AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜೀವ್ ಕುಮಾರ್… ಟೀಮ್ ಇಂಡಿಯಾ ಹಿಂದಿದ್ದ ಕಾಣದ ‘ಕೈ’

Rajeev Kumar's Story: ಕ್ರಿಕೆಟ್ ಎಂದರೆ ನಮಗೆ ಕೇವಲ ಮೈದಾನದಲ್ಲಿ ಆಡುವ 11 ಆಟಗಾರರು ಮಾತ್ರ ನೆನಪಾಗುತ್ತಾರೆ. ಆದರೆ ಅವರ ಯಶಸ್ಸಿನ ಹಿಂದೆ, ಆಟಗಾರರ ದಣಿವು ನಿವಾರಿಸಿ ಅವರನ್ನು ಸದಾ ಫಿಟ್ ಆಗಿಡುವ ಹಲವು ಅದೃಶ್ಯ ಕೈಗಳು ಕೆಲಸ ಮಾಡುತ್ತಿರುತ್ತವೆ. ಅಂತಹ ಪ್ರಮುಖ ಕೈಗಳಲ್ಲಿ ಒಂದಾಗಿದ್ದವರು ರಾಜೀವ್ ಕುಮಾರ್. 

ರಾಜೀವ್ ಕುಮಾರ್... ಟೀಮ್ ಇಂಡಿಯಾ ಹಿಂದಿದ್ದ ಕಾಣದ 'ಕೈ'
Rajiv KumarImage Credit source: TOI
ಝಾಹಿರ್ ಯೂಸುಫ್
|

Updated on: Jul 29, 2026 | 2:35 PM

Share

ಮೈದಾನದಲ್ಲಿ ವಿರಾಟ್ ಕೊಹ್ಲಿ ಬಾರಿಸುವ ಭರ್ಜರಿ ಸಿಕ್ಸರ್‌ಗಳು, ಜಸ್​ಪ್ರೀತ್ ಬುಮ್ರಾ ಎಸೆಯುವ ಮಾರಕ ಯಾರ್ಕರ್‌ಗಳು ಮತ್ತು ರೋಹಿತ್ ಶರ್ಮಾ ಅವರ ಅದ್ಭುತ ಪುಲ್ ಶಾಟ್​ಗಳ ಹಿಂದೆ ಕೋಟ್ಯಂತರ ಅಭಿಮಾನಿಗಳ ಹರ್ಷೋದ್ಗಾರವಿರುತ್ತದೆ. ಆದರೆ, ಈ ದಿಗ್ಗಜ ಆಟಗಾರರು ಮೈದಾನದಲ್ಲಿ ಅಬ್ಬರಿಸಲು ಅವರ ದೇಹ ಮತ್ತು ಮನಸ್ಸನ್ನು ಸದಾ ಫಿಟ್ ಆಗಿಡುತ್ತಿದ್ದ ಆ ‘ಕಾಣದ ಕೈ’ಗಳ ಕಥೆ ಯಾರಿಗೂ ತಿಳಿದಿಲ್ಲ! ಕೇವಲ 100 ರೂಪಾಯಿ ತಿಂಗಳ ಸಂಬಳಕ್ಕೆ ವೃತ್ತಿ ಆರಂಭಿಸಿ, ಭಾರತ ತಂಡದ ಡ್ರೆಸ್ಸಿಂಗ್ ರೂಮ್ ತಲುಪಿ, 2024ರ ಟಿ20 ವಿಶ್ವಕಪ್ ವಿಜಯದ ಸಂಭ್ರಮದಲ್ಲಿ ಭಾಗಿಯಾದ ಮಸಾಜ್ ಥೆರಪಿಸ್ಟ್ ರಾಜೀವ್ ಕುಮಾರ್ ಅವರ ಸ್ಪೂರ್ತಿಯ ಕಥೆ ಇಲ್ಲಿದೆ.

100 ರೂ.ನಿಂದ ಆರಂಭವಾದ ಕನಸು:

2002ರಲ್ಲಿ ರಾಜೀವ್ ಕುಮಾರ್ ಕೇವಲ ಒಂದು ಮಸಾಜ್ ಥೆರಪಿ ಡಿಪ್ಲೊಮಾ ಪ್ರಮಾಣಪತ್ರ ಹಿಡಿದು ಉದ್ಯೋಗ ಹುಡುಕುತ್ತಾ ದೆಹಲಿ ತಲುಪಿದ್ದರು. ಜೋಧ್‌ಪುರ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದ ಅವರಿಗೆ ಸಿಕ್ಕ ಮೊದಲ ಕೆಲಸದ ತಿಂಗಳ ಸಂಬಳ ಕೇವಲ 100 ರೂಪಾಯಿ. ಕಡು ಬಡತನ ಮತ್ತು ಅನಿಶ್ಚಿತತೆಯ ನಡುವೆಯೂ ಅವರು ತಮ್ಮ ವೃತ್ತಿ ಕೌಶಲ್ಯವನ್ನು ನಂಬಿ ಕಷ್ಟಪಟ್ಟರು.

