AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vastu Tips: ತುಳಸಿ ಗಿಡಕ್ಕೆ ಹಸಿ ಹಾಲು ಅರ್ಪಿಸಿದರೆ ಅದೃಷ್ಟ!, ಗಿಡವನ್ನು ಎಂಥಾ ಪಾಟ್​ನಲ್ಲಿ ನೆಡಬೇಕು?

Vastu Tips: ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ ಮತ್ತು ತುಳಸಿಗೆ ಲಕ್ಷ್ಮಿ ದೇವತೆಯ ಸ್ಥಾನಮಾನವನ್ನು ನೀಡಿರುವುದರಿಂದ ತುಳಸಿಯನ್ನು ಸಂಪತ್ತಿನ ದೇವತೆ ಎಂದೇ ಕರೆಯಲಾಗುತ್ತದೆ.

Vastu Tips: ತುಳಸಿ ಗಿಡಕ್ಕೆ ಹಸಿ ಹಾಲು ಅರ್ಪಿಸಿದರೆ ಅದೃಷ್ಟ!, ಗಿಡವನ್ನು ಎಂಥಾ ಪಾಟ್​ನಲ್ಲಿ ನೆಡಬೇಕು?
Tulsi
TV9 Web
| Updated By: ನಯನಾ ರಾಜೀವ್|

Updated on: Jul 21, 2022 | 1:16 PM

Share

ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ ಮತ್ತು ತುಳಸಿಗೆ ಲಕ್ಷ್ಮೀ ದೇವತೆಯ ಸ್ಥಾನಮಾನವನ್ನು ನೀಡಿರುವುದರಿಂದ ತುಳಸಿಯನ್ನು ಸಂಪತ್ತಿನ ದೇವತೆ ಎಂದೇ ಕರೆಯಲಾಗುತ್ತದೆ. ನಿಮ್ಮ ಜೀವನದಲ್ಲಿ ಯಾವುದೇ ಹಣಕಾಸಿನ ಸಮಸ್ಯೆಗಳನ್ನು ನೀವು ಎದುರಿಸುತ್ತಿದ್ದರೆ ತುಳಸಿ ಗಿಡವನ್ನು ಲಕ್ಷ್ಮೀ ದೇವಿಯ ರೂಪದಲ್ಲಿ ಪೂಜಿಸುವುದರಿಂದ ನೀವು ತೊಂದರೆಗಳಿಂದ ಹೊರಬರುವಿರಿ.

ಆದರೆ ಅದಕ್ಕೂ ಮುನ್ನ ವಾಸ್ತು ಮತ್ತು ಜ್ಯೋತಿಷ್ಯದಲ್ಲಿ ತಿಳಿಸಿರುವಂತೆ ತುಳಸಿಯ ಬಗ್ಗೆ ಇರುವ ಮುಖ್ಯ ನಿಯಮಗಳೇನು ಎಂಬುದನ್ನು ನೀವು ತಿಳಿದುಕೊಳ್ಳಬೇಕು.

– ನಿಮ್ಮ ಮನೆಯಲ್ಲಿ ತುಳಸಿ ಗಿಡವಿಲ್ಲದಿದ್ದರೆ ಮತ್ತು ನಿಮ್ಮ ಮನೆಯಲ್ಲಿ ತುಳಸಿ ಗಿಡವನ್ನು ನೆಡಲು ಬಯಸಿದರೆ, ಉತ್ತಮ ಸಮಯವೆಂದರೆ ಅದು ಕಾರ್ತಿಕ ಮಾಸ.

-ತುಳಸಿಯನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ ಮತ್ತು ಕಾರ್ತಿಕ ಮಾಸದಲ್ಲಿ ತುಳಸಿ ಗಿಡವನ್ನು ಮನೆಗೆ ತಂದು ನೆಟ್ಟರೆ ಲಕ್ಷ್ಮಿ ದೇವಿಯೂ ಮನೆಗೆ ಬರುತ್ತಾಳೆ ಎಂಬುದು ನಂಬಿಕೆ.

ವಾಸ್ತು ಪ್ರಕಾರ ತುಳಸಿಯನ್ನು ನೆಡಿ -ವಾಸ್ತು ಶಾಸ್ತ್ರದ ಪ್ರಕಾರ ತುಳಸಿ ಗಿಡಗಳನ್ನು ಯಾವಾಗಲೂ ಮನೆಯ ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ನೆಡಬೇಕು. ಈ ದಿಕ್ಕಿನಲ್ಲಿ ದೇವತೆಗಳು ನೆಲೆಸಿದ್ದಾರೆ ಎಂದು ಹೇಳಲಾಗುತ್ತದೆ.

