AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಘವೇಂದ್ರಸ್ವಾಮಿ ಮತ್ತು ಗ್ರಾಮ ದೇವತೆ ಮಂಚಾಲಮ್ಮ ದರ್ಶನಕ್ಕೆ ಹರಿದುಬರುತ್ತಿರುವ ಭಕ್ತರು: ತುಂಬಿತುಳುಕಿದ ಮಠದ ಹುಂಡಿ

ಮೊದಲು ಶ್ರೀ ರಾಘವೇಂದ್ರಸ್ವಾಮಿ ಮಠದ ಹುಂಡಿಯ ಆದಾಯ ತೀರಾ ಕಡಿಮೆ ಇತ್ತು. ಇದೀಗ ಶ್ರೀಮಠಕ್ಕೆ ಸಂಬಂಧಿಸಿದ ಗ್ರಾಮ ದೇವತೆ ಮಂಚಾಲಮ್ಮ (Manchalamma Temple ) ಸೇರಿದಂತೆ ವಿವಿಧೆಡೆ ಹುಂಡಿಯಲ್ಲಿ 4 ಕೋಟಿ ರೂ. ಆದಾಯ ಬಂದಿದೆ. ರಜಾ ದಿನಗಳು, ಮಹಿಳೆಯರಿಗೆ ಕರ್ನಾಟಕ ಸರ್ಕಾರದ ಉಚಿತ ಬಸ್ ಸೌಲಭ್ಯ, ಶ್ರೀ ಹುಂಡಿಗೆ ಬ್ರಿಟನ್ ಪ್ರಧಾನಿ ಕುಟುಂಬ ಬಂದಿದ್ದು 4 ಕೋಟಿ ರೂಪಾಯಿ ಸಂಗ್ರಹಕ್ಕೆ ಕಾರಣವಾಯಿತಾ ಎಂಬ ಕುತೂಹಲವೂ ಮೂಡಿದೆ.

ರಾಘವೇಂದ್ರಸ್ವಾಮಿ ಮತ್ತು ಗ್ರಾಮ ದೇವತೆ ಮಂಚಾಲಮ್ಮ ದರ್ಶನಕ್ಕೆ ಹರಿದುಬರುತ್ತಿರುವ ಭಕ್ತರು: ತುಂಬಿತುಳುಕಿದ ಮಠದ ಹುಂಡಿ
ರಾಘವೇಂದ್ರಸ್ವಾಮಿ ಮತ್ತು ಗ್ರಾಮ ದೇವತೆ ಮಂಚಾಲಮ್ಮ ದರ್ಶನಕ್ಕೆ ಹರಿದುಬರುತ್ತಿಒರುವ ಭಕ್ತರು
Follow us
ಸಾಧು ಶ್ರೀನಾಥ್​
|