ಆ ಸಮಯದಲ್ಲಿ ಭಾರತೀಯ ಕ್ರಿಕೆಟ್‌ನಲ್ಲಿ ಸ್ಪೋರ್ಟ್ಸ್ ಸೈನ್ಸ್ ಇನ್ನೂ ಆರಂಭಿಕ ಹಂತದಲ್ಲಿತ್ತು. ದೇಶೀಯ ಕ್ರಿಕೆಟ್ ಮತ್ತು ವಿವಿಧ ಹಂತಗಳಲ್ಲಿ ಆಟಗಾರರಿಗೆ ಮಸಾಜ್ ಸೇವೆ ನೀಡುತ್ತಾ ತಮ್ಮ ಅದ್ಭುತ ಹಸ್ತಗುಣದಿಂದ ಎಲ್ಲರ ಗಮನ ಸೆಳೆದರು. ಅದರಲ್ಲೂ ವಿಶೇಷವಾಗಿ ವೇಗದ ಬೌಲರ್‌ಗಳು ತೀವ್ರ ದಣಿವು ಮತ್ತು ಸ್ನಾಯು ಸೆಳೆತಕ್ಕೆ ಒಳಗಾದಾಗ ರಾಜೀವ್ ನೀಡುತ್ತಿದ್ದ ಚಿಕಿತ್ಸೆ ಆಟಗಾರರಿಗೆ ತಕ್ಷಣದ ಪರಿಹಾರ ನೀಡುತ್ತಿತ್ತು.

ಟೀಮ್ ಇಂಡಿಯಾ ಎಂಟ್ರಿ:

ದೇಶೀಯ ಕ್ರಿಕೆಟ್​ನಲ್ಲಿ ಆಟಗಾರರನ್ನು ಸದಾ ಫಿಟ್ ಆಗಿಡುವ ಇವರ ಕೌಶಲ್ಯವನ್ನು ಕಂಡು ಟೀಮ್ ಇಂಡಿಯಾದ ಪ್ರಮುಖ ಆಟಗಾರರು ಪ್ರಭಾವಿತರಾದರು. ಆಟಗಾರರ ಶಿಫಾರಸು ಮತ್ತು ಬಿಸಿಸಿಐನ ಪೋಷಕ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಯ ಮೂಲಕ ರಾಜೀವ್ ಕುಮಾರ್ ಅಧಿಕೃತವಾಗಿ ಭಾರತ ತಂಡದ ಡ್ರೆಸ್ಸಿಂಗ್ ರೂಮ್ ಪ್ರವೇಶಿಸಿದರು.

ತಮ್ಮ ಕಠಿಣ ಪರಿಶ್ರಮದಿಂದಾಗಿ ರಾಜೀವ್, ಭಾರತೀಯ ಕ್ರಿಕೆಟ್‌ನ ದಿಗ್ಗಜ ನಾಯಕರಾದ ಎಂ.ಎಸ್. ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಶುಭ್‌ಮನ್ ಗಿಲ್ ಅವರೊಂದಿಗೆ ಕೆಲಸ ಮಾಡುವ ಅವಕಾಶ ಪಡೆದರು.

ಆಟಗಾರರ ನೆಚ್ಚಿನ ಥೆರಪಿಸ್ಟ್:

ಮೈದಾನದಲ್ಲಿ ಬೌಲರ್‌ಗಳು ತೀವ್ರವಾಗಿ ಶ್ರಮ ಪಟ್ಟು ಬಂದಾಗ ಅವರ ಸ್ನಾಯುಗಳ ಸೆಳೆತ ನಿವಾರಿಸಲು ರಾಜೀವ್ ಮೊದಲ ಆಸರೆಯಾಗುತ್ತಿದ್ದರು. ವಿರಾಟ್ ಕೊಹ್ಲಿ, ಮೊಹಮ್ಮದ್ ಶಮಿ, ಜಸ್ಪ್ರಿತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಅವರಂತಹ ಆಟಗಾರರು ರಾಜೀವ್ ಅವರ ಮಸಾಜ್ ಕೌಶಲ್ಯವನ್ನು ಹೆಚ್ಚು ನಂಬುತ್ತಿದ್ದರು.

