AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs England Test Series | ಇಂಗ್ಲೆಂಡ್ ವಿರುದ್ಧ ಮೊದಲೆರಡು ಟೆಸ್ಟ್​ಗಳಿಗೆ ನಟರಾಜನ್ ಡ್ರಾಪ್!

ಆಸ್ಟ್ರೇಲಿಯಾದಲ್ಲಿ ಇಂದು ಕೊನೆಗೊಂಡ ಟೆಸ್ಟ್​ ಸರಣಿಯ ಕೊನೆ ಪಂದ್ಯದಲ್ಲಿ ಪಾದಾರ್ಪಣೆ ಮಾಡಿ ಮೊದಲ ಇನ್ನಿಂಗ್ಸ್​ನಲ್ಲಿ 75ರನ್​ಗಳಿಗೆ 3 ವಿಕೆಟ್ ಪಡೆದಿದ್ದ ತಂಗರಸು ನಟರಾಜನ್ ಅವರನ್ನು 18-ಸದಸ್ಯರ ತಂಡದಿಂದ ಕೈಬಿಡಲಾಗಿದೆ.

India vs England Test Series | ಇಂಗ್ಲೆಂಡ್ ವಿರುದ್ಧ ಮೊದಲೆರಡು ಟೆಸ್ಟ್​ಗಳಿಗೆ ನಟರಾಜನ್ ಡ್ರಾಪ್!
ತಂಗರಸು ನಟರಾಜನ್
ಅರುಣ್​ ಕುಮಾರ್​ ಬೆಳ್ಳಿ
|

Updated on:Jan 19, 2021 | 10:57 PM

Share

ಯಾವುದೇ ಟೆಸ್ಟ್​ ಸರಣಿಗೆ ಟೀಮನ್ನು ಆಯ್ಕೆ ಮಾಡುವಾಗ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿಯ ಆಯ್ಕೆ ಸಮಿತಿ ತಿಕ್ಕಲುತವನ್ನು ಪ್ರದರ್ಶಿಸುವುದು ಹೊಸತೇನಲ್ಲ. ‘ಅಂದಕಾಲತ್ತಿಲ್’ನಿಂದ ಇದು ನಡೆದುಕೊಂಡು ಬಂದಿದೆ. ಸಮಿತಿ ಸದಸ್ಯರ ವಿಚಿತ್ರ ಮನಸ್ಥಿಯನ್ನು ನೋಡಿಯೇ ಮಾಜಿ ಆಟಗಾರರಾದ ಲಾಲಾ ಅಮರರ್​ನಾಥ್ ಮತ್ತು ಅವರ ಮಗ ಮೊಹಿಂದರ ಅಮರ್​ನಾಥ್ ಅವರನ್ನು ‘ಬಂಚ್ ಆಫ್ ಜೋಕರ್ಸ್’ಎಂದು ಕರೆದಿದ್ದರು.

ಬಿಸಿಸಿಐ ಆಯ್ಕೆ ಸಮಿತಿ ಇಂದು ಸಭೆ ಸೇರಿ ಇಂಗ್ಲೆಂಡ್ ವಿರುದ್ಧ ಮುಂದಿನ ತಿಂಗಳಿನಿಂದ ನಡೆಯಲಿರುವ 4-ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ 18 ಸದಸ್ಯರ ಟೀಮನ್ನು ಪ್ರಕಟಿಸಿದೆ.

