AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Afro-Asia Cup: ಆಫ್ರೊ-ಏಷ್ಯಾ ಕಪ್ ಟೂರ್ನಿಗೆ ಮತ್ತೆ ಚಾಲನೆ

Afro-Asia Cup: 2007 ರಲ್ಲಿ ನಡೆದಿದ್ದ ಆಫ್ರೊ-ಏಷ್ಯಾ ಕಪ್​ಗೆ ಮತ್ತೆ ಚಾಲನೆ ನೀಡಲು ಆಯೋಜಕರು ಆಸಕ್ತಿ ಹೊಂದಿದ್ದಾರೆ. ಅದರಂತೆ 2025 ರಲ್ಲಿ ಏಷ್ಯಾ-ಆಫ್ರಿಕಾ ಖಂಡಗಳ ನಡುವಣ ಕ್ರಿಕೆಟ್ ಟೂರ್ನಿ ಮತ್ತೆ ನಡೆಯುವ ಸಾಧ್ಯತೆಯಿದೆ. ಈ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳ ಆಟಗಾರರು ಒಂದೇ ಟೀಮ್ ಪರ ಕಣಕ್ಕಿಳಿಯಲಿರುವುದು ವಿಶೇಷ.

Afro-Asia Cup: ಆಫ್ರೊ-ಏಷ್ಯಾ ಕಪ್ ಟೂರ್ನಿಗೆ ಮತ್ತೆ ಚಾಲನೆ
Afro-Asia Cup
TV9 Web
| Edited By: |

Updated on: Nov 06, 2024 | 10:24 AM

Share

ಆಫ್ರೊ-ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ಮತ್ತೆ ಚಾಲನೆ ದೊರೆಯುವ ಸಾಧ್ಯತೆಯಿದೆ. ಆಫ್ರಿಕಾ ಮತ್ತು ಏಷ್ಯಾ ಖಂಡಗಳ ನಡುವಣ ಈ ಟೂರ್ನಿಯಲ್ಲಿ ಏಷ್ಯನ್ ಇಲೆವೆನ್ ಹಾಗೂ ಆಫ್ರಿಕಾ ಇಲೆವೆನ್ ಕಣಕ್ಕಿಳಿಯಲಿದೆ. 2007 ರಲ್ಲಿ ಕೊನೆಯ ಬಾರಿ ಆಯೋಜನೆಗೊಂಡಿದ್ದ ಈ ಟೂರ್ನಿಗೆ ಮತ್ತೆ ಚಾಲನೆ ನೀಡಲು ಆಯೋಜಕರು ಮುಂದಾಗಿದ್ದಾರೆ.

ಈ ಟೂರ್ನಿಗೆ ಚಾಲನೆ ನೀಡಲು ಏಷ್ಯಾ ಕ್ರಿಕೆಟ್ ಕೌನ್ಸಿಲ್‌ನಲ್ಲಿ ಸಹವರ್ತಿಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ಅಲ್ಲದೆ ಆಫ್ರಿಕನ್ ತಂಡಗಳು ಆಫ್ರೋ-ಏಷ್ಯಾ ಕಪ್ ಅನ್ನು ಪುನರುಜ್ಜೀವನಗೊಳಿಸಬೇಕೆಂದು ಬಯಸುತ್ತಿದ್ದಾರೆ ಎಂದು ಝಿಂಬಾಬ್ವೆ ಕ್ರಿಕೆಟ್ ಅಧ್ಯಕ್ಷರೂ ಆಗಿರುವ ACA ಯ ಹಂಗಾಮಿ ಅಧ್ಯಕ್ಷ ತವೆಂಗ್ವಾ ಮುಕುಹ್ಲಾನಿ ತಿಳಿಸಿದ್ದಾರೆ.

