AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs Australia Test Series | ಬುಮ್ರಾ ಕೂಡ ಕೊನೆಯ ಟೆಸ್ಟ್​ನಿಂದ ಔಟ್, ವೇಗದ ದಾಳಿ ನೇತೃತ್ವ ಸಿರಾಜ್​ ಹೆಗಲಿಗೆ

ಪ್ರಮುಖ ವೇಗದ ಬೌಲರ್​ಗಳ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾಗೆ ಬ್ರಿಸ್ಬೇನ್​ನಲ್ಲಿ ಕೇವಲ ಮೂರನೇ ಟೆಸ್ಟ್ ಆಡಲಿರುವ ಮೊಹಮ್ಮದ್ ಸಿರಾಜ್ ವೇಗದ ದಾಳಿಯ ನೇತೃತ್ವವನ್ನು ವಹಿಸಲಿದ್ದಾರೆ. ತಂಗರಸು ನಟರಾಜನ್​ಗೆ ಟೆಸ್ಟ್​ ಕ್ರಿಕೆಟ್​ಗೆ​ ಪಾದಾರ್ಪಣೆ ಮಾಡುವ ಅವಕಾಶ ಉಜ್ವಲವಾಗಿದೆ.

India vs Australia Test Series | ಬುಮ್ರಾ ಕೂಡ ಕೊನೆಯ ಟೆಸ್ಟ್​ನಿಂದ ಔಟ್, ವೇಗದ ದಾಳಿ ನೇತೃತ್ವ ಸಿರಾಜ್​ ಹೆಗಲಿಗೆ
ಜಸ್ಪ್ರೀತ್ ಬುಮ್ರಾ
ಅರುಣ್​ ಕುಮಾರ್​ ಬೆಳ್ಳಿ
|

Updated on:Jan 12, 2021 | 7:34 PM

Share

ಸುಮಾರು ಒಂದೂವರೆ ತಿಂಗಳಿಂದ ಅಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತೀಯ ಕ್ರಿಕೆಟ್ ತಂಡಕ್ಕೆ ಇದುವರೆಗಿನ ಅತಿ ದೊಡ್ಡ ಆಘಾತ ಎದುರಾಗಿದೆ. ಟೀಮಿನ ಪ್ರಮುಖ ಬೌಲರ್ ಜಸ್ಪ್ರೀತ್ ಬುಮ್ರಾ ಉದರದ ಸ್ನಾಯು ಸೆಳೆತಕ್ಕೊಳಗಾಗಿದ್ದು, ಜನವರಿ 15ರಿಂದ ಬ್ರಿಸ್ಬೇನ್​ನಲ್ಲಿ ಶುರುವಾಗಲಿರುವ ನಾಲ್ಕನೆ ಮತ್ತು ನಿರ್ಣಾಯಕ ಟೆಸ್ಟ್​ನಲ್ಲಿ ಅಡುವುದಿಲ್ಲ. ಅವರು ಬ್ರಿಸ್ಬೇನ್ ಪಂದ್ಯದಲ್ಲಿ ಆಡಿದರೆ, ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆ ಇದ್ದು, ಈ ಸರಣಿಯ ನಂತರ ಭಾರತದಲ್ಲಿ ಇಂಗ್ಲೆಂಡ್​ ವಿರುದ್ಧ ನಡೆಯಲಿರುವ ಸರಣಿಯಲ್ಲಿ ಬಾಗವಹಿಸದಂಥ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಭಾರತೀಯ ಕ್ರಿಕೆಟ್ ಮಂಡಳಿಯ ಮೂಲಗಳು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿವೆ.