-ತುಳಸಿ ಗಿಡವನ್ನು ಮನೆಯ ಬಾಲ್ಕನಿ ಅಥವಾ ಕಿಟಕಿಯ ಮೇಲೆ ನೆಡಬಹುದು. ಆದರೆ ವಾಸ್ತು ಶಾಸ್ತ್ರದಲ್ಲಿ ನೀಡಿರುವ ನಿರ್ದೇಶನವನ್ನು ಗಮನಿಸಬೇಕು. -ತುಳಸಿ ಗಿಡಗಳನ್ನು ಅಪ್ಪಿತಪ್ಪಿಯೂ ಮನೆಯ ದಕ್ಷಿಣ ದಿಕ್ಕಿನಲ್ಲಿ ನೆಡಬಾರದು. ಈ ದಿಕ್ಕು ಪೂರ್ವಜರಿಗೆ ಸೇರಿದ್ದು ಇಲ್ಲಿ ತುಳಸಿ ಗಿಡವನ್ನು ಇಟ್ಟರೆ ಭಾರೀ ಆರ್ಥಿಕ ನಷ್ಟವನ್ನು ಅನುಭವಿಸಬಹುದು.

-ಈಶಾನ್ಯದಲ್ಲಿ ತುಳಸಿ ಗಿಡವನ್ನೂ ನೆಡಬಹುದು.

-ತುಳಸಿ ಗಿಡವನ್ನು ಮನೆಯ ಪ್ರವೇಶ ದ್ವಾರದಲ್ಲಿ ಅಥವಾ ಕಸವನ್ನು ಇಡುವ ಅಥವಾ ಚಪ್ಪಲಿ ತೆಗೆಯುವ ಯಾವುದೇ ಸ್ಥಳದಲ್ಲಿ ಎಂದಿಗೂ ನೆಡಬಾರದು.

-ತುಳಸಿಗೆ ಸಿಂಧೂರವನ್ನು ಅರ್ಪಿಸುವ ಬಗ್ಗೆ ಸಾಕಷ್ಟು ಗೊಂದಲಗಳಿವೆ, ಆದರೆ ವಾಸ್ತು ಶಾಸ್ತ್ರದ ಪ್ರಕಾರ ತುಳಸಿಗೆ ಸಿಂಧೂರವನ್ನು ಅರ್ಪಿಸಬಹುದು.

-ತುಳಸಿ ಗಿಡವನ್ನು ಯಾವಾಗಲೂ ಮಣ್ಣಿನ ಪಾತ್ರೆಯಲ್ಲಿ ಇಡಿ. ಪ್ಲಾಸ್ಟಿಕ್ ಪಾತ್ರೆಗಳನ್ನು ಎಂದಿಗೂ ಬಳಸಬೇಡಿ. ಸಾಧ್ಯವಾದರೆ, ತುಳಸಿ ಪಾತ್ರೆಯಲ್ಲಿ ಸುಣ್ಣ ಅಥವಾ ಅರಿಶಿನದೊಂದಿಗೆ ‘ಶ್ರೀ ಕೃಷ್ಣ’ ಎಂದು ಬರೆಯಿರಿ.

-ತುಳಸಿ ಸಸ್ಯವು ಬುಧ ಗ್ರಹವನ್ನು ಪ್ರತಿನಿಧಿಸುತ್ತದೆ ಮತ್ತು ಈ ಗ್ರಹವನ್ನು ಕೃಷ್ಣನ ರೂಪವೆಂದು ಪರಿಗಣಿಸಲಾಗಿದೆ.

ತುಳಸಿ ಪೂಜೆಯ ವಾಸ್ತು ನಿಯಮಗಳು: -ನೀವು ತುಳಸಿಯನ್ನು ನಿಯಮಿತವಾಗಿ ಪೂಜಿಸಬಹುದು ಆದರೆ ತುಳಸಿಯನ್ನು ಸಂಜೆ ಮುಟ್ಟಬಾರದು. ಇದಲ್ಲದೆ, ಏಕಾದಶಿ ದಿನ, ಚಂದ್ರ ಮತ್ತು ಸೂರ್ಯಗ್ರಹಣದ ದಿನಗಳಲ್ಲಿ ತುಳಸಿಯನ್ನು ಮುಟ್ಟಬಾರದು. ಭಾನುವಾರವೂ ತುಳಸಿಗೆ ನೀರು ಕೊಡಬಾರದು.

-ತುಳಸಿಗೆ ನೀರನ್ನು ಅರ್ಪಿಸುವುದಲ್ಲದೆ, ಹಸಿ ಹಾಲನ್ನು ಸಹ ನೀಡಬಹುದು. ಹಸಿ ಹಾಲನ್ನು ನೀಡುವುದರಿಂದ ದುರಾದೃಷ್ಟ ದೂರವಾಗುತ್ತದೆ ಎಂದು ನಂಬಲಾಗಿದೆ.