ಕೇವಲ ಮಸಾಜ್ ಮಾಡುವುದಷ್ಟೇ ಅಲ್ಲದೆ, ಆಟಗಾರರಿಗೆ ಅಗತ್ಯವಿರುವ ಪ್ರೋಟೀನ್ ಶೇಕ್, ಎನರ್ಜಿ ಡ್ರಿಂಕ್ಸ್ ಸಿದ್ಧಪಡಿಸುವುದು ಮತ್ತು ಬೌಂಡರಿ ಲೈನ್‌ ಬಳಿ ನಿಂತು ಆಟಗಾರರನ್ನು ಸದಾ ಸಕ್ರಿಯವಾಗಿಡುವ ಕೆಲಸವನ್ನೂ ಇವರು ಮಾಡುತ್ತಿದ್ದರು. ಹೀಗಾಗಿಯೇ ರಾಜೀವ್ ಕುಮಾರ್ ಟೀಮ್ ಇಂಡಿಯಾದ ಖಾಯಂ ಮಸಾಜ್ ಥೆರೆಪಿಸ್ಟ್​ ಆಗಿ ಮುಂದುವರೆದಿದ್ದರು. ವಿಶೇಷ ಎಂದರೆ ಭಾರತ ತಂಡ 2024ರ ಟಿ20 ವಿಶ್ವಕಪ್ ಗೆದ್ದಾಗ ರಾಜೀವ್ ಕುಮಾರ್ ಆ ಸಂಭ್ರಮದ ಭಾಗವಾಗಿದ್ದರು.

ಇಡೀ ಹಳ್ಳಿಗೇ ಬೆಳಕಾದ ರಾಜೀವ್!

ರಾಜೀವ್ ಕುಮಾರ್ ಕೇವಲ ತಮ್ಮ ಜೀವನವನ್ನು ಮಾತ್ರ ಬದಲಾಯಿಸಿಕೊಳ್ಳಲಿಲ್ಲ, ಬದಲಿಗೆ ತಮ್ಮ ಯಶಸ್ಸಿನ ಮೂಲಕ ಸ್ವಗ್ರಾಮದ ಯುವಕರಿಗೆ ಹೊಸ ದಾರಿ ತೋರಿಸಿದರು.

ಇವರ ಸಾಧನೆಯನ್ನು ನೋಡಿ ಪ್ರೇರಿತರಾದ ಇವರ ಹಳ್ಳಿಯ ಸುಮಾರು 50 ಯುವಕರು ಮಸಾಜ್ ಥೆರಪಿ ವೃತ್ತಿಯನ್ನು ಆಯ್ದುಕೊಂಡಿದ್ದಾರೆ.

ಇಂದು ಈ ಯುವಕರು ವಿವಿಧ ದೇಶೀಯ ಕ್ರಿಕೆಟ್ ತಂಡಗಳು ಹಾಗೂ ಐಪಿಎಲ್ ಫ್ರಾಂಚೈಸಿಗಳಲ್ಲಿ ಅಧಿಕೃತ ಮಸಾಜ್ ಥೆರಪಿಸ್ಟ್‌ಗಳಾಗಿ ಯಶಸ್ವಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಬಿಸಿಸಿಐ ಒಪ್ಪಂದದ ಅಂತ್ಯ!

ಸುಮಾರು ಒಂದು ದಶಕಕ್ಕೂ ಹೆಚ್ಚು ಕಾಲ ಭಾರತ ತಂಡದ ಅವಿಭಾಜ್ಯ ಅಂಗವಾಗಿದ್ದ ರಾಜೀವ್ ಕುಮಾರ್ ಅವರ ಒಪ್ಪಂದವನ್ನು ಬಿಸಿಸಿಐ ಆಗಸ್ಟ್ 2025 ರಲ್ಲಿ ಕೊನೆಗೊಳಿಸಿತು. ಗೌತಮ್ ಗಂಭೀರ್ ಅವರ ಕೋಚಿಂಗ್ ಅವಧಿಯಲ್ಲಿ ಪೋಷಕ ಸಿಬ್ಬಂದಿ ಬದಲಾವಣೆಯ ಭಾಗವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಆದರೂ, ಭಾರತೀಯ ಕ್ರಿಕೆಟ್‌ಗೆ ಮತ್ತು ತಮ್ಮ ಹಳ್ಳಿಯ ಯುವಕರಿಗೆ ರಾಜೀವ್ ನೀಡಿದ ಕೊಡುಗೆ ಎಂದಿಗೂ ಮರೆಯಲಾಗದ್ದು.