ಟೀಮ್ ಇಂಡಿಯಾದ ಸದಸ್ಯರು ಒಬ್ಬರ ನಂತರ ಮತ್ತೊಬ್ಬರು ಗಾಯಗೊಂಡು ಟೆಸ್ಟ್​ಗಳಿಂದ, ಇನ್ನೂ ಕೆಲವರು ಸರಣಿಯಿಂದ ಹೊರಬಿದ್ದಿರುವುದು ಮ್ಯಾನೇಜ್ಮೆಂಟ್ ಅನ್ನು ಇಕ್ಕಟ್ಟು ಮತ್ತು ಸಂಕಷ್ಟಕ್ಕೆ ಸಿಲುಕಿಸಿದೆ. ಓದುಗರಿಗೆ ಗೊತ್ತಿದೆ, ಸರಣಿ ಶುರುವಾಗುವ ಮೊದಲೇ ಅನುಭವಿ ಬೌಲರ್ ಇಶಾಂತ್ ಶರ್ಮ ಗಾಯದಿಂದಾಗಿ ಡೌನ್ ಅಂಡರ್ ಪ್ರವಾಸಕ್ಕೆ ಅಲಭ್ಯರಾದರು. ಅಡಿಲೇಡ್​ ಟೆಸ್ಟ್​ನಲ್ಲಿ ಪ್ಯಾಟ್ ಕಮ್ಮಿನ್ಸ್ ಅವರ ದಾಳಿಯಲ್ಲಿ ಬಲಗೈ ಮೊಣಕೈಗೆ ಪೆಟ್ಟು ತಿಂದ ವೇಗದ ಬೌಲರ್ ಮೊಹಮ್ಮದ್ ಶಮಿ ಸರಣಿಯಿಂದ ಹೊರಬಿದ್ದರು. ಮೆಲ್ಬರ್ನ್​ನಲ್ಲಿ ನಡೆದ ಎರಡನೆ ಟೆಸ್ಟ್​ನಲ್ಲಿ ಮತ್ತೊಬ್ಬ ವೇಗದ ಬೌಲರ್ ಉಮೇಶ್ ಯಾದವ್ ಬಲಗಾಲಿನ ಮೀನಖಂಡದ ಸ್ನಾಯು ಸೆಳೆತಕ್ಕೊಳಗಾಗಿ ಅವರು ಸಹ ಸರಣಿಯಿಂದ ಹೊರಬಿದ್ದರು.

ಸಿಡ್ನಿ ಟೆಸ್ಟ್ ಆರಂಭಕ್ಕೆ ಮೊದಲು ಟೀಮಿನ ಪ್ರಮುಖ ಬ್ಯಾಟ್ಸ್​ಮನ್ ಕೆ.ಎಲ್.ರಾಹುಲ್ ಅಭ್ಯಾಸ ಮಾಡುವ ಸಂದರ್ಭದಲ್ಲಿ ಬಲ ಮುಂಗೈ ಟ್ವಿಸ್ಟ್​ ಮಾಡಿಕೊಂಡು ಭಾರತಕ್ಕೆ ವಾಪಸ್ಸಾದರು. ವಿರಾಟ್​ ಕೊಹ್ಲಿ ಅನುಪಸ್ಥಿತಿಯಲ್ಲಿ ಎರಡನೆ ಟೆಸ್ಟ್​ನಲ್ಲಿ ಭಾರತದ ಬ್ಯಾಟಿಂಗ್ ದುರ್ಬಲವೆನಿಸಿದ್ದರಿಂದ, ಅದರಲ್ಲಿ ರಾಹುಲ್​ರನ್ನು ಆಡಿಸುವುದು ಖಚಿತವಾಗಿತ್ತು.