– ತುಳಸಿ ಗಿಡಗಳನ್ನು ಅಡುಗೆ ಮನೆ ಅಥವಾ ಬಾತ್ ರೂಂ ಬಳಿ ಇಡಬಾರದು. ಪೂಜಾ ಕೋಣೆಯ ಕಿಟಕಿಯ ಬಳಿ ತುಳಸಿ ಗಿಡವನ್ನು ಇಡಬಹುದು.

-ನೀವು ಪ್ರತಿದಿನ ತುಳಸಿಗೆ ಪ್ರದಕ್ಷಿಣೆ ಹಾಕಲು ಬಯಸಿದರೆ, ನೀರನ್ನು ಅರ್ಪಿಸುವಾಗ, ತುಳಸಿ ಗಿಡಕ್ಕೆ ಮೂರು ಬಾರಿ ಪ್ರದಕ್ಷಿಣೆ ಹಾಕಿ. ನೀವು ಮೊದಲು ಸೂರ್ಯನಿಗೆ ನೀರನ್ನು ಅರ್ಪಿಸಬೇಕು ಮತ್ತು ನಂತರ ತುಳಸಿಗೆ ನೀರನ್ನು ಅರ್ಪಿಸಬೇಕು.

– ತುಳಸಿಗೆ ನೀರನ್ನು ಅರ್ಪಿಸುವಾಗ, ನೀವು ಈ ಮಂತ್ರವನ್ನು ಪಠಿಸಬೇಕು ‘ಮಹಾಪ್ರಸಾದ ಜನನಿ, ಸರ್ವ ಸೌಭಾಗ್ಯವರ್ಧಿನಿ ಅಧಿಕ ವ್ಯಾಧಿ ಹರ ನಿತ್ಯಂ, ತುಳಸಿ ತ್ವಂ ನಮೋಸ್ತುತೇ.’

-ನೀವು ತುಳಸಿ ಎಲೆಗಳನ್ನು 15 ದಿನಗಳ ಕಾಲ ಕೃಷ್ಣನ ಫೋಟೊ ಅಥವಾ ವಿಗ್ರಹದ ಮೇಲೆ ಇಡಬಹುದು ಮತ್ತು ಎಲೆಗಳು ಒಣಗಿದಾಗ ನೀವು ಅವುಗಳನ್ನು ಪ್ರಸಾದವಾಗಿ ತೆಗೆದುಕೊಳ್ಳಬಹುದು.

-ಸಾಮಾನ್ಯವಾಗಿ ಜನರು ತುಳಸಿಗೆ ಕೆಂಪು ಬಳೆಗಳನ್ನು ನೀಡುತ್ತಾರೆ, ಆದರೆ ಇದು ಮಂಗಳದ ಬಣ್ಣವಾಗಿದೆ ಮತ್ತು ತುಳಸಿ ಬುಧದ ಸಂಕೇತವಾಗಿದೆ. ಬುಧ ಮತ್ತು ಮಂಗಳ ಸ್ನೇಹಿತರಲ್ಲ. ಬುಧದ ಅನುಕೂಲಕರ ಗ್ರಹಗಳು ಶುಕ್ರ ಮತ್ತು ಶನಿ. ಆದ್ದರಿಂದ ತುಳಸಿಗೆ ಬಿಳಿ, ಪ್ರಕಾಶಮಾನವಾದ ನೀಲಿ ಬಳೆಯನ್ನು ಅರ್ಪಿಸಬೇಕು.

-ನಿಮ್ಮ ಮನೆಯಲ್ಲಿ ಯಾವಾಗಲೂ 1, 3, 5 ಅಥವಾ 7 ತುಳಸಿ ಗಿಡಗಳನ್ನು ಹೊಂದಿರಬೇಕು. ತುಳಸಿ ಗಿಡವನ್ನು 2, 4, 6 ಈ ಸಂಖ್ಯೆಗಳಲ್ಲಿ ಇಡಬಾರದು.

-ತುಳಸಿ ಗಿಡವನ್ನು ಅಶುಚಿಯಾದ ಕೈಗಳಿಂದ ಅಥವಾ ಕೊಳಕು ಕೈಗಳಿಂದ ಮುಟ್ಟಬಾರದು. ಹೀಗೆ ಮಾಡುವುದರಿಂದ ಲಕ್ಷ್ಮಿಯು ನಿಮ್ಮ ಮೇಲೆ ತುಂಬಾ ಕೋಪಗೊಳ್ಳುತ್ತಾಳೆ.

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?