Updated on: Sep 28, 2023 | 10:23 AM

ಕರ್ನಾಟಕದ ರಾಯಚೂರು (Raichur) ಜಿಲ್ಲೆಯಲ್ಲಿರುವ ನೆರೆಯ ಆಂಧ್ರದ ಕರ್ನೂಲು ಜಿಲ್ಲೆಗೆ ಅಂಟಿಕೊಂಡಿರುವ ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ (Sri Raghavendra Swamy Matha) ಹುಂಡಿ ಆದಾಯ ಊಹೆಗೂ ಮೀರಿ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ. ಸಾಲು ಸಾಲು ರಜಾ ದಿನಗಳು, ಕರ್ನಾಟಕ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯವನ್ನು ಒದಗಿಸಿರುವುದು ಮತ್ತು ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಅವರ ಕುಟುಂಬದ ಆಗಮನದಿಂದಾಗಿ ಭಾರಿ ಹೆಚ್ಚಳವಾಗಿದೆ ಎಂದು ತಿಳಿದುಬಂದಿದೆ. ನೆರೆಯ ಆಂಧ್ರದಲ್ಲಿರುವ ಅಷ್ಟಾದಶ ಜ್ಯೋತಿರ್ಲಿಂಗಗಳು ಹಾಗೂ ಶಕ್ತಿ ಪೀಠಗಳಲ್ಲಿ ಒಂದಾಗಿರುವ ಶ್ರೀಶೈಲ ದೇವಸ್ಥಾನದ ಹುಂಡಿಗೆ (Hundi Donation) ಪೈಪೋಟಿ ನೀಡುವ ಮೂಲಕ ಮಂತ್ರಾಲಯದ ಹಂಡಿ ಆದಾಯ ಹೆಚ್ಚಳವಾಗಿರುವುದನ್ನು ಕಂಡು ದೇವಸ್ಥಾನದ ಅಧಿಕಾರಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಇತ್ತೀಚಿಗೆ ಹುಂಡಿ ಆದಾಯ ರೂ. 3,82,59,839, 53 ಗ್ರಾಂ ಚಿನ್ನ ಮತ್ತು 1200 ಗ್ರಾಂ ಬೆಳ್ಳಿಯನ್ನು ಹುಂಡಿಯಲ್ಲಿ ಕಾಣಿಕೆಯಾಗಿ ಹಾಕಲಾಗಿದೆ. ಪ್ರಥಮ ಬಾರಿಗೆ ದಾಖಲೆಯ 4 ಕೋಟಿ ರೂ.ಗಳನ್ನು ಪಡೆದಿರುವುದು ಅತೀವ ಸಂತಸ ತಂದಿದೆ ಎಂದು ಶ್ರೀ ಮಠದ ಪದಾಧಿಕಾರಿಗಳು ತಿಳಿಸಿದ್ದಾರೆ. ಬಂದ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಮಾಡಿ ವೇತನ ಭತ್ಯೆ, ಉಚಿತ ಅನ್ನ ಸಂತರ್ಪಣೆ, ಭಕ್ತರಿಗೆ ಸೌಲಭ್ಯ ಕಲ್ಪಿಸಲು ವೆಚ್ಚ ಮಾಡಲಾಗುವುದು ಎಂದು ಶ್ರೀ ಮಠದ ಪದಾಧಿಕಾರಿಗಳು ತಿಳಿಸಿದ್ದಾರೆ. ಗಮನಾರ್ಹವೆಂದರೆ ಈ ಹಿಂದೆ (ಅಂದರೆ 34 ದಿನಗಳ ಹಿಂದೆ) ಶ್ರೀಮ​ಠದ ಇತಿ​ಹಾ​ಸ​ದ​ಲ್ಲಿಯೇ ಹುಂಡಿ​ಯಲ್ಲಿ 3 ಕೋಟಿ 53 ಲಕ್ಷ ರೂ. ದಾಖಲೆ ಮೊತ್ತದ ಕಾಣಿಗೆ ಸಂಗ್ರ​ಹ​ಗೊಂಡಿತ್ತು.

ಮೊದಲು ಶ್ರೀ ರಾಘವೇಂದ್ರಸ್ವಾಮಿ ಮಠದ ಹುಂಡಿಯ ಆದಾಯ ತೀರಾ ಕಡಿಮೆ ಇತ್ತು. ಇದೀಗ ಶ್ರೀಮಠಕ್ಕೆ ಸಂಬಂಧಿಸಿದ ಗ್ರಾಮ ದೇವತೆ ಮಂಚಾಲಮ್ಮ (Manchalamma Temple ) ಸೇರಿದಂತೆ ವಿವಿಧೆಡೆ ಹುಂಡಿಯಲ್ಲಿ 4 ಕೋಟಿ ರೂ. ಆದಾಯ ಬಂದಿದೆ. ರಜಾ ದಿನಗಳು, ಮಹಿಳೆಯರಿಗೆ ಕರ್ನಾಟಕ ಸರ್ಕಾರದ ಉಚಿತ ಬಸ್ ಸೌಲಭ್ಯ, ಶ್ರೀ ಹುಂಡಿಗೆ ಬ್ರಿಟನ್ ಪ್ರಧಾನಿ ಕುಟುಂಬ ಬಂದಿದ್ದು 4 ಕೋಟಿ ರೂಪಾಯಿ ಸಂಗ್ರಹಕ್ಕೆ ಕಾರಣವಾಯಿತಾ ಎಂಬ ಕುತೂಹಲವೂ ಮೂಡಿದೆ.

