AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಸ್ತುಶಿಲ್ಪವು ಎಷ್ಟೇ ಅದ್ಭುತವಾಗಿದ್ದರೂ, ಅದು ವಾಸ್ತುವಿನ ಪ್ರಕಾರವಾಗಿರಬೇಕು: ನೈಋತ್ಯ ದಿಕ್ಕಿನಲ್ಲಿ ಇವುಗಳನ್ನು ಇಡಬೇಡಿ, ಅದು ಅಪಾಯಕಾರಿ ತಿಳಿಯಿರಿ

ಸ್ವಂತ ಮನೆ ಕಟ್ಟಿಕೊಳದಳುವುದು ಪ್ರತಿಯೊಬ್ಬರ ಕನಸು. ಹಾಗಾಗಿಯೇ ಮನೆ ನಿರ್ಮಾಣದಲ್ಲಿ ಯಾವುದೇ ರಾಜಿಯಾಗದಂತೆ ನೋಡಿಕೊಳ್ಳುತ್ತಾರೆ. ನಿರ್ಮಾಣಕ್ಕೆ ಅಗತ್ಯವಾಗಿ ಉತ್ತಮ ಗುಣಮಟ್ಟದ ಸಾಮಗ್ರಿಗಳನ್ನು ಹೆಚ್ಚು ಖರೀದಿಸುತ್ತಾರೆ. ವಾಸ್ತು ವಿಷಯದಲ್ಲೂ ಅಷ್ಟೇ ಸ್ಪಷ್ಟತೆ ಇರಬೆಕು. ವಾಸ್ತುಶಿಲ್ಪವು ಎಷ್ಟೇ ಅದ್ಭುತವಾಗಿದ್ದರೂ, ಅದು ವಾಸ್ತುವಿನ ಪ್ರಕಾರವಾಗಿರಬೇಕು ಮತ್ತು ಎಲ್ಲ ವಾಸ್ತುವನ್ನೂ ಕಟ್ಟುನಿಟ್ಟಾಗಿ ಪರಿಗಣಿಸುತ್ತದೆ.

ವಾಸ್ತುಶಿಲ್ಪವು ಎಷ್ಟೇ ಅದ್ಭುತವಾಗಿದ್ದರೂ, ಅದು ವಾಸ್ತುವಿನ ಪ್ರಕಾರವಾಗಿರಬೇಕು: ನೈಋತ್ಯ ದಿಕ್ಕಿನಲ್ಲಿ ಇವುಗಳನ್ನು ಇಡಬೇಡಿ, ಅದು ಅಪಾಯಕಾರಿ ತಿಳಿಯಿರಿ
ನೈಋತ್ಯ ದಿಕ್ಕಿನಲ್ಲಿಇವುಗಳನ್ನು ಇಡಬೇಡಿ, ಅದು ಅಪಾಯಕಾರಿ ತಿಳಿಯಿರಿ
ಸಾಧು ಶ್ರೀನಾಥ್​
|

Updated on: Sep 28, 2023 | 7:00 PM

Share

ಸ್ವಂತ ಮನೆ ಕಟ್ಟಿಕೊಳದಳುವುದು ಪ್ರತಿಯೊಬ್ಬರ ಕನಸು. ಹಾಗಾಗಿಯೇ ಮನೆ ನಿರ್ಮಾಣದಲ್ಲಿ ಯಾವುದೇ ರಾಜಿಯಾಗದಂತೆ ನೋಡಿಕೊಳ್ಳುತ್ತಾರೆ. ನಿರ್ಮಾಣಕ್ಕೆ ಅಗತ್ಯವಾಗಿ ಉತ್ತಮ ಗುಣಮಟ್ಟದ ಸಾಮಗ್ರಿಗಳನ್ನು ಹೆಚ್ಚು ಖರೀದಿಸುತ್ತಾರೆ. ವಾಸ್ತು ವಿಷಯದಲ್ಲೂ ಅಷ್ಟೇ ಸ್ಪಷ್ಟತೆ ಇರಬೆಕು. ವಾಸ್ತುಶಿಲ್ಪವು ಎಷ್ಟೇ ಅದ್ಭುತವಾಗಿದ್ದರೂ, ಅದು ವಾಸ್ತುವಿನ ಪ್ರಕಾರವಾಗಿರಬೇಕು ಮತ್ತು ಎಲ್ಲ ವಾಸ್ತುವನ್ನೂ ಕಟ್ಟುನಿಟ್ಟಾಗಿ ಪರಿಗಣಿಸುತ್ತದೆ  (Spiritual, Astrology)..