ನಾವು ಆಫ್ರೊ-ಏಷ್ಯಾ ಕಪ್ ಅನ್ನು ಮತ್ತೆ ಶುರು ಮಾಡಲು ಪ್ರಯತ್ನಿಸಿದ್ದೇವೆ. ಈ ಬಗ್ಗೆ ನಡೆದ ಚರ್ಚೆಗಳಲ್ಲಿ ಜಯ್ ಶಾ ಮತ್ತು ಮಹಿಂದಾ ವಲ್ಲಿಪುರಂ (ಮಲೇಷ್ಯಾ ಕ್ರಿಕೆಟ್ ಮುಖ್ಯಸ್ಥ ಮತ್ತು ಪ್ರಸ್ತುತ ಐಸಿಸಿ ನಿರ್ದೇಶಕ) ಸಕ್ರಿಯವಾಗಿ ಭಾಗವಹಿಸಿದ್ದರು ಎಂದು ಈ ಹಿಂದೆ ಸುಮೋದ್ ದಾಮೋದರ್ ತಿಳಿಸಿದ್ದರು.

ಸುಮಾರು 17-18 ವರ್ಷಗಳ ಹಿಂದೆ ಈ ಕಲ್ಪನೆಯನ್ನು ಮೊದಲ ಬಾರಿಗೆ ರೂಪಿಸಿದಾಗ ಮತ್ತು ಕಾರ್ಯಗತಗೊಳಿಸಿದಾಗ ಇದರಲ್ಲಿ ಭಾಗಿಯಾಗಿದ್ದವರಲ್ಲಿ ಸುಮೋದ್ ದಾಮೋದರ್ ಕೂಡ ಒಬ್ಬರು. ಇದೀಗ ಅವರೇ ಆಫ್ರೊ-ಏಷ್ಯಾ ಕಪ್ ಮತ್ತೆ ಚಾಲನೆ ನೀಡುವ ಬಗ್ಗೆ ಚರ್ಚೆಗಳನ್ನು ಶುರು ಮಾಡಿದ್ದಾರೆ.

ಇತ್ತ ಜಯ್ ಶಾ ಐಸಿಸಿ ಅಧ್ಯಕ್ಷರಾಗಿದ್ದು, ಅತ್ತ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ಏಷ್ಯನ್ ಕ್ರಿಕೆಟ್ ಕೌನ್ಸಿಲ್​ನ (ಎಸಿಸಿ) ಅಧ್ಯಕ್ಷರಾಗುವ ಸಾಧ್ಯತೆಯಿದೆ. ಹೀಗಾಗಿಯೇ ಈ ಟೂರ್ನಿಗೆ ಮತ್ತೆ ಚಾಲನೆ ದೊರೆಯುವ ನಿರೀಕ್ಷೆಯಿದೆ.

ಒಂದೇ ತಂಡದಲ್ಲಿ ಇಂಡೊ-ಪಾಕ್ ಆಟಗಾರರು:

ಈ ಟೂರ್ನಿಯಲ್ಲಿ ಏಷ್ಯನ್ ಕ್ರಿಕೆಟ್ ತಂಡಗಳ ಆಟಗಾರರು ಏಷ್ಯಾ ಇಲೆವೆನ್​ನಲ್ಲಿ ಕಾಣಿಸಿಕೊಂಡರೆ, ಆಫ್ರಿಕಾ ಖಂಡದ ಆಟಗಾರರು ಆಫ್ರಿಕಾ ಇಲೆವೆನ್​ನಲ್ಲಿ ಕಣಕ್ಕಿಳಿಯಲಿದ್ದಾರೆ. ಅದರಂತೆ ಏಷ್ಯನ್ ಇಲೆವೆನ್​​ನಲ್ಲಿ ಭಾರತ ಮತ್ತು ಪಾಕಿಸ್ತಾನ್ ಆಟಗಾರರು ಜೊತೆಯಾಗಿ ಆಡಲಿದ್ದಾರೆ.

ಆಫ್ರೊ-ಏಷ್ಯಾ ಕಪ್ ಎಷ್ಟು ಬಾರಿ ನಡೆದಿದೆ?

