AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್ಲಾ ಇದ್ದರೂ ಮನಸ್ಸಿಗೆ ಏನೋ ಕಸಿವಿಸಿ! ಒಂದಷ್ಟು ವಾಸ್ತು ಸಲಹೆ ಪಾಲಿಸಿ, ಸರಿಹೋದೀತು

Vastu Tips: ಮನೆಯಲ್ಲಿ ಚಿಕ್ಕ ಮಕ್ಕಳಿಗಾಗಿ ಮನೋಹರ ಫೋಟೋಗಳು ಇರಬೇಕು. ಅದರಲ್ಲೂ ನಗುತ್ತಿರುವ ಮಕ್ಕಳ ಫೋಟೋಗಳಿದ್ದರೆ ಮನೆಯಲ್ಲಿ ಧನಾತ್ಮಕ ಶಕ್ತಿಯ ಜೊತೆಗೆ ಮನದಲ್ಲೂ ಸಕಾರಾತ್ಮಕ ಭಾವ ಹೆಚ್ಚುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.

ಎಲ್ಲಾ ಇದ್ದರೂ ಮನಸ್ಸಿಗೆ ಏನೋ ಕಸಿವಿಸಿ! ಒಂದಷ್ಟು ವಾಸ್ತು ಸಲಹೆ ಪಾಲಿಸಿ, ಸರಿಹೋದೀತು
ಎಲ್ಲಾ ಇದ್ದರೂ ಮನಸ್ಸಿಗೆ ಏನೋ ಕಸಿವಿಸಿ! ಒಂದಷ್ಟು ವಾಸ್ತು ಸಲಹೆ
ಸಾಧು ಶ್ರೀನಾಥ್​
|

Updated on: Oct 21, 2023 | 10:42 AM

Share

ವಾಸ್ತು ಮಾನವನ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬ ನಂಬಿಕೆ ಇರುವವರು ಬಹಳ ಮಂದಿ ಇದ್ದಾರೆ. ಇತ್ತೀಚೆಗೆ ವಾಸ್ತುವಿನಲ್ಲಿ ನಂಬಿಕೆ ಇರುವವರು ಮತ್ತಷ್ಟು ಮಗದಷ್ಟು ವಾಸ್ತುವನ್ನು ಹೆಚ್ಚು ನಂಬುತ್ತಾರೆ. ಈಗ ವಾಸ್ತು ವಿಜ್ಞಾನ ಕೂಡ ಅದನ್ನೇ ಹೇಳುತ್ತದೆ. ಮನೆಯ ನಿರ್ಮಾಣ ಮಾತ್ರವಲ್ಲದೆ ಮನೆಯಲ್ಲಿ ಇರುವ ವಸ್ತುಗಳೂ ಮನುಷ್ಯರ ಮೇಲೆ ಪ್ರಭಾವ ಬೀರುತ್ತವೆ. ಅದು ಮನ ಸ್ಥಿತಿಯ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿಯೇ ಮನೆಯ (Home) ಪ್ರತಿಯೊಂದು ವಸ್ತುವೂ ವಾಸ್ತು ಶಾಸ್ತ್ರಕ್ಕೆ ಅನುಗುಣವಾಗಿಯೇ ಇರುತ್ತದೆ. ಪರಿಸ್ಥಿತಿ ಹೀಗಿರುವಾಗ ಕೆಲವರು ಆಗಾಗ್ಗೆ ಮಾನಸಿಕ ಆತಂಕದಿಂದ ಬಳಲುತ್ತಿದ್ದಾರೆ (Depression, Mental Tension, Stress). ಕೈಯಲ್ಲಿ ಹಣವಿದ್ದರೂ, ಮಾಡಬೇಕಾದ ಕೆಲಸ ತುಂಬಾ ಇದೆ ಎನ್ನುವಷ್ಟರಲ್ಲಿ ಅವರಿಗೆ ಏನೂ ಇಲ್ಲದಂತಾಗುತ್ತದೆ. ಈ ಸ್ಥಿತಿಗೆ ಕೆಲವು ವಾಸ್ತು ದೋಷಗಳೇ ಕಾರಣ ಎನ್ನುತ್ತಾರೆ ವಾಸ್ತು ತಜ್ಞರು. ಅಂತಹ ಪರಿಸ್ಥಿತಿಯಿಂದ ಹೊರಬರಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು? ಯಾವ ವಾಸ್ತು ನಿಯಮಗಳನ್ನು (Vastu Tips) ಪಾಲಿಸಬೇಕು? ಈಗ ನೋಡೋಣ..

* ಕುಟುಂಬದ ಸದಸ್ಯರ ಮಾನಸಿಕ ಆರೋಗ್ಯವನ್ನು ಸುಧಾರಿಸಲು, ಮನೆಯ ಮಾಲೀಕರು ಮಲಗುವ ಕೋಣೆ ಕಟ್ಟುನಿಟ್ಟಾಗಿ ನೈಋತ್ಯ ದಿಕ್ಕಿನಲ್ಲಿರುವಂತೆ ನೋಡಿಕೊಳ್ಳಬೇಕು. ಹಾಗೆಯೇ ಮಲಗುವಾಗ ಯಾವಾಗಲೂ ತಲೆಯನ್ನು ದಕ್ಷಿಣದ ಕಡೆಗೆ ಇಟ್ಟುಕೊಳ್ಳಬೇಕು. ನಿಮ್ಮ ಕಾಲುಗಳನ್ನು ಉತ್ತರದ ಕಡೆಗೆ ಮಲಗಿಸಿದರೆ, ನಕಾರಾತ್ಮಕ ಪರಿಣಾಮಗಳು ಕಡಿಮೆಯಾಗುತ್ತದೆ.

