ಭಾರತದಲ್ಲಿ ಕ್ರಿಕೆಟ್ ಅತ್ಯಂತ ಶ್ರೀಮಂತ ಮತ್ತು ಹೆಚ್ಚು ಲಾಭದಾಯಕ ಕ್ರೀಡೆ ಎಂಬುದರಲ್ಲಿ ಡೌಟೇ ಇಲ್ಲ. ಆದರೆ ಈ ವಾರ ಭಾರತದ ಮಾಜಿ ತಾರೆಯೊಬ್ಬರು ಟೀಮ್ ಇಂಡಿಯಾ ದಂತಕಥೆಗಳಾದ ಎಂಎಸ್ ಧೋನಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ನಿವ್ವಳ ಮೌಲ್ಯದಲ್ಲಿ ಹಿಂದಿಕ್ಕಿದ್ದಾರೆ ಎಂದರೆ ನಂಬಲೇಬೇಕು.
ಹೌದು, ಭಾರತ ತಂಡದ ಮಾಜಿ ಆಟಗಾರ ಅಜಯ್ ಜಡೇಜಾ ಅವರ ನಿವ್ವಳ ಮೌಲ್ಯವು ಇದ್ದಕ್ಕಿದ್ದಂತೆ 1450 ಕೋಟಿ ರೂ. ಆಗಿದೆ. ಇದಕ್ಕೆ ಮುಖ್ಯ ಕಾರಣ ಅವರು ಜಾಮ್ ನಗರ ರಾಜಮನೆತನದ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿರುವುದು.
ಇದೇ ದಸರಾ ದಿನದಂದು ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಅವರನ್ನು ಜಾಮ್ ನಗರದ ಸಿಂಹಾಸನದ ಉತ್ತರಾಧಿಕಾರಿ ಎಂದು ಘೋಷಿಸಲಾಗಿದೆ. ಅದರಂತೆ ಮುಂಬರುವ ದಿನಗಳಲ್ಲಿ ಜಡೇಜಾ, ಜಾಮ್ ನಗರ (ನವನಗರ) ರಾಜಮನೆತನದ ಜಾಮ್ ಸಾಹೇಬ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
ಇದರೊಂದಿಗೆ ಅಜಯ್ ಜಡೇಜಾ ಅವರ ನಿವ್ವಳ ಮೌಲ್ಯವು 1,450 ಕೋಟಿ ರೂ.ಗೆ ಏರಿದೆ. ಇದು ಟೀಮ್ ಇಂಡಿಯಾ ಕ್ರಿಕೆಟಿಗರರಾದ ವಿರಾಟ್ ಕೊಹ್ಲಿ ಹಾಗೂ ಮಹೇಂದ್ರ ಸಿಂಗ್ ಧೋನಿಗಿಂತ ಹೆಚ್ಚು ಎಂಬುದು ವಿಶೇಷ.
ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅವರ ಪ್ರಸ್ತುತ ನಿವ್ವಳ ಮೌಲ್ಯವು 1,022 ಕೋಟಿ ರೂ. ಇದ್ದರೆ, ವಿರಾಟ್ ಕೊಹ್ಲಿಯ ನೆಟ್ ವರ್ತ್ 1,050 ಕೋಟಿ ರೂ. ತಲುಪಿದೆ. ಇದೀಗ ಈ ಇಬ್ಬರು ಸ್ಟಾರ್ ಕ್ರಿಕೆಟಿಗರನ್ನು 1,450 ಕೋಟಿ ರೂ. ನೊಂದಿಗೆ ಅಜಯ್ ಜಡೇಜಾ ಹಿಂದಿಕ್ಕಿರುವುದು ವಿಶೇಷ.
ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಜಾಮ್ ನಗರದ ರಾಜಮನೆತನಕ್ಕೆ ಸೇರಿದವರು. ಇದಲ್ಲದೆ, ಅವರು ರಣಜಿತ್ಸಿನ್ಜಿ ಜಡೇಜಾ ಮತ್ತು ದುಲೀಪ್ಸಿನ್ಜಿ ಜಡೇಜಾ ಅವರ ಕುಟುಂಬಸ್ಥರು. ರಣಜಿತ್ಸಿನ್ಜಿ ಅವರ ಹೆಸರಿನಲ್ಲಿಯೇ ಭಾರತದಲ್ಲಿ ರಣಜಿ ಟ್ರೋಫಿ ಪಂದ್ಯಗಳನ್ನು ಆಯೋಜಿಸಲಾಗುತ್ತದೆ. ಹಾಗೆಯೇ ದುಲೀಪ್ಸಿನ್ಜಿ ಹೆಸರಿನಲ್ಲಿ ದುಲೀಪ್ ಟ್ರೋಫಿಗಳನ್ನು ಆಡಲಾಗುತ್ತದೆ.
ಇದನ್ನೂ ಓದಿ: IPL 2025: RCB ತಂಡದಿಂದ ಗ್ರೀನ್ಗೆ ಗೇಟ್ ಪಾಸ್..!
ಇದೀಗ ಜಾಮ್ ನಗರದ ಜಾಮ್ ಸಾಹೇಬ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಶತ್ರುಸಲ್ಯಸಿನ್ಜಿ ಅವರು ದಸರಾ ದಿನದಂದು ಅಜಯ್ ಜಡೇಜಾ ಅವರನ್ನು ತಮ್ಮ ಉತ್ತರಾಧಿಕಾರಿ ಎಂದು ಘೋಷಿಸಿದ್ದಾರೆ. ಅದರಂತೆ ಮುಂಬರುವ ದಿನಗಳಲ್ಲಿ ಅಜಯ್ ಜಡೇಜಾ ಜಾಮ್ ನಗರ ರಾಜಮನೆತನದ ಜಾಮ್ ಸಾಹೇಬ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.