ಇದನ್ನೂ ಓದಿ: ಮಂತ್ರಾಲಯದಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಾಕ್ ಪೋಷಕರು ಮತ್ತು ಸುಧಾ ಮೂರ್ತಿ, ಶ್ರೀ ಸುಭುದೇಂದ್ರ ತೀರ್ಥರಿಂದ ಆಶೀರ್ವಾದ

ಇದರ ಜೊತೆಗೆ ಶ್ರೀ ರಾಘವೇಂದ್ರ ಸ್ವಾಮಿಯ ಆರಾಧನಾ ಮಹೋತ್ಸವಗಳು ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಬರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದರ್ಶನಕ್ಕೆ ಆಗಮಿಸಿ ಹುಂಡಿಯಲ್ಲಿ ಕಾಣಿಕೆ ಹಾಕುವುದರಿಂದ ಆದಾಯ ಹೆಚ್ಚಾಯಿತು ಎಂದೂ ಪರಿಗಣಿಸಲಾಗಿದೆ. 13.09.2023 ರಂದು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಯ ದರ್ಶನಕ್ಕೆ ಬ್ರಿಟಿಷ ಪ್ರಧಾನ ಮಂತ್ರಿ ಋಷಿ ಸುನಕ್ ಅವರ ಪೋಷಕರು, ಇನ್ಫೋಸಿಸ್ ಫೌಂಡೇಷನ್​ ಅಧ್ಯಕ್ಷೆ ಸುಧಾ ನಾರಾಯಣಮೂರ್ತಿ ಅವರು ಶ್ರೀ ಮಠದ ಜೊತೆಗೆ ಹುಂಡಿಯಲ್ಲಿ ಹಣ ಹಾಕಿದ್ದರಾ? ಎಂಬ ಮಾತೂ ಕೇಳಿಬರುತ್ತಿದೆ. ಏನೇ ಆಗಲಿ, ಶ್ರೀಮಠದ ಹುಂಡಿ ದಾಖಲೆಯ ಮಟ್ಟದಲ್ಲಿ ಪ್ರಥಮ ಬಾರಿಗೆ 4 ಕೋಟಿ ಬಂದಿದ್ದರಿಂದ ಮಠದ ಅಧಿಕಾರಿಗಳು, ಭಕ್ತರು, ಜನರು ಸಂತಸಗೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದೃಷ್ಟಿಹೀನ ಮಕ್ಕಳು ಹುಟ್ಟುಹಬ್ಬದ ಶುಭಾಶಯ ಕೋರಿದಾಗ ಕಣ್ಣೀರಿಟ್ಟ ರಾಷ್ಟ್ರಪತಿ
ದೃಷ್ಟಿಹೀನ ಮಕ್ಕಳು ಹುಟ್ಟುಹಬ್ಬದ ಶುಭಾಶಯ ಕೋರಿದಾಗ ಕಣ್ಣೀರಿಟ್ಟ ರಾಷ್ಟ್ರಪತಿ
‘ಪಪ್ಪಿ’ ಸಿನಿಮಾಗೆ 50 ದಿನದ ಸಂಭ್ರಮ; ವೇದಿಕೆಯಲ್ಲಿ ಬಾಲ ನಟರ ಡೈಲಾಗ್
‘ಪಪ್ಪಿ’ ಸಿನಿಮಾಗೆ 50 ದಿನದ ಸಂಭ್ರಮ; ವೇದಿಕೆಯಲ್ಲಿ ಬಾಲ ನಟರ ಡೈಲಾಗ್