ರವೀಂದ್ರ ಜಡೇಜಾ ಬೆರಳು ಜಜ್ಜಿಹೋಗಿದೆ

ಆಮೇಲೆ, ಗಾಯಗೊಂಡವರ ಪಟ್ಟಿಗೆ ಸೇರಿದ್ದು ಅಲ್​ರೌಡರ್ ರವೀಂದ್ರ ಜಡೇಜಾ ಮತ್ತು ವಿಕೆಟ್​ಕೀಪರ್ ಬ್ಯಾಟ್ಸ್​ಮನ್ ರಿಷಬ್ ಪಂತ್. ಇವರಿಬ್ಬರೂ ನಿನ್ನೆ ಕೊನೆಗೊಂಡ ಸಿಡ್ನಿ ಟೆಸ್ಟ್​​ನಲ್ಲಿ ಬ್ಯಾಟಿಂಗ್ ಮಾಡುವಾಗ ಗಾಯಗೊಂಡರು, ಜಡೇಜಾ ಅವರ ಹೆಬ್ಬೆರಳು ಡಿಸ್​ಲೊಕೇಟ್ ಅಗಿದ್ದು ಶಸ್ತ್ರಚಿಕಿತ್ಸೆ ನಂತರ ಚೇತರಿಸಿಕೊಳ್ಳುತ್ತಿದ್ದಾರೆ. ಟೀಮ್ ಮ್ಯಾನೇಜ್​ಮೆಂಟ್ ಪ್ರಕಾರ ಅವರ ಪುನಃ ಕ್ರಿಕೆಟ್ ಮೈದಾನಕ್ಕಿಳಿಯಲು ಕನಿಷ್ಠ ನಾಲ್ಕು ವಾರಗಳ ಅವಶ್ಯಕತೆಯಿದೆ. ಅಂದರೆ ಇಂಗ್ಲೆಂಡ್ ವಿರುದ್ಧ ನಡೆಯುವ ಮೊದಲಿನರೆಡು ಟೆಸ್ಟ್​ಗಳಲ್ಲಿ ಅವರು ಆಡುವುದಿಲ್ಲ.

ಸಮಾಧಾನಕರ ಸಂಗತಿಯೆಂದರೆ. ಪಂತ್ ಚೇತರಿಸಿಕೊಂಡಿದ್ದು, ನಾಲ್ಕನೇ ಟೆಸ್ಟ್​ನಲ್ಲಿ ಆವರು ಕೇವಲ ಬ್ಯಾಟ್ಸ್​ಮನ್ ಸಾಮರ್ಥ್ಯದಲ್ಲಿ ಆಡಬಹುದು. ಅವರ ವಿಕೆಟ್​ಕೀಪಿಂಗ್ ಕಳಪೆಯಾಗಿದೆ ಎಂದು ಮಾಜಿ ಆಟಗಾರರು ಹೇಳುತ್ತಿರುವುದರಿಂದ ವೃದ್ಧಿಮಾನ್ ಸಹಾಗೆ ವಿಕೆಟ್​ಕೀಪಿಂಗ್ ಜವಾಬ್ದಾರಿ ವಹಿಸಿ ಪಂತ್ ಅವರನ್ನು ಪರಿಣಿತ ಬ್ಯಾಟ್ಸ್​ಮನ್ ಆಗಿ ಆಡಿಸಬಹುದು.

ಸಿಡ್ನಿ ಪಂದ್ಯ ಡ್ರಾನಲ್ಲಿ ಕೊನೆಗೊಳ್ಳುವಂತೆ ಮಾಡಲು ರವಿಚಂದ್ರನ್ ಆಶ್ವಿನ್​ರೊಂದಿಗೆ ವೀರೋಚಿತ ಬ್ಯಾಟಿಂಗ್ ಪ್ರದರ್ಶನ ನೀಡಿದ ಮಧ್ಯಮ ಕ್ರಮಾಂಕದ ಆಟಗಾರ ಹನುಮ ವಿಹಾರಿ ಸಹ ತೊಡೆ ಮಾಂಸಖಂಡದ ಸೆಳೆತಕ್ಕೆ ಒಳಗಾಗಿರುವುದರಿಂದ ಬ್ರಿಸ್ಬೇನ್ ಟೆಸ್ಟ್​ನಿಂದ ಹೊರಬಿದ್ದಿದ್ದಾರೆ.

