AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

LICಯ ಈ ಯೋಜನೆಗಳು ನಿಮ್ಮ ಕನಸುಗಳನ್ನು ನನಸಾಗಿಸುತ್ತವೆ, 100 ರೂ. ಹೂಡಿಕೆಯಿಂದ ಲಕ್ಷಗಳ ಆದಾಯ ಗಳಿಸಿ

ನೀವು ಮಾಡುವ ಹೂಡಿಕೆ ಸುರಕ್ಷಿತವಾಗಿರಲು ಈ ಮಾರ್ಗ ಸೂಕ್ತ, ಹೌದು LICಯಲ್ಲಿ ಮಾಡಿದ ಹೂಡಿಕೆ ನಿಮಗೆ ಹೆಚ್ಚು ಸುರಕ್ಷತೆಯನ್ನು ನೀಡುತ್ತದೆ. ಇಲ್ಲಿ ಮಾಡಿದ ಹೂಡಿಕೆಯಿಂದ ನೀವು ಉತ್ತಮ ಪ್ರಯೋಜನಗಳನ್ನು ಸಹ ಪಡೆಯುತ್ತೀರಿ.

LICಯ ಈ ಯೋಜನೆಗಳು ನಿಮ್ಮ ಕನಸುಗಳನ್ನು ನನಸಾಗಿಸುತ್ತವೆ, 100 ರೂ. ಹೂಡಿಕೆಯಿಂದ ಲಕ್ಷಗಳ ಆದಾಯ ಗಳಿಸಿ
TV9 Bharatvarsh
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Sep 23, 2022 | 3:33 PM

ನೀವು ಮಾಡುವ ಹೂಡಿಕೆ ಸುರಕ್ಷಿತವಾಗಿರಲು ಈ ಮಾರ್ಗ ಸೂಕ್ತ, ಹೌದು LICಯಲ್ಲಿ ಮಾಡಿದ ಹೂಡಿಕೆ ನಿಮಗೆ ಹೆಚ್ಚು ಸುರಕ್ಷತೆಯನ್ನು ನೀಡುತ್ತದೆ. ಇಲ್ಲಿ ಮಾಡಿದ ಹೂಡಿಕೆಯಿಂದ ನೀವು ಉತ್ತಮ ಪ್ರಯೋಜನಗಳನ್ನು ಸಹ ಪಡೆಯುತ್ತೀರಿ. ನೀವು ಭಾರತೀಯ ಜೀವ ವಿಮಾ ನಿಗಮದ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು. ಅವುಗಳಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಹೆಚ್ಚು ಆದಾಯವನ್ನು ಪಡೆಯುತ್ತೀರಿ. ಅಲ್ಲದೆ, ನಿಮ್ಮ ನಂತರ ನಿಮ್ಮ ಕುಟುಂಬಕ್ಕೆ ಇದು ಆರ್ಥಿಕ ಭದ್ರತೆಯನ್ನು ನೀಡುತ್ತದೆ. ಇಲ್ಲಿ ನೀವು ಬಹಳ ಕಡಿಮೆ ಮೊತ್ತವನ್ನು ಹೂಡಿಕೆ ಮಾಡಬೇಕು. LICಯಲ್ಲಿ ಮೂರು ಯೋಜನೆಗಳ ಇವೆ, ಅದರ ಬಗ್ಗೆ ತಿಳಿಯೋಣ.