ಈ ಟೂರ್ನಿಯನ್ನು ಕೇವಲ 2 ಬಾರಿ ಮಾತ್ರ ಆಯೋಜಿಸಲಾಗಿದೆ. 2005 ರಲ್ಲಿ ನಡೆದ ಚೊಚ್ಚಲ ಏಕದಿನ ಟೂರ್ನಿಯ ಮೊದಲ ಪಂದ್ಯದಲ್ಲಿ ಆಫ್ರಿಕಾ ಇಲೆವೆನ್ ಜಯ ಸಾಧಿಸಿತ್ತು. ಇನ್ನು ದ್ವಿತೀಯ ಪಂದ್ಯದಲ್ಲಿ ಏಷ್ಯಾ ಇಲೆವೆನ್ ಗೆಲುವು ದಾಖಲಿಸಿತ್ತು. ಆದರೆ ಮೂರನೇ ಪಂದ್ಯವು ಮಳೆಗೆ ಅಹುತಿಯಾದ ಕಾರಣ ಟೂರ್ನಿಯು 1-1 ಅಂತರದಲ್ಲಿ ಕೊನೆಗೊಂಡಿತು. ಇನ್ನು 2007 ರಲ್ಲಿ ನಡೆದ 3 ಪಂದ್ಯಗಳ ಆಫ್ರೊ-ಏಷ್ಯಾ ಕಪ್ ಟೂರ್ನಿಯಲ್ಲಿ ಏಷ್ಯನ್ ಇಲೆವೆನ್ ಎಲ್ಲಾ ಪಂದ್ಯಗಳನ್ನು ಗೆದ್ದುಕೊಂಡಿದ್ದರು.

ಕೊನೆಯ ಬಾರಿ ಆಫ್ರೊ-ಏಷ್ಯಾ ಕಪ್ ಆಡಿದ ಆಟಗಾರರು ಯಾರೆಲ್ಲಾ?

ಆಫ್ರಿಕಾ ಇಲೆವೆನ್ ತಂಡ: ಎಬಿ ಡಿವಿಲಿಯರ್ಸ್, ವುಸಿ ಸಿಬಂದ, ಬೋಟಾ ಡಿಪ್ಪೆನಾರ್, ಸ್ಟೀವ್ ಟಿಕೊಲೊ, ಜಸ್ಟಿನ್ ಕೆಂಪ್ (ನಾಯಕ), ಮಾರ್ಕ್ ಬೌಚರ್ (ವಿಕೆಟ್ ಕೀಪರ್), ಶಾನ್ ಪೊಲಾಕ್, ಎಲ್ಟನ್ ಚಿಗುಂಬುರ, ಜೋಹಾನ್ ಬೋಥಾ, ಮೋರ್ನೆ ಮೊರ್ಕೆಲ್, ಪೀಟರ್ ಒಂಗೊಂಡೋ.

ಇದನ್ನೂ ಓದಿ: Team India: 55 ವರ್ಷಗಳ ಬಳಿಕ ಯಾಕೆ ಹೀಗಾಯ್ತು..!

ಏಷ್ಯಾ ಇಲೆವೆನ್ ತಂಡ: ವೀರೇಂದ್ರ ಸೆಹ್ವಾಗ್, ಸನತ್ ಜಯಸೂರ್ಯ, ಉಪುಲ್ ತರಂಗ, ಯುವರಾಜ್ ಸಿಂಗ್, ಮೊಹಮ್ಮದ್ ಯೂಸುಫ್, ಮಹೇಲ ಜಯವರ್ಧನೆ (ನಾಯಕ), ಎಂಎಸ್ ಧೋನಿ (ವಿಕೆಟ್ ಕೀಪರ್), ಮುಶ್ರಫೆ ಮೊರ್ತಜಾ, ಹರ್ಭಜನ್ ಸಿಂಗ್, ಮೊಹಮ್ಮದ್ ರಫೀಕ್, ಮೊಹಮ್ಮದ್ ಆಸಿಫ್.

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್