ಮೆಡಿಕಲ್ ಟೀಮಿನಿಂದ ಹನುಮ ವಿಹಾರಿಗೆ ನೆರವು

ಇದೆಲ್ಲದಕ್ಕೆ ಮಿಗಿಲಾಗಿ ಟೀಮಿನ ನಾಯಕ ವಿರಾಟ್ ಕೊಹ್ಲಿ ಮೊದಲ ಟೆಸ್ಟ್​ ನಂತರ ಪಿತೃತ್ವದ ರಜೆ ಮೇಲೆ ಸ್ವದೇಶಕ್ಕೆ ವಾಪಸ್ಸಾದರು. ಅಲ್ಲಿಗೆ ಟೆಸ್ಟ್ ಆಯ್ಕೆಯಾಗಿದ್ದ 15-ಸದಸ್ಯರ ಪೈಕಿ 7 ಆಟಗಾರರ ಸೇವೆ ಟೀಮ್ ಇಂಡಿಯಾಗೆ ಲಭ್ಯವಿಲ್ಲದಂತಾಯಿತು. ಉಳಿದಿರುವ ಫಿಟ್​ ಆಗಿರುವ ಅಟಗಾರರೊಂದಿಗೆ ಭಾರತ ನಾಲ್ಕನೆ ಟೆಸ್ಟ್ ಆಡಬೇಕಿದೆ. ಕೊವಿಡ್-19 ಹಿನ್ನೆಲೆಯಲ್ಲಿ ಬಿಸಿಸಿಐ ಬದಲೀ ಆಟಗಾರರನ್ನು ಆಸ್ಟ್ರೇಲಿಯಾಗೆ ಕಳಿಸುವಂತಿಲ್ಲ.

ಪ್ರಮುಖ ವೇಗದ ಬೌಲರ್​ಗಳ ಅನುಪಸ್ಥಿತಿಯಲ್ಲಿ ಬ್ರಿಸ್ಬೇನ್​ನಲ್ಲಿ ಕೇವಲ ಮೂರನೇ ಟೆಸ್ಟ್ ಆಡಲಿರುವ ಮೊಹಮ್ಮದ್ ಸಿರಾಜ್ ವೇಗದ ದಾಳಿಯ ನೇತೃತ್ವವನ್ನು ವಹಿಸಲಿದ್ದಾರೆ. ತಂಗರಸು ನಟರಾಜನ್ ಅವರಿಗೆ ಟೆಸ್ಟ್​ ಕ್ರಿಕೆಟ್​ ಪದಾರ್ಪಣೆ ಮಾಡುವ ಅವಕಾಶವಿದ್ದು, ಇವರೊಬ್ಬರೊಂದಿಗೆ ನವದೀಪ್ ಸೈನಿ ಮತ್ತು ಶಾರ್ದಲ್ ಠಾಕೂರ್ ವೇಗದ ದಾಳಿಯನ್ನು ನಿಭಾಯಿಸಲಿದ್ದಾರೆ.

ಬ್ರಿಸ್ಬೇನ್​ನಲ್ಲಿ ಭಾರತದ ಎದುರು ಖಂಡಿತವಾಗಿಯೂ ದೊಡ್ಡ ಸವಾಲಿದೆ, ನಾಯಕ ಅಜಿಂಕ್ಯಾ ರಹಾನೆ ಹೇಗೆ ಟೀಮನ್ನು ಮುನ್ನಡೆಸಲಿದ್ದಾರೆ ಎನ್ನುವುದು ಕುತೂಹಲಕಾರಿ ಸಂಗತಿಯಾಗಿದೆ.

India vs Australia Test Series | ಟ್ರೋಲ್​ಗೊಳಗಾಗಿರುವ ಸ್ಮಿತ್ ರಕ್ಷಣೆಗೆ ಧಾವಿಸಿದ ಟಿಮ್ ಪೈನ್

Published On - 6:46 pm, Tue, 12 January 21

Follow Us
ಗೆಳೆಯ ಹಸುವಿಗಾಗಿ ಬ್ರೆಡ್ ಕಚ್ಚಿಕೊಂಡು ಬಂದ ನಾಯಿ; ಈ ಸ್ನೇಹಕ್ಕೆ ಏನಂತೀರಿ!
ಗೆಳೆಯ ಹಸುವಿಗಾಗಿ ಬ್ರೆಡ್ ಕಚ್ಚಿಕೊಂಡು ಬಂದ ನಾಯಿ; ಈ ಸ್ನೇಹಕ್ಕೆ ಏನಂತೀರಿ!
ಮಳೆ: ಬೆಂಗಳೂರಿನಲ್ಲಿ ಲ್ಯಾಂಡ್​ ಆಗದೇ ವಾಪಸಾದ ರಾಜ್ಯಪಾಲರಿದ್ದ ವಿಮಾನ
ಮಳೆ: ಬೆಂಗಳೂರಿನಲ್ಲಿ ಲ್ಯಾಂಡ್​ ಆಗದೇ ವಾಪಸಾದ ರಾಜ್ಯಪಾಲರಿದ್ದ ವಿಮಾನ
ದಾವಣಗೆರೆ ಬೈ ಎಲೆಕ್ಷನ್ ರಿಸಲ್ಟ್ ಬಗ್ಗೆ ಜಾರಕಿಹೊಳಿ ಸ್ಫೋಟಕ ಹೇಳಿಕೆ
ದಾವಣಗೆರೆ ಬೈ ಎಲೆಕ್ಷನ್ ರಿಸಲ್ಟ್ ಬಗ್ಗೆ ಜಾರಕಿಹೊಳಿ ಸ್ಫೋಟಕ ಹೇಳಿಕೆ
‘ಕೋಟಿಗೊಬ್ಬ’ ಮರು ಬಿಡುಗಡೆ: ಫ್ಯಾನ್ಸ್ ಜೊತೆ ಸಿನಿಮಾ ನೋಡಿದ ಪ್ರಿಯಾಂಕಾ
‘ಕೋಟಿಗೊಬ್ಬ’ ಮರು ಬಿಡುಗಡೆ: ಫ್ಯಾನ್ಸ್ ಜೊತೆ ಸಿನಿಮಾ ನೋಡಿದ ಪ್ರಿಯಾಂಕಾ
ಅಮೆರಿಕದ ಜೊತೆ ಆಟವಾಡಬೇಡಿ; ಇರಾನ್​ಗೆ ಜೆಡಿ ವ್ಯಾನ್ಸ್ ಎಚ್ಚರಿಕೆ
ಅಮೆರಿಕದ ಜೊತೆ ಆಟವಾಡಬೇಡಿ; ಇರಾನ್​ಗೆ ಜೆಡಿ ವ್ಯಾನ್ಸ್ ಎಚ್ಚರಿಕೆ
ವೃಂದಾವನದ ಯಮುನಾ ನದಿಯಲ್ಲಿ ಬೋಟ್ ಮುಳುಗಿ 10 ಜನ ಸಾವು
ವೃಂದಾವನದ ಯಮುನಾ ನದಿಯಲ್ಲಿ ಬೋಟ್ ಮುಳುಗಿ 10 ಜನ ಸಾವು
ಪ್ರಗತಿ ಪರಿಶೀಲನಾ ಸಭೆಯಲ್ಲಿ ರುದ್ರಪ್ಪ ಲಮಾಣಿ ಕಣ್ಣೀರು
ಪ್ರಗತಿ ಪರಿಶೀಲನಾ ಸಭೆಯಲ್ಲಿ ರುದ್ರಪ್ಪ ಲಮಾಣಿ ಕಣ್ಣೀರು
ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿಖಿಲ್ ಅಚ್ಚರಿ ಮಾತು
ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿಖಿಲ್ ಅಚ್ಚರಿ ಮಾತು
ರಾಜಾರೋಷವಾಗಿ ಬೈಕ್‌ನಲ್ಲಿ ಬಂದು ಯುವತಿಯ ಬೆನ್ನು ಸವರಿದ ಕಾಮಪಿಶಾಚಿ
ರಾಜಾರೋಷವಾಗಿ ಬೈಕ್‌ನಲ್ಲಿ ಬಂದು ಯುವತಿಯ ಬೆನ್ನು ಸವರಿದ ಕಾಮಪಿಶಾಚಿ
2000 ಅಡಿ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ
2000 ಅಡಿ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