ಎಲ್ಐಸಿ ಜೀವನ್ ಪ್ರಗತಿ ಯೋಜನೆ

ಇದು ಎಲ್ಐಸಿಯ ಜನಪ್ರಿಯ ಯೋಜನೆಯಾಗಿದೆ. ಇದನ್ನು 2016 ರಲ್ಲಿ ಪ್ರಾರಂಭಿಸಲಾಯಿತು. ಇದರಲ್ಲಿ ಹೂಡಿಕೆ ಮಾಡುವುದರಿಂದ ವ್ಯಕ್ತಿಯೊಬ್ಬ ಲಕ್ಷಗಟ್ಟಲೆ ಆದಾಯ ಪಡೆಯಬಹುದು. ಇದರೊಂದಿಗೆ, ಪಾಲಿಸಿಯ ಅಡಿಯಲ್ಲಿ, ಹೂಡಿಕೆದಾರರು ಅಪಾಯದ ರಕ್ಷಣೆಯ ಪ್ರಯೋಜನವನ್ನು ಸಹ ಪಡೆಯುತ್ತಾರೆ. ಈ ವಿಮಾ ಯೋಜನೆಯಲ್ಲಿ, ವ್ಯಕ್ತಿಯು ನಿಯಮಿತವಾಗಿ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಪಾಲಿಸಿಯಲ್ಲಿ, ವ್ಯಕ್ತಿಯು ಸಾವಿನ ಪ್ರಯೋಜನವನ್ನು ಪಡೆಯುತ್ತಾನೆ, ಇದು ಪ್ರತಿ ಐದು ವರ್ಷಗಳಿಗೊಮ್ಮೆ ಇದರ ಶೇಕಾಡದಲ್ಲಿ ಹೆಚ್ಚಾಗುತ್ತದೆ.

ಪಾಲಿಸಿದಾರರ ಮರಣದ ನಂತರ, 6 ರಿಂದ 10 ವರ್ಷಗಳಲ್ಲಿ, ಒಬ್ಬ ವ್ಯಕ್ತಿಯು ಶೇಕಡಾ 125, 11 ರಿಂದ 15 ವರ್ಷ ವಯಸ್ಸಿನ ವ್ಯಕ್ತಿ 150% ಮತ್ತು 16 ರಿಂದ 20 ವರ್ಷ ವಯಸ್ಸಿನ ವ್ಯಕ್ತಿಯು 200%ದಷ್ಟು ಹೆಚ್ಚಿಸಬಹುದು. ಇದರಲ್ಲಿ 20 ವರ್ಷಗಳ ಅವಧಿಗೆ ಹೂಡಿಕೆ ಮಾಡಬೇಕು. ವ್ಯಕ್ತಿ ಪ್ರತಿ ತಿಂಗಳು 6 ಸಾವಿರ ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. ನೀವು 12 ವರ್ಷ ವಯಸ್ಸಿನಿಂದ ಈ ಪಾಲಿಸಿಯನ್ನು ಪ್ರಾರಂಭಿಸಬಹುದು.

LIC ಜೀವನ್ ಶಿರೋಮಣಿ ಯೋಜನೆ

ಈ ಪಾಲಿಸಿಯ ಅಡಿಯಲ್ಲಿ, ಜೀವ ವಿಮೆಯ ಜೊತೆಗೆ ಉಳಿತಾಯದ ಪ್ರಯೋಜನವನ್ನು ಪಡೆಯಬಹುದು. ಇದರಲ್ಲಿ ಹೂಡಿಕೆದಾರರು ನಿಗದಿತ ಅವಧಿಗೆ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಈ ಯೋಜನೆಯ ಅವಧಿಯು 14, 16, 18 ಮತ್ತು 20 ವರ್ಷಗಳು ಆಗಿರುತ್ತದೆ. ಆದರೆ ವಿಶೇಷವೆಂದರೆ ನಾಲ್ಕು ವರ್ಷಕ್ಕೆ ಮಾತ್ರ ಹಣ ಕಟ್ಟಬೇಕು.

