AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asia Cup 2022: ನಾನು ಕಣ್ರೋ ಕ್ಯಾಪ್ಟನ್: ಬಾಬರ್ ಆಜಂ ಬೇಜಾರು..!

Babar Azam: ವಿಶೇಷ ಎಂದರೆ ರಿವ್ಯೂ ಪರಿಶೀಲನೆ ಬಳಿಕ ಮೂರನೇ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದ್ದರು. ಇದರಿಂದ ಬಾಬರ್ ಆಜಂ ಮತ್ತಷ್ಟು ಕುಪಿತಗೊಂಡಿದ್ದರು.

Asia Cup 2022: ನಾನು ಕಣ್ರೋ ಕ್ಯಾಪ್ಟನ್: ಬಾಬರ್ ಆಜಂ ಬೇಜಾರು..!
Babar Azam
TV9 Web
| Edited By: |

Updated on: Sep 10, 2022 | 1:29 PM

Share

Asia Cup 2022: ನಾಯಕನೇ ತನ್ನ ಸಹ ಆಟಗಾರರಿಗೆ ನಾನು ಕಣ್ರೋ ಕ್ಯಾಪ್ಟನ್ ಎಂದರೆ ಹೇಗಿರಬೇಡ..ಇಂತಹದೊಂದು ಸನ್ನಿವೇಶಕ್ಕೆ ಪಾಕಿಸ್ತಾನ್ ಹಾಗೂ ಶ್ರೀಲಂಕಾ ನಡುವಣ ಪಂದ್ಯ ಸಾಕ್ಷಿಯಾಗಿತ್ತು. ಏಷ್ಯಾಕಪ್​ನ ಸೂಪರ್-4 ಹಂತದ ಕೊನೆಯ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿತ್ತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 19.1 ಓವರ್​ಗಳಲ್ಲಿ ಕೇವಲ 121 ರನ್​ಗಳಿಸಿ ಆಲೌಟ್ ಆಗಿತ್ತು. 122 ರನ್​ಗಳ ಸಾಧಾರಣ ಸವಾಲು ಪಡೆದ ಶ್ರೀಲಂಕಾ ತಂಡದ ಬ್ಯಾಟ್ಸ್​ಮನ್​ಗಳನ್ನು ಔಟ್ ಮಾಡಲು ಪಾಕ್ ಬೌಲರ್​ಗಳು ಹರಸಾಹಸಪಟ್ಟರು. ಅದರಲ್ಲೂ ವಿಕೆಟ್​ ಪಡೆಯುವ ಆತುರದಲ್ಲಿ ಪಾಕ್ ತಂಡದ ಆಟಗಾರರು ತಮ್ಮ ನಾಯಕನನ್ನೇ ಕಡೆಗಣಿಸಿದ್ದರು.

ಅಂದರೆ ಪಾಕಿಸ್ತಾನದ ವೇಗದ ಬೌಲರ್ ಹಸನ್ 16ನೇ ಓವರ್ ಬೌಲಿಂಗ್ ಮಾಡಿದ್ದರು. ಈ ವೇಳೆ ಎಸೆದ ಎರಡನೇ ಎಸೆತವು ಲಂಕಾ ಬ್ಯಾಟ್ಸ್​ನನ್ ಪಾತುಮ್ ನಿಸಂಕಾ ಅವರ ಬ್ಯಾಟ್ ಅಂಚಿನ ಮೂಲಕ ವಿಕೆಟ್ ಕೀಪರ್​ ಕೈ ಸೇರಿತು. ಅತ್ತ ಚೆಂಡನ್ನು ಹಿಡಿಯುತ್ತಿದ್ದಂತೆ ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಅಂಪೈರ್​ಗೆ ಮನವಿ ಮಾಡಿದರು.

ಇದನ್ನೂ ಓದಿ
Image
Team India: ಟೀಮ್ ಇಂಡಿಯಾ ಆಟಗಾರರ ಜೊತೆ ಕಾಣಿಸಿಕೊಂಡ ಸ್ಟಾರ್ ಕ್ರಿಕೆಟಿಗನ ಮಗ..!
Image
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Image
Sanju Samson: ಧೋನಿ, ದ್ರಾವಿಡ್​ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
Image
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಆದರೆ ಅಂಪೈರ್ ಮನವಿ ತಿರಸ್ಕರಿಸುತ್ತಿದ್ದಂತೆ, ಮೊಹಮ್ಮದ್ ರಿಜ್ವಾನ್ ಹಾಗೂ ಹಸನ್ ಅಲಿ ಡಿಎಸ್​ಆರ್​ ತೆಗೆದುಕೊಳ್ಳಲು ಅಂಪೈರ್​ಗೆ ಸೂಚಿಸಿದರು. ಆದರೆ ಅತ್ತ ನಾಯಕನಾಗಿದ್ದ ಬಾಬರ್ ಆಜಂ ಎಲ್ಲವನ್ನೂ ನೋಡುತ್ತಾ ನಿಂತಿದ್ದರು. ಅಂಪೈರ್ ತಕ್ಷಣವೇ ಡಿಆರ್‌ಎಸ್ ಪರಿಶೀಲನೆಗೆ ಮನವಿ ಮಾಡುತ್ತಿದ್ದಂತೆ, ಬಾಬರ್ ಆಜಂ ನಾನು ಕಣ್ರೋ ನಾಯಕ ಎಂದು ಸಹ ಆಟಗಾರರಿಗೆ ಹೇಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಅಷ್ಟೇ ಅಲ್ಲದೆ ನಾಯಕ ಹೇಳದಿದ್ದರೂ ಅಂಪೈರ್ ರಿವ್ಯೂಗೆ ಒಪ್ಪಿಕೊಂಡಿರುವುದಕ್ಕೆ ಬಾಬರ್ ಅಚ್ಚರಿ ಮೂಡಿಸಿದ್ದಾರೆ.

ಇಲ್ಲಿ ಮತ್ತೊಂದು ವಿಶೇಷ ಎಂದರೆ ರಿವ್ಯೂ ಪರಿಶೀಲನೆ ಬಳಿಕ ಮೂರನೇ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದ್ದರು. ಇದರಿಂದ ಬಾಬರ್ ಆಜಂ ಮತ್ತಷ್ಟು ಕುಪಿತಗೊಂಡಿದ್ದರು. ಒಟ್ಟಿನಲ್ಲಿ ನಾಯಕನಾದವನೇ ನಾನು ಕಣ್ರೊ ನಾಯಕ ಎಂದೇಳುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನು ಈ ಪಂದ್ಯದಲ್ಲಿ 122 ರನ್​ಗಳ ಟಾರ್ಗೆಟ್ ಬೆನ್ನತ್ತಿದ ಶ್ರೀಲಂಕಾ ಪರ ಪಾತುಮ್ ನಿಸಂಕಾ ಅಜೇಯ ಅರ್ಧಶತಕ ಬಾರಿಸಿದರು. ಈ ಮೂಲಕ ತಂಡವನ್ನು 17 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಗುರಿಮುಟ್ಟಿಸಿದರು. ಇದಾಗ್ಯೂ ಇದು ಔಪಚಾರಿಕ ಪಂದ್ಯವಾಗಿದ್ದು, ಉಭಯ ತಂಡಗಳು ಏಷ್ಯಾಕಪ್​ ಫೈನಲ್​ನಲ್ಲಿ ಸೆಪ್ಟೆಂಬರ್ 11 ರಂದು ಮತ್ತೆ ಮುಖಾಮುಖಿಯಾಗಲಿದೆ.