ಮನೆ ನಿರ್ಮಾಣದಲ್ಲಿ ವಾಸ್ತು ಶಾಸ್ತ್ರದ ಬಗ್ಗೆ ನಿಷ್ಕಾಳಜಿ ವಹಿಸಿದರೆ ನಷ್ಟವಾಗುತ್ತದೆ ಎಂಬುದು ನಂಬಿಕೆ. ಅದಕ್ಕಾಗಿಯೇ ವಾಸ್ತು ಪಂಡಿತರ ಸಲಹೆ ಪಡೆದು ಮನೆ ನಿರ್ಮಾಣವನ್ನು ಪ್ರಾರಂಭಿಸಬೇಕಾಗುತ್ತದೆ. ವಾಸ್ತು ಉಲ್ಲೇಖಗಳನ್ನು ಸಹ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಕೋಣೆ ಯಾವ ದಿಕ್ಕಿನಿಂದ ಶುರುವಾಗಬೇಕು, ಕಂಬಗಳು ಎಲ್ಲಿರಬೇಕು, ಮೆಟ್ಟಿಲುಗಳು ಎಲ್ಲಿರಬೇಕು.. ಎಷ್ಟು ಬಾಗಿಲುಗಳಿರಬೇಕು.? ಎಷ್ಟು ಕಿಟಕಿಗಳು ಇರಬೇಕು?

ಪ್ರತಿಯೊಂದು ಸಣ್ಣ ವಿಷಯದಲ್ಲೂ ವಾಸ್ತು ಸಲಹೆಗಳನ್ನು ಅನುಸರಿಸಲಾಗುತ್ತದೆ. ಆದರೆ ಮನೆ ನಿರ್ಮಾಣ ಪೂರ್ಣಗೊಂಡ ನಂತರವೂ ಕೆಲವು ವಾಸ್ತು ಸಲಹೆಗಳನ್ನು ಅನುಸರಿಸಬೇಕು. ಅವುಗಳಲ್ಲಿ ಒಂದು ಮನೆಯಲ್ಲಿ ನೈಋತ್ಯ ದಿಕ್ಕು ಪಾಲನೆ ಮಾಡಬೇಕಾಗುತ್ತದೆ. ಈ ದಿಕ್ಕಿನಲ್ಲಿ ಯಾವ ರೀತಿಯ ವಿಷಯಗಳನ್ನು ಹಾಕಬೇಕು? ಯಾವ ವಸ್ತುಗಳನ್ನು ಇಡಬಾರದು? ಯಾವುದೇ ವಸ್ತುಗಳನ್ನು ಹಾಕುವ ಉದ್ದೇಶವೇನು? ಮುಂತಾದ ವಿಷಯಗಳನ್ನು ನೋಡೋಣ

* ಯಾವುದೇ ಸಂದರ್ಭದಲ್ಲೂ ಮನೆಯ ನೈಋತ್ಯ ಮೂಲೆಯಲ್ಲಿ ಶೌಚಾಲಯ ಇರಬಾರದು ಎನ್ನುತ್ತಾರೆ ವಾಸ್ತು ತಜ್ಞರು. ಇದರಿಂದ ಮನೆಯಲ್ಲಿ ಸಂಕಷ್ಟ ಎದುರಿಸಬೇಕಾಗುತ್ತದೆ ಎನ್ನಲಾಗಿದೆ. ವಾಸ್ತು ಪಂಡಿತರ ಪ್ರಕಾರ, ಇದು ಮನೆಯಲ್ಲಿ ಅಸ್ಥಿರತೆ, ಜಗಳಗಳು ಮತ್ತು ಆರ್ಥಿಕ ನಷ್ಟವನ್ನು ಉಂಟುಮಾಡುತ್ತದೆ.

* ಭಾರೀ ತೂಕದ ವಸ್ತುಗಳನ್ನು ನೈಋತ್ಯ ದಿಕ್ಕಿನಲ್ಲಿ ಇಟ್ಟರೆ ಉತ್ತಮ. ಅದಕ್ಕಾಗಿಯೇ ನೈಋತ್ಯ ದಿಕ್ಕಿನಲ್ಲಿ ಅಲ್ಮೇರಾದಂತಹ ವಸ್ತುವನ್ನು ಇಡಲು ಸೂಚಿಸಲಾಗುತ್ತದೆ. ಸಾಧ್ಯವಾದರೆ.. ನೈಋತ್ಯ ದಿಕ್ಕಿನಲ್ಲಿ ಗ್ಯಾರೇಜ್, ಪಾರ್ಕಿಂಗ್ ಮತ್ತು ಮೆಟ್ಟಿಲುಗಳಂತಹ ನಿರ್ಮಾಣಗಳನ್ನು ಸಹ ಕೈಗೆತ್ತಿಕೊಳ್ಳಬಹುದು ಎಂದು ವಾಸ್ತು ತಜ್ಞರು ಹೇಳುತ್ತಾರೆ.