ಈ ವಿಮಾ ಪಾಲಿಸಿಯ ಅಡಿಯಲ್ಲಿ, ಪ್ರತಿ ತಿಂಗಳು ಸುಮಾರು 94,000 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಇದರ ಮೇಲೆ ಮೂಲ ವಿಮಾ ಮೊತ್ತ 1 ಕೋಟಿ ರೂ. ಅದೇ ಸಮಯದಲ್ಲಿ, ಗರಿಷ್ಠ ವಿಮಾ ಮೊತ್ತದ ಮೇಲೆ ಯಾವುದೇ ಮಿತಿಯನ್ನು ನಿಗದಿಪಡಿಸಲಾಗುವುದಿಲ್ಲ. ಯೋಜನೆಯಡಿಯಲ್ಲಿ, ನೀವು 14 ವರ್ಷಗಳ ಪಾಲಿಸಿ ಅವಧಿಯನ್ನು ಆರಿಸಿದರೆ, ನೀವು 10ನೇ ವರ್ಷದಲ್ಲಿ 30 ಪ್ರತಿಶತ ಮತ್ತು 12 ನೇ ವರ್ಷದಲ್ಲಿ 30 ಪ್ರತಿಶತದಷ್ಟು ಲಾಭವನ್ನು ಪಡೆಯುತ್ತೀರಿ. ಅದೇ ಸಮಯದಲ್ಲಿ, 16 ವರ್ಷಗಳ ಪಾಲಿಸಿಯನ್ನು ತೆಗೆದುಕೊಂಡಾಗ, 12 ನೇ ವರ್ಷದಲ್ಲಿ, 30 ಪ್ರತಿಶತ ಮತ್ತು 14 ನೇ ವರ್ಷದಲ್ಲಿ, ವ್ಯಕ್ತಿಯು 35 ಪ್ರತಿಶತದಷ್ಟು ಆದಾಯವನ್ನು ಪಡೆಯುತ್ತಾನೆ.

ಎಲ್ಐಸಿ ಆಧಾರ್ ಶಿಲಾ ಯೋಜನೆ

ಭಾರತೀಯ ಜೀವ ವಿಮಾ ನಿಗಮದ ಈ ವಿಮಾ ಪಾಲಿಸಿಯನ್ನು ವಿಶೇಷವಾಗಿ ಮಹಿಳೆಯರು ಮತ್ತು ಹುಡುಗಿಯರಿಗಾಗಿ ಯೋಜನೆಯನ್ನು ಮಾಡಲಾಗಿದೆ. ಈ ಪಾಲಿಸಿಯ ಅಡಿಯಲ್ಲಿ, ಮಹಿಳೆ ಕೇವಲ 29 ರೂಪಾಯಿ ಹೂಡಿಕೆ ಮಾಡುವ ಮೂಲಕ 4 ಲಕ್ಷದವರೆಗೆ ಗಳಿಸಬಹುದು. ಈ ಯೋಜನೆಯಡಿಯಲ್ಲಿ, ಮಹಿಳೆಯರು ಭದ್ರತೆಯ ಜೊತೆಗೆ ಉಳಿತಾಯದ ಪ್ರಯೋಜನವನ್ನು ಸಹ ಪಡೆಯುತ್ತಾರೆ. ಇದರೊಂದಿಗೆ, ಪಾಲಿಸಿದಾರನ ಮರಣದ ಸಂದರ್ಭದಲ್ಲಿ, ಅವರ ಕುಟುಂಬವೂ ಆರ್ಥಿಕ ಭದ್ರತೆಯನ್ನು ಪಡೆಯುತ್ತದೆ. ಈ ಯೋಜನೆಯಲ್ಲಿ, ಮಹಿಳೆಯು ಕನಿಷ್ಟ ಮೂಲ ವಿಮಾ ಮೊತ್ತ ರೂ 75,000 ತೆಗೆದುಕೊಳ್ಳಬಹುದು. ಇದರಲ್ಲಿ ಪಕ್ವತೆಯ ಅವಧಿಯು 10 ರಿಂದ 20 ವರ್ಷಗಳವರೆಗೆ ಇರಬಹುದು.

