬೇಕು.

ತೀವ್ರ ಆರ್ಥಿಕ ತೊಂದರೆಗಳ ಮುನ್ಸೂಚನೆ:

ಹಳೆಯ, ಮುರಿದ ಅಥವಾ ಹಾನಿಗೊಳಗಾದ ಪಾತ್ರೆಗಳನ್ನು ಅಡುಗೆಮನೆಯಲ್ಲಿ ಇಟ್ಟುಕೊಳ್ಳುವುದನ್ನು ವಾಸ್ತು ಶಾಸ್ತ್ರದಲ್ಲಿ ತೀವ್ರ ಆರ್ಥಿಕ ನಷ್ಟದ ಸಂಕೇತವೆಂದು ಹೇಳಲಾಗುತ್ತದೆ. ಇಂತಹ ವಸ್ತುಗಳಿರುವ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸುವುದಿಲ್ಲ. ಇದು ಹಣದ ಹರಿವಿನಲ್ಲಿ ನಿರಂತರ ಅಡೆತಡೆಗಳನ್ನು ಉಂಟುಮಾಡುತ್ತದೆ ಮತ್ತು ಅನಗತ್ಯ ವೆಚ್ಚಗಳು ಹಠಾತ್ತನೆ ಹೆಚ್ಚಾಗುತ್ತವೆ. ಎಷ್ಟೇ ದುಡಿದರೂ ಸಾಲದ ಬಾಧೆ ಮುಗಿಯುವುದಿಲ್ಲ.

ಕೌಟುಂಬಿಕ ಸಂಬಂಧಗಳು ಹದಗೆಡಬಹುದು:

ಅಡುಗೆಮನೆಯಲ್ಲಿ ಉತ್ಪತ್ತಿಯಾಗುವ ನಕಾರಾತ್ಮಕ ಶಕ್ತಿಯು ನೇರವಾಗಿ ನಮ್ಮ ಸಂಬಂಧಗಳ ಮೇಲೆ ಪ್ರಭಾವ ಬೀರುತ್ತದೆ. ಮುರಿದ ಪಾತ್ರೆಗಳಿಂದ ಹೊರಹೊಮ್ಮುವ ನಕಾರಾತ್ಮಕ ಕಂಪನಗಳು ಕುಟುಂಬ ಸದಸ್ಯರ ನಡುವೆ ಸದಾ ತಪ್ಪು ತಿಳುವಳಿಕೆ, ಸಣ್ಣಪುಟ್ಟ ವಿಷಯಗಳಿಗೂ ದೊಡ್ಡ ಜಗಳಗಳು ಮತ್ತು ವಾದ-ವಿವಾದಗಳಿಗೆ ಕಾರಣವಾಗುತ್ತವೆ. ಇದು ಮನೆಯ ಶಾಂತಿಯನ್ನು ಸಂಪೂರ್ಣವಾಗಿ ಕೆಡಿಸುತ್ತದೆ.

ಇದನ್ನೂ ಓದಿ: ಸಾನ್ನದ ನೀರಿಗೆ ಒಂದು ಚಿಟಿಕೆ ಕರ್ಪೂರ ಬೆರೆಸಿ; ಇದರ ಚಮತ್ಕಾರಿ ಪ್ರಯೋಜನಗಳು ಇಲ್ಲಿವೆ…

ಆರೋಗ್ಯದ ಮೇಲಾಗುತ್ತೆ ಭೀಕರ ಪರಿಣಾಮ:

ವಾಸ್ತು ದೋಷ ಮಾತ್ರವಲ್ಲದೆ, ಆರೋಗ್ಯದ ದೃಷ್ಟಿಕೋನದಿಂದಲೂ ಮುರಿದ ಪಾತ್ರೆಗಳು ಅತ್ಯಂತ ಅಪಾಯಕಾರಿ. ಬಿರುಕು ಬಿಟ್ಟ ಪಾತ್ರೆಗಳ ಸಣ್ಣ ಮೂಲೆಗಳಲ್ಲಿ ಕಣ್ಣಿಗೆ ಕಾಣದ ಬ್ಯಾಕ್ಟೀರಿಯಾಗಳು ಮತ್ತು ಧೂಳು ಸುಲಭವಾಗಿ ಸಂಗ್ರಹವಾಗುತ್ತವೆ. ಅಂತಹ ಪಾತ್ರೆಗಳಲ್ಲಿ ಆಹಾರ ಬೇಯಿಸಿದಾಗ ಅಥವಾ ತಿಂದಾಗ, ಆ ಬ್ಯಾಕ್ಟೀರಿಯಾಗಳು ದೇಹವನ್ನು ಪ್ರವೇಶಿಸಿ ವಿವಿಧ ರೀತಿಯ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತವೆ.

ಮಹಿಳೆಯರಿಗಾಗಿ ಒಂದು ವಿಶೇಷ ವಾಸ್ತು ಸಲಹೆ:

ಅಡುಗೆಮನೆಯನ್ನು ಅನ್ನಪೂರ್ಣೇಶ್ವರಿ ದೇವಿಯ ಸ್ಥಾನವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಯಾವುದೇ ಕಾರಣಕ್ಕೂ ಅಡುಗೆಮನೆಯಲ್ಲಿ ಮುರಿದ ಕಪ್‌ಗಳು, ಪ್ಲೇಟ್‌ಗಳು, ಹ್ಯಾಂಡಲ್ ಮುರಿದ ಪ್ಯಾನ್‌ಗಳು ಅಥವಾ ಬಿರುಕು ಬಿಟ್ಟ ಗಾಜಿನ ವಸ್ತುಗಳನ್ನು ಇಟ್ಟುಕೊಳ್ಳಬೇಡಿ. ಶನಿವಾರದ ದಿನ ಇಂತಹ ಹಳೆಯ ಮುರಿದ ವಸ್ತುಗಳನ್ನು ಮನೆಯಿಂದ ಹೊರಹಾಕುವುದು ಅತ್ಯಂತ ಒಳಿತು.

ನಿಮ್ಮ ಅಡುಗೆಮನೆಯಲ್ಲೂ ಇಂತಹ ಪಾತ್ರೆಗಳಿದ್ದರೆ, ತಕ್ಷಣವೇ ಅವುಗಳನ್ನು ತೆಗೆದುಹಾಕಿ ಮತ್ತು ನಿಮ್ಮ ಮನೆಯಲ್ಲಿ ಧನಾತ್ಮಕ ಶಕ್ತಿ ಹಾಗೂ ಸಂಪತ್ತು ವೃದ್ಧಿಯಾಗುವಂತೆ ನೋಡಿಕೊಳ್ಳಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us