Also Read: ರಾಘವೇಂದ್ರಸ್ವಾಮಿ ಮತ್ತು ಗ್ರಾಮ ದೇವತೆ ಮಂಚಾಲಮ್ಮ ದರ್ಶನಕ್ಕೆ ಹರಿದುಬರುತ್ತಿರುವ ಭಕ್ತರು: ತುಂಬಿತುಳುಕಿದ ಮಠದ ಹುಂಡಿ

* ವಾಸ್ತು ಪಂಡಿತರು ಹೇಳುವ ಪ್ರಕಾರ ಮನೆಯ ನೈಋತ್ಯ ದಿಕ್ಕಿಗೆ ಬೀದಿ ಬರಬಾರದು. ಹಾಗೆ ಮಾಡಿದರೆ ಮನೆಯಲ್ಲಿ ಒಳ್ಳೆಯ ಫಲಿತಾಂಶ ಸಿಗುವುದಿಲ್ಲ ಎನ್ನುತ್ತಾರೆ ತಜ್ಞರು. ನೈಋತ್ಯ ದಿಕ್ಕಿನಲ್ಲಿ ಬಾವಿ ಇರಬಾರದು ಎಂಬುದನ್ನು ಖಚಿತಪಡಿಸಿಕೊಳ್ಳಿ. ಮಳೆ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಿ.

* ಪೂಜಾ ಮಂದಿರವು ನೈಋತ್ಯ ದಿಕ್ಕಿನಲ್ಲಿ ಇರಬಾರದು. ಅಪ್ಪಿತಪ್ಪಿಯೂ ಈ ದಿಕ್ಕಿನಲ್ಲಿ ಪೂಜಾ ಕೋಣೆ ಕಟ್ಟಬೇಡಿ. ನೈಋತ್ಯ ದಿಕ್ಕಿನಲ್ಲಿ ಪೂಜೆಗಳನ್ನು ಮಾಡುವುದರಿಂದ ಯಾವುದೇ ಪ್ರತಿಫಲ ದೊರೆಯುವುದಿಲ್ಲ. ಇದರಿಂದ ಯಾವುದೇ ಪೂಜಾಫಲ ದಕ್ಕುವುದಿಲ್ಲ.

* ನೈಋತ್ಯ ದಿಕ್ಕಿನ ಸಂಪೂರ್ಣ ಜಾಗವು ಮನೆಯ ಎಲ್ಲಾ ದಿಕ್ಕುಗಳಿಗಿಂತ ಸ್ವಲ್ಪ ಎತ್ತರದಲ್ಲಿ ಇರುವಂತೆ ನೋಡಿಕೊಳ್ಳಿ. ವಾಸ್ತು ಶೈಲಿಯು ಈ ರೀತಿ ಇರುವಂತೆ ಎಚ್ಚರ ವಹಿಸಿದರೆ ಮನೆಯ ಮುಖ್ಯಸ್ಥನಿಗೆ ಸಮಾಜದಲ್ಲಿ ಉತ್ತಮ ಗೌರವ ದೊರೆಯುತ್ತದೆ.

* ಯಾವುದೇ ಸಂದರ್ಭದಲ್ಲೂ ನೈಋತ್ಯ ದಿಕ್ಕಿನಿಂದ ಮನೆಗೆ ಪ್ರವೇಶ ಇರಬಾರದು. ಇದರಿಂದ, ಮನೆಯಲ್ಲಿ ಆರ್ಥಿಕ ತೊಂದರೆಗಳು ಉಂಟಾಗುತ್ತವೆ. ಸಾಧ್ಯವಾದಷ್ಟು, ಉತ್ತಮ ಫಲಿತಾಂಶಗಳಿಗಾಗಿ ಆಭರಣಗಳು ಮತ್ತು ಬೆಲೆಬಾಳುವ ವಸ್ತುಗಳನ್ನು ನೈಋತ್ಯ ದಿಕ್ಕಿನಲ್ಲಿ ಇಡಬೇಕು.

ಹೆಚ್ಚಿನ ಆಧ್ಯಾತ್ಮಿಕ ಸುದ್ದಿಗಳಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ

(ಗಮನಿಸಿ: ಇಲ್ಲಿ ನೀಡಿರುವ ಮಾಹಿತಿಯು ನಂಬಿಕೆಯನ್ನು ಆಧರಿಸಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಜನರ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಇಲ್ಲಿ ನೀಡಿದ್ದೇವೆ)

ವಿಜಯೇಂದ್ರಗೆ ಯತ್ನಾಳ್​​ ಬಹಿರಂಗ ಸವಾಲು: ಹೇಳಿದ್ದೇನು?
ವಿಜಯೇಂದ್ರಗೆ ಯತ್ನಾಳ್​​ ಬಹಿರಂಗ ಸವಾಲು: ಹೇಳಿದ್ದೇನು?
ಪ್ರಧಾನಿ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ಗೌರವ
ಪ್ರಧಾನಿ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ಗೌರವ
ರಿಷಬ್​​ಗೆ ಇದೇ ತಿರುಗುಬಾಣವಾಗುತ್ತೆ: ಭವಿಷ್ಯ ನುಡಿದ ದೈವನರ್ತಕ ತಮ್ಮಣ್ಣ
ರಿಷಬ್​​ಗೆ ಇದೇ ತಿರುಗುಬಾಣವಾಗುತ್ತೆ: ಭವಿಷ್ಯ ನುಡಿದ ದೈವನರ್ತಕ ತಮ್ಮಣ್ಣ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