Published On - 3:31 pm, Fri, 23 September 22

ಶನಿವಾರದಂದು ಶ್ರೀ ವೆಂಕಟೇಶ್ವರನ ಆರಾಧನೆಯ ಮಹತ್ವ ತಿಳಿಯಿರಿ
ಶನಿವಾರದಂದು ಶ್ರೀ ವೆಂಕಟೇಶ್ವರನ ಆರಾಧನೆಯ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ವೈರಾಗ್ಯದ ಭಾವನೆಗಳು ಕಾಡಬಹುದು
Daily Horoscope: ಈ ರಾಶಿಯವರಿಗೆ ವೈರಾಗ್ಯದ ಭಾವನೆಗಳು ಕಾಡಬಹುದು
ಸೆಲೆಬ್ರಿಟಿಗಳಿಗೆ ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಇಷ್ಟ ಆಯ್ತಾ?
ಸೆಲೆಬ್ರಿಟಿಗಳಿಗೆ ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಇಷ್ಟ ಆಯ್ತಾ?
ಗರ್ಭಾವಸ್ಥೆಯ ಹಸುವಿನ ಕೆಚ್ಚಲು ಕತ್ತರಿಸಿ ವಿಕೃತಿ ಮೆರೆದ ದುಷ್ಕರ್ಮಿಗಳು
ಗರ್ಭಾವಸ್ಥೆಯ ಹಸುವಿನ ಕೆಚ್ಚಲು ಕತ್ತರಿಸಿ ವಿಕೃತಿ ಮೆರೆದ ದುಷ್ಕರ್ಮಿಗಳು
ಇರಾನ್‌ ಮೇಲಿನ ಕ್ಷಿಪಣಿ ದಾಳಿ, ರಹಸ್ಯ ಕಾರ್ಯಾಚರಣೆಯ ವಿಡಿಯೋ ರಿಲೀಸ್
ಇರಾನ್‌ ಮೇಲಿನ ಕ್ಷಿಪಣಿ ದಾಳಿ, ರಹಸ್ಯ ಕಾರ್ಯಾಚರಣೆಯ ವಿಡಿಯೋ ರಿಲೀಸ್
ಮಗಳ ಮದುವೆಗೆಂದು ಇಟ್ಟಿದ್ದ ಚಿನ್ನಾಭರಣ ದೋಚಿದ ಖದೀಮರು, ಕಣ್ಣೀರಿಟ್ಟ ತಾಯಿ
ಮಗಳ ಮದುವೆಗೆಂದು ಇಟ್ಟಿದ್ದ ಚಿನ್ನಾಭರಣ ದೋಚಿದ ಖದೀಮರು, ಕಣ್ಣೀರಿಟ್ಟ ತಾಯಿ
51 ಎಸೆತಗಳಲ್ಲಿ 151 ರನ್ ಚಚ್ಚಿದ ಫಿನ್ ಅಲೆನ್
51 ಎಸೆತಗಳಲ್ಲಿ 151 ರನ್ ಚಚ್ಚಿದ ಫಿನ್ ಅಲೆನ್
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ: ಪ್ರಮಾಣಿಕ ವಿಮರ್ಶೆ ನೀಡಿದ ಐಂದ್ರಿತಾ
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ: ಪ್ರಮಾಣಿಕ ವಿಮರ್ಶೆ ನೀಡಿದ ಐಂದ್ರಿತಾ
ಇಂಥ ಘಟನೆಗಳು ಜರುಗದಂತೆ ಮುಂಜಾಗ್ರತೆ ಕ್ರಮವಹಿಸಬೇಕು: ಜಗದೀಶ್ ಶೆಟ್ಟರ್
ಇಂಥ ಘಟನೆಗಳು ಜರುಗದಂತೆ ಮುಂಜಾಗ್ರತೆ ಕ್ರಮವಹಿಸಬೇಕು: ಜಗದೀಶ್ ಶೆಟ್ಟರ್
ಟಿವಿ9 ಕನ್ನಡ ವರದಿಗಾರನೊಂದಿಗೆ ಆರೆಮನಸ್ಸಿನಿಂದ ಮಾತಾಡಿದ ವಿದ್ಯಾರ್ಥಿ
ಟಿವಿ9 ಕನ್ನಡ ವರದಿಗಾರನೊಂದಿಗೆ ಆರೆಮನಸ್ಸಿನಿಂದ ಮಾತಾಡಿದ ವಿದ್ಯಾರ್ಥಿ