ಸಿಎಂ ಮತ್ತು ಡಿಸಿಎಂ ಜೊತೆ ಹಲವಾರು ಸಚಿವರು ನಾಳೆ ತುಮಕೂರು ಆಗಮನ
ಸಿಎಂ ಮತ್ತು ಡಿಸಿಎಂ ಜೊತೆ ಹಲವಾರು ಸಚಿವರು ನಾಳೆ ತುಮಕೂರು ಆಗಮನ
ಬೆನ್ನು ನೋವಿಗೆ ಕಾರಣವೇನು? ಯೋಗದ ಮೂಲಕ ಪರಿಹರಿಸಿಕೊಳ್ಳುವುದು ಹೇಗೆ?
ಬೆನ್ನು ನೋವಿಗೆ ಕಾರಣವೇನು? ಯೋಗದ ಮೂಲಕ ಪರಿಹರಿಸಿಕೊಳ್ಳುವುದು ಹೇಗೆ?
ಐದು ದಿನಗಳ ಕಾಲ ಸುಟ್ಟ ಗಾಯಗಳೊಂದಿಗೆ ಜೀವನ್ಮರಣ ಹೋರಾಟ ನಡೆಸಿದ ಬಾಲಕ
ಐದು ದಿನಗಳ ಕಾಲ ಸುಟ್ಟ ಗಾಯಗಳೊಂದಿಗೆ ಜೀವನ್ಮರಣ ಹೋರಾಟ ನಡೆಸಿದ ಬಾಲಕ
ವಿದ್ಯುತ್ ಚಿತಾಗಾರದ ಕರೆಂಟ್ ಬಿಲ್ ಬಾಕಿ: ಬಡವಾಯ್ತೇ ಬಿಟಿಡಿಎ
ವಿದ್ಯುತ್ ಚಿತಾಗಾರದ ಕರೆಂಟ್ ಬಿಲ್ ಬಾಕಿ: ಬಡವಾಯ್ತೇ ಬಿಟಿಡಿಎ
ದಿನಕ್ಕೆ 10 ಗಂಟೆ ಕೆಲಸದ ಅವಧಿ ಬಗ್ಗೆ ಸಚಿವ ಸಂತೋಷ್ ಲಾಡ್ ಹೇಳಿದ್ದಿಷ್ಟು!
ದಿನಕ್ಕೆ 10 ಗಂಟೆ ಕೆಲಸದ ಅವಧಿ ಬಗ್ಗೆ ಸಚಿವ ಸಂತೋಷ್ ಲಾಡ್ ಹೇಳಿದ್ದಿಷ್ಟು!
ತನ್ನ ಸಿಗ್ನೇಚರ್ ಸ್ಟೆಪ್​ ಹಾಕುತ್ತಾ ಕುಣಿದು ರಂಜಿಸಿದ ಲೆಜೆಂಡರಿ ಸ್ಟಾರ್
ತನ್ನ ಸಿಗ್ನೇಚರ್ ಸ್ಟೆಪ್​ ಹಾಕುತ್ತಾ ಕುಣಿದು ರಂಜಿಸಿದ ಲೆಜೆಂಡರಿ ಸ್ಟಾರ್
ಇಲ್ಲಿಂದ ಮೇಲೆತ್ತಿ ಎಂಬಂತೆ ಅಸಾಹಯಕತೆಯಿಂದ ಜನರತ್ತ ನೋಡುತ್ತಿರುವ ನಾಯಿ
ಇಲ್ಲಿಂದ ಮೇಲೆತ್ತಿ ಎಂಬಂತೆ ಅಸಾಹಯಕತೆಯಿಂದ ಜನರತ್ತ ನೋಡುತ್ತಿರುವ ನಾಯಿ
ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದ ಭೂಕುಸಿತ; ಹಲವು ರಸ್ತೆಗಳು ಬಂದ್
ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದ ಭೂಕುಸಿತ; ಹಲವು ರಸ್ತೆಗಳು ಬಂದ್