ಇದನ್ನೂ ಓದಿ: ಏಕದಿನ ವಿಶ್ವಕಪ್​ಗೆ ಪ್ಲೇಯಿಂಗ್ 11 ಹೆಸರಿಸಿದ ವಾಸಿಂ ಜಾಫರ್!

ಬಡತನದ ಕತ್ತಲೆಯಿಂದ ಬಂದು ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದ ಕ್ರಿಕೆಟ್ ತಾರೆಗಳ ದಣಿವು ಆರಿಸಿದ ರಾಜೀವ್ ಕುಮಾರ್ ಅವರ ಕೈಗುಣ ಮತ್ತು ಅವರ ‘ಹೀಲಿಂಗ್ ಟಚ್’ ನಿಜಕ್ಕೂ ಭಾರತೀಯ ಕ್ರಿಕೆಟ್‌ನ ಅಪರೂಪದ ಯಶೋಗಾಥೆಯಾಗಿದೆ!

Follow Us
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಹರೀಶ್ ರಾಜ್​ಗೆ ರೊಮ್ಯಾಂಟಿಕ್ ಸ್ಟಾರ್ ಬಿರುದು; ಹೊಸ ಸಿನಿಮಾ ಕುರಿತು ಮಾತು
ಹರೀಶ್ ರಾಜ್​ಗೆ ರೊಮ್ಯಾಂಟಿಕ್ ಸ್ಟಾರ್ ಬಿರುದು; ಹೊಸ ಸಿನಿಮಾ ಕುರಿತು ಮಾತು
ಕಾವೇರಿ ನೀರು ಹಂಚಿಕೆ ವಿವಾದ: ಸಚಿವ ರಾಮಲಿಂಗಾ ರೆಡ್ಡಿ ತುರ್ತು ಸಭೆ
ಕಾವೇರಿ ನೀರು ಹಂಚಿಕೆ ವಿವಾದ: ಸಚಿವ ರಾಮಲಿಂಗಾ ರೆಡ್ಡಿ ತುರ್ತು ಸಭೆ
ಗುರು ಪೂರ್ಣಿಮೆ 2026: ಸಾಯಿಬಾಬಾ ದರ್ಶನಕ್ಕೆ ಭಕ್ತ ಸಾಗರ
ಗುರು ಪೂರ್ಣಿಮೆ 2026: ಸಾಯಿಬಾಬಾ ದರ್ಶನಕ್ಕೆ ಭಕ್ತ ಸಾಗರ
ದೆಹಲಿಗೆ ತೆರಳಿದ ಜಮೀರ್​; ರಾಹುಲ್ ಗಾಂಧಿ ಭೇಟಿ ಸಾಧ್ಯತೆ
ದೆಹಲಿಗೆ ತೆರಳಿದ ಜಮೀರ್​; ರಾಹುಲ್ ಗಾಂಧಿ ಭೇಟಿ ಸಾಧ್ಯತೆ
ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದ್ದು ಸರಿಯಲ್ಲ: ದರ್ಶನ ಪುಟ್ಟಣಯ್ಯ
ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದ್ದು ಸರಿಯಲ್ಲ: ದರ್ಶನ ಪುಟ್ಟಣಯ್ಯ
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ ಅನ್ನದಾತರ ಆಕ್ರೋಶ
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ ಅನ್ನದಾತರ ಆಕ್ರೋಶ
ಮಾದಪ್ಪನ ಹುಂಡಿಯಲ್ಲಿ ಕೋಟಿ ಕೋಟಿ ಕಾಣಿಕೆ ಸಂಗ್ರಹ!
ಮಾದಪ್ಪನ ಹುಂಡಿಯಲ್ಲಿ ಕೋಟಿ ಕೋಟಿ ಕಾಣಿಕೆ ಸಂಗ್ರಹ!
ಕಾವೇರಿ ವಿವಾದ: ಮಂಡ್ಯದಲ್ಲಿ ರೈತರ ಆಕ್ರೋಶ, ರಾತ್ರಿ ಪಂಜಿನ ಪ್ರತಿಭಟನೆ
ಕಾವೇರಿ ವಿವಾದ: ಮಂಡ್ಯದಲ್ಲಿ ರೈತರ ಆಕ್ರೋಶ, ರಾತ್ರಿ ಪಂಜಿನ ಪ್ರತಿಭಟನೆ