ಇದನ್ನೂ ಓದಿ: ಹಾಸಿಗೆಯ ಬಳಿ ಈ 5 ವಸ್ತುಗಳನ್ನು ಇಡಬಾರದು, ಅದರಿಂದ ಮನೆಯಲ್ಲಿ ಆರ್ಥಿಕ-ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ!

* ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಯು ನಿಯಮಿತವಾಗಿ ಕೆಲವು ಅಜ್ಞಾತ ಮಾನಸಿಕ ಆತಂಕವನ್ನು ಉಂಟುಮಾಡುತ್ತದೆ. ನೆಗೆಟಿವ್ ಎನರ್ಜಿ ಇರುವ ಕಾರಣ ಮನೆಯಲ್ಲಿ ಮೀನಿನ ಅಕ್ವೇರಿಯಂ ಹಾಕಲು ವಾಸ್ತು ಪಂಡಿತರು ಸೂಚಿಸುತ್ತಾರೆ. ಮನೆಯ ಉತ್ತರ ದಿಕ್ಕಿಗೆ ಅಕ್ವೇರಿಯಂ ಇಡುವುದು ಲಾಭದಾಯಕ ಎಂದು ಹೇಳಲಾಗುತ್ತದೆ. ಇದರಿಂದ ಆಯಾಸ ಮತ್ತು ಒತ್ತಡ ದೂರವಾಗಿ ನಿಮ್ಮಲ್ಲಿ ಹೊಸ ಶಕ್ತಿ ಹರಡುತ್ತದೆ. ಈ ಅಕ್ವೇರಿಯಂನಲ್ಲಿ ಬೆಸ ಸಂಖ್ಯೆಯ ಮೀನುಗಳು ಇರುವುದನ್ನು ಖಚಿತಪಡಿಸಿಕೊಳ್ಳಲು ಯಾವಾಗಲೂ ಹೇಳಲಾಗುತ್ತದೆ.

Also Read: ಅಪ್ಪಿತಪ್ಪಿಯೂ ಮಂಚದ ಕೆಳಗೆ ಈ ವಸ್ತುಗಳನ್ನು ಇಡಬೇಡಿ, ಅದರಿಂದ ನಿಮಗೆ ವೈವಾಹಿಕ ಸಮಸ್ಯೆ- ಹಣಕಾಸಿನ ಸಮಸ್ಯೆ ತಪ್ಪಿದ್ದಲ್ಲ 

* ವಾಸ್ತು ವಿಜ್ಞಾನದಲ್ಲಿ ಕನ್ನಡಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಲಕ್ಷ್ಮಿ ಸ್ವರೂಪಿ ಕನ್ನಡಿಯನ್ನು ಸರಿಯಾದ ಜಾಗದಲ್ಲಿ ಇಡದಿದ್ದರೆ ಅದು ಭೀಕರ ಪರಿಣಾಮಗಳನ್ನು ಬೀರುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಮಲಗುವ ಕೋಣೆಯಲ್ಲಿ ಕನ್ನಡಿಯಲ್ಲಿ ಹಾಸಿಗೆ ಗೋಚರಿಸಬಾರದು. ಹೀಗಾದರೆ ಮನೆಯಲ್ಲಿ ಮಾನಸಿಕ ಒತ್ತಡ ಹೆಚ್ಚಾಗುವ ಸಂಭವವಿದೆ ಎಂದು ಎಚ್ಚರಿಸಿದ್ದಾರೆ. ಮಲಗುವ ಕೋಣೆಯಲ್ಲಿ ಡ್ರೆಸ್ಸಿಂಗ್ ಟೇಬಲ್ನಂತಹ ವಸ್ತುವಿದ್ದರೆ, ಅದನ್ನು ಬಟ್ಟೆಯಿಂದ ಮುಚ್ಚಲು ಸೂಚಿಸಲಾಗುತ್ತದೆ.

* ಮನೆಯಲ್ಲಿ ಚಿಕ್ಕ ಮಕ್ಕಳಿಗಾಗಿ ಮನೋಹರ ಫೋಟೋಗಳು ಇರಬೇಕು. ಅದರಲ್ಲೂ ನಗುತ್ತಿರುವ ಮಕ್ಕಳ ಫೋಟೋಗಳಿದ್ದರೆ ಮನೆಯಲ್ಲಿ ಧನಾತ್ಮಕ ಶಕ್ತಿಯ ಜೊತೆಗೆ ಮನದಲ್ಲೂ ಸಕಾರಾತ್ಮಕ ಭಾವ ಹೆಚ್ಚುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.

ಹೆಚ್ಚಿನ ಆಧ್ಯಾತ್ಮಿಕ ಸುದ್ದಿಗಳಿಗಾಗಿ  ಇಲ್ಲಿ ಕ್ಲಿಕ್ ಮಾಡಿ..

ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