ಆಸ್ಟ್ರೇಲಿಯಾದಲ್ಲಿ ಇಂದು ಕೊನೆಗೊಂಡ ಟೆಸ್ಟ್​ ಸರಣಿಯ ಕೊನೆ ಪಂದ್ಯದಲ್ಲಿ ಪಾದಾರ್ಪಣೆ ಮಾಡಿ ಮೊದಲ ಇನ್ನಿಂಗ್ಸ್​ನಲ್ಲಿ 75ರನ್​ಗಳಿಗೆ 3 ವಿಕೆಟ್ ಪಡೆದಿದ್ದ ತಂಗರಸು ನಟರಾಜನ್ ಅವರನ್ನು ಕೈಬಿಡಲಾಗಿದೆ. ಆದರೆ, ಅವರೊಂದಿಗೆ ಟೆಸ್ಟ್​ ಕ್ರಿಕೆಟ್​ಗೆ ಕಾಲಿಟ್ಟ ವಾಷಿಂಗ್ಟನ್ ಸುಂದರ್ ಮತ್ತು ಇನ್ನೂ ಟೆಸ್ಟ್ ಆಡದ ನೀಳಕಾಯದ ಅಕ್ಸರ್ ಪಟೇಲ್ ಅವರನ್ನು ಆರಿಸಲಾಗಿದೆ. ಅಸ್ಟ್ರೇಲಿಯಾ ಪ್ರವಾಸಕ್ಕೆ ಮೂರು ಆವೃತ್ತಿಗಳಿಗೂ ಟೀಮುಗಳನ್ನು ಪ್ರಕಟಿಸಿದಾಗ ನಟರಾಜನ್ ಅವರ ಹೆಸರು ಯಾವುದೇ ತಂಡಲ್ಲಿರಲಿಲ್ಲ ಎನ್ನುವುದು ನಿಜ, ಅದೃಷ್ಟವಶಾತ್ ಎಲ್ಲ ಅವೃತ್ತಿಗಳಿಗೂ ಅವರು ಪಾದಾರ್ಪಣೆ ಮಾಡಿ ಅದ್ಭುತವಾದ ಪ್ರದರ್ಶನಗಳನ್ನು ನೀಡಿದರು. ಆದರೆ, ಇಂಗ್ಲೆಂಡ್ ವಿರುದ್ಧ ನಡೆಯುವ ಟೆಸ್ಟ್​ ಪಂದ್ಯಗಳಿಗೆ ಅವರು ಆಯ್ಕೆ ಸಮಿತಿಯ ಅವಕೃಪೆಗೊಳಗಾಗಿದ್ದಾರೆ.

ಇಶಾಂತ್ ಶರ್ಮ

ಪ್ರಮುಖ ಬೌಲರ್​ಗಳು ವಾಪಸ್ಸಾಗಿರುವುದರಿಂದ ನಟರಾಜನ್​ಗೆ ಆಡುವ ಇಲೆವೆನ್​ ಅವಕಾಶ ಸಿಗುತ್ತಿರಲಿಲ್ಲ. ಅದು ಗೊತ್ತಿರುವ ವಿಚಾರವೇ. ಆದರೆ, ಹೀಗೆ ಪ್ರತಿಭೆಯೊಂದನ್ನು ಬೇಕಾಬಿಟ್ಟಿಯಾಗಿ ಕಡೆಗಣಿಸಿದರೆ ಅದು ಅವರ ಮನಸ್ಥಿತಿಯ ಮೇಲೆ ಪ್ರಭಾವ ಬೀರುತ್ತದೆ. ಕರ್ನಾಟಕದ ಕರುಣ್ ನಾಯರ್ ಅವರ ಉದಾಹರಣೆ ನಮ್ಮೆದುರಿಗಿದೆ. ತ್ರಿಶತಕ ಬಾರಿಸಿದ ಮರು ಟೆಸ್ಟ್​ನಲ್ಲೇ ಅವರನ್ನು ತಂಡದಿಂದ ಕೈ ಬಿಡಲಾಗಿತ್ತು. ಅದಾದ ನಂತರ ಅವರು ಒಂದೆರಡು ಅವಕಾಶಗಳನ್ನು ಪಡೆದರು, ಅದರೆ ಅವರ ಆತ್ಮವಿಶ್ವಾಸ ಉಡುಗಿಹೋಗಿತ್ತು.

ಪಿತೃತ್ವದ ರಜೆ ಮೇಲಿದ್ದ ವಿರಾಟ್ ಕೊಹ್ಲಿ ತಂಡಕ್ಕೆ ನಾಯಕನಾಗಿ ವಾಪಸ್ಸಾಗಿದ್ದಾರೆ. ಹಾಗೆಯೇ ಬೆನ್ನು ನೋವಿನಿಂದ ಆಸ್ಟ್ರೇಲಿಯಾ ಪ್ರವಾಸ ಮಿಸ್ ಮಾಡಿಕೊಂಡಿದ್ದ ಅನುಭವಿ ವೇಗದ ಬೌಲರ್ ಇಶಾಂತ್ ಶರ್ಮ ಸಹ ತಂಡಕ್ಕೆ ಮರಳಿದ್ದಾರೆ. ಅಸ್ಟ್ರೇಲಿಯಾದಲ್ಲಿ ಗಾಯಗೊಂಡು ವಾಪಸ್ಸಾದ ಕೆ ಎಲ್ ರಾಹಲ್​ರನ್ನು ಆಯ್ಕೆ ಮಾಡಲಾಗಿದೆ. ಅದರೆ ಮೊದಲ ಟೆಸ್ಟ್​ ನಂತರ ಫಿಟ್ನೆಸ್ ಟೆಸ್ಟ್​ನಲ್ಲಿ ಪಾಸಾದರೆ ಮಾತ್ರ ಅವರನ್ನು ಆಡುವ ಇಲೆವೆನ್​ಗೆ ಪರಿಗಣಿಸಲಾಗುತ್ತದೆ.

ಅಕ್ಸರ್ ಪಟೇಲ್

ಬೌಲಿಂಗ್ ಮಾಡುವುದನ್ನು ನಿಲ್ಲಿಸಿ ಕೇವಲ ಆಕ್ರಮಣಕಾರಿ ಬ್ಯಾಟ್ಸ್​ಮನ್​ ಸಾಮರ್ಥ್ಯದಲ್ಲಿ ಸೀಮಿತ ಓವರ್​ ಪಂದ್ಯಗಳಲ್ಲಾಡುತ್ತಿದ್ದ ಮತ್ತು ಇತ್ತೀಚಿಗಷ್ಟೇ ತಂದೆಯನ್ನು ಕಳೆದುಕೊಂಡಿರುವ ಹಾರ್ದಿಕ್ ಪಾಂಡ್ಯ ಅವರಿಗೆ ಟೆಸ್ಟ್​ಗಳಲ್ಲಿ ಆಡುವ ಆವಕಾಶ ಕಲ್ಪಿಸಲಾಗಿದೆ. ಮೂಲಗಳ ಪ್ರಕಾರ ಹಾರ್ದಿಕ್ ತಮ್ಮ ಬೌಲಿಂಗ್ ಆಕ್ಷನ್ ಬದಲಾಯಿಸಿಕೊಂಡಿದ್ದಾರಂತೆ.

ಎರಡು ಟೆಸ್ಟ್​ಗಳಿಗೆ ಆಯ್ಕೆ ಮಾಡಿರುವ ಆಟಗಾರರ ಹೆಸರುಗಳು ಕೆಳಗಿನಂತಿವೆ.

ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮ, ಶುಭ್​ಮನ್ ಗಿಲ್, ಮಾಯಾಂಕ್ ಅಗರವಾಲ್, ಚೇತೇಶ್ವರ ಪೂಜಾರಾ, ಅಜಿಂಕ್ಯಾ ರಹಾನೆ. ರಿಷಭ್ ಪಂತ್, ವೃದ್ಧಿಮಾನ್ ಸಹಾ, ಹಾರ್ದಿಕ್ ಪಾಂಡ್ಯ, ಕೆ ಎಲ್ ರಾಹುಲ್ (ಫಿಟ್ನೆಸ್ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ), ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮ, ಮೊಹಮ್ಮದ್ ಸಿರಾಜ್, ಶಾರ್ದುಲ್ ಠಾಕೂರ್, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ವಾಷಿಂಗ್ಟನ್ ಸುಂದರ್ ಮತ್ತು ಅಕ್ಸರ್ ಪಟೇಲ್.

ಸ್ಟ್ಯಾಂಡ್​ಬೈಗಳು: ಕೆ.ಎಸ್.ಭರತ್ (ವಿಕೆಟ್​ಕೀಪರ್), ಅಭಿಮನ್ಯು ಈಶ್ವರನ್, ಶಹಬಾಜ್ ನದೀಮ್, ರಾಹುಲ್ ಚಾಹರ್. ನೆಟ್ ಬೌಲರ್​ಗಳು: ಅಂಕಿತ್ ಕಪೂರ್, ಅವೆಶ್ ಖಾನ್, ಸಂದೀಪ್ ವಾರಿಯರ್, ಕೆ.ಗೌತಮ್, ಸೌರಭ್ ಕುಮಾರ್.

India vs Australia Test Series | ಐತಿಹಾಸಿಕ ಗೆಲುವು; ಟೀಮ್ ಇಂಡಿಯಾಗೆ ಮೋದಿ ಅಭಿನಂದನೆ

Published On - 9:37 pm, Tue, 19 January 21

